ಬೆಂಗಳೂರು : “ನಾನು ಕೆಟ್ಟವನು. ಹಾಗಾಗಿ ರಾಜಕೀಯ ಪ್ರವೇಶಿಸುವುದಿಲ್ಲ. ನಾನು ಸತ್ತರೂ ಚಲನಚಿತ್ರ ಕಲಾವಿದನಾಗಿ ಸಾಯುವುದು ನನ್ನ ಆಸೆ…
-ಹೀಗೆ ಹೇಳಿದ್ದರಂತೆ ಖ್ಯಾತ ನಿರ್ದೇಶಕ ಭಾರತಿ ರಾಜಾ. ಹೌದು, ಭಾರತಿ ರಾಜಾ ಭಾರತೀಯ ಚಿತ್ರರಂಗ ಕಂಡ ಅಪರೂಪದ ನಿರ್ದೇಶಕ. ಹಲವು ಸೂಪರ್ ಹಿಟ್ ಸಿನಿಮಾ ಕೊಡುವ ಮೂಲಕ ಯಶಸ್ವೀ ನಿರ್ದೇಶಕರಾಗಿ ಗುರುತಿಸಿಕೊಂಡವರು.

ಹೊಸ ಅಲೆಯ ಸಿನಿಮಾ ಮೂಲಕ ತಮಿಳು ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದವರು ರಾಜಾ. ಅನೇಕ ಸೆಲಿಬ್ರಿಟೀಸ್ ರಾಜಕಾರಣಕ್ಕೆ ಬಂದಿರುವುದು ಗೊತ್ತೇ ಇದೆ. ಆದರೆ, ಭಾರತಿ ರಾಜಾ ಅವರಿಗೆ ರಾಜಕೀಯ ಪ್ರವೇಶಿಸುವಂತೆ ಹಲವು ಪಕ್ಷದ ಮುಖಂಡರು ಒತ್ತಾಯ ಮಾಡಿದ್ದರು. ಆದರೆ, ಭಾರತಿ ರಾಜ ಮಾತ್ರ ಯಾರ ಮಾತಿಗೂ ಬಗ್ಗದೆ ನೋ ಅಂದಿದ್ದರು.
ಕರುಣಾನಿಧಿ, ಜಯಲಲಿತಾ ಕರೆದರೂ ರಾಜಕೀಯ ಪ್ರವೇಶಿಸಲಿಲ್ಲ:
ಈ ಹಿಂದೆ ಹಿರಿಯ ನಿರ್ದೇಶಕ ಭಾರತಿರಾಜ ಅವರಿಗೆ ರಾಜಕೀಯ ಪ್ರವೇಶಿಸಲು ಆಹ್ವಾನ ಬಂದಿದ್ದು ನಿಜ. ಆದರೆ, ಅವರು ಅದನ್ನು ನಯವಾಗಿಯೇ ತಿರಸ್ಕರಿಸಿದ್ದರು. ಥೇಣಿ ಜಿಲ್ಲೆಯವರಾದ ಭಾರತಿರಾಜ ಅವರು 1977 ರಲ್ಲಿ ಬಿಡುಗಡೆಯಾದ ’16 ವಯತಿನಿಲೆ’ ಚಿತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದರು. ನಂತರದ ದಿನಗಳಲ್ಲಿ ‘ಕೆಜಕೆ ಪೋಗಮ್ ರೈಲ್’ ಮತ್ತು ‘ಸಿಕ್ಕಪ್ಪು ರೋಜಕ್ಕಲ್’ ಸೇರಿದಂತೆ ಹಲವು ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದರು.
ತಮಿಳು ಸಿನಿಮಾವನ್ನು ಸ್ಟುಡಿಯೋದಿಂದ ಹೊರಗೆ ತಂದ ಕೀರ್ತಿ ಭಾರತಿರಾಜ ಅವರಿಗೆ ಸಲ್ಲುತ್ತದೆ. ಭಾರತಿರಾಜ ಅವರು ಆರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದವರು. ಅವರಿಗೆ 2004 ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.
ಇದನ್ನೂ ಓದಿ : ರಾಜ್ಯಸಭೆ ಸ್ಥಾನದ ಬಗ್ಗೆ ನನಗೆ ವ್ಯಾಮೋಹವಿಲ್ಲ-ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ
ಚಿತ್ರರಂಗದಲ್ಲಿ ಅದ್ಭುತ ನಟರು ಹೌದು, ನಿರ್ದೇಶಕರೂ ಹೌದು. ಆದರೆ, ರಾಜಕೀಯದಲ್ಲಿ ಛಾಪು ಮೂಡಿಸುವ ಅವಕಾವಿತ್ತಾದರೂ, ಅದನ್ನು ನಿರಾಕರಿಸಿದರು. ಮಣಿರತ್ನಂ ಅವರ ‘ಆಯುಧ ಏಶುತ್’ ಚಿತ್ರದಲ್ಲಿ ರಾಜಕಾರಣಿಯ ಪಾತ್ರ ನಿರ್ವಹಿಸಿದ್ದ ಅವರು, ರಿಯಲ್ ರಾಜಕಾರಣಿಯಾಗಲು ಇಷ್ಟಪಡಲಿಲ್ಲ. ಯಾಕೆ ರಾಜಕೀಯ ಪ್ರವೇಶಿಲಿಲ್ಲ ಎಂಬುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು ಭಾರತಿರಾಜ್.

ಈ ಹಿಂದೆ ಆಂಧ್ರದ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವ ಕಲ್ಯಾಣ ಸಚಿವೆಯಾಗಿದ್ದ ನಟಿ ರೋಜಾ ಅವರಿಗೆ ತಮಿಳು ಚಲನಚಿತ್ರೋದ್ಯಮದ ಪರವಾಗಿ ನಿರ್ದೇಶಕ ಭಾರತಿರಾಜ ಅವರ ನೇತೃತ್ವದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಆಗ ಮಾತನಾಡಿದ ಭಾರತಿರಾಜ, “ರೋಜಾ ನನಗೆ ಮೊದಲು ಪರಿಚಯವಾದಾಗ, ಅವರು ನನಗೆ ಗುಲಾಬಿ ಹೂವುಗಳಿಂದ ಹಾರ ಹಾಕಿದರು, ಆದ್ದರಿಂದ ನಾನು ಅವರಿಗೆ ರೋಜಾ ಎಂದು ಹೆಸರಿಟ್ಟಿದ್ದೆ ಎಂಬುದನ್ನು ಹೇಳಿಕೊಂಡಿದ್ದರು. ಒಳ್ಳೆಯ ನಿರ್ದೇಶಕರಾಗಿದ್ದ ಅವರಿಗೆ ಜನಮನ್ನಣೆ ಸಾಕಷ್ಟು ಇತ್ತು.
ಸ್ವತಃ ಎಂಜಿಆರ್, ಕರುಣಾನಿಧಿ, ಜಯಲಲಿತಾ ಸೇರಿದಂತೆ ಅನೇಕ ರಾಜಕೀಯ ನಾಯಕರು ರಾಜಕೀಯ ಪ್ರವೇಶಿಸುವಂತೆ ಕೋರಿದ್ದರು. ಆಗ, ನಾನು ಕೆಟ್ಟವನು. ನಾನು ಸತ್ತರೂ ಚಲನಚಿತ್ರ ಕಲಾವಿದನಾಗಿ ಸಾಯುವುದು ನನ್ನ ಆಸೆʼ ಹಾಗಾಗಿ ರಾಜಕೀಯ ಬೇಡ ಎಂದಿದ್ದೆ ಎಂದು ಹೇಳಿಕೆ ಕೊಟ್ಟಿದ್ದರು.






