ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಮಂಗಳವಾರ ಓವೈಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಆಲ್ ಇಂಡಿಯಾ ಮಜ್ಲಿಸ್-ಇ-ಇಟ್ಟೇಹದುಲ್ ಮುಸ್ಲಿಮೀನ್ (AIMIM) ನಾಯಕ ಅಸಾದುದ್ದೀನ್ ಓವೈಸಿ ಮತ್ತು ಬಿಜೆಪಿ ಒಂದೇ ತಂಡವಾಗಿದ್ದು, ರೈತರು ಅವರ ನಡೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
“ಓವೈಸಿ ಮತ್ತು ಬಿಜೆಪಿ ಒಂದು ತಂಡ. ಅವರು ಬಿಜೆಪಿಯ ‘ಚಾಚಾ ಜಾನ್’. ಅವರು ಬಿಜೆಪಿಯ ಆಶೀರ್ವಾದ ಹೊಂದಿದ್ದಾರೆ. ಓವೈಸಿಯನ್ನು ಬಿಜೆಪಿಯವರು ದುರುಪಯೋಗಪಡಿಸಿಕೊಳ್ಳುತ್ತಾರೆ, ಆದರೆ ಅವರು ಆತನ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ ಎಂಬ ಹೇಳಿಕೆಯನ್ನು ನೀಡಿ ದೇಶದ ಜನರನ್ನು ಆಶ್ಚರ್ಯ ಮೂಡಿಸಿದ್ದಾರೆ.
ಅವರ ಸಹಾಯವನ್ನು ಬಿಜೆಪಿ ತೆಗೆದುಕೊಳ್ಳುತ್ತದೆ. ಓವೈಸಿ ಎರಡು ಮುಖ ಉಳ್ಳವರು ರೈತರು ಇವರ ನಡೆಗಳನ್ನು ಅರ್ಥಮಾಡಿಕೊಳ್ಳಬೇಕು. ಓವೈಸಿ ರೈತರನ್ನು ಹಾಳು ಮಾಡುತ್ತಾನೆ. ಚುನಾವಣೆ ಸಮಯದಲ್ಲಿ ಅವರು ಪಿತೂರಿಗಳನ್ನು ಮಾಡುತ್ತಾರೆ. ಬಾಗಪತ್ ಜನರು ಕ್ರಾಂತಿಕಾರಿಗಳು ಎಂದೂ ಯಾಮಾರುವುದಿಲ್ಲ” ಎಂದು ಟಿಕಾಯತ್ ಹೇಳಿದ್ದಾರೆ.
ಸರ್ಕಾರವು ರೈತರ ಬೇಡಿಕೆಗಳನ್ನು ಒಪ್ಪುವುದಿಲ್ಲ ಮತ್ತು ಕಾನೂನುಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಟಿಕಾಯತ್ ತಮ್ಮ ಸ್ಪಷ್ಟ ನಿಲುವನ್ನು ಹಾಕಿದರು.
“ಸರ್ಕಾರವು ನಮ್ಮ ಬೇಡಿಕೆಗಳನ್ನು ಒಪ್ಪುವುದಿಲ್ಲ ಮತ್ತು ಕಾನೂನುಗಳನ್ನು ರದ್ದುಗೊಳಿಸುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ. ಅಲ್ಲಿಯವರೆಗೆ, ನಾವು ದೆಹಲಿ ಗಡಿಯಲ್ಲೇ ಬೀಡುಬಿಟ್ಟಿರುತ್ತೇವೆ. ನಮ್ಮ ಕೊನೆಯ ಉಸಿರು ಇರುವವರೆಗೂ ನಾವು ಹೋರಾಡುತ್ತೇವೆ. ಅವರು ನಮಗೆ ಸ್ಪಷ್ಟವಾಗಿ ಹೇಳಬೇಕು ಅವರಿಗೆ ಯಾರು ಹೆಚ್ಚು ಪ್ರಿಯರು, ರೈತರೋ ಅಥವಾ ಕಾರ್ಪೊರೇಟ್ಗಳು “ಎಂದು ಟಿಕಾಯತ್ ಹೇಳಿದ್ದಾರೆ.
“ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿಪಡಿಸುವ ಕಾನೂನುಗಳನ್ನು ಪರಿಚಯಿಸುವವರೆಗೂ ರೈತರಿಗೆ ಲಾಭ ಸಿಗುವುದಿಲ್ಲ” ಎಂದು ಟಿಕಾಯತ್ ಹೇಳಿದ್ದು ಇದೇ ವೇಳೆ, ಕೇಂದ್ರವನ್ನು ಕಾರ್ಪೊರೇಟ್ಗಳು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರದ ಹೊಸ ಕಾರ್ಮಿಕ ಕಾನೂನುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಕಾರ್ಖಾನೆ ಕಾರ್ಮಿಕರು ಇನ್ನು ಮುಂದೆ ಆಂದೋಲನ ಮಾಡಲು ಮತ್ತು ಸಂಘಗಳನ್ನು ರಚಿಸಲು ಸಾಧ್ಯವಿಲ್ಲ. ಕೇಂದ್ರ ಎಲ್ಲವನ್ನೂ ಮಾರಾಟ ಮಾಡುತ್ತಿದ್ದಾರೆ. ಅವರು ಮಂಡಿಗಳನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ” ಎಂದು ಬಿಕೆಯು ನಾಯಕ ಟಿಕಾಯತ್ ಹೇಳಿದ್ದಾರೆ.
ರೈತರು ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ – ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಬಡ್ತಿ ಮತ್ತು ಸೌಲಭ್ಯ) ಮಸೂದ 2020, ಮತ್ತು ರೈತರು (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಇವುಗಳಾಗಿವೇ.