ಪಂಚರಾಜ್ಯ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಈ ಮಧ್ಯೆ ಗೋವಾ ಕಾಂಗ್ರೆಸ್ ಉಸ್ತುವಾರಿ ಪಿ.ಚಿದಂಬರಂ ಇತ್ತೀಚಿಗೆ ಗೋವಾದಲ್ಲಿ ನಿಜವಾದ ಸ್ಪರ್ಧೆ ಏರ್ಪಟ್ಟಿರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ. ಇತರೆ ಪಕ್ಷಗಳ ಮತ ವಿಭಜನೆ ಮಾಡುವ ಸಲುವಾಗಿ ಸ್ಪರ್ಧಿಸುತ್ತಿವೆ ಎಂದು ಕಿಡಿಕಾರಿದ್ದಾರೆ.
ಚಿದಂಬರಂ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿಭಜನೆಯಾಗಿರುವ ಮತಗಳ ಬಗ್ಗೆ ಚಿಂತಿಸುವುದನ್ನು ಮೊದಲು ಬಿಡಿ ಮತ್ತು ಕಾಂಗ್ರೆಸ್ಗೆ ಹಾಕುವ ಪ್ರತಿ ಮತ ಬಿಜೆಪಿಗೆ ಸುರಕ್ಷಿತವಾಗಿ ತಲುಪಿಸಲಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಚಿದಂಬರಂ ʻಅರವಿಂದ್ ಕೇಜ್ರಿವಾಲ್ರವರ ಎಎಪಿ ಹಾಗೂ ತೃಣಮೂಲ ಕಾಂಗ್ರೆಸ್ ಗೋವಾದಲ್ಲಿ ಬಿಜೆಪಿ ವಿರುದ್ಧ ಮತಗಳನ್ನು ವಿಭಜಿಸುವುದು ಸ್ಪಷ್ಟವಾಗಿದೆʼ ಎಂದಿದ್ದಾರೆ.
ಕಳೆದ 10 ವರ್ಷಗಳಿಂದ ದುರಾಡಳಿತವನ್ನ ಕಂಡಿರುವ ಜನತೆ ಈ ಭಾರೀ ಕಾಂಗ್ರೆಸ್ಗೆ ಮತವನ್ನ ನೀಡಲಿದ್ದಾರೆ ಮತ್ತು ದುರಾಡಳಿತವನ್ನು ಬಯಸುವವರು ಬಿಜೆಪಿಗೆ ಮತವನ್ನ ನೀಡಲಿದ್ದಾರೆ ಎಂದು ಹೇಳಿದ್ದಾರೆ.