ಕಳೆದ ಕೆಲ ದಿನಗಳಿಂದ ತಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಈಗಾಗಲೇ ಚಿರತೆ ದಾಳಿಗೆ ಎರಡು ಬಲಿಯಾಗಿವೆ.
ಇನ್ನು ಈ ಬಗ್ಗೆ ಮೈಸೂರು ಜಿಲ್ಲಾ ಧಿಕಾರಿ ಡಾ || ಕೆ.ವಿ.ರಾಜೇಂದ್ರ ಹೊಸ ಆದೇಶ ಹೊರಡಿಸುವ ಮೂಲಕ ರೈತರಿಗೆ ನೆರವಾಗಿದ್ದಾರೆ.
ಸಕಾಲದಲ್ಲಿ ಕಬ್ಬು ಕಟಾವು ಮಾಡಲು ಜಿಲ್ಲಾಡಳಿತದಿಂದ 20ಪಂಚಾಯಿತಿಯ 40ಗ್ರಾಮಗಳಲ್ಲಿ ಕಬ್ಬು ಕಟಾವಿಗೆ ವಿಶೇಷ ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ.
ಈಗಾಗಲೇ ಚಿರತೆ ಸೆರಗಾಗರಿ ಅರಣ್ಯ ಇಲಾಖೆ ವಿಶೇಷ ತಂಡವನ್ನ ನಿಯೋಜಿಸಿದ್ದು ಡ್ರೋಣ್ ಕ್ಯಾಮೆರಾ ಬಳಸಿ ಚಿರತೆ ವಾಸಿಸುವ ಸ್ಥಳ ಕಂಡು ಹಿಡಿದಿದೆ.
ಕಬ್ಬಿನ ಗದ್ದೆಯಲ್ಲಿ ಚಿರತೆಗಳು ವಾಸಿಸು ತಿದ್ದು , ಚಿರತೆ ಸೆರೆಗೆ ಕಬ್ಬು ಕಟಾವು ಮಾಡದಿರುವುದು ಅಡಚಣೆಯಾಗುತ್ತಿರುವ ಹಿನ್ನಲೆಯಲ್ಲಿ ಕಬ್ಬು ಕಟಾವು ಮಾಡಲು ಜಿಲ್ಲಾಡಳಿತಕ್ಕೆ ಅರಣ್ಯ ಇಲಾಖೆ ಮನವಿ ಮಾಡಿತ್ತು.