• Home
  • About Us
  • ಕರ್ನಾಟಕ
Thursday, June 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ವಾರದ ಹಿಂದೆ ಮದುವೆ.. ರಜೆ ರದ್ದು.. ಭಾರತೀಯ ಸೇನೆಗೆ ವಾಪಸ್​…

ಕೃಷ್ಣ ಮಣಿ by ಕೃಷ್ಣ ಮಣಿ
May 11, 2025
in Top Story, ಕರ್ನಾಟಕ, ದೇಶ, ವಿಶೇಷ, ಶೋಧ
0
ವಾರದ ಹಿಂದೆ ಮದುವೆ.. ರಜೆ ರದ್ದು.. ಭಾರತೀಯ ಸೇನೆಗೆ ವಾಪಸ್​…
Share on WhatsAppShare on FacebookShare on Telegram

ADVERTISEMENT

ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಲು ಭಾರತೀಯ ಸೇನೆ ಸನ್ನದ್ಧ ಆಗುತ್ತಿದೆ. ರಜೆ ಮೇಲೆ ಹುಟ್ಟೂರಿಗಳಿಗೆ ತೆರಳಿದ್ದ ಭಾರತೀಯ ಸೇನೆಯ ಯೋಧರಿಗೆ ಸೇನೆಯಿಂದ ಬುಲಾವ್ ಬರ್ತಿದೆ. ವಾರದ ಹಿಂದಷ್ಟೇ ಮದುವೆ ಆಗಿದ್ದ ಯೋಧರು ಕರ್ತವ್ಯಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಜೆ ಮೊಟಕುಗೊಳಿಸಿ ಪತ್ನಿ, ಕುಟುಂಬಸ್ಥರನ್ನು ಬಿಟ್ಟು ಸೇನೆಗೆ ಹೋಗಲು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ನಾಲ್ವರು ಯೋಧರು.

ಕಳೆದ ವಾರವಷ್ಟೇ ವಿವಾಹವಾಗಿದ್ದ ಸೇನೆಯಲ್ಲಿರುವ ಸಹೋದರರು. ಉಮೇಶ ಹುಡೇದ್ ಹಾಗೂ ಸಂಗಮೇಶ ಹುಡೇದ್ ಸಹೋದರರು ಸೇನೆಯಲ್ಲಿದ್ದು, ಕಳೆದ ವಾರ ಅಷ್ಟೇ ಮದುವೆ ಆಗಿದ್ದರು. ಸೇನೆಯಿಂದ ತುರ್ತು ಬುಲಾವ್ ಬಂದ ಹಿನ್ನಲೆಯಲ್ಲಿ ನಿನ್ನೆಯೇ ಜಮ್ಮುಗೆ ವಾಪಸ್​ ತೆರಳಿದ್ದಾರೆ ಯೋಧ ಉಮೇಶ ಹುಡೇದ್. ಇನ್ನು ಇಂದು ಮತ್ತೋರ್ವ ಸಹೋದರ ಸಂಗಮೇಶ ಹುಡೇದ್​ ಕೂಡ ಜಮ್ಮುಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಕಳೆದ ಐದಾರು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹುಡೇದ್ ಸಹೋದರರ ಬಗ್ಗೆ ತಾಯಿ ಮಾತನಾಡಿದ್ದು, ಮಕ್ಕಳು ದೇಶಸೇವೆ ಮಾಡ್ತಿದ್ದಾರೆ, ಹೋಗಿ ಯುದ್ಧದಲ್ಲಿ ಗೆಲುವು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ. ಕಳೆದ ವಾರ ಮದುವೆ ಆಗಿದ್ದ ಯೋಧ ಶಿವರಾಜ್​ ಚಿಕ್ಕನ್ನವರ ಅವರಿಗೂ ಕೂಡ ಸೇನೆಯಿಂದ ಬುಲಾವ್ ಬಂದಿದ್ದು, ಇವರೂ ಕೂಡ ದೇಶ ಸೇವೆಗೆಂದು ಅಸ್ಸಾಂಗೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಶಿವರಾಜ್ ದೇಶಸೇವೆಗೆ ಹೊರಟಿದ್ದನ್ನು ಶಿವರಾಜ್​ ಅವರ ಪತ್ನಿ, ತಾಯಿ ಕೂಡ ಮೆಚ್ಚುಗೆ ಮಾತನ್ನಾಡಿ ಬೀಳ್ಕೊಡಲು ಮುಂದಾಗಿದ್ದಾರೆ. ಊಟಿಗೆ ಹೊರಟಿದ್ದ ನವ ದಂಪತಿಗೆ ಫೋನ್​ ಶಾಕ್​.. ಯುದ್ಧಕ್ಕೆ ಬನ್ನಿ..

Chaluvaraya Swamy:  ಕುಮಾರಣ್ಣ ಅಣ್ಣ, ಅವ್ವ, ಅಪ್ಪ ಅನ್ಕೊಂಡು ಮಾತನಾಡ್ತಾರೆ ನೀವು ಅಯ್ಯೊ ಪಾಪಾ ಅನ್ಬಿಡ್ತಿರ..!

ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ತಂಗಿಯ ಮದುವೆಗೆಂದು ರಜೆ ಮೇಲೆ ಬಂದಿದ್ದ ಯೋಧ ಸೇವೆಗೆ ವಾಪಸ್ ಆಗಿದ್ದಾರೆ. ಬೀದರ್​ ಜಿಲ್ಲೆ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ವೀರಯೋಧ ಬಸವಕಿರಣ, ಏಪ್ರಿಲ್​ 27ರಂದು ರಜೆ ತೆಗೆದುಕೊಂಡು ಊರಿಗೆ ಬಂದಿದ್ದರು. ಪಂಜಾಬ್‌ನ ಅಮೃತಸರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಬಸವಕಿರಣ ಬಿರಾದಾರ ಇದೀಗ ಸೇವೆಗೆ ವಾಪಸ್​ ಆಗಿದ್ದಾರೆ.

ಯೋಧ ಬಸವಕಿರಣ ಬಿರಾದಾರ ಹಣೆಗೆ ತಿಲಕವಿಟ್ಟು ಖುಷಿಯಿಂದ ಸೇವೆಗೆ ಕಳುಹಿಸಿದ್ದಾರೆ ಕುಟುಂಬಸ್ಥರು. ಯೋಧ ಬಸವಕಿರಣಗೆ ಅರತಿ ಬೆಳಗಿ, ಹಣೆಗೆ ಕುಂಕುಮವಿಟ್ಟು ಅಕ್ಕ ವಚನಶ್ರೀ ಶುಭ ಹಾರೈಕೆ ಮಾತನ್ನಾಗಿದ್ದಾರೆ. ಭಾರತೀಯ ಸೈನಿಕರ ಮೇಲೆ ಇಡೀ ದೇಶದ ಅಕ್ಕ-ತಂಗಿಯರ ಆಶೀರ್ವಾದವಿದೆ. ನಮ್ಮ ಸೈನಿಕರು ಉಗ್ರರನ್ನ ಮಟ್ಟ ಹಾಕಿ ವಿಜಯಶೀಲರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ದೇಶದ ಯೋಧರಿಗೆ ಶುಭ ಹಾರೈಸಿದ್ದಾರೆ ಯೋಧ ಬಸವಕಿರಣ ಬಿರಾದಾರ ಅಕ್ಕ ವಚನಶ್ರೀ.

ಇನ್ನು ಕಲಬುರಗಿಯಲ್ಲಿ ಹೆಂಡತಿ ಡೆಲಿವರಿಗಾಗಿ ಬಂದಿದ್ದ ಕಲಬುರಗಿ ಮೂಲದ ಯೋಧ ವಾಪಸ್ ಕರ್ತವ್ಯಕ್ಕೆ ಮರಳಿದ್ದಾರೆ. ಮಗು ಜನಿಸಿ ಒಂದು ವಾರದಲ್ಲೇ ಕುಟುಂಬ ಬಿಟ್ಟು ಯುದ್ದಕ್ಕೆ ತೆರಳಿದ್ದಾರೆ ಯೋಧ ಹಣಮಂತರಾಯ್ ಔಸೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಧುತ್ತರಗಾವ್ ಗ್ರಾಮದ ಯೋಧ ಹಣಮಂತರಾಯ್ ಔಸೆ, ಕಳೆದ 20 ವರ್ಷಗಳಿಂದ ಸಿಆರ್​ಪಿಏಫ್​ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಜಮ್ಮುವಿನ ಶ್ರೀನಗರದಲ್ಲಿ ಸೇವೆಯಲ್ಲಿರುವ ಯೋಧ ಹಣಮಂತರಾಯ್ ಔಸೆ, ಒಂದು ತಿಂಗಳು ರಜೆ ಪಡೆದು ಕಳೆದ ಏಪ್ರಿಲ್ 25 ರಂದು ಕಲಬುರಗಿಗೆ ಬಂದಿದ್ದರು. ಹೆಂಡತಿಗೆ ಡೆಲಿವರಿ ಆಗಿ ಒಂದು ವಾರ ಕಳೆದಿದ್ದು, ಗಂಡು ಮಗು ಜನಿಸಿದೆ. ಹೆಂಡತಿ ಹಾಗು ನವಜಾತ ಮಗುವಿನ ಜೊತೆ ಕಾಲ ಕಳೆಯಬೇಕಿದ್ದ ಯೋಧ ಯುದ್ದ ಭೂಮಿಗೆ ಪ್ರಯಾಣ‌ ಮಾಡಿದ್ದಾರೆ.

ಕಾರವಾರವಾರದಲ್ಲಿ ಹನಿಮೂನ್ ಮೊಟಕುಗೊಳಿಸಿ ದೇಶಸೇವೆಗೆ ಹೊರಟಿದ್ದಾರೆ ಸಿದ್ದಾಪುರದ ಸೈನಿಕ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸೈನಿಕ ಜಯಂತ್​ ಮೇ 1 ನೇ ತಾರೀಕು ಮದುವೆಯಾಗಿದ್ದರು. ದೇವರ ಕಾರ್ಯ ಮುಗಿಸಿ ಹನಿಮೂನ್​ಗೆಂದು ಊಟಿಗೆ ತೆರಳುತ್ತಿದ್ದ ಜಯಂತ್ ದಂಪತಿಗೆ ಮಾರ್ಗ ಮಧ್ಯೆ ಕೇಂದ್ರ ಕಚೇರಿಯಿಂದ ಬುಲಾವ್ ಬಂದಿದ್ದು, ಕೂಡಲೆ ಹನಿಮೂನ್ ಪ್ಲ್ಯಾನ್ ಮೊಟಕುಗೊಳಿಸಿ ದೇಶ ಸೇವೆಗೆ ಹೊರಟಿದ್ದಾರೆ ಸೈನಿಕ ಜಯಂತ್. ಛತ್ತೀಸ್ ಘಡದಲ್ಲಿ ಭೂಸೇನೆಯಲ್ಲಿ ಉದ್ಯೋಗ ಮಾಡುತ್ತಿದ್ದ ಜಯಂತ್​ನನ್ನು ಕುಟುಂಬಸ್ಥರು ಬೀಳ್ಕೊಟ್ಟಿದ್ದಾರೆ.

ಚಿಕ್ಕಾಬಳ್ಳಾಪುರದ ಚಿಂತಾಮಣಿಯ ಚೊಕ್ಕರೆಡ್ಡಿಹಳ್ಳಿಯಿಂದ ಯುದ್ದಕ್ಕೆ ತೆರಳಿದ್ದಾರೆ ಯೋಧ ಅಶೋಕ್. ಸೈನ್ಯಾಧಿಕಾರಿಗಳು ತುರ್ತು ಕರೆ ಹಿನ್ನಲೇ ಪ್ರಯಾಣ ಮಾಡಿದ್ದಾರೆ. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಸನ್ಮಾನ ಮಾಡಿ ಸೇನೆಗೆ ಕಳುಹಿಸಿಕೊಟ್ಟಿದೆ ಕುಟುಂಬ ವರ್ಗ

Tags: Indiaindia attack on pakistanindia attacks pakistanindia newsindia pak warIndia Pakistanindia pakistan conflictindia pakistan newsindia pakistan relationsindia pakistan tensionindia pakistan tensionsindia pakistan warindia pakistan war newsindia vs pakistanindia vs pakistan newsindia vs pakistan warindia vs pakistan war livepak india conflict newspak india warpakistan india conflictpakistan vs india
Previous Post

ಭಾರತದ ಬೇರೆ ರಾಷ್ಟ್ರಗಳ ಮಾತಿಗೆ ಮನ್ನಣೆ ಕೊಟ್ಟಿದೆ.. ಪಾಕ್​ ಕೊಡ್ತಿಲ್ಲ..

Next Post

Rcb ಕಪ್ ಗೆದ್ದಿಲ್ಲ ಈ ಸಲ….!

Related Posts

ಅಂಕಣ

“ಬಾಲ ಕಾರ್ಮಿಕ ಪದ್ಧತಿ ಬಗೆಗಿನ ಅರಿವು ಮನೆಗಳಿಂದಲೇ ಮೂಡಲಿʼ: ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
June 12, 2025
0

ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಜಾಥಾ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್‌ ಲಾಡ್‌.ಜಿಲ್ಲಾ ಮಟ್ಟದ ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಿಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಾರ್ಮಿಕ‌ ಇಲಾಖೆಯ...

Read moreDetails

ಡಿಸಿಎಂ DK ಬೆಂಗಳೂರು, ರಾಮನಗರ, ಕನಕಪುರಕ್ಕೆ ಬೇಲಿ ಹಾಕ್ಕೊಂಡವ್ರೆ!

June 12, 2025
ಹುಚ್ಚು ರೀಲ್ಸ್ ರಾಣಿಯರ ಜಮಾನದಲ್ಲಿ,ಒಳ್ಳೆಯವರು ಕಾಣುವುದು ಕೆಲವರು

ಹುಚ್ಚು ರೀಲ್ಸ್ ರಾಣಿಯರ ಜಮಾನದಲ್ಲಿ,ಒಳ್ಳೆಯವರು ಕಾಣುವುದು ಕೆಲವರು

June 12, 2025

ವರ್ಗಾವಣೆಗೊಂಡಿದ್ದ ಐಪಿಎಸ್ ಹೇಮಂತ್ ನಿಂಬಾಳ್ಕರ್ 16ದಿನಗಳ ವಿದೇಶ ಪ್ರವಾಸಕ್ಕೆ ರಜೆ.

June 11, 2025

ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

June 11, 2025
Next Post

Rcb ಕಪ್ ಗೆದ್ದಿಲ್ಲ ಈ ಸಲ....!

Recent News

Top Story

ಡಿಸಿಎಂ DK ಬೆಂಗಳೂರು, ರಾಮನಗರ, ಕನಕಪುರಕ್ಕೆ ಬೇಲಿ ಹಾಕ್ಕೊಂಡವ್ರೆ!

by ಪ್ರತಿಧ್ವನಿ
June 12, 2025
ಹುಚ್ಚು ರೀಲ್ಸ್ ರಾಣಿಯರ ಜಮಾನದಲ್ಲಿ,ಒಳ್ಳೆಯವರು ಕಾಣುವುದು ಕೆಲವರು
Top Story

ಹುಚ್ಚು ರೀಲ್ಸ್ ರಾಣಿಯರ ಜಮಾನದಲ್ಲಿ,ಒಳ್ಳೆಯವರು ಕಾಣುವುದು ಕೆಲವರು

by ಪ್ರತಿಧ್ವನಿ
June 12, 2025
Top Story

ವರ್ಗಾವಣೆಗೊಂಡಿದ್ದ ಐಪಿಎಸ್ ಹೇಮಂತ್ ನಿಂಬಾಳ್ಕರ್ 16ದಿನಗಳ ವಿದೇಶ ಪ್ರವಾಸಕ್ಕೆ ರಜೆ.

by ಪ್ರತಿಧ್ವನಿ
June 11, 2025
Top Story

ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

by ಪ್ರತಿಧ್ವನಿ
June 11, 2025
ಕುಸುಮ್‌ ಸಿಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್: ಸಿಎಂ ಸಿದ್ದರಾಮಯ್ಯ
Top Story

ಕುಸುಮ್‌ ಸಿಯಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ತಾಸು ವಿದ್ಯುತ್: ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
June 11, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

“ಬಾಲ ಕಾರ್ಮಿಕ ಪದ್ಧತಿ ಬಗೆಗಿನ ಅರಿವು ಮನೆಗಳಿಂದಲೇ ಮೂಡಲಿʼ: ಸಚಿವ ಸಂತೋಷ್‌ ಲಾಡ್‌

June 12, 2025

ಡಿಸಿಎಂ DK ಬೆಂಗಳೂರು, ರಾಮನಗರ, ಕನಕಪುರಕ್ಕೆ ಬೇಲಿ ಹಾಕ್ಕೊಂಡವ್ರೆ!

June 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada