
ದಾವಣಗೆರೆ: ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ದಾವಣಗೆರೆಯಲ್ಲಿ ಮಾತನಾಡಿ, ಬಿಜೆಪಿ, ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂವಿಧಾನ ಸಂರಕ್ಷಕರ ಸಮಾವೇಶದ ವೇದಿಕೆಯಲ್ಲಿ ಮಾತನಾಡಿ, ಬಸವಣ್ಣನವರ ನೆಲದಿಂದ ಸಂವಿಧಾನ ರಕ್ಷಣೆ ಮಾಡ್ಬೇಕಾಗಿದೆ. ಇತಂಹ ಸಮಾವೇಶಗಳ ಮೂಲಕ ಆರ್ ಎಸ್ ಎಸ್, ಬಿಜೆಪಿ ಓಡಿಸಲು ಶ್ರಮಿಸುತ್ತಿದ್ದಿರಿ.. ಆರ್ ಎಸ್ ಎಸ್, ಬಿಜೆಪಿಯವರು ಸಂವಿಧಾನ ನಾಶ ಮಾಡಲು ನಿರ್ಣಾಯ ಮಾಡಿದ್ದಾರೆ. ಭಾರತ ಮಾತೆಯ ಎದೆ ಮೇಲೆ ತೂತು ಮಾಡಲು ಸಂಘ ಪರಿವಾರದವರು ತ್ರಿಶೂಲ ಹಚ್ಚುತ್ತಿದ್ದಾರೆ. ಅದರೆ ನೀವು ಮಾತ್ರ ಸಂವಿಧಾನದ ಪೀಠಿಕೆ ಹಿಡಿದು ಹಂಚ್ಚುತ್ತಿರುವುದು ಸಂತಸ ಎಂದಿದ್ದಾರೆ.

ಈ ಕಾರ್ಯಕ್ರಮವನ್ನು ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ. ಬರೆಯಬೇಕಾಗಿದೆ.. ಈ ದೇಶದ ಭೂಮಿ ಮೋದಿ, ಅಮಿತ್ ಶಾ, ಮೋಹನ್ ಭಾಗವತ್ ಅವರ ಅಪ್ಪನ ದೇಶ ಅಲ್ಲ. ಬಸವಣ್ಣ, ಅಂಬೇಡ್ಕರ್, ಭಗತ್ ಸಿಂಗ್, ಪೆರಿಯರ್, ಆಶ್ಪಕ್ ವುಲ್ಲಾ ಖಾನ್ ಅವರ ಭೂಮಿ. ಮೋದಿ, ಅಮಿತ್ ಶಾ, ಭಾಗವತ್ ಅವರಿಗೆ ಈ ಭೂಮಿ ನಾಶ ಮಾಡಲು ಬಿಡುವುದಿಲ್ಲ.. ಮುಂದಿನ ಪೀಳಿಗೆಗೆ ಸಂವಿಧಾನ ಉಳಿಸಲು ನಮ್ಮ ಜವಾಬ್ದಾರಿ ಇದೆ. ನಾನು ಗುಜರಾತ್ನಿಂದ ಬಂದಿದ್ದೇ, 2002 ರಲ್ಲಿ ಗಲಾಭೆ ಆಯಿತು.. ಅಲ್ಲಿ ಹಿಂದೂ ಮುಸ್ಲಿಂ ಎಂದು ಭೇಧಭಾವ ಮಾಡಲಾಯಿತು.. ಮೋದಿಯವರಿಗೆ ಈ ಗಲಾಭೆಯ ಹೊಣೆಯಿಂದ ಹೊರ ಬರಲು ಅಭಿವೃದ್ಧಿ ಎಂಬ ಅಜೆಂಡ್ ಮಧ್ಯೆ ತರಲಾಯಿತು ಎಂದಿದ್ದಾರೆ.

ಮೋದಿ, ಅಮಿತ್ ಷಾ ಇಡಿ, ಐಟಿ ಮೂಲಕ ಹೆದರಿಸುತ್ತಾರೆ. ದಾಳಿ ಮಾಡಿಸುತ್ತಾರೆ. ಇಡೀ ಸೈನ್ಯ ಜೊತೆ ಇವರು ದಾಳಿ ಮಾಡ್ತಾರೆ. ನಾವು ಸಂವಿಧಾನದ ಸೈನಿಕರು ಇದನ್ನು ವಿರೋಧ ಮಾಡ್ಬೇಕಾಗಿದೆ.. ನಮ್ಮ ಸಂವಿಧಾನದ ಮೂಲಕ ವಿರೋಧ ಮಾಡ್ಬೇಕಾಗಿದೆ.. ಆರ್ ಎಸ್ ಎಸ್ ಶಾಖೆಗಳ ವಿರುದ್ಧ ಸಂವಿಧಾನ ಶಾಖೆಗಳನ್ನ ತೆರೆಯಬೇಕು. ಸಂವಿಧಾನದ ಸೈನಿಕರು ಹಳ್ಳಿ, ಊರುಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಿ. ರಾಜಕೀಯ ನಾಯಕರ ಮೇಲೆ ಭರವಸೆ ಇಡುವ ಬದಲಿಗೆ, ಹೋರಾಟ ಮಾಡುವವರ ಮೇಲೆ ಹೆಚ್ಚಿನ ನಂಬಿಕೆ ಇಡಿ. ಆರ್ಎಸ್ಎಸ್, ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.

ರಾಜ್ಯಗಳಲ್ಲಿ, ಕರ್ನಾಟಕದಲ್ಲಿ, ಇಡೀ ದೇಶದಲ್ಲಿ ಬಿಜೆಪಿ ಸೋಲಿಸಬೇಕಾಗಿದೆ.. ಇದಕ್ಕೆ ನಾನು ಕೂಡ ಕೈ ಜೋಡಿಸುವೆ, ಅದು ಯಶಸ್ಸು ಆಗಲಿ. ನನ್ನನ್ನು ಬಸವಣ್ಣನ ಭೂಮಿಗೆ ಪದೆ ಪದೇ ಕರೆಯುತ್ತಿರಿ ನಾನು ಬರುತ್ತಿರುತ್ತೇನೆ ಎಂದಿರುವ ಕಾಂಗ್ರೆಸ್ ಜಿಗ್ನೇಶ್ ಮೆವಾನಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.. ಬಿಜೆಪಿ ಸೋಲಿಸಲು ಕರ್ನಾಟಕದಲ್ಲಿ ನಿಂತು ಕರೆ ನೀಡಿದ್ದಾರೆ.






