• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ಭಾರತ ಜನಬಂಧನ್’ ಸಂಯುಕ್ತ ಸಭೆ” : ಇಂಡಿಯಾ ಕೂಟದ ಹೈವೋಲ್ಟೇಜ್‌ ಮೀಟಿಂಗ್‌ ಮೇಲೆ ಎಲ್ಲರ ಕಣ್ಣು..!

ಕೇಂದ್ರದ ಬೆಲೆ ಏರಿಕೆ ನೀತಿಯ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಸಿದ್ಶವಾಗುತ್ತಿರುವ ಇಂಡಿಯಾ ಕೂಟ..!

ಪ್ರತಿಧ್ವನಿ by ಪ್ರತಿಧ್ವನಿ
June 7, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
“ಭಾರತ ಜನಬಂಧನ್’ ಸಂಯುಕ್ತ ಸಭೆ” : ಇಂಡಿಯಾ ಕೂಟದ ಹೈವೋಲ್ಟೇಜ್‌ ಮೀಟಿಂಗ್‌ ಮೇಲೆ ಎಲ್ಲರ ಕಣ್ಣು..!
Share on WhatsAppShare on FacebookShare on Telegram

ಬೆಂಗಳೂರು : ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸುವುದರ ಜೊತೆಗೆ ವಿಪಕ್ಷಗಳ ಮುಂದಿನ ನಡೆಯ ಕುರಿತು ಮಹತ್ವದ ಚರ್ಚೆ ನಡೆಸಲು ನಾಳೆ ರಾಷ್ಟ್ರ ರಾಜಧಾನಿ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಇಂಡಿಯಾ ಮೈತ್ರಿಕೂಟದ (INDIA) ಜನಬಂಧನ್’ ಸಭೆಯನ್ನು ಆಯೋಜಿಸಲಾಗಿದೆ.

ADVERTISEMENT
Ashok Gehlot : ನಾನು ಎಐಸಿಸಿ ಅಧ್ಯಕ್ಷ ಆಗದಂತೆ ತಡೆಯಲು ಷಡ್ಯಂತ್ರ ರಚಿಸಲಾಗಿತ್ತು.. #pratidhvani

ಪ್ರಮುಖವಾಗಿ ಈ ಸಭೆಯಲ್ಲಿ ಭಾಗವಹಿಸಲು ದೇಶದ ಇಪ್ಪತ್ತಕ್ಕೂ ಅಧಿಕ ರಾಜಕೀಯ ಪಕ್ಷಗಳ ನಾಯಕರ ದೆಹಲಿಯತ್ತ ಈಗಾಗಲೇ ಮುಖ ಮಾಡಿದ್ದಾರೆ.

ದೇಶದ ವಿಪಕ್ಷಗಳ ಮೈತ್ರಿಕೂಟವಾಗಿರುವ ಇಂಡಿಯಾ ಬ್ಲಾಕ್‌ನಲ್ಲಿ ಪಕ್ಷಗಳು ತಮ್ಮ ವೈವಿಧ್ಯತೆಯ ಮೂಲಕ ಒಗ್ಗಟ್ಟಿನಿಂದ ಹೋರಾಟವನ್ನು ರೂಪಿಸಲು ಮುಂದಾಗಲಿವೆ. ಅಲ್ಲದೆ ಕಳೆದ ಪಂಚ ರಾಜ್ಯಗಳ ಚುನಾವಣೆಯ ಸೋಲಿನ ಬಗ್ಗೆ ಆತ್ಮಾವಲೋಕನವೂ ಇಲ್ಲಿ ನಡೆಯಲಿದೆ. ತಮ್ಮದೇ ಆದ ಕಾರಣಗಳಿಗಾಗಿ ಈ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿರುವ  ಕೆಲವು ಪಕ್ಷಗಳಿವೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮೆಟ್ರೋದಲ್ಲಿ ಪ್ರಯಾಣಿಸಿದ ಸಿಎಂ ಡಿಕೆ ಶಿವಕುಮಾರ್ : ಕಾರಣ ಇಲ್ಲಿದೆ ನೋಡಿ..!

ಜೂನ್ 8, 2026 ರಂದು ಸೋಮವಾರ ಮಧ್ಯಾಹ್ನ 12 ಗಂಟೆಗೆ ನವದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ನಡೆಯಲಿರುವ ಇಂಡಿಯಾ ಜನಬಂಧನ್ ಸಭೆಯಲ್ಲಿ 23 ರಾಜಕೀಯ ಪಕ್ಷಗಳು ಭಾಗವಹಿಸುವುದನ್ನು ದೃಢಪಡಿಸಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ಕಾಂಗ್ರೆಸ್‌ ನಾಯಕ ತಿಳಿಸಿದ್ದಾರೆ.

Kiccha Sudeep: ಕನ್ನಡದಲ್ಲಿ ನೆಪೋಟೀಸಮ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ! #pratidhvani

ಲಕ್ಷಾಂತರ ಭಾರತೀಯರ ಮತದಾನದ ಹಕ್ಕನ್ನು ಕಸಿದುಕೊಳ್ಳುವ, ಪ್ರತಿದಿನ ಸಂವಿಧಾನದ ಮೇಲೆ ದಾಳಿ ಮಾಡುವ, ತನಿಖಾ ಸಂಸ್ಥೆಗಳ ಮೂಲಕ ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ಮಾಡುವ, ಕೋಟ್ಯಂತರ ಭಾರತೀಯರ ಜೀವನೋಪಾಯಕ್ಕೆ ಗಂಭೀರ ಹಾನಿ ಮಾಡುವ ಕೇಂದ್ರ ಸರ್ಕಾರದ ನಿಲುವುಗಳನ್ನು ಸಭೆಯಲ್ಲಿ ಖಂಡಿಸಲಾಗುವುದು ಎಂದಿದ್ದಾರೆ.

ನಿರಂತರ ಬೆಲೆ ಏರಿಕೆ ಮಾಡಿ ಮನೆಯ ಬಜೆಟ್ ಹಾಳು ಗೆಡವುವ, ಲಕ್ಷಾಂತರ ಯುವಕರ ಭರವಸೆ ಮತ್ತು ಆಕಾಂಕ್ಷೆಗಳಿಗೆ ದ್ರೋಹ ಬಗೆಯುವ, ಹೂಡಿಕೆ ವಾತಾವರಣವನ್ನು ಕುಗ್ಗಿಸುವ ಮತ್ತು ತನ್ನ ವಿದೇಶಾಂಗ ನೀತಿಯಿಂದ ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಿ ಮಾಡಿಕೊಳ್ಳುವ ನರೇಂದ್ರ ಮೋದಿ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳಿಗೆ ತೀವ್ರ ವಿರೋಧವನ್ನು ಇಂಡಿಯಾ ಬ್ಲಾಕ್‌ ವ್ಯಕ್ತಪಡಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಇನ್ನೂ ಇದಕ್ಕೆ ಪ್ರತಿಕ್ರಿಯಿಸಿರುವ (ಟಿಎಂಸಿ) ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್, “ಒಂದೇ ಉದ್ದೇಶ ಮತ್ತು ಸ್ಪಷ್ಟ ಗುರಿಯೊಂದಿಗೆ ಈ ಸಭೆ ನಡೆಯುತ್ತಿದೆ. ಭಾರತ ಒಗ್ಗಟ್ಟಾಗಿದೆ. ಹಲವು ಪಕ್ಷಗಳು ಸೌಹಾರ್ದ ಭಾವದಿಂದ ಭೇಟಿಯಾಗಲು ಎದುರು ನೋಡುತ್ತಿವೆ ಜೈರಾಂ ಎಂದು ಹೇಳಿದ್ದಾರೆ. ನಾಳಿನ ಸಭೆಯಲ್ಲಿ ಭಾಗಿಯಾಗಲು ವಿಪಕ್ಷಗಳ ಬಹುತೇಕ ನಾಯಕರು ದೆಹಲಿಗೆ ಬಂದಿಳಿದಿದ್ದಾರೆ.

Tags: Aam AadmiAIMIMcongressCPICPIMDMKIndia Bloc MeetingJJMMallikarjun KhargeMamata BanerjeeOpposition MeetPratidhvaniRahul GandhiRJDShivsena UBTTMCTrinmool Congress
Previous Post

ರಾಜ್ಯದಲ್ಲಿ 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ..

Next Post

ನಾನು ಈ ಕ್ಷೇತ್ರ ದಾಟಿದಾಗ ಮಾತ್ರ ಸಿಎಂ, ‌ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ : ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್‌ ಭಾವುಕ ಮಾತು..!

Related Posts

ಜೈಲಿನಲ್ಲಿ ನಟ ದರ್ಶನ್‌ ಆರೋಗ್ಯ ಕ್ಷೀಣವೇ? ವೈರಲ್ ಫೋಟೋ ನೋಡಿ ಅಭಿಮಾನಿಗಳ ಆತಂಕ
Top Story

ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಹೊಸ ಶಾಕ್; ವಿಶೇಷ ಫೀಚರ್‌ಗೆ ಹಣ ಪಾವತಿ ಕಡ್ಡಾಯ!

by ಪ್ರತಿಧ್ವನಿ
June 7, 2026
0

ಸಾಮಾಜಿಕ ಜಾಲತಾಣಗಳ ಲೋಕದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ಇನ್‌ಸ್ಟಾಗ್ರಾಮ್‌ ಇದೀಗ ತನ್ನ ಬಳಕೆದಾರರಿಗೆ ಹೊಸ ಪ್ರೀಮಿಯಂ ಸೇವೆಯನ್ನು ಪರಿಚಯಿಸಿದೆ. ‘Instagram Plus’ ಹೆಸರಿನ ಈ ಚಂದಾದಾರಿಕೆ ಯೋಜನೆಯ...

Read moreDetails
ಜೈಲಿನಲ್ಲಿ ನಟ ದರ್ಶನ್‌ ಆರೋಗ್ಯ ಕ್ಷೀಣವೇ? ವೈರಲ್ ಫೋಟೋ ನೋಡಿ ಅಭಿಮಾನಿಗಳ ಆತಂಕ

ಜೈಲಿನಲ್ಲಿ ನಟ ದರ್ಶನ್‌ ಆರೋಗ್ಯ ಕ್ಷೀಣವೇ? ವೈರಲ್ ಫೋಟೋ ನೋಡಿ ಅಭಿಮಾನಿಗಳ ಆತಂಕ

June 7, 2026
ನಾನು ಈ ಕ್ಷೇತ್ರ ದಾಟಿದಾಗ ಮಾತ್ರ ಸಿಎಂ, ‌ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ : ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್‌ ಭಾವುಕ ಮಾತು..!

ನಾನು ಈ ಕ್ಷೇತ್ರ ದಾಟಿದಾಗ ಮಾತ್ರ ಸಿಎಂ, ‌ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ : ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್‌ ಭಾವುಕ ಮಾತು..!

June 7, 2026
ರಾಜ್ಯದಲ್ಲಿ 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ..

ರಾಜ್ಯದಲ್ಲಿ 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ..

June 7, 2026
ನಾನು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಇಲ್ಲಿ ಮುಖ್ಯಮಂತ್ರಿ ಅಲ್ಲ, ನಿಮ್ಮ ಮನೆ ಮಗ : ಭಾವನಾತ್ಮಕವಾಗಿ ಕ್ಷೇತ್ರದ ಜನರಿಗೆ ಡಿಕೆ‌ ಶಿವಕುಮಾರ್ ಥ್ಯಾಂಕ್ಸ್..!

ನಾನು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಇಲ್ಲಿ ಮುಖ್ಯಮಂತ್ರಿ ಅಲ್ಲ, ನಿಮ್ಮ ಮನೆ ಮಗ : ಭಾವನಾತ್ಮಕವಾಗಿ ಕ್ಷೇತ್ರದ ಜನರಿಗೆ ಡಿಕೆ‌ ಶಿವಕುಮಾರ್ ಥ್ಯಾಂಕ್ಸ್..!

June 7, 2026
Next Post
ನಾನು ಈ ಕ್ಷೇತ್ರ ದಾಟಿದಾಗ ಮಾತ್ರ ಸಿಎಂ, ‌ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ : ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್‌ ಭಾವುಕ ಮಾತು..!

ನಾನು ಈ ಕ್ಷೇತ್ರ ದಾಟಿದಾಗ ಮಾತ್ರ ಸಿಎಂ, ‌ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ : ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್‌ ಭಾವುಕ ಮಾತು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada