Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಜನರು ಸಂಕಷ್ಟದಲ್ಲಿರುವಾಗ ಜನಪ್ರತಿನಿಧಿಗಳು ನಾಪತ್ತೆ: ಪೃಥ್ವಿ ರೆಡ್ಡಿ

ಪ್ರತಿಧ್ವನಿ

ಪ್ರತಿಧ್ವನಿ

July 16, 2022
Share on FacebookShare on Twitter

ಅತಿವೃಷ್ಟಿ ಸೃಷ್ಟಿಸಿದ ಅವಾಂತರಗಳಿಂದ ರಾಜ್ಯದ ಜನತೆ ಚಿಂತೆಯಲ್ಲಿರುವಾಗ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ತಮ್ಮದೇ ಸ್ವಂತ ಕಾರ್ಯದಲ್ಲಿ ಮಗ್ನರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.

ಹೆಚ್ಚು ಓದಿದ ಸ್ಟೋರಿಗಳು

ಸರ್ದಾರ್ ಪಟೇಲ್ vs ಸಾವರ್ಕರ್ : ಏನು ಹೇಳುತ್ತೆ ಇತಿಹಾಸ?

ಜನೋತ್ಸವವನ್ನ ಮುಂದೂಡಿದ ಬಿಜೆಪಿ

ಬಿಬಿಎಂಪಿ ಚುನಾವಣೆಗೆ ಮೀಸಲಾತಿ ಪಟ್ಟಿ ಅಂತಿಮಗೊಳಿಸಿ ಸರ್ಕಾರ ಆದೇಶ : ಕೈ ನಾಯಕರು ಕೊತಕೊತ

ಮಾಧ್ಯಮಗಳೊಂದಿಗೆ ಮಾತನಾಡಿದ ಪೃಥ್ವಿ ರೆಡ್ಡಿ, “ಅತಿಯಾದ ಮಳೆಯಿಂದ ರಾಜ್ಯ ಹಲವೆಡೆ ಗುಡ್ಡಗಳು ಕುಸಿಯುತ್ತಿವೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಸೇತುವೆಗಳು ಮುಳುಗಿ ಹಲವು ಊರುಗಳಿಗೆ ಸಂಪರ್ಕ ಕಡಿತಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಜೊತೆಗಿದ್ದು ತ್ವರಿತವಾಗಿ ಸಮಸ್ಯೆಗಳು ಪರಿಹಾರವಾಗುವಂತೆ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ ನಮ್ಮ ಶಾಸಕರುಗಳು ಈ ಬಗ್ಗೆ ಯೋಚಿಸದೇ ಬೇರೆಬೇರೆ ಅನಗತ್ಯ ಕಾರ್ಯಗಳಲ್ಲಿ ನಿರತರಾಗಿದ್ದಾರೆ” ಎಂದು ಬೇಸರ ವ್ಯಕ್ತ ಪಡಿಸಿದರು.

“ಬಿಜೆಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ, ಕೆ.ಎಂ.ನಾರಾಯಣ ಸ್ವಾಮಿ, ಎಸ್.ಎನ್.ಸುಬ್ಬಾರೆಡ್ಡಿ, ದತ್ತಾತ್ರೇಯ ಪಾಟೀಲ ರೇವೂರಾ, ಕೆ.ಶ್ರೀನಿವಾಸ್ ಮೂರ್ತಿ, ಮಹದೇವಪ್ಪ ಶಿವಲಿಂಗಪ್ಪ ಯದವಾಡ್, ಗಣೇಶ್ ಹುಕ್ಕೇರಿ, ಶ್ರೀಮಂತ ಪಾಟೀಲ, ಸೋಮನಗೌಡ ಪಾಟೀಲ, ಉದಯ ಬಿ ಗರುಡಾಚಾರ್, ಎಸ್.ರಾಮಪ್ಪ, ರವೀಂದ್ರ ಶ್ರೀಕಂಠಯ್ಯ, ಹರೀಶ್ ಪೂಂಜಾ, ವೆಂಕಟ್ ರೆಡ್ಡಿ ಮುದ್ನಾಳ್ರವರು ಕಾಶ್ಮೀರ ಸಮೀಪದ ಲಡಾಖ್‌ಗೆ ಪ್ರವಾಸ ಕೈಗೊಂಡಿದ್ದಾರೆ. ಅಧ್ಯಯನದ ನೆಪದಲ್ಲಿ ಜನರ ತೆರಿಗೆ ದುಡ್ಡಿನಲ್ಲಿ ಅಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

ರಾಷ್ಟ್ರಪತಿ ಚುನಾವಣೆಗಾಗಿ ಬಿಜೆಪಿಯು ತನ್ನ ಶಾಸಕರನ್ನು ಶಾಂಗ್ರಿಲಾ ಹೊಟೇಲ್‌ನಲ್ಲಿ ಬಂಧಿಸಿಟ್ಟಿದೆ. ಅಲ್ಲಿಂದ ಹೊರಹೋಗಲು ಸಾಧ್ಯವಾಗದಂತೆ ಶಾಸಕರಿಗೆ ಬಿಜೆಪಿ ದಿಗ್ಬಂಧನ ವಿಧಿಸಿದೆ. ವಿರೋಧ ಪಕ್ಷ ಕಾಂಗ್ರೆಸ್‌ ಶಾಸಕರಿಗೆ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸುವ ಚಿಂತೆಯಾಗಿದೆ. ಒಟ್ಟಿನಲ್ಲಿ ಜನರ ಸಮಸ್ಯೆಗಳು ಇವರ್ಯಾರಿಗೂ ಕಾಣಿಸುತ್ತಿಲ್ಲ. ಮಳೆಯಿಂದಾಗಿ ಮೀನುಗಾರರು ಆದಾಯವಿಲ್ಲದೇ ಸಂಷ್ಟದಲ್ಲಿದ್ದರೂ ಕರಾವಳಿ ಭಾಗದ ಶಾಸಕರು ಹಾಗೂ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ” ಎಂದು ಪೃಥ್ವಿ ರೆಡ್ಡಿ ಹೇಳಿದರು.

RS 500
RS 1500

SCAN HERE

[elfsight_youtube_gallery id="4"]

don't miss it !

Uncategorized

Sentence Rewriter On-line

by
August 13, 2022
ಗೌರಿಗಣೇಶನ ಹಬ್ಬಕ್ಕೆ ಗಣೇಶನ ಜೊತೆ ಮೂಡಿಬರುತ್ತಿರುವ ಆಪ್ಪು ವಿಗ್ರಹ !punithrajkumar
ವಿಡಿಯೋ

ಗೌರಿಗಣೇಶನ ಹಬ್ಬಕ್ಕೆ ಗಣೇಶನ ಜೊತೆ ಮೂಡಿಬರುತ್ತಿರುವ ಆಪ್ಪು ವಿಗ್ರಹ !punithrajkumar

by ಫಾತಿಮಾ
August 17, 2022
ಶಿವಮೊಗ್ಗ ಉದ್ವಿಗ್ನ : ಇಂದು ಶಾಲಾ-ಕಾಲೇಜುಗಳಿಗೆ ರಜೆ, ಕುವೆಂಪು ವಿವಿ ಪರೀಕ್ಷೆಗಳು ಮುಂದೂಡಿಕೆ!
ಕರ್ನಾಟಕ

ಶಿವಮೊಗ್ಗ ಉದ್ವಿಗ್ನ : ಇಂದು ಶಾಲಾ-ಕಾಲೇಜುಗಳಿಗೆ ರಜೆ, ಕುವೆಂಪು ವಿವಿ ಪರೀಕ್ಷೆಗಳು ಮುಂದೂಡಿಕೆ!

by ಪ್ರತಿಧ್ವನಿ
August 16, 2022
ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಎಸಿಬಿ ವಶಕ್ಕೆ
ಕರ್ನಾಟಕ

ಲೋಕಾಯುಕ್ತ ವ್ಯಾಪ್ತಿಗೆ ಎಸಿಬಿ: ಹೈಕೋರ್ಟ್‌ ಮಹತ್ವದ ಆದೇಶ

by ಪ್ರತಿಧ್ವನಿ
August 11, 2022
ವಂದೇ ಮಾತರಂ ಹಾಡನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ದೇಶ

ವಂದೇ ಮಾತರಂ ಹಾಡನ್ನು ಶ್ಲಾಘಿಸಿದ ಪ್ರಧಾನಿ ಮೋದಿ

by ಪ್ರತಿಧ್ವನಿ
August 16, 2022
Next Post
ವಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವಿನ ಗೌರವ ಕಡಿಮೆಯಾಗುತ್ತಿದೆ : ಸಿಜೆಐ ರಮಣ

ವಿಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವಿನ ಗೌರವ ಕಡಿಮೆಯಾಗುತ್ತಿದೆ : ಸಿಜೆಐ ರಮಣ

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಮುಂದುವರೆಯಲಿ : ಸರ್ಕಾರಕ್ಕೆ ಒತ್ತಾಯ

ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಮುಂದುವರೆಯಲಿ : ಸರ್ಕಾರಕ್ಕೆ ಒತ್ತಾಯ

ಮಾಯಾಭ್ರಾಂತಿಯ ಗೀತಜ್ಞ ಪ್ರವಚನಕಾರರು

ಮಾಯಾಭ್ರಾಂತಿಯ ಗೀತಜ್ಞ ಪ್ರವಚನಕಾರರು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist