ADVERTISEMENT
  • Home
  • About Us
  • ಕರ್ನಾಟಕ
Sunday, May 25, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

`ಧರ್ಮದ ಅತ್ಯಗತ್ಯ ಆಚರಣೆಗಳು’ಮತ್ತು ಕೋರ್ಟ್ ತೀರ್ಪುಗಳು

ಫಾತಿಮಾ by ಫಾತಿಮಾ
February 26, 2022
in ಕರ್ನಾಟಕ
0
`ಧರ್ಮದ ಅತ್ಯಗತ್ಯ ಆಚರಣೆಗಳು’ಮತ್ತು ಕೋರ್ಟ್ ತೀರ್ಪುಗಳು
Share on WhatsAppShare on FacebookShare on Telegram

ಕಾಲೇಜಿಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ ವಿಚಾರಣೆ ವೇಳೆ ಹಿಜಾಬ್ ಇಸ್ಲಾಂ ಧರ್ಮದ ‘ಅತ್ಯಗತ್ಯ’ ಧಾರ್ಮಿಕ ಆಚರಣೆಯೇ ಎಂಬ ಪ್ರಶ್ನೆ ಕೇಳಿದೆ. ಅರ್ಜಿದಾರರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ದೇವದತ್ತ್ ಕಾಮತ್ ಅವರು ಹಿಜಾಬ್ ನಿಜಕ್ಕೂ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ವಾದಿಸಿದ್ದಾರೆ. ಆದರೆ ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಈ ವಾದವನ್ನು ಒಪ್ಪಿಕೊಂಡಿಲ್ಲ.

ADVERTISEMENT

ಸಂವಿಧಾನವು ಧರ್ಮದ “ಅಗತ್ಯ” ಮತ್ತು “ಅಗತ್ಯವಲ್ಲದ” ಆಚರಣೆಗಳ ನಡುವೆ ವ್ಯತ್ಯಾಸವನ್ನು ತೋರಿಸದಿದ್ದರೂ, ಧರ್ಮದ ಮೇಲಿನ ವಿವಾದಗಳನ್ನು ಒಳಗೊಂಡಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳು 1950 ರ ದಶಕದಿಂದಲೂ ಅಗತ್ಯ ಹೌದೋ ಅಲ್ಲವೋ ಎನ್ನುವ ಪರೀಕ್ಷೆಯನ್ನು ನಡೆಸಿಕೊಂಡು ಬಂದಿದೆ. ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಯನ್ನು ಸ್ಪಷ್ಟಪಡಿಸುವ ಇಕ್ಕಟ್ಟಿಗೆ ಕೋರ್ಟ್ ಸಿಲುಕಿದಾಗಲ್ಲೇ ಕೋರ್ಟ್ ಈ ವಿಚಾರವನ್ನು ಪರಿಶೀಲಿಸಿದೆ.

ಅಗತ್ಯ ಧಾರ್ಮಿಕ ಆಚರಣೆಗಳ ಪರಿಶೀಲನೆ ಯಾವುದು?

ಭಾರತದ ಸಂವಿಧಾನದ 25(1) ನೇ ವಿಧಿಯು ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮವನ್ನು ಆಚರಿಸುವ ಹಕ್ಕನ್ನು ಖಾತರಿಪಡಿಸುತ್ತದೆ. ಆರ್ಟಿಕಲ್ 26(ಬಿ) ಧಾರ್ಮಿಕ ಪಂಗಡಗಳಿಗೆ ತಮ್ಮ ‘ಧರ್ಮದ ವಿಷಯಗಳಲ್ಲಿ ಸ್ವಂತ ಆಚರಣೆಗಳನ್ನು’ ಪಾಲಿಸುವ ಹಕ್ಕನ್ನು ಸಹ ನೀಡುತ್ತದೆ.

ಈ ನಿಬಂಧನೆಗಳ ಅಡಿಯಲ್ಲಿ ಧರ್ಮದಲ್ಲಿ ಅತ್ಯಗತ್ಯವಾದ ಆಚರಣೆಗಳನ್ನು ಮಾತ್ರ ರಕ್ಷಿಸಲಾಗುವುದು ಎಂದು ನ್ಯಾಯಾಲಯಗಳು ಈವರೆಗೆ ಅಭಿಪ್ರಾಯಪಟ್ಟಿವೆ. ಹೀಗಾಗಿ ಯಾವುದೋ ಒಂದು ಆಚರಣೆಯನ್ನು ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯೇ ಅಥವಾ ಅಲ್ಲವೇ ಎಂಬುವುದು ನ್ಯಾಯಾಲಯಗಳಲ್ಲಿ ನಿರ್ಣಯವಾಗುವ ಪರಿಸ್ಥಿತಿಗಳು ಕೆಲವೊಮ್ಮೆ ಉದ್ಭವಿಸುತ್ತವೆ.

ಅತ್ಯಗತ್ಯ ಧಾರ್ಮಿಕ ಆಚರಣೆ ಯಾವುದು ಎಂಬುದರ ಬಗ್ಗೆ ನಿಖರವಾದ ವ್ಯಾಖ್ಯಾನವಿಲ್ಲದಿದ್ದರೂ, ನ್ಯಾಯಾಲಯಗಳು ಕೆಲವು ತತ್ವಗಳನ್ನು ರೂಪಿಸಿವೆ. ಒಂದು ಧರ್ಮದ ಅಗತ್ಯ ಭಾಗವು “ಧರ್ಮವನ್ನು ಸ್ಥಾಪಿಸಿದ ಪ್ರಮುಖ ನಂಬಿಕೆಗಳನ್ನು” ಉಲ್ಲೇಖಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಅದಲ್ಲದೆ ಧರ್ಮದ ಸ್ವರೂಪವು ಬದಲಾಗುತ್ತದೆಯೇ” ಎಂದು ನೋಡುವುದು ಸಹ ಅಗತ್ಯ ಧಾರ್ಮಿಕ ಆಚರಣೆಯ ಪರೀಕ್ಷೆಯಾಗಿದೆ.

ಆ ಆಚರಣೆಯನ್ನು ತೆಗೆದುಹಾಕುವುದರಿಂದ “ಆ ಧರ್ಮದ ಸ್ವರೂಪದಲ್ಲಿ ಮೂಲಭೂತ ಬದಲಾವಣೆ” ಉಂಟಾದರೆ, ಆ ಅಭ್ಯಾಸವು ಅತ್ಯಗತ್ಯ ಆಚರಣೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಅದರ ತತ್ವಗಳು, ಐತಿಹಾಸಿಕ ಹಿನ್ನೆಲೆ ಮತ್ತು ವಿಕಸನಗೊಂಡ ಪ್ರಕ್ರಿಯೆಯಲ್ಲಿನ ಬದಲಾವಣೆ ಇತ್ಯಾದಿಗಳ ಪ್ರಕಾರ” ಅತ್ಯಗತ್ಯವಾದ ಅರ್ಹತೆಗಳ ನಿರ್ಣಯವನ್ನು ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹಿಂದಿನ ತೀರ್ಪುಗಳಲ್ಲಿ ಹೇಳಿದೆ.

ಅಗತ್ಯ ಧಾರ್ಮಿಕ ಅಭ್ಯಾಸ ಪರೀಕ್ಷೆಯು ಹೇಗೆ ಪ್ರಾರಂಭವಾಯಿತು?

ಆರಂಭದಲ್ಲಿ, ಜಾತ್ಯತೀತ ಮತ್ತು ಧಾರ್ಮಿಕತೆಯ ನಡುವಿನ ವ್ಯತ್ಯಾಸವನ್ನು ಗುರುತಿಸಲು ಅಗತ್ಯವಾದ ಧಾರ್ಮಿಕ ಆಚರಣೆಗಳ ಬಗ್ಗೆ ವಿವರವಾಗಿ ಪರಿಶೀಲಿಸಲು ನ್ಯಾಯಾಲಯಗಳು ಪ್ರಾರಂಭಿಸಿದವು. ಅನುಚ್ಛೇದ 25(2)(a) ಪ್ರಕಾರ “ಧಾರ್ಮಿಕ ಆಚರಣೆಗೆ ಸಂಬಂಧಿಸಿದ ಯಾವುದೇ ಆರ್ಥಿಕ, ಹಣಕಾಸು, ರಾಜಕೀಯ ಅಥವಾ ಇತರ ಜಾತ್ಯತೀತ ಚಟುವಟಿಕೆಗಳನ್ನು” ನಿಯಂತ್ರಿಸಲು ಸರ್ಕಾರಕ್ಕೆ ಅಧಿಕಾರವಿರುವುದರಿಂದ ಈ ವ್ಯತ್ಯಾಸವನ್ನು ಅರಿಯುವುದು ಕೋರ್ಟಿಗೆ ಮುಖ್ಯವಾಗಿತ್ತು.

ಇದರ ಪರಿಣಾಮವಾಗಿ, 1954 ರಲ್ಲಿ, ಸರ್ವೋಚ್ಚ ನ್ಯಾಯಾಲಯವು “ಧರ್ಮದ ಅಗತ್ಯ ಭಾಗ” ಎಂಬ ಪದವನ್ನು ಮೊದಲು ಬಳಸಿದಾಗ ಅದು ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣವನ್ನು ಒಳಗೊಂಡಿರುವ ಪ್ರಕರಣದಲ್ಲಿ ಜಾತ್ಯತೀತ ಚಟುವಟಿಕೆಯಿಂದ “ಮೂಲಭೂತವಾಗಿ ಧಾರ್ಮಿಕ” ಚಟುವಟಿಕೆಯನ್ನು ಪ್ರತ್ಯೇಕಿಸುತ್ತದೆ. ಇಲ್ಲಿ ನ್ಯಾಯಾಲಯವು ಧಾರ್ಮಿಕ ಪಂಗಡಕ್ಕೆ ಅಗತ್ಯವಾದ ಆಚರಣೆಯನ್ನು ನಿರ್ಧರಿಸುವ ಅಧಿಕಾರವನ್ನು ನೀಡಿತು. ಆದರೆ ಮುಂದಿನ ಕೆಲವು ವರ್ಷಗಳಲ್ಲಿ ಸುಪ್ರೀಂ ಕೋರ್ಟೇ ಧಾರ್ಮಿಕ ಪಂಗಡಗಳಿಗೆ ನೀಡಿದ್ದ ಅಧಿಕಾರವನ್ನು ಸ್ವತಃ ತನ್ನ ಕೈಗೆ ತೆಗೆದುಕೊಂಡಿತು.

1958 ರ ದಲಿತರ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಯಾವ ಆಚರಣೆಗಳು ಅತ್ಯಗತ್ಯ ಎಂಬುದನ್ನು ನಿರ್ಧರಿಸುವ ಹಕ್ಕನ್ನು ದೇವಾಲಯಗಳು ಹೊಂದಿದೆಯೇ ಎಂದು ನಿರ್ಧರಿಸಲು ಗ್ರಂಥಗಳನ್ನು ಪರಿಶೀಲಿಸಿತು. ಹಿಜಾಬ್ ಪ್ರಕರಣದಲ್ಲೂ ಹೈಕೋರ್ಟ್ ನ್ಯಾಯಾಧೀಶರು ಕುರಾನ್ನ್ನು ಕೋರ್ಟಿಗೆ ತಂದು ಪರಿಶೀಲಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.

ಹೀಗೆ ಜಾತ್ಯತೀತವಾದವುಗಳಿಂದ ಧಾರ್ಮಿಕ ಆಚರಣೆಗಳನ್ನು ಪ್ರತ್ಯೇಕಿಸುವುದರ ಮೂಲಕ, ಅಗತ್ಯ ಧಾರ್ಮಿಕ ಆಚರಣೆಗಳನ್ನು ಮಾನದಂಡವಾಗಿಟ್ಟು ‘ಧರ್ಮಕ್ಕೆ ಅತ್ಯಗತ್ಯ’ ಎಂದು ಕೆಲವು ಆಚರಣೆಗಳನ್ನು ನಿರ್ಧರಿಸಲಾಗುತ್ತದೆ.

‘ಅಗತ್ಯ ಆಚರಣೆ’ ಸಿದ್ಧಾಂತವನ್ನು ಕೋರ್ಟ್ ಬಳಸಿಕೊಂಡ ಕೆಲವು ಉದಾಹರಣೆಗಳು

ಅಗತ್ಯ ಧಾರ್ಮಿಕ ಆಚರಣೆಗಳ ಸಿದ್ಧಾಂತವನ್ನು ಅನೇಕ ಸಂದರ್ಭಗಳಲ್ಲಿ ಬಳಸಲಾಗಿದೆ. 1959 ರಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಧರಿಸಿದ ಮೊದಲ ನಿದರ್ಶನವು ಬಕ್ರೀದ್ನಂದು ಮುಸ್ಲಿಮರು ಗೋವನ್ನು ಬಲಿಕೊಡುವುದು ಅತ್ಯಗತ್ಯವೇ ಎಂದು ಪರೀಕ್ಷಿಸಲಾಯಿತು. ಇದು ಅಗತ್ಯ ಧಾರ್ಮಿಕ ಆಚರಣೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ಅದನ್ನು ಆರ್ಟಿಕಲ್ 25 ರ ಅಡಿಯಲ್ಲಿ ರಕ್ಷಿಸಬಹುದು. ನ್ಯಾಯಾಲಯವು ವಿವಿಧ ಧರ್ಮಗ್ರಂಥಗಳು ಮತ್ತು ಹದೀಸ್ಗಳನ್ನು ನೋಡಿ ಇಸ್ಲಾಂನಲ್ಲಿ ಗೋಹತ್ಯೆಯು ಕಡ್ಡಾಯ ಆಚರಣೆಯಲ್ಲ ಎಂದು ನಿರ್ಧರಿಸಿತು.

1994 ರಲ್ಲಿ, ಬಾಬರಿ ಮಸೀದಿಯ ಮತ್ತು ಸುತ್ತಮುತ್ತಲಿನ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ನಿರ್ಧರಿಸುವಾಗ, ಸುಪ್ರೀಂ ಕೋರ್ಟ್ ಮಸೀದಿಯು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ ಮತ್ತು ಎಲ್ಲಿಯಾದರೂ, ತೆರೆದ ಸ್ಥಳದಲ್ಲಿಯೂ ಸಹ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೇಳಿತು. ಮಸೀದಿ ಇರುವ ಜಾಗವನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದು ಮತ್ತು ಅದನ್ನು ಸಂವಿಧಾನವು ನಿಷೇಧಿಸುವುದಿಲ್ಲ ಎಂದು ಅದು ಹೇಳಿದೆ.

2017 ರಲ್ಲಿ, ಸುಪ್ರೀಂ ಕೋರ್ಟ್ ತ್ವರಿತ ತ್ರಿವಳಿ ತಲಾಖ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ ಎಂದು ಹೇಳಿದೆ.

2018 ರಿಂದ ಶಬರಿಮಲೆ ಪ್ರಕರಣದಲ್ಲಿ, 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶವನ್ನು ನಿಷೇಧಿಸಲಾಗಿದೆ, ಇದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ, ಹೀಗಾಗಿ ಮಹಿಳೆಯರಿಗೆ ಪ್ರವೇಶವನ್ನು ಅನುಮತಿಸಬಹುದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

1962 ರಲ್ಲಿ ಇಸ್ಲಾಂ ಧರ್ಮದ ದಾವೂದಿ ಬೋಹ್ರಾ ಪಂಥದ ಧಾರ್ಮಿಕ ಮುಖ್ಯಸ್ಥರು ಸದಸ್ಯರನ್ನು ಬಹಿಷ್ಕರಿಸುವ ಅಧಿಕಾರವನ್ನು ಹೊಂದಿದ್ದಾರೆ ಎಂದು ನ್ಯಾಯಾಲಯವು ತೀರ್ಪು ನೀಡಿತು. 1983 ರಲ್ಲಿ ಹಿಂದೂ ಧರ್ಮದ ಆನಂದ ಮಾರ್ಗಿ ಪಂಥಕ್ಕೆ ತಾಂಡವ ನೃತ್ಯವು ಅನಿವಾರ್ಯವಲ್ಲ ಎಂದು ತೀರ್ಪು ನೀಡಿತು.

ಪ್ರಸ್ತುತ, ಲೈಂಗಿಕವಾಗಿ ಉದ್ರಿಕ್ತವಾಗದಂತೆ ಸ್ತ್ರೀ ಜನನಾಂಗ ಊನಗೊಳಿಸುವಿಕೆ ಮತ್ತು ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರ ಪ್ರವೇಶದಂತಹ ವಿವಿಧ ಧಾರ್ಮಿಕ ಆಚರಣೆಗಳ ಅಗತ್ಯತೆಗಳ ಪ್ರಶ್ನೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿವೆ.

ಅಗತ್ಯ ಧಾರ್ಮಿಕ ಆಚರಣೆಗಳ ಪರೀಕ್ಷೆಯ ಬಗೆಗಿನ ಟೀಕೆಗಳು

ಸುಪ್ರೀಂ ಕೋರ್ಟ್ನಲ್ಲಿ ಆಗಾಗ ನಡೆಸುವ ಅಗತ್ಯ ಧಾರ್ಮಿಕ ಆಚರಣೆಗಳ ಪರೀಕ್ಷೆಯು ಗಮನಾರ್ಹ ಟೀಕೆಗೆ ಒಳಗಾಗಿದೆ. ಶಬರಿಮಲೆ ತೀರ್ಪಿನಲ್ಲಿ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಈ ಪರೀಕ್ಷೆಯು ಏಕೆ ಸಮಸ್ಯಾತ್ಮಕವಾಗಿದೆ ಮತ್ತು ನ್ಯಾಯಾಲಯಗಳು ನಂಬಿಕೆಯ ಮೇಲೆ ತೀರ್ಪು ನೀಡುವ ಸಾಮರ್ಥ್ಯವನ್ನು ಹೊಂದಿಲ್ಲದಿರುವುದರಿಂದ ಅದನ್ನು ಉತ್ತಮ ಪರೀಕ್ಷೆಗಳೊಂದಿಗೆ ಬದಲಾಯಿಸಬಹುದು ಎಂಬುದನ್ನು ಸುದೀರ್ಘವಾಗಿ ಚರ್ಚಿಸಿದ್ದಾರೆ. ನಮ್ಮ ನ್ಯಾಯಾಂಗ ವ್ಯವಸ್ಥೆಯು ‘ಜಾತ್ಯತೀತ ಸಾಂವಿಧಾನಿಕ ಶಾಸನಬದ್ಧ ಮತ್ತು ಸಾಮಾನ್ಯ ಕಾನೂನು ಸಮಸ್ಯೆಗಳ’ ಮೇಲೆ ತೀರ್ಪು ನೀಡಲು ಅಸ್ತಿತ್ವದಲ್ಲಿದೆಯೇ ಹೊರತು ದೇವತಾಶಾಸ್ತ್ರದ ಮೇಲೆ ಅಲ್ಲ ಎಂಬ ವಾದವೂ ಇದೆ.

ನ್ಯಾಯಾಲಯಗಳು ನಿರಂಕುಶವಾಗಿ ಪರೀಕ್ಷೆಯನ್ನು ಅನ್ವಯಿಸುತ್ತವೆ ಎಂಬ ಆರೋಪಗಳ ಸುತ್ತಲೂ ಟೀಕೆಗಳು ಸುತ್ತಿಕೊಂಡಿವೆ. ಉದಾಹರಣೆಗೆ, ಸಾರ್ವಜನಿಕವಾಗಿ ಮಾಡುವ ತಾಂಡವ ನೃತ್ಯವನ್ನು ಆನಂದ ಮಾರ್ಗಿ ಪಂಗಡದ ಸ್ಥಾಪಕ ಧಾರ್ಮಿಕ ಪಠ್ಯದಲ್ಲಿ ಸೂಚಿಸಿದ್ದಾರೆ ಆದರೂ ಆಚರಣೆಯು ಪಂಥದ ಸ್ಥಾಪನೆಯ ದಿನಾಂಕವನ್ನು ಹೊಂದಿಲ್ಲದ ಕಾರಣ ಮತ್ತು ಸಂಸ್ಥಾಪಕರು ಅದಕ್ಕೆ ಸಮರ್ಥನೆಯನ್ನು ಒದಗಿಸದ ಕಾರಣ ಅಭ್ಯಾಸವು ಅನಿವಾರ್ಯವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು ಎಂದು ಚಂದ್ರಚೂಡ್ ಹೇಳಿದ್ದಾರೆ.

ಪ್ರಸ್ತುತ, 2018 ರಿಂದ ಶಬರಿಮಲೆ ತೀರ್ಪಿನ ಪರಿಶೀಲನೆಯು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿದೆ. ಆ ಸಂದರ್ಭದಲ್ಲಿ, ಇದು ಇತರ ಸಮಸ್ಯೆಗಳ ನಡುವೆ ಅಗತ್ಯವಾದ ಧಾರ್ಮಿಕ ಆಚರಣೆಗಳ ಪರೀಕ್ಷೆಯ ಕಾನೂನುಬದ್ಧತೆಯನ್ನೂ ಮರುಪರಿಶೀಲಿಸುತ್ತಿದೆ.

ಹಿಜಾಬ್ ಪ್ರಕರಣದಲ್ಲಿ ಅಗತ್ಯ ಧಾರ್ಮಿಕ ಆಚರಣೆಗಳನ್ನು ಹೇಗೆ ಬಳಸಲಾಗಿದೆ?

ಅಗತ್ಯ ಧಾರ್ಮಿಕ ಆಚರಣೆಗಳ ಪರೀಕ್ಷೆಯು ಹಿಜಾಬ್ ಪ್ರಕರಣದಲ್ಲೂ ಸಹ ಮುಖ್ಯ ಪಾತ್ರ ವಹಿಸುತ್ತಿದೆ. ಹಿಜಾಬ್ ಅನ್ನು ಅನುಮತಿಸದಿರುವುದು ತಾರತಮ್ಯ ಮತ್ತು ವಾಕ್ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ವಾದಿಸಿದ್ದರೂ, ಅವರ ಪ್ರಾಥಮಿಕ ವಾದವು ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಾಗಿದೆ ಎಂಬುವುದಾಗಿದೆ.

ಇದಕ್ಕೆ ಪ್ರತಿಯಾಗಿ, ಅಂತಹ ಘೋಷಣೆ ಮಾಡುವುದರಿಂದ ಹಿಜಾಬ್ ಧರಿಸದ ಇತರ ಮುಸ್ಲಿಂ ಮಹಿಳೆಯರಿಗೂ ಹಿಜಾಬ್ ಧರಿಸಲು ಒತ್ತಾಯಿಸಿದಂತಾಗುತ್ತದೆ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ. ಯಾವ ಸಮವಸ್ತ್ರವನ್ನು ಧರಿಸಬೇಕು ಎಂಬುದರ ಆಯ್ಕೆಯನ್ನು ಸರ್ಕಾರವು ಆಯಾಯ ಸಂಸ್ಥೆಗಳಿಗೆ ಬಿಟ್ಟಿದೆ ಎಂದು ಎಜೆ ಹೇಳಿದ್ದಾರೆ. ಅರ್ಜಿದಾರರು ಈ ಸಮಸ್ಯೆಯನ್ನು “ಧಾರ್ಮಿಕ ಸಂಕೇತ” ದ ನಿರಾಕರಣೆಯಾಗಿ ಅಲ್ಲ “ಹಿಜಾಬ್” ನಿರಾಕರಣೆಯಾಗಿ ರೂಪಿಸಬೇಕಾಗಿತ್ತು ಎಂದು ಅಡ್ವೊಕೇಟ್ ಜನರಲ್ ಸೂಚಿಸಿದ್ದಾರೆ.

ಹಿಜಾಬ್ ಏಕೆ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂಬುದನ್ನು ನಿರೂಪಿಸುವ ಹೊಣೆ ಅರ್ಜಿದಾರರ ಮೇಲೆ ಇದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಗೌತಮ್ ಭಾಟಿಯಾ ಅವರಂತಹ ವಕೀಲರು ಸಹ ಹಿಜಾಬ್ ಅನ್ನು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿ ನಿರೂಪಿಸುವುದರಿಂದ ಹಿಜಾಬ್ ಧರಿಸಲು ಬಯಸುತ್ತಾರೆಯೇ ಎಂದು ನಿರ್ಧರಿಸುವ ಮಹಿಳೆಯ ವೈಯಕ್ತಿಕ ಹಕ್ಕನ್ನು ತೆಗೆದುಹಾಕಿದಂತಾಗುತ್ತದೆ ಎಂದಿದ್ದಾರೆ.

Tags: ControversyHigh Court of KarnatakaHIJABhijab controversysupreme courtSupreme Court of India
Previous Post

Karnataka | ದಲಿತ ಯುವಕನನ್ನು ಹತ್ಯೆ ಮಾಡಿದ ಭಜರಂಗದಳ ಕಾರ್ಯಕರ್ತ; ಪ್ರಕರಣ ದಾಖಲು

Next Post

NSE ಹಗರಣ ರೋಚಕ ತಿರುವು: ತನ್ನ ನೇಮಕಾತಿಗೆ ತಾನೇ ಶಿಫಾರಸು ಮಾಡಿದ ‘ನಿಗೂಢ ಯೋಗಿ’!

Related Posts

ಸೆ.15ರ ಒಳಗೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣ: ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಸೆ.15ರ ಒಳಗೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
May 24, 2025
0

ಬೆಂಗಳೂರಿನ ಫುಟ್ ಪಾತ್ ಅಂಗಡಿಗಳನ್ನು ತೆರವು, ವ್ಯಾಪಾರಿಗಳಿಗೆ ವಾಹನ ಸೌಲಭ್ಯ ಕಾನೂನು ಬಾಹಿರವಾಗಿ ಹಾಕಿರುವ ಆಪ್ಟಿಕಲ್ ಕೇಬಲ್ ಕತ್ತರಿಸಲು ಸೂಚನೆ ರಸ್ತೆ ಅಗಲೀಕರಣಕ್ಕೆ ಶಾಸಕರು ಶಿಫಾರಸ್ಸು ಮಾಡಿದರೆ...

Read moreDetails
ಪಂಚ ಗ್ಯಾರಂಟಿ ಯೋಜನೆಗಳಿಂದ ಸಂಜೀವಿನಿಯಾದ ಜನರ ಬದುಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪಂಚ ಗ್ಯಾರಂಟಿ ಯೋಜನೆಗಳಿಂದ ಸಂಜೀವಿನಿಯಾದ ಜನರ ಬದುಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

May 24, 2025
ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್

May 24, 2025
ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

May 24, 2025
ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

May 24, 2025
Next Post
NSE ಹಗರಣ ರೋಚಕ ತಿರುವು: ತನ್ನ ನೇಮಕಾತಿಗೆ ತಾನೇ ಶಿಫಾರಸು ಮಾಡಿದ ‘ನಿಗೂಢ ಯೋಗಿ’!

NSE ಹಗರಣ ರೋಚಕ ತಿರುವು: ತನ್ನ ನೇಮಕಾತಿಗೆ ತಾನೇ ಶಿಫಾರಸು ಮಾಡಿದ ‘ನಿಗೂಢ ಯೋಗಿ’!

Please login to join discussion

Recent News

ಸೆ.15ರ ಒಳಗೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣ: ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಸೆ.15ರ ಒಳಗೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
May 24, 2025
ಪಂಚ ಗ್ಯಾರಂಟಿ ಯೋಜನೆಗಳಿಂದ ಸಂಜೀವಿನಿಯಾದ ಜನರ ಬದುಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Top Story

ಪಂಚ ಗ್ಯಾರಂಟಿ ಯೋಜನೆಗಳಿಂದ ಸಂಜೀವಿನಿಯಾದ ಜನರ ಬದುಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
May 24, 2025
ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್
Top Story

ಅಡ್ರೆಸ್ ವಿಚಾರಕ್ಕೆ ಗ್ರಾಹಕನಿಗೆ ಪಂಚ್ ಕೊಟ್ಟ ಡೆಲಿವರಿ ಬಾಯ್

by ಪ್ರತಿಧ್ವನಿ
May 24, 2025
ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 
Top Story

ಕೋವಿಡ್ ಕೇಸ್ ಗಳು ಅಷ್ಟೇನು ಗಂಭೀರವಿಲ್ಲ – ಜನರಲ್ಲಿ ಆತಂಕ ಬೇಡ : ದಿನೇಶ ಗುಂಡೂರಾವ್ ! 

by Chetan
May 24, 2025
ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 
Top Story

ಸುಹಾಸ್ ಶೆಟ್ಟಿ ಕೊಲೆ ಕೇಸ್ – ನಾಳೆ ಮಂಗಳೂರಲ್ಲಿ ಬಜಪೆ ಚಲೋಗೆ ಕರೆಕೊಟ್ಟ ಹಿಂದೂ ಸಂಘಟನೆ 

by Chetan
May 24, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸೆ.15ರ ಒಳಗೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣ: ಡಿಸಿಎಂ ಡಿ.ಕೆ. ಶಿವಕುಮಾರ್

ಸೆ.15ರ ಒಳಗೆ ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಪೂರ್ಣ: ಡಿಸಿಎಂ ಡಿ.ಕೆ. ಶಿವಕುಮಾರ್

May 24, 2025
ಪಂಚ ಗ್ಯಾರಂಟಿ ಯೋಜನೆಗಳಿಂದ ಸಂಜೀವಿನಿಯಾದ ಜನರ ಬದುಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪಂಚ ಗ್ಯಾರಂಟಿ ಯೋಜನೆಗಳಿಂದ ಸಂಜೀವಿನಿಯಾದ ಜನರ ಬದುಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

May 24, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada