ಸತೀಶ್ ನೀನಾಸಂ ಅಭಿನಯದ ಡಿಯರ್ ವಿಕ್ರಂ ಚಿತ್ರ ಜೂನ್ 30ರಂದು ತೆರೆಕಾಣಲಿದ್ದು ಚಿತ್ರ ವೀಕ್ಷಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಚಿತ್ರ ತಂಡ ಆಹ್ವಾನಿಸಿದೆ.
ಕೆ.ಎಸ್.ನಂದೀಶ್ ನಿರ್ದೇಶನದ ಚಿತ್ರವು ಸಮಾಜ ಹಾಗು ಪ್ರಗತಿಪರ ಆಶಯಗಳನ್ನು ಒಳಗೊಂಡಿದೆ ಎಂದು ಸತೀಶ್ ಮಾಜಿ ಸಿಎಂಗೆ ವಿವರಿಸಿದ್ದಾರೆ.
ನಂತರ ಮಾತನಾಡಿದ ಸಿದ್ದರಾಮಯ್ಯ ತಾವು ತಪ್ಪದೆ ಬಂದು ಸಿನಿಮಾವನ್ನು ವೀಕ್ಷಿಸುವುದಾಗಿ ಚಿತ್ರತಂಡಕ್ಕೆ ಭರವಸೆ ನೀಡಿದ್ದಾರೆ ಹಾಗು ಚಿತ್ರವು ಶತದಿನೋತ್ಸವ ಹಾರೈಸಲೆಂದು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ವೇಳೆ ಸಾಹಿತಿ ನಟರಾಜ್ ಹುಳಿಯಾರ್ ಉಪಸ್ಥಿತರಿದ್ದರು.