• Home
  • About Us
  • ಕರ್ನಾಟಕ
Friday, June 20, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿದೇಶ

ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಿದ್ರೆ ಮಾತ್ರ ಪ್ರಾದೇಶಿಕ ಶಾಂತಿ ಸಾಧ್ಯ; ಎನ್ಎಸ್ಎ ಮಟ್ಟದ ಸಭೆಯಲ್ಲಿ 8 ದೇಶಗಳ ಒಕ್ಕೊರಲ ಅಭಿಪ್ರಾಯ

ನಚಿಕೇತು by ನಚಿಕೇತು
November 16, 2021
in ವಿದೇಶ
0

A member of Taliban forces keeps watch at a checkpost in Kabul, Afghanistan August 17, 2021. REUTERS/Stringer

Share on WhatsAppShare on FacebookShare on Telegram

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೇರಿದ ಬಳಿಕ ಭಾರತದ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸಿದೆ. ಭಯೋತ್ಪಾದನೆ ವಿಚಾರದಲ್ಲಿ ಭಾರತ ಮಾತ್ರವಲ್ಲದೆ ದಕ್ಷಿಣ ಏಷ್ಯಾದ ಪ್ರಾದೇಶಿಕ ಭದ್ರತೆ ಹಾಗೂ ಶಾಂತಿಗೂ ಭಂಗ ತರೋ ಆತಂಕವಿದೆ. ಹೀಗಾಗಿ ಭಾರತ ತೆಗೆದುಕೊಂಡ ಮತ್ತೊಂದು ದಿಟ್ಟ ಕ್ರಮ ತಾಲಿಬಾನಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದಂತಾಗಿದೆ.

ADVERTISEMENT

ಅಫ್ಘಾನಿಸ್ತಾನ… 20 ವರ್ಷಗಳ ಬಳಿಕ ಮತ್ತೆ ತಾಲಿಬಾನಿಗಳ ತೆಕ್ಕೆಗೆ ಬಿದ್ದಿದೆ. 2 ದಶಕಗಳಿಂದ ಅಮೆರಿಕ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಅಫ್ಘಾನಿಸ್ತಾನದಲ್ಲಿ ಜಾರಿಯಲ್ಲಿತ್ತು. ಅದ್ಯಾವಾಗ ಅಮೆರಿಕ ಸೇನೆ ಅಫ್ಘಾನ್ ನೆಲದಿಂದ ಜಾಗ ಖಾಲಿ ಮಾಡಿತೋ ತಾಲಿಬಾನಿಗಳು ಮತ್ತೆ ದೇಶವನ್ನು ತಮ್ಮ ಕೈವಶಮಾಡಿಕೊಂಡ್ರು. ಮಂಗನ ಕೈಗೆ ಸಿಕ್ಕ ಮಾಣಿಕ್ಯದಂತೆ ಅಧಿಕಾರ ಸಿಕ್ಕಿದ್ದೇ ತಡ ಹುಚ್ಚುಚ್ಚಾಗಿ ವರ್ತಿಸತೊಡಗಿದ್ರು. ಇವನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸ್ತಿದ್ದ ಭಾರತ ಸಮಯಕ್ಕೆ ತಕ್ಕಂತೆ ಎಚ್ಚರಿಕೆಗಳನ್ನು ಕೊಡುತ್ತಲೇ ಬಂದಿತ್ತು. ಯಾವಾಗ ಪ್ರಾದೇಶಿಕ ಭದ್ರತೆ ಅದ್ರಲ್ಲೂ ಪಾಕಿಸ್ತಾನದ ಜೊತೆ ಸೇರಿ ಭಾರತದ ಆಂತರಿಕ ಭದ್ರತೆಗೆ ಬೆದರಿಕೆಯಾಗುವಂಥಾ ಚಟುವಟಿಕೆಗಳ ಆರಂಭವಾಯ್ತೋ ಮೋದಿ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನಿಟ್ಟಿದೆ.

ಹೌದು, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಮರುಸ್ಥಾಪನೆಯಾದ ಬಳಿಕ ಪ್ರಾದೇಶಿಕ ಭದ್ರತೆಯದ್ದೇ ತಲೆನೋವಾಗಿದೆ. ಉಗ್ರ ಕೃತ್ಯಗಳ ಮೂಲಕ ಜಗತ್ತನ್ನೇ ನಡುಗಿಸಿದ್ದ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬರ್ತಿದ್ದಂತೆ ದಕ್ಷಿಣ ಏಷಿಯಾ ರಾಷ್ಟ್ರಗಳಿಗೆ ಅಭದ್ರತೆ ಕಾಡ್ತಿದೆ. ಅದ್ರಲ್ಲೂ ಭಾರತದ ಜೊತೆ ಸದಾ ಕಾಲುಕೆರೆದು ಜಗಳಕ್ಕೆ ನಿಲ್ಲೋ ಪಾಕಿಸ್ತಾನ ತಾಲಿಬಾನ್ ಜೊತೆ ಕೈಜೋಡಿಸೋ ಭೀತಿ ಭಾರತದ ಭದ್ರತೆಗೆ ಬೆದರಿಕೆ ಒಡ್ಡುವಂತಿದೆ. ಹೀಗಾಗಿ ಅಫ್ಘಾನಿಸ್ತಾನವನ್ನು ಬಳಸಿಕೊಂಡು ಮುಂದೆ ನಡೆಯಬಹುದಾದ ಎಲ್ಲಾ ದಾಳಿಯನ್ನು ಮನಸ್ಸಲ್ಲಿಟ್ಟಕೊಂಡ ಭಾರತ 8 ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಹತ್ವದ ಸಭೆ ನಡೆಸಿದೆ.

ಇನ್ನು ದೆಹಲಿಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನೇತೃತ್ವದಲ್ಲಿ ನಡೆದ ಮಹತ್ವದ ಸಮಾವೇಶದಲ್ಲಿ ರಷ್ಯಾ, ಇರಾನ್, ಕಜಕಿಸ್ತಾನ್, ಕಿರ್ಗಿಸ್ತಾನ್, ಉಜ್ಬೆಕಿಸ್ತಾನ್ ತುರ್ಕ್ಮೆನಿಸ್ತಾನ್ ಹಾಗೂ ತಜಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾಗವಹಿಸಿದ್ರು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಕಮ್ ಬ್ಯಾಕ್ ಆದ ಬಳಿಕ ಸಹಜವಾಗೇ ಭಯೋತ್ಪಾದನೆ, ಮೂಲಭೂತವಾದ ಹಾಗೂ ಡ್ರಗ್ಸ್ ಸಾಗಾಟ ಹೆಚ್ಚಾಗೋ ಆತಂಕ ಇರೋದ್ರಿಂದ ಪ್ರದೇಶಿಕ ಭದ್ರತೆ ಬಗ್ಗೆ ಎಲ್ಲಾ ದೇಶಗಳ ಭದ್ರತಾ ಸಲಹೆಗಾರರು ಆತಂಕ ವ್ಯಕ್ತಪಡಿಸಿದ್ರು. ಅಲ್ಲದೆ ಭಯೋತ್ಪಾದನಾ ಕೃತ್ಯಗಳಿಗೆ ಅಫ್ಘಾನಿಸ್ತಾನದ ನೆಲ ಬಳಕೆಯಾಗಬಾರದು ಅಂತಾ ಎಂಟು ರಾಷ್ಟ್ರಗಳ ಭದ್ರತಾ ಸಲಹೆಗಾರರು ಘೋಷಣೆ ಮಾಡಿದ್ರು.

ಆಗಸ್ಟ್ ತಿಂಗಳಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಕೈ ವಶ ಮಾಡಿಕೊಳ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಆತಂಕ ಮನೆಮಾಡಿತ್ತು. ಉಗ್ರ ಸಂಘಟನೆಯಾದ ತಾಲಿಬಾನ್ ತೆಕ್ಕೆಗೆ ಅಫ್ಘಾನಿಸ್ತಾನ ಸಿಕ್ಕರೆ ಭಯೋತ್ಪಾದನೆ, ಮೂಲಭೂತವಾದ, ಡ್ರಗ್ಸ್ ಸಾಗಟಕ್ಕೆ ಯಾವುದೇ ನಿಯಂತ್ರಣ ಇರಲ್ಲ ಅನ್ನೋದು ದಕ್ಷಿಣ ಏಷ್ಯಾ ರಾಷ್ಟ್ರಗಳ ಆತಂಕ. ಈ ಎಲ್ಲಾ ಆತಂಕ ದೂರ ಮಾಡೋ ನಿಟ್ಟಿನಲ್ಲಿ ಭಾರತ ಸರ್ಕಾರ ಮಹತ್ವದ ಹೆಜ್ಜೆ ಮುಂದಿಟ್ಟಿದ್ದು, ತಾಲಿಬಾನ್ ಹಿಂಸೆಯ ಹಾದಿ ತುಳಿದ್ರೆ ಮೂಗು ದಾರ ಹಾಕಲು ಈಗಿಂದಲೇ ಸಿದ್ಧತೆ ನಡೆಸಿದೆ. 

Tags: AfghanistanAfghanistanCrisisHow Taliban return in Afghanistan triggered Islamophobia in India
Previous Post

ಕರಾವಳಿ ಮೀನು ಉದ್ಯಮ ಸಮೃದ್ಧ, ಅಂಜಲ್ , ಮಾಂಜಿ ಫ್ರೈ ಎಲ್ಲರ ಮನೆಯಲ್ಲೂ!

Next Post

ಅಂಬಾಲಾ ಸೆಂಟ್ರಲ್ ಜೈಲಿನ ಮಣ್ಣಿನಿಂದ ಗೋಡ್ಸೆ ಪ್ರತಿಮೆ ನಿರ್ಮಾಣ – ಹಿಂದೂ ಮಹಾಸಭಾ

Related Posts

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
0

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್ಖರ್ಗೆ ಭಾಗಿ - ಏವಿಯೇಷನ್ ನಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ ಎಂದ ಪ್ರಿಯಾಂಕ್ https://youtu.be/hWOHlkSh63g ParisAirShow ನಲ್ಲಿ ಭಾರತ ಮತ್ತು ವಿಶೇಷವಾಗಿ...

Read moreDetails
ಇಸ್ರೇಲ್ ದಾಳಿಗೆ ಇರಾನ್ ಅಧ್ಯಕ್ಷ ವಿಲವಿಲ – ಇಲಿಯಂತೆ ಬಿಲ ಹೊಕ್ಕಿದ ಅಲಿ ಖಮೇನಿ ವಿರುದ್ಧ ಸಿಡಿದೆದ್ದ ಇರಾನಿ ಪ್ರಜೆಗಳು ! 

ಇಸ್ರೇಲ್ ದಾಳಿಗೆ ಇರಾನ್ ಅಧ್ಯಕ್ಷ ವಿಲವಿಲ – ಇಲಿಯಂತೆ ಬಿಲ ಹೊಕ್ಕಿದ ಅಲಿ ಖಮೇನಿ ವಿರುದ್ಧ ಸಿಡಿದೆದ್ದ ಇರಾನಿ ಪ್ರಜೆಗಳು ! 

June 17, 2025
ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ – ನಾಗರೀಕರು ಈ ಕೂಡಲೇ ತೆಹರಾನ್ ತೊರೆಯಿರಿ : ಡೊನಾಲ್ಡ್ ಟ್ರಂಪ್ 

ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ – ನಾಗರೀಕರು ಈ ಕೂಡಲೇ ತೆಹರಾನ್ ತೊರೆಯಿರಿ : ಡೊನಾಲ್ಡ್ ಟ್ರಂಪ್ 

June 17, 2025
ಸುದ್ದಿ ಓದುತ್ತಿರುವಾಗಲೇ ಬಾಂಬ್ ಬ್ಲಾಸ್ಟ್ – ಸ್ಟುಡಿಯೋ ಬಿಟ್ಟು ಓಡಿದ ಇರಾನ್ ಸುದ್ದಿ ನಿರೂಪಕಿ!

ಸುದ್ದಿ ಓದುತ್ತಿರುವಾಗಲೇ ಬಾಂಬ್ ಬ್ಲಾಸ್ಟ್ – ಸ್ಟುಡಿಯೋ ಬಿಟ್ಟು ಓಡಿದ ಇರಾನ್ ಸುದ್ದಿ ನಿರೂಪಕಿ!

June 17, 2025
ಇರಾನ್‌-ಇಸ್ರೇಲ್‌ ರಣಭೀಕರ ಯುದ್ಧ..! 3ನೇ ಮಹಾಯುದ್ಧ ಬೀತಿ..!

ಇರಾನ್‌-ಇಸ್ರೇಲ್‌ ರಣಭೀಕರ ಯುದ್ಧ..! 3ನೇ ಮಹಾಯುದ್ಧ ಬೀತಿ..!

June 16, 2025
Next Post
ಅಂಬಾಲಾ ಸೆಂಟ್ರಲ್ ಜೈಲಿನ ಮಣ್ಣಿನಿಂದ ಗೋಡ್ಸೆ ಪ್ರತಿಮೆ ನಿರ್ಮಾಣ – ಹಿಂದೂ ಮಹಾಸಭಾ

ಅಂಬಾಲಾ ಸೆಂಟ್ರಲ್ ಜೈಲಿನ ಮಣ್ಣಿನಿಂದ ಗೋಡ್ಸೆ ಪ್ರತಿಮೆ ನಿರ್ಮಾಣ – ಹಿಂದೂ ಮಹಾಸಭಾ

Please login to join discussion

Recent News

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್
Top Story

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

by ಪ್ರತಿಧ್ವನಿ
June 20, 2025
ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 
Top Story

ಅಮಿತ್ ಶಾ ಅವರೇ ನನ್ನ ನಾಯಕ – ಏನೇ ಸಮಸ್ಯೆಯಿದ್ರೂ ನನ್ನ ಬೆನ್ನಿಗೆ ಅಮಿತ್ ಶಾ ನಿಲ್ತಾರೆ – ಹೆಚ್.ಡಿ.ಕೆ ಅಚ್ಚರಿ ಹೇಳಿಕೆ 

by Chetan
June 20, 2025
Top Story

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್ ಉದ್ಘಾಟನಾ ಸಮಾರಂಭ

by ಪ್ರತಿಧ್ವನಿ
June 20, 2025
ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 
Top Story

ಸರ್ಕಾರದ ವಿರುದ್ಧವೇ ತಿರುಗಿಬಿದ್ದ ಕಾಂಗ್ರೆಸ್ ಶಾಸಕ – ವಸತಿ ಯೋಜನೆ ಗೋಲ್ಮಾಲ್ ಬಗ್ಗೆ ಬಿ.ಆರ್ ಪಾಟೀಲ್ ಆಡಿಯೋ ವೈರಲ್ ! 

by Chetan
June 20, 2025
ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 
Top Story

ಡಿಕೆಶಿ ಬಳಿ ಬಟ್ಟೆ ಕೊಡಿಸಿಕೊಳ್ಳುವ ದಾರಿದ್ರ್ಯ ನಂಗಿಲ್ಲ – ಅವನ ಕೊಳ್ಳೆ ಹೊಡೆದ ದುಡ್ಡು ಯಾರಿಗೆ ಬೇಕು..? : ಹೆಚ್.ಡಿ.ಕೆ 

by Chetan
June 20, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

June 20, 2025
ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್… ಆಗಸ್ಟ್ 1ಕ್ಕೆ ಯಶ್‌ ತಾಯಿ ಬಂಡವಾಳ ಹೂಡಿರುವ ಸಿನಿಮಾ ರಿಲೀಸ್

June 20, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada