ಮೈಸೂರು-ಕೊಡಗು(Mysore-Kodagu) ಲೋಕಸಭಾ(Loka Saba) ಕ್ಷೇತ್ರದ ಕಾಂಗ್ರೆಸ್(Congress) ಅಭ್ಯರ್ಥಿ(Candidate) ಯಾರು? ಸದ್ಯಕ್ಕಂತೂ ಈ ಪ್ರಶ್ನೆ ದೊಡ್ಡಮಟ್ಟದಲ್ಲಿ ಕಾಡುತ್ತಿದ್ದರೂ ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ತವರು ಜಿಲ್ಲೆಯಾಗಿರುವ ಮೈಸೂರು(Mysore) ಲೋಕಸಭಾ ಕ್ಷೇತ್ರದಿಂದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ(Yatindra Siddaramaiah) ಅವರು ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿಎಂ ಪುತ್ರ ಯತೀಂದ್ರ ನಿರಾಸಕ್ತಿ ತಳೆದಿದ್ದಾರೆ.

ಲೋಕಸಭಾ(Loka Saba) ಚುನಾವಣೆ(Election)ಯಲ್ಲಿ ಮೈಸೂರಿನಿಂದ ಸ್ಪರ್ಧಿಸುವ ಬಗ್ಗೆ ಹಾಸನ(Hassana)ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿ ಯಾರು ಎಂದು ಪಕ್ಷದ ವರಿಷ್ಠರು ತೀರ್ಮಾನ ಮಾಡಿಲ್ಲ ಹಾಗೂ ಈ ಬಗ್ಗೆ ನನಗೂ ಯಾವುದೇ ಸೂಚನೆಯನ್ನೂ ಕೊಟ್ಟಿಲ್ಲ. ನಾನಂತೂ ಟಿಕೆಟ್ ಬೇಕು ಅಂತ ಕೇಳಲ್ಲ. ನಾನೂ ಆಕಾಂಕ್ಷಿ ಕೂಡ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ವರಿಷ್ಠರು ಏನು ತೀರ್ಮಾನ ಮಾಡ್ತಾರೆ ನೋಡೋಣ ಎಂದರು. ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಕೂಡ ಬದ್ಧರಾಗಿರಬೇಕಾಗುತ್ತೆ. ಆದರೆ ಅವರು ಮೊದಲು ಹೇಳಲಿ, ವರುಣ ಕ್ಷೇತ್ರದ ಜನ ವರುಣ ಕ್ಷೇತ್ರ ಬಿಟ್ಟು ಹೋಗಬೇಡಿ ಅಂತ ಹೇಳುತ್ತಿದ್ದಾರೆ. ಆದರೆ ವರುಣ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬರಲಿದೆ. ವರುಣ ಕ್ಷೇತ್ರದ ಜನ ರಾಜ್ಯ ರಾಜಕೀಯದಲ್ಲೇ ಇರಿ ಎನ್ನುತ್ತಿದ್ದಾರೆ ಎಂದರು.
#Congress #YatindraSiddaramaiah #CMofKarnataka #Siddaramaiah #LokaSaba






