• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಶಾಸಕ ಸಾರಾ ಮಹೇಶ್ ರ ಕನ್ವೆನ್ಶನ್ ಹಾಲ್ ನಿರ್ಮಾಣಕ್ಕೆ ಮುಡಾ ಜಾಗ ಒತ್ತುವರಿ; ಮುಡಾ ಅಧ್ಯಕ್ಷ ರಾಜೀವ್ ಭಾಗಿ; ಆರ್‌ ಟಿಐ ಕಾರ್ಯಕರ್ತ ಆರೋಪ

Any Mind by Any Mind
June 11, 2021
in ಕರ್ನಾಟಕ
0
ಶಾಸಕ ಸಾರಾ ಮಹೇಶ್ ರ ಕನ್ವೆನ್ಶನ್ ಹಾಲ್ ನಿರ್ಮಾಣಕ್ಕೆ ಮುಡಾ ಜಾಗ ಒತ್ತುವರಿ; ಮುಡಾ ಅಧ್ಯಕ್ಷ ರಾಜೀವ್ ಭಾಗಿ; ಆರ್‌ ಟಿಐ ಕಾರ್ಯಕರ್ತ ಆರೋಪ
Share on WhatsAppShare on FacebookShare on Telegram

ಕೆ.ಆರ್.ನಗರ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರ ಪತ್ನಿ ಅನಿತಾ ಒಡೆತನದ ದಟ್ಟಗಳ್ಳಿಯ ಸಾ.ರಾ.ಕನ್ವೆನ್ಷನ್ ಹಾಲ್ ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಸೇರಿದ ಜಾಗ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.ಈ ಕುರಿತು ಆರ್ಟಿಐ ಕಾರ್ಯಕರ್ತ ಕುವೆಂಪುನಗರದ ಎನ್.ಗಂಗರಾಜು ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದ್ದು,ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ.ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸಹ ಸಾರಾ ಕನ್ವೆನ್ಷನ್ ಹಾಲ್ ಗೋಮಾಳದಲ್ಲಿ ಹಾಗೂ ರಾಜಕಾಲುವೆ ಒತ್ತುವರಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಪ್ರಾದೇಶಿಕ ಆಯುಕ್ತರು ತನಿಖಾ ತಂಡ ರಚಿಸಿದ್ದಾರೆ.ಗಂಗರಾಜು ಅವರು ಸಲ್ಲಿಸಿರುವ ಸುದೀರ್ಘ ದೂರಿನ ಪ್ರಕಾರ ಸಾ.ರಾ.ಮಹೇಶ್ ಅವರ ಪತ್ನಿ ಅನಿತಾ ಮಹೇಶ್ ಅವರ ಹೆಸರಿನಲ್ಲಿರುವ ಸರ್ವೇ ನಂ.130/3 ದಟ್ಟಗಳ್ಳಿಯ ಸಾ.ರಾ. ಕನ್ವೆನ್ಷನ್ ಹಾಲ್ ಜಿಲ್ಲಾಧಿಕಾರಿ ಅವರ ಆದೇಶ ಸಂಖ್ಯೆ ೦ಐಓ(1)104/03-04 ದಿನಾಂಕ25.9.2004 ರ ಮೇರೆಗೆ 2.15 ಎಕರೆ ಜಾಗವನ್ನು ವಸತಿ ಉದ್ದೇಶಕ್ಕಾಗಿ ಅನ್ಯಕ್ರಾಂತವಾಗಿದೆ.ಆದರೆ, ಸಾ.ರಾ.ಮಹೇಶ್ ವಾಣಿಜ್ಯ ಉದ್ದೇಶಕ್ಕೆ ಉಪಯೋಗಿಸುತ್ತಿದ್ದಾರೆ.

ADVERTISEMENT

ಸಕ್ಷಮ ಪ್ರಾಧಿಕಾರದಿಂದ ಕಟ್ಟಡ ಪರವಾನಗಿ ಅನುಮೋದನೆ ಪಡೆದಿಲ್ಲ. ಸಾ.ರಾ.ಕನ್ವೆನ್ಷನ್ ಹಾಲ್ ಗೆ ಹೊಂದಿಕೊಂಡಂತೆ ಇರುವ ಸುತ್ತಮುತ್ತಲಿನ ಮುಡಾ ಬಡಾವಣೆಯಲ್ಲಿ ರಚಿಸಿರುವ ನಿವೇಶನಗಳನ್ನು ಸಹ ಒತ್ತುವರಿ ಮಾಡಿಕೊಂಡಿದ್ದಾರೆ. ಇದೆಲ್ಲ ಮುಡಾ ಆಯುಕ್ತ ನಟೇಶ್ ಹಾಗೂ ಅಧ್ಯಕ್ಷ ಎಚ್.ವಿ. ರಾಜೀವ್ ಅವರಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ. ಆದ್ದರಿಂದ ಇವರು ಸಹ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.ಆದ್ದರಿಂದ ಇಬ್ಬರ ಅಧಿಕಾರದ ಅವಧಿಯಲ್ಲಿ ತೆಗೆದುಕೊಂಡಿರುವ ಎಲ್ಲ ನಿರ್ಧಾರದ ಬಗ್ಗೆಯು ತನಿಖೆಯಾಗಬೇಕು ಹಾಗೂ ಸರ್ವೇ ನಂ.98,121,122,123,131,132, 133ಗಳನ್ನೂ ಸಹ ಅಳತೆ ಮಾಡಲು ಅದೇಶ ಮಾಡಬೇಕಾಗಿ ಹಾಗೂ ಜಿಲ್ಲಾಧಿಕಾರಿ ಅವರ ಅನ್ಯಕ್ರಾಂತ ಆದೇಶವನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಸದರಿ ಅದೇಶವನ್ನು ರದ್ದು ಮಾಡಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಕಟ್ಟಡ ತೆರವು ಮಾಡಬೇಕು ಹಾಗೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು.

ಇದೇ ರೀತಿ ಸರ್ವೇ ನಂ.130/3 ದಟ್ಟಗಳ್ಳಿ, ಕಸಬಾ ಹೋಬಳಿಯಲ್ಲಿ 2 ಎಕರೆ 15 ಗುಂಟೆ ಭೂಮಿಗೆ ಜಿಲ್ಲಾಧಿಕಾರಿಯವರು ಮಾಡಿರುವ ಅದೇಶ ಸಂಖ್ಯೆ 0ಐಒ(1)004/03-04 ದಿನಾಂಕ:25.9.2004ರ ಮೇರೆಗೆ 2.15 ಎಕರೆ ಭೂಮಿ ವಸತಿ ಉದ್ದೇಶಕ್ಕಾಗಿ ಅನ್ಯಕ್ರಾಂತವಾಗಿದೆ. ಆದರೆ, ಸದ್ಯ ವಾಣಿಜ್ಯ ಉದ್ದೇಶಕ್ಕಾಗಿ ಸಾರಾ.ಮಹೇಶ್ ಅಕ್ರಮ ಕಟ್ಟಡ ಕಟ್ಟಿ ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದಾರೆ. ಹಾಗೂ ಸಕ್ಷಮ ಪ್ರಾಧಿಕಾರದಿಂದ ಭೂ ಪರಿವರ್ತನಾ ಆದೇಶದ ಪ್ರಕಾರ ವಸತಿ ಉದ್ದೇಶಕ್ಕೆ ಭೂಮಿಯನ್ನು ಉಪಯೋಗಿಸದೇ ಇರುವುದರಿಂದ ಜಿಲ್ಲಾಧಿಕಾರಿಯವರ ಅನ್ಯಕ್ರಾಂತ’ ಅದೇಶ ಉಲ್ಲಂಘಿಸಿದ್ದಾರೆ. ಹಾಗಾಗಿ ಅನ್ಯಕ್ರಾಂತ ರದ್ದಾಗಬೇಕಾಗಿದೆ. ಕಟ್ಟಡ ಪರವಾನಗಿ ನಕ್ಷೆ ಅನುಮೋದನೆ ಪಡೆಯದೆ’ಅಕ್ರಮವಾಗಿ ಕಟ್ಟಿರುವ ಕಟ್ಟಡ ತೆರವುಗೊಳಿಸಬೇಕು ಮತ್ತು ಸದರಿ ಸರ್ವೇ ನಂ.130ಕ್ಕೆ ಹೊಂದಿಕೊಂಡಂತೆ ಹಾಗೂ ಕಲ್ಯಾಣ ಮಂಟಪರ ಸುತ್ತಲೂ ಇರುವ ಮುಡಾ ಸ್ವತ್ತನ್ನು ಒತ್ತವರಿ ಮಾಡಿಕೊಂಡು ಅಕ್ರಮವೆಸಗಿದ್ದಾರೆ. ಈ ಎಲ್ಲಾ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ಇದೊಂದೆ ಪ್ರಕರಣದ ಬಗ್ಗೆ ತನಿಖೆ ಮಾಡಿ ಕ್ಲೀನ್ ಚಿಟ್ ನೀಡುವುದಲ್ಲ. ಬದಲಾಗಿ ಈ ಹಿಂದೆ ಇದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭೂ ಅಕ್ರಮದ ಸಂಬಂಧ ಮಾಡಿರುವ ಈ ಕೆಳಕಂಡ ಎಲ್ಲಾ ನನ್ನ ದೂರಿನ ಸರ್ವೆ ಕಾರ್ಯವನ್ನು ಇದರ ಜೊತೆಯಲ್ಲಿಯೇ ತನಿಖೆ ಮಾಡಬೇಕಾಗಿ ವಿನಂತಿ.

ವರ್ಗಾವಣೆಗೆ ಮುನ್ನಾ ದಿನವೇ ಅಕ್ರಮ ಭೂ ಪರಿವರ್ತನೆ, ಆರ್‌ಟಿಸಿ ರದ್ದು ಪಡಿಸಿ ಭೂ ಮಾಫಿಯಾಗೆ ಕೊಡಲಿ ಪೆಟ್ಟು ನೀಡಿದ ರೋಹಿಣಿ ಸಿಂಧೂರಿ

1)ಸರ್ವೆ ನಂ 123,ದಟ್ಟಗಳ್ಳಿ, ಕಸಭಾ, ಮೈಸೂರು, 2)ನರ್ವ 115 ಕೇರ್ಗಳ್ಳಿ, ಜಯಪುರ ಹೋಬಳಿ,ಮೈಸೂರು, 3)ಸರ್ವೇ 65, 66, 68 ಮತ್ತು 124/2,ಲಿಂಗಾಬುಧಿ ಕಸಬಾ ಹೋಬಳಿ,ಮೈಸೂರು ಹಾಗೂ ಯಡಹಳ್ಳಿ,ಜಯಪುರ ಹೋಬಳಿ, ಮೈಸೂರು ಇದರಲ್ಲಿ ಮುಡಾ ಅಧಿಕಾರಗಳು ತಪ್ಪು ವರದಿ  ಮಾಡಿರುವುದು ಬಯಲಾಗಿದೆ. ಆದ್ದರಿಂದ ಮೊದಲು ಆ ಅಧಿಕಾರಿಗಳ ತಲೆದಂಡ ಅಗಬೇಕು,4) ಸರ್ವೆ ನಂ 72 ಮತ್ತು 69ಕ್ಕೆ ಸಂಬಂಧಿಸಿದಂತೆ ಅಕ್ರಮ ನಡೆದಿರುವದನ್ನು ಸೇರಿಕೊಂಡಂತೆ ಮಾಡಿರುವ ಅದೇಶ ಬಗ್ಗೆಯೂ ತನಿಖೆಯನ್ನು ಇದರ ಜೊತೆಗೆ ಮಾಡಲು ತಾವು ತಕ್ಷಣ ಆದೇಶ ನೀಡಬೇಕಾಗಿ ವಿನಂತಿಸಿದ್ದಾರೆ. ಸಾರಾ ಮಹೇಶ್ ಅವರಿಗಿಂತ ಮೊದಲು ನಾನು ಜಿಲ್ಲಾಧಿಕಾರಿಯವರಿಗೆ ಭೂ ಅಕ್ರಮದ ಬಗ್ಗೆ ದೂರು ನೀಡಿದ್ದೇನೆ.ಇದೊಂದೇ ಪ್ರಕರಣದ ಬಗ್ಗೆ ಏಕೆ ಇಷ್ಟೊಂದು ಮುತವರ್ಜಿ ವಹಿಸುತ್ತಿದ್ದೀರಿ? ನನ್ನ ದೂರಿಗೆ ಮೊದಲು ಪ್ರಾದನ್ಯತೆ ನೀಡಿ. ಈ ಅಕ್ರಮದ ಬಗ್ಗೆ ಧ್ವನಿ ಎತ್ತಿರುವುದು ಮೊದಲು ನಾನು.ಅವರು ಜನ ಪ್ರತಿನಿಧಿಯಾಗಿದ್ದ ಮಾತ್ರಕ್ಕೆ ಅವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಅವಶ್ಯವಿಲ್ಲ.ಈ ಮೇಲ್ಕಂಡ ಎಲ್ಲ ವಿಷಯಕ್ಕೂ ತನಿಖೆಗೆ ಆದೇಶ ಮಾಡಬೇಕು. ಇದೊಂದೆ ಪ್ರಕರಣದ ಬಗ್ಗೆ ತರಾತುರಿಯಲ್ಲಿ ತನಿಖೆ ಮಾಡಿ ಕ್ಲೀನ್ ಚಿಟ್ ನೀಡಲು ತಾವುಗಳು ಪಿತೂರಿ ಮಾಡುತ್ತಿರುವ ಬಗ್ಗೆ ನನಗೆ ಅನುಮಾನ ಇದೆ. ಇದನ್ನು ನಾನು ಒಪ್ಪುವುದಿಲ್ಲ, ಆದ್ದರಿಂದ ಮರು ಪರಿಶೀಲಿಸಿ ತಕ್ಷಣ ಅದೇಶ ಮಾಡಬೇಕಾಗಿ ಕೋರಿದ್ದಾರೆ.

ಸರ್ವೆ ಕಾರ್ಯ ಮಾಡುವ ಸಂದರ್ಭದಲ್ಲಿ ದೂರುದಾರನಾದ ನನ್ನ ಸಮ್ಮುಖದಲ್ಲಿಯೇ ಸರ್ವೆ ಕಾರ್ಯ ಮಾಡಲು ಹಾಗೂ ನನಗೆ ಸದರಿ ಸರ್ವೇ ಅಳತೆಯ ಸಮಯದಲ್ಲಿ ನನಗೆ ಸೂಕ್ತ ಪೋಲಿಸ್ ಇಲಾಖೆಯಿಂದ ಬದ್ರತೆ ಒದಗಿಸಲು ಸೂಚಿಸಬೇಕೆಂದು ಮನವಿ ಮಾಡಿದ್ದಾರೆ. ಗಂಗರಾಜು ಅವರು ನೀಡಿರುವ ದೂರಿನ ಅನ್ವಯ ಈ ಹಿಂದೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತನಿಖೆಗೆ ಆದೇಶ ನೀಡಿದ್ದರು. ಶುಕ್ರವಾರ   ಶಾಸಕ ಸಾ.ರಾ.ಮಹೇಶ್ ಅವರ ಕಲ್ಯಾಣ ಮಂಟಪದ ಸುತ್ತಮುತ್ತ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದರು. ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಎಸಿ ವೆಂಕಟರಾಜು ಹಾಗೂ ತಹಸಿಲ್ದಾರ್ ರಕ್ಷಿತ್ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆಯಿತು.

ʻಮೂಲ ಸರ್ವೆ, ರೀ ಸರ್ವೆ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಸರ್ವೆ ಮಾಡುತ್ತಿದ್ದೇವೆ. 11 ಜನರ ತಂಡ ಈ ಕಾರ್ಯದಲ್ಲಿ ಪಾಲ್ಗೊಂಡಿದೆ. ಸರ್ವೆ ಮುಗಿದ ಮೇಲೆ ಅದರ ವರದಿಯನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಲಿದ್ದೇವೆ ಎಂದು ಸರ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಂದು ಪತ್ರಿಕಾ ಗೋಷ್ಟಿ ನಡೆಸಿದ ಮಾಜಿ ಸಚಿವ ಹೆಚ್‌ವಿಶ್ವನಾಥ್ ಪ್ರಾದೇಶಿಕ ಆಯುಕ್ತರು ಮತ್ತು ಸಾರಾ ಮಹೇಶ್‌ ನಡುವೆ ಒಳ ಒಪ್ಪಂದವಾಗಿದೆ ಎಂದು ಅರೋಪಿಸಿದ್ದಾರೆ. ಈ ಭೂ ಹಗರಣವು ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತ ಸಾಗಿದೆ. ಮುಂದೆ ಎಲ್ಲಿಗೆ ನಿಲ್ಲುತ್ತೋ ಕಾದು ನೋಡಬೇಕಷ್ಟೆ.

Previous Post

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮುಂದೂಡಿಕೆ; ಹೈ ಕೋರ್ಟ್ನಿಂದ ಮೂರೂ ಪಕ್ಷಗಳಿಗೆ ಶಾಕ್

Next Post

ಶೋಷಿತರ ಸ್ವಾಭಿಮಾನದ ಹಾಡು ಹಾಡಿದ ಕವಿಗಳಿಗೆ ವಿದಾಯ!

Related Posts

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
0

ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಗೆ (KS Eshwarappa) ಲೋಕಾಯುಕ್ತ (Lokayukta) ಶಾಕ್ ಎದುರಾಗಿದೆ. ಈ ಹಿಂದೆ ಬಿಜೆಪಿ (Bjp) ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಈಶ್ವರಪ್ಪ ಅವರ...

Read moreDetails
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

July 3, 2025
Next Post
ಶೋಷಿತರ ಸ್ವಾಭಿಮಾನದ ಹಾಡು ಹಾಡಿದ ಕವಿಗಳಿಗೆ ವಿದಾಯ!

ಶೋಷಿತರ ಸ್ವಾಭಿಮಾನದ ಹಾಡು ಹಾಡಿದ ಕವಿಗಳಿಗೆ ವಿದಾಯ!

Please login to join discussion

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada