• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಾರದ ಹಿಂದೆ ಮದುವೆ.. ರಜೆ ರದ್ದು.. ಭಾರತೀಯ ಸೇನೆಗೆ ವಾಪಸ್​…

ಕೃಷ್ಣ ಮಣಿ by ಕೃಷ್ಣ ಮಣಿ
May 11, 2025
in Top Story, ಕರ್ನಾಟಕ, ದೇಶ, ವಿಶೇಷ, ಶೋಧ
0
ವಾರದ ಹಿಂದೆ ಮದುವೆ.. ರಜೆ ರದ್ದು.. ಭಾರತೀಯ ಸೇನೆಗೆ ವಾಪಸ್​…
Share on WhatsAppShare on FacebookShare on Telegram

ADVERTISEMENT

ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಲು ಭಾರತೀಯ ಸೇನೆ ಸನ್ನದ್ಧ ಆಗುತ್ತಿದೆ. ರಜೆ ಮೇಲೆ ಹುಟ್ಟೂರಿಗಳಿಗೆ ತೆರಳಿದ್ದ ಭಾರತೀಯ ಸೇನೆಯ ಯೋಧರಿಗೆ ಸೇನೆಯಿಂದ ಬುಲಾವ್ ಬರ್ತಿದೆ. ವಾರದ ಹಿಂದಷ್ಟೇ ಮದುವೆ ಆಗಿದ್ದ ಯೋಧರು ಕರ್ತವ್ಯಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಜೆ ಮೊಟಕುಗೊಳಿಸಿ ಪತ್ನಿ, ಕುಟುಂಬಸ್ಥರನ್ನು ಬಿಟ್ಟು ಸೇನೆಗೆ ಹೋಗಲು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ನಾಲ್ವರು ಯೋಧರು.

ಕಳೆದ ವಾರವಷ್ಟೇ ವಿವಾಹವಾಗಿದ್ದ ಸೇನೆಯಲ್ಲಿರುವ ಸಹೋದರರು. ಉಮೇಶ ಹುಡೇದ್ ಹಾಗೂ ಸಂಗಮೇಶ ಹುಡೇದ್ ಸಹೋದರರು ಸೇನೆಯಲ್ಲಿದ್ದು, ಕಳೆದ ವಾರ ಅಷ್ಟೇ ಮದುವೆ ಆಗಿದ್ದರು. ಸೇನೆಯಿಂದ ತುರ್ತು ಬುಲಾವ್ ಬಂದ ಹಿನ್ನಲೆಯಲ್ಲಿ ನಿನ್ನೆಯೇ ಜಮ್ಮುಗೆ ವಾಪಸ್​ ತೆರಳಿದ್ದಾರೆ ಯೋಧ ಉಮೇಶ ಹುಡೇದ್. ಇನ್ನು ಇಂದು ಮತ್ತೋರ್ವ ಸಹೋದರ ಸಂಗಮೇಶ ಹುಡೇದ್​ ಕೂಡ ಜಮ್ಮುಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಕಳೆದ ಐದಾರು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹುಡೇದ್ ಸಹೋದರರ ಬಗ್ಗೆ ತಾಯಿ ಮಾತನಾಡಿದ್ದು, ಮಕ್ಕಳು ದೇಶಸೇವೆ ಮಾಡ್ತಿದ್ದಾರೆ, ಹೋಗಿ ಯುದ್ಧದಲ್ಲಿ ಗೆಲುವು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ. ಕಳೆದ ವಾರ ಮದುವೆ ಆಗಿದ್ದ ಯೋಧ ಶಿವರಾಜ್​ ಚಿಕ್ಕನ್ನವರ ಅವರಿಗೂ ಕೂಡ ಸೇನೆಯಿಂದ ಬುಲಾವ್ ಬಂದಿದ್ದು, ಇವರೂ ಕೂಡ ದೇಶ ಸೇವೆಗೆಂದು ಅಸ್ಸಾಂಗೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಶಿವರಾಜ್ ದೇಶಸೇವೆಗೆ ಹೊರಟಿದ್ದನ್ನು ಶಿವರಾಜ್​ ಅವರ ಪತ್ನಿ, ತಾಯಿ ಕೂಡ ಮೆಚ್ಚುಗೆ ಮಾತನ್ನಾಡಿ ಬೀಳ್ಕೊಡಲು ಮುಂದಾಗಿದ್ದಾರೆ. ಊಟಿಗೆ ಹೊರಟಿದ್ದ ನವ ದಂಪತಿಗೆ ಫೋನ್​ ಶಾಕ್​.. ಯುದ್ಧಕ್ಕೆ ಬನ್ನಿ..

Chaluvaraya Swamy:  ಕುಮಾರಣ್ಣ ಅಣ್ಣ, ಅವ್ವ, ಅಪ್ಪ ಅನ್ಕೊಂಡು ಮಾತನಾಡ್ತಾರೆ ನೀವು ಅಯ್ಯೊ ಪಾಪಾ ಅನ್ಬಿಡ್ತಿರ..!

ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ತಂಗಿಯ ಮದುವೆಗೆಂದು ರಜೆ ಮೇಲೆ ಬಂದಿದ್ದ ಯೋಧ ಸೇವೆಗೆ ವಾಪಸ್ ಆಗಿದ್ದಾರೆ. ಬೀದರ್​ ಜಿಲ್ಲೆ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ವೀರಯೋಧ ಬಸವಕಿರಣ, ಏಪ್ರಿಲ್​ 27ರಂದು ರಜೆ ತೆಗೆದುಕೊಂಡು ಊರಿಗೆ ಬಂದಿದ್ದರು. ಪಂಜಾಬ್‌ನ ಅಮೃತಸರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಬಸವಕಿರಣ ಬಿರಾದಾರ ಇದೀಗ ಸೇವೆಗೆ ವಾಪಸ್​ ಆಗಿದ್ದಾರೆ.

ಯೋಧ ಬಸವಕಿರಣ ಬಿರಾದಾರ ಹಣೆಗೆ ತಿಲಕವಿಟ್ಟು ಖುಷಿಯಿಂದ ಸೇವೆಗೆ ಕಳುಹಿಸಿದ್ದಾರೆ ಕುಟುಂಬಸ್ಥರು. ಯೋಧ ಬಸವಕಿರಣಗೆ ಅರತಿ ಬೆಳಗಿ, ಹಣೆಗೆ ಕುಂಕುಮವಿಟ್ಟು ಅಕ್ಕ ವಚನಶ್ರೀ ಶುಭ ಹಾರೈಕೆ ಮಾತನ್ನಾಗಿದ್ದಾರೆ. ಭಾರತೀಯ ಸೈನಿಕರ ಮೇಲೆ ಇಡೀ ದೇಶದ ಅಕ್ಕ-ತಂಗಿಯರ ಆಶೀರ್ವಾದವಿದೆ. ನಮ್ಮ ಸೈನಿಕರು ಉಗ್ರರನ್ನ ಮಟ್ಟ ಹಾಕಿ ವಿಜಯಶೀಲರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ದೇಶದ ಯೋಧರಿಗೆ ಶುಭ ಹಾರೈಸಿದ್ದಾರೆ ಯೋಧ ಬಸವಕಿರಣ ಬಿರಾದಾರ ಅಕ್ಕ ವಚನಶ್ರೀ.

ಇನ್ನು ಕಲಬುರಗಿಯಲ್ಲಿ ಹೆಂಡತಿ ಡೆಲಿವರಿಗಾಗಿ ಬಂದಿದ್ದ ಕಲಬುರಗಿ ಮೂಲದ ಯೋಧ ವಾಪಸ್ ಕರ್ತವ್ಯಕ್ಕೆ ಮರಳಿದ್ದಾರೆ. ಮಗು ಜನಿಸಿ ಒಂದು ವಾರದಲ್ಲೇ ಕುಟುಂಬ ಬಿಟ್ಟು ಯುದ್ದಕ್ಕೆ ತೆರಳಿದ್ದಾರೆ ಯೋಧ ಹಣಮಂತರಾಯ್ ಔಸೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಧುತ್ತರಗಾವ್ ಗ್ರಾಮದ ಯೋಧ ಹಣಮಂತರಾಯ್ ಔಸೆ, ಕಳೆದ 20 ವರ್ಷಗಳಿಂದ ಸಿಆರ್​ಪಿಏಫ್​ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಜಮ್ಮುವಿನ ಶ್ರೀನಗರದಲ್ಲಿ ಸೇವೆಯಲ್ಲಿರುವ ಯೋಧ ಹಣಮಂತರಾಯ್ ಔಸೆ, ಒಂದು ತಿಂಗಳು ರಜೆ ಪಡೆದು ಕಳೆದ ಏಪ್ರಿಲ್ 25 ರಂದು ಕಲಬುರಗಿಗೆ ಬಂದಿದ್ದರು. ಹೆಂಡತಿಗೆ ಡೆಲಿವರಿ ಆಗಿ ಒಂದು ವಾರ ಕಳೆದಿದ್ದು, ಗಂಡು ಮಗು ಜನಿಸಿದೆ. ಹೆಂಡತಿ ಹಾಗು ನವಜಾತ ಮಗುವಿನ ಜೊತೆ ಕಾಲ ಕಳೆಯಬೇಕಿದ್ದ ಯೋಧ ಯುದ್ದ ಭೂಮಿಗೆ ಪ್ರಯಾಣ‌ ಮಾಡಿದ್ದಾರೆ.

ಕಾರವಾರವಾರದಲ್ಲಿ ಹನಿಮೂನ್ ಮೊಟಕುಗೊಳಿಸಿ ದೇಶಸೇವೆಗೆ ಹೊರಟಿದ್ದಾರೆ ಸಿದ್ದಾಪುರದ ಸೈನಿಕ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸೈನಿಕ ಜಯಂತ್​ ಮೇ 1 ನೇ ತಾರೀಕು ಮದುವೆಯಾಗಿದ್ದರು. ದೇವರ ಕಾರ್ಯ ಮುಗಿಸಿ ಹನಿಮೂನ್​ಗೆಂದು ಊಟಿಗೆ ತೆರಳುತ್ತಿದ್ದ ಜಯಂತ್ ದಂಪತಿಗೆ ಮಾರ್ಗ ಮಧ್ಯೆ ಕೇಂದ್ರ ಕಚೇರಿಯಿಂದ ಬುಲಾವ್ ಬಂದಿದ್ದು, ಕೂಡಲೆ ಹನಿಮೂನ್ ಪ್ಲ್ಯಾನ್ ಮೊಟಕುಗೊಳಿಸಿ ದೇಶ ಸೇವೆಗೆ ಹೊರಟಿದ್ದಾರೆ ಸೈನಿಕ ಜಯಂತ್. ಛತ್ತೀಸ್ ಘಡದಲ್ಲಿ ಭೂಸೇನೆಯಲ್ಲಿ ಉದ್ಯೋಗ ಮಾಡುತ್ತಿದ್ದ ಜಯಂತ್​ನನ್ನು ಕುಟುಂಬಸ್ಥರು ಬೀಳ್ಕೊಟ್ಟಿದ್ದಾರೆ.

ಚಿಕ್ಕಾಬಳ್ಳಾಪುರದ ಚಿಂತಾಮಣಿಯ ಚೊಕ್ಕರೆಡ್ಡಿಹಳ್ಳಿಯಿಂದ ಯುದ್ದಕ್ಕೆ ತೆರಳಿದ್ದಾರೆ ಯೋಧ ಅಶೋಕ್. ಸೈನ್ಯಾಧಿಕಾರಿಗಳು ತುರ್ತು ಕರೆ ಹಿನ್ನಲೇ ಪ್ರಯಾಣ ಮಾಡಿದ್ದಾರೆ. ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಸನ್ಮಾನ ಮಾಡಿ ಸೇನೆಗೆ ಕಳುಹಿಸಿಕೊಟ್ಟಿದೆ ಕುಟುಂಬ ವರ್ಗ

Tags: Indiaindia attack on pakistanindia attacks pakistanindia newsindia pak warIndia Pakistanindia pakistan conflictindia pakistan newsindia pakistan relationsindia pakistan tensionindia pakistan tensionsindia pakistan warindia pakistan war newsindia vs pakistanindia vs pakistan newsindia vs pakistan warindia vs pakistan war livepak india conflict newspak india warpakistan india conflictpakistan vs india
Previous Post

ಭಾರತದ ಬೇರೆ ರಾಷ್ಟ್ರಗಳ ಮಾತಿಗೆ ಮನ್ನಣೆ ಕೊಟ್ಟಿದೆ.. ಪಾಕ್​ ಕೊಡ್ತಿಲ್ಲ..

Next Post

Rcb ಕಪ್ ಗೆದ್ದಿಲ್ಲ ಈ ಸಲ….!

Related Posts

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ
Top Story

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ

by ಪ್ರತಿಧ್ವನಿ
August 31, 2026
0

ಪ್ಯಾಕೆಟ್ ಆಹಾರ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು ಅಥವಾ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿದ್ದರೆ, ಗ್ರಾಹಕರಿಗೆ ಸುಲಭವಾಗಿ ತಿಳಿಯುವಂತೆ ಪ್ಯಾಕೆಟ್‌ನ ಮುಂಭಾಗದಲ್ಲೇ ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ ಅಳವಡಿಸುವ...

Read moreDetails
ರಾಮನಗರದಲ್ಲಿ ಖೋಟಾ ನೋಟು ದಂಧೆ ಬಯಲು:ಐವರು ವಶಕ್ಕೆ

ರಾಮನಗರದಲ್ಲಿ ಖೋಟಾ ನೋಟು ದಂಧೆ ಬಯಲು:ಐವರು ವಶಕ್ಕೆ

August 31, 2026
ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

August 31, 2026
ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

August 31, 2026
ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

August 31, 2026
Next Post

Rcb ಕಪ್ ಗೆದ್ದಿಲ್ಲ ಈ ಸಲ....!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada