ಯೂಟ್ಯೂಬ್ ಚಾನಲ್ ಒಂದಕ್ಕೆ ಸಂದರ್ಶನ ನೀಡುವ ವೇಳೆ ಕಲರಿಯಪ್ಪಟ್ಟು ಬೋಧಕ ಸಮರ ಕಲೆಗಳನ್ನು ಪ್ರದರ್ಶಿಸುವ ವೇಳೆ ಕುಸಿದು ಬಿದ್ದ ಸಾವನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಗಿರಿಧರನ್(29) ಮೃತ ದುರ್ದೈವಿ ಭಾನುವಾರ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವ ವೇಳೆ ಕುಸಿದು ಬಿದ್ದ ಗಿರಿಧರನ್ರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗಿರಿಧರನ್ ಸಂದರ್ಶನಕ್ಕಾಗಿ ವಿಶ್ರಾಂತಿ ತೆಗೆದುಕೊಳ್ಳದೆ ನಿರಂತರವಾಗಿ ಅಭ್ಯಸ ಮಾಡಿದ ಕಾರಣ ಅವರ ತೀವ್ರ ಆಯಾಸವಾಗಿತ್ತು ಎಂದು ತಿಳಿದು ಬಂದಿದೆ.
ಈ ಕುರತು ಪ್ರತಿಕ್ರಿಯಿಸಿರುವ ಚಾನಲ್ ವ್ಯವಸ್ಥಾಪಕರು ಸಂದರ್ಶನ ಶುರುವಾಗಿ ಕೇವಲ 5 ನಿಮಿಷ ಮಾತ್ರ ಕಳೆದಿತ್ತ. ಒಂದು ವೇಳೆ ನಿಮ್ಮಗೆ ಸುಸ್ತಾಗುತ್ತಿದ್ದರೆ ಕಾರ್ಯಕ್ರಮವನ್ನ ಮುಂದೂಡೋಣ ಎಂದಿದ್ದೇವು ಎಂದು ಆದರೆ, ಅವರು ತಮ್ಮ ಕಲೆಯನ್ನು ಮುಂದುವರೆಸಿದ್ದರು ಎಂದು ಹೇಳಿದ್ದಾರೆ.
ಕಳೆದ ಆರು ವರ್ಷಗಳಿಂದ ಚೆನೈನ ವಲಸರವಕ್ಕಂನಲ್ಲಿ ಕಲರಿಯಿಲ್ ಕ್ಷತ್ರಿಯ ಸ್ಕೂಲ್ ಆಫ್ ಮಾರ್ಷಿಯಲ್ ಆರ್ಟ್ಸ್ ನಡೆಸುತ್ತಿದ್ದರು.