Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

29 ಹುಲಿಮರಿಗೆ ಜನ್ಮ ನೀಡಿದ್ದ ಸೂಪರ್ ಮಾಮ್ ಖ್ಯಾತಿಯ ಕಾಲರ್ ವಾಲಿ ಸಾವು

ಚಂದನ್‌ ಕುಮಾರ್

ಚಂದನ್‌ ಕುಮಾರ್

January 18, 2022
Share on FacebookShare on Twitter

ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ಲೆಜೆಂಡ್ರಿ ಹುಲಿ “ಕಾಲರ್‌ವಾಲಿ” ವಯೋಸಹಜ ಕಾರಣದಿಂದ ಶನಿವಾರ ಸಂಜೆ ಸಾವನ್ನಪ್ಪಿದೆ. 17 ವರ್ಷದ ಹುಲಿ ತನ್ನ ಜೀವಿತಾವಧಿಯಲ್ಲಿ 29 ಮರಿಗಳಿಗೆ ಜನ್ಮ ನೀಡಿ “ಸೂಪರ್ ಮಾಮ್” ಮಾರತರಂ ಎಂದೂ ಪ್ರಸಿದ್ಧಿಯಾಗಿತ್ತು. ಈ ಲೆಜೆಂಡ್ರಿ ಹೆಣ್ಣುಹುಲಿ ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶ (PTR) ದಲ್ಲಿ ವಾಸವಿತ್ತು.

ಹೆಚ್ಚು ಓದಿದ ಸ್ಟೋರಿಗಳು

ಭಾರತದ ವಿದೇಶಿ ವಿನಿಮಯ ಆಪದ್ಧನ ಏಕೆ ಕರಗುತ್ತಿದೆ?

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್ ರಾಜೀನಾಮೆ‌

ಗುಜರಾತ್‌ ನಲ್ಲಿ ಗೋಡೆ ಕುಸಿದು 12 ಮಂದಿ ದುರ್ಮರಣ

ಅರಣ್ಯ ಇಲಾಖೆ ಈ ಸೂಪರ್ ಅಮ್ಮನಿಗೆ ಟಿ-15 ಎಂದು ಅಧಿಕೃತವಾದ ಹೆಸರು ನೀಡಿತ್ತು. ಆದರೂ ಸ್ಥಳೀಯರು ಅವಳನ್ನು ಪ್ರೀತಿಯಿಂದ ಕಾಲರ್ ವಾಲಿ ಎಂದು ಕರೆಯುತ್ತಿದ್ದರು. ಈ T-15 ಎಂದೂ ಕರೆಯಲ್ಪಡುವ ಹುಲಿಯು 2008 ಮತ್ತು 2018 ರ ನಡುವೆ ಅಂದರೆ ಹನ್ನೊಂದು ವರ್ಷಗಳ ಅವಧಿಯಲ್ಲಿ 29 ಮರಿಗಳಿಗೆ ಜನ್ಮ ನೀಡಿತ್ತು.

“ಹುಲಿಗೆ ವಯಸ್ಸಾದ ಕಾರಣ ಅಸ್ವಸ್ಥವಾಗಿತ್ತು. ಕಾಲರ್ ವಾಲಿ ಹುಲಿ ಕೊನೆಯದಾಗಿ ಜನವರಿ 14 ರಂದು ಭೂರಾ ದೇವ್ ನುಲ್ಲಾ ಬಳಿ ಮಲಗಿರುವಂತೆ ಕಾಣಿಸಿಕೊಂಡಿತ್ತು. ನಿರಂತರ ಪಶುವೈದ್ಯರ ನಿಗಾದಲ್ಲಿದ್ದ ಹುಲಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ದುರಾದೃಷ್ಟವಶಾತ್ ಶನಿವಾರ ಸಂಜೆ 6.15ಕ್ಕೆ ಕೊನೆಯುಸಿರೆಳೆದಿದೆ ಎಂದು ಪೆಂಚ್ ಟೈಗರ್ ರಿಸರ್ವ್ ಕ್ಷೇತ್ರ ನಿರ್ದೇಶಕ ಅಲೋಕ್ ಮಿಶ್ರಾ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಆದರೆ ಪ್ರಾಥಮಿಕವಾಗಿ ಇದು ವೃದ್ಧಾಪ್ಯದಿಂದ ಉಂಟಾದ ಸಾವು ಎಂದು ಅವರು ಹೇಳಿದ್ದಾರೆ.

ಹುಲಿ ಮರಿಯಾಗಿದ್ದಾಗಲೇ ಮಾರ್ಚ್ 2008 ರಲ್ಲಿ ಅರಣ್ಯ ಅಧಿಕಾರಿಗಳು ರೇಡಿಯೋ ಕಾಲರ್ ಅಳವಡಿಸಿದ್ದರು. ನಂತರ ರೇಡಿಯೋ ಕಾಲರ್ ತನ್ನ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು ಮತ್ತೆ ಜನವರಿ 2010ರಲ್ಲಿ ರೇಡಿಯೋ ಕಾಲರ್ ಅನ್ನು ಅಳವಡಿಸಲಾಗಿತ್ತು. ಹೀಗಾಗಿ ಹುಲಿಗೆ ಕಾಲರ್ ವಾಲಿ ಎಂದು ಹೆಸರು ಬಂತು. “ಕಾಲರ್ ವಾಲಿ” ಪ್ರವಾಸಿಗರಲ್ಲಿ ಅತ್ಯಂತ ಜನಪ್ರಿಯ ಹುಲಿಯಾಗಿತ್ತು. 2005ರಲ್ಲಿ ಚಾರ್ಜರ್ ಎಂದು ಕರೆಯಲ್ಪಡುವ ಬಡಿಮಾಡ ಮತ್ತು T 1 ಎಂದು ಜನಪ್ರಿಯವಾಗಿರುವ T 7 ಗೆ ಜನಿಸಿತು. 2008 ರಲ್ಲಿ ಡೆಹ್ರಾಡೂನ್‌ನ ತಜ್ಞರ ತಂಡವು ಕಾಲರ್ ವಾಲಿ ಮೇಲೆ ರೇಡಿಯೊ ಕಾಲರ್ ಅನ್ನು ಅಳವಡಿಸಿತ್ತು ಎಂದು ತಿಳಿಸಿದ್ದಾರೆ.

ಮುಂದುವರೆದು, ಮೇ 2008 ರಲ್ಲಿ ಕಾಲರ್ ವಾಲಿ ಮೂರು ಮರಿಗಳಿಗೆ ಜನ್ಮ ನೀಡಿದ್ದಾದರು ಅವು ಬದುಕಲು ಸಾಧ್ಯವಾಗಲಿಲ್ಲ. ಆದರೆ “ಅಕ್ಟೋಬರ್ 2010 ರಲ್ಲಿ, ಒಂದೇ ಬಾರಿಗೆ ಐದು ಮರಿಗಳಿಗೆ ಜನ್ಮ ನೀಡಿತ್ತು ಇದರ ಪರಿಣಾಮ ವನ್ಯಜೀವಿ ಪ್ರಿಯರಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿತು ಎಂದಿದ್ದಾರೆ.

“16 ವರ್ಷಗಳಿಗಿಂತ ಹೆಚ್ಚು ಕಾಲ ಕಾಡಿನಲ್ಲಿ ವಾಸಿಸುತ್ತಿದ್ದ ಕಾಲರ್ ವಾಲಿಯ ಬದುಕು ಐತಿಹಾಸಿಕ ದಾಖಲೆಯಾಗಿದೆ. ತನ್ನ ಹೆಣ್ಣು ಮರಿಯನ್ನು ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದರಿಂದ ಆಕೆಯ ಪರಂಪರೆ ಪೆಂಚ್‌ಗೆ ಸೀಮಿತವಾಗಿಲ್ಲ ಬೇರೆ ಕಡೆಗೂ ವಿಸ್ತಾರಗೊಂಡಿದೆ ಎಂದು ಜಬಲ್ಪರದ ರಾಜ್ಯ ಅರಣ್ಯದ ವಿಜ್ಞಾನಿ ಅನಿರುದ್ಧ ಮಜುಂದಾರ್ ಹೇಳಿದರು.

ಜನವರಿ 14 ರಂದು ಹುಲಿ ಸಾವನಪ್ಪಿದ್ದು ಅದರ ಅಂತ್ಯಕ್ರಿಯೆಯಲ್ಲಿ ಹಲವಾರು ಸ್ಥಳೀಯರು ಭಾಗವಹಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಹುಲಿಗೆ ಹಾಕಲು ಹೂಮಾಲೆಯೊಂದಿಗೆ ಬಂದಿದ್ದರೆ, ಇತರರು ಹುಲಿಯ ಅಂತಿಮ ನಮನ ಸಲ್ಲಿಸಲು ಕೈ ಮುಗಿದು ನಿಂತಿದ್ದಾರೆ. ಈ ಚಿತ್ರಗಳು ಸಹ ಛಾಯಾಗ್ರಾಹಕರೊಬ್ಬರು ಕ್ಲಿಕ್ಕಿಸಿದ್ದಾರೆ.

The legendary tigress from Pench Tiger Reserve also popularly called Collarwali died due to old age, she had brought up 29 cubs in Pench during its lifetime. pic.twitter.com/U219RzykYi

— Anurag Dwary (@Anurag_Dwary) January 16, 2022

ಕಲಾರ್ ವಾಲಿ ಸಾವಿಗೆ ಅನೇಕ ರಾಜಕೀಯ ನಾಯಕರು, ಗಣ್ಯರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.

Legendary among legends. Collarwali the famous tigress who holds record of giving birth to 29 cubs. She is no more now. But left her species in good health. Pic by good friend @saroshlodhi pic.twitter.com/1WE7jNbFZs

— Parveen Kaswan, IFS (@ParveenKaswan) January 16, 2022

The Queen #collarwali is no more! Died because of old age!
Leaving behind her legacy and her 29 cubs. Her contribution is immense in restoring back the ecological balance by improving the tiger population in India ?
RIP ? pic.twitter.com/aj0NrpwOBX

— India in Iceland (@indembiceland) January 16, 2022
RS 500
RS 1500

SCAN HERE

don't miss it !

ಕೋವಿಡ್-19 3ನೇ ಅಲೆ ಹಿನ್ನೆಲೆ ತೀವ್ರ ಕಟ್ಟೆಚರ ವಹಿಸಲು ಸೂಚನೆ.
ಕರ್ನಾಟಕ

ವಿಧಾನ ಪರಿಷತ್ & ರಾಜ್ಯಸಭೆ ಚುನಾವಣೆ | ನಾಳೆ ಕೋರ್ ಕಮಿಟಿ ಸಭೆ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
May 13, 2022
ಸ್ವಾಮೀಜಿ ವೇಷದಲ್ಲಿದ್ದ ಆಸಿಡ್‌ ದಾಳಿಕೋರ ನಾಗೇಶ್‌ ತಮಿಳುನಾಡಿನಲ್ಲಿ ಅರೆಸ್ಟ್!
Top Story

ಸ್ವಾಮೀಜಿ ವೇಷದಲ್ಲಿದ್ದ ಆಸಿಡ್‌ ದಾಳಿಕೋರ ನಾಗೇಶ್‌ ತಮಿಳುನಾಡಿನಲ್ಲಿ ಅರೆಸ್ಟ್!

by ಪ್ರತಿಧ್ವನಿ
May 13, 2022
ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ : ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಣೆ!
ಕರ್ನಾಟಕ

ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ : ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಣೆ!

by ಪ್ರತಿಧ್ವನಿ
May 17, 2022
ಕಸದ ಲಾರಿ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ : ಬಿಬಿಎಂಪಿ ಕಸದ ಗುತ್ತಿಗೆದಾರಿಂದ ಖಾಕಿ‌ ಮೇಲೆ ಲಂಚದ ಆರೋಪ !
ಕರ್ನಾಟಕ

ಕಸದ ಲಾರಿ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್ : ಬಿಬಿಎಂಪಿ ಕಸದ ಗುತ್ತಿಗೆದಾರಿಂದ ಖಾಕಿ‌ ಮೇಲೆ ಲಂಚದ ಆರೋಪ !

by ಕರ್ಣ
May 17, 2022
47.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದ ದೆಹಲಿ!
ಇದೀಗ

ಯುಪಿ ದೆಹಲಿಯಲ್ಲಿ 49 ಡಿಗ್ರಿ ದಾಟಿದ ಗರಿಷ್ಠ ತಾಪಮಾನ

by ಪ್ರತಿಧ್ವನಿ
May 16, 2022
Next Post
ಓಮೈಕ್ರಾನ್ ಸೋಂಕು ಸಮುದಾಯಕ್ಕೆ ಹರಡಿದೆಯೇ? ಅಧ್ಯಯನ ವರದಿ ಹೇಳುವ ನೈಜತೆ ಏನು?

ಓಮೈಕ್ರಾನ್ ಸೋಂಕು ಸಮುದಾಯಕ್ಕೆ ಹರಡಿದೆಯೇ? ಅಧ್ಯಯನ ವರದಿ ಹೇಳುವ ನೈಜತೆ ಏನು?

ಕಾಂಗ್ರೆಸ್‌ಗೆ ಲಾಭ ತಂದುಕೊಡಲಿದೆಯೇ ಮೋದಿ ಟೆಲಿಪ್ರಾಂಪ್ಟರ್‌ ದೋಷ?

ಕಾಂಗ್ರೆಸ್‌ಗೆ ಲಾಭ ತಂದುಕೊಡಲಿದೆಯೇ ಮೋದಿ ಟೆಲಿಪ್ರಾಂಪ್ಟರ್‌ ದೋಷ?

ಸ್ಯಾಂಡಲ್‌ ವುಡ್‌ ನಲ್ಲಿ ಸತ್ಯ ಹೆಗಡೆ ತುಳಿದ ಶಾರ್ಟ್ ಕಟ್ ಹಾದಿಗೆ ಈಗ ಭಾರಿ ಪ್ರಶಂಸೆ!

ಸ್ಯಾಂಡಲ್‌ ವುಡ್‌ ನಲ್ಲಿ ಸತ್ಯ ಹೆಗಡೆ ತುಳಿದ ಶಾರ್ಟ್ ಕಟ್ ಹಾದಿಗೆ ಈಗ ಭಾರಿ ಪ್ರಶಂಸೆ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist