ಇತ್ತೀಚೆಗಷ್ಟೇ ಪ್ರಧಾನಿ ಮೋದಿ (modi) ಸಾವಿನ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ರಾಜು ಕಾಗೆ (raaju kaage) ಇದೀಗ ಮತ್ತೊಂದು ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಆ ಮೂಲಕ ಕಾಗವಾಡದ ಶಾಸಕ ರಾಜು ಕಾಗೆ ಹಿಂದೂ ಕಾರ್ಯಕರ್ತರ (Hindu workers) ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಹಿಂದು ಕಾರ್ಯಕರ್ತರಿಗೆ ಬಿಕಾರ್ಜೋಟ್ ಅಂದ್ರೆ ಗತಿ ಇಲ್ಲದ ಭಿಕ್ಷುಕರು ಎಂದು ಶಾಸಕ ರಾಜು ಕಾಗೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಜುಗುಳ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪ್ರಚಾರದ ಭಾಷಣದಲ್ಲಿ, ರಾಮಲಲ್ಲಾನ (ram lalla) ಮಂದಿರ ಸ್ಥಾಪಿಸದ್ದಕ್ಕಾಗಿ ಕಾಗೆ ಆಕ್ರೋಶ ಹೊರಹಾಕುವ ಭರದಲ್ಲಿ ಗುಡಿಗಳನ್ನು ಕಟ್ಟೋದ್ರಿಂದ ಸಮಾಧಾನವಾಗ್ತದೆ ಎಂದ್ರೆ ನಾವು ಗುಡಿಗಳನ್ನು ಕಟ್ಟೇವೆ. ಬಿಜೆಪಿಯವರು (Bjp) ಜೈ ಶ್ರೀರಾಮ ಜೈ ಶ್ರೀರಾಮ (jal sri ram) ಎಂದು ಘೋಷಣೆ ಕೂಗುತ್ತಾ ಹೋಗ್ತಾರೆ. ಇದೆಲ್ಲವನ್ನು ನಾನು ಕಳೆದ 40 ವರ್ಷಗಳ ಹಿಂದೆನೇ ಮಾಡಿದ್ದೇನೆ ಎಂದರು.
ಧರ್ಮದ (Religion) ಹೆಸರಲ್ಲಿ ಇಂಥ ರಾಜಕಾರಣ ಮಾಡುವವರಿಗೆ ಉತ್ತರ ಕೊಡಲು ನಾನು ಸಮರ್ಥನಿದ್ದೇನೆ, ಆದರೆ ಅವರು ನನ್ನ ಲೇವಲ್ನವರಲ್ಲ .ಅವರು ಬಿಕಾರ್ಚೋಟ್ ಇದ್ದಾರೆ. ಹೀಗಾಗಿ ಅಭಿವೃದ್ಧಿ ಬೇಕಾದ್ರೆ ಕಾಂಗ್ರೆಸ್ (congress) ಪಕ್ಷಕ್ಕೆ ವೋಟ್ ಹಾಕಿ ಎಂದು ನೀಡಿರುವ ಹೇಳಿಕೆಗೆ ಹಿಂದೂ ಕಾರ್ಯಕಾರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.