
ಆಸ್ತಿ ಹಂಚಿಕೆ ವಿಚಾರಕ್ಕೆ ರಿಕ್ಕಿ ರೈನ ಟಾರ್ಗೆಟ್ ಮಾಡಲಾಗಿದೆ ಎನ್ನಲಾಗಿದೆ.. ರಿಕ್ಕಿ ರೈ ತಂದೆ ಮುತ್ತಪ್ಪ ರೈ ಮೂರು ಜನಕ್ಕೆ ಆಸ್ತಿ ಹಂಚಿಕೆ ಮಾಡಿದ್ದಾರೆ.. ಮೊದಲ ಪತ್ನಿಯ ಇಬ್ಬರು ಮಕ್ಕಳು ಹಾಗೂ 2ನೇ ಪತ್ನಿಗೆ ಆಸ್ತಿ ಹಂಚಿಕೆ ಮಾಡಿದ್ದಾರೆ.. ಮೊದಲ ಪತ್ನಿಯ ಮಕ್ಕಳಾದ ರಿಕ್ಕಿ ಹಾಗೂ ರಾಕಿಗೆ ಆಸ್ತಿ ಕೊಟ್ಟಿದ್ದು, ಕೊನೇ ಕಾಲದಲ್ಲಿ ಕೈಹಿಡಿದಿದ್ದ 2ನೇ ಪತ್ನಿಗೂ ಮುತ್ತಪ್ಪ ರೈ ಆಸ್ತಿಯಲ್ಲಿ ಪಾಲು ಕೊಟ್ಟಿದ್ರು.. ಬದುಕಿದ್ದಾಗಲೇ 3 ಜನಕ್ಕೆ ಆಸ್ತಿ ಹಂಚಿಕೆ ಮಾಡಿ ವಿಲ್ ಮಾಡಿಟ್ಟಿದ್ದಾರೆ..

ಆಸ್ತಿ ಹಂಚಿಕೆ ಮಾಡಿ ವಿಲ್ ಮಾಡಿಟ್ಟರೂ 2ನೇ ಪತ್ನಿಗೆ ಚಿನ್ನಾಭರಣಗಳು, 1 ಕಾರು, ಅಲ್ಲದೇ ದೊಡ್ಡ ಮೊತ್ತದ ಕ್ಯಾಶ್, H.D ಕೋಟೆಯಲ್ಲಿ ಒಂದು ಆಸ್ತಿ, ಬೆಂಗಳೂರಿನ ಸಹಕಾರ ನಗರದಲ್ಲಿ 1 ಕಟ್ಟಡ ಕೊಟ್ಟಿದ್ದಾರಂತೆ. ಆದ್ರೆ ಸಮನಾಗಿ ಆಸ್ತಿ ಹಂಚಿಲ್ಲ ಎಂದು ಮುತ್ತಪ್ಪ ರೈ ಅವರ 2ನೇ ಹೆಂಡತಿ ಅನುರಾಧ ತಕರಾರು ತೆಗೆದು, ಕೋರ್ಟ್ ಮೊರೆ ಹೋಗಿದ್ದಾರೆ.. ಜೊತೆಗೆ ಇದೇ ವಿಚಾರಕ್ಕೆ ಆಗಾಗ ರಿಕ್ಕಿ ಹಾಗೂ ರಾಕಿ ಜೊತೆಗೂ ಜಗಳ ಕೂಡ ಮಾಡ್ತಿದ್ರಂತೆ.. ಆಸ್ತಿ ವಿಚಾರವಾಗಿ ರಿಕ್ಕಿಯನ್ನ ಚಿಕ್ಕಮ್ಮ ಅನುರಾಧ ಕೊಲ್ಲಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಫಾರ್ಮ್ಹೌಸ್ ಮುಂದಿನ ರಸ್ತೆ-ಖಾಸಗಿ ಜಾಗದ ಮಧ್ಯೆ ಕೂತಿದ್ದ ಆಗಂತುಕರು ಫಾರ್ಮ್ಹೌಸ್ನಿಂದ ರಿಕ್ಕಿ ಹೊರಕ್ಕೆ ಬರುತ್ತಲೇ ಕಾಂಪೌಂಡ್ ಮಧ್ಯೆ ಅವಿತು ಕುಳಿತು ದಾಳಿ ಮಾಡಿದ್ದಾರೆ. ರಾತ್ರೋರಾತ್ರಿ ರಿಕ್ಕಿ ರೈ ಸಂಚಾರದ ಬಗ್ಗೆ ಸುಳಿವು ಕೊಟ್ಟವರು ಯಾರು..? ಕೊಲೆ ಸಂಚಿನ ಹಿಂದೆ ಇರೋ ಮಾಸ್ಟರ್ಮೈಂಡ್ ಯಾರು..? ಯಾವ ಕಾರಣಕ್ಕೆ ಈ ದಾಳಿ ಅನ್ನೋದು ಇನ್ನೂ ನಿಗೂಢವಾಗೇ ಉಳಿದಿದೆ. ರಿಕ್ಕಿ ರೈ ಮೇಲಿನ ದಾಳಿ ಬಗ್ಗೆ ರಾಮನಗರ ಪೊಲೀಸರು ತಲೆ ತನಿಖೆ ನಡೆಸಿದ್ದಾರೆ. ರಾಮನಗರ ಎಸ್ಪಿ ಶ್ರೀನಿವಾಸಗೌಡ, ಕೇಂದ್ರ ವಲಯ ಐಜಿಪಿ ಲಾಬುರಾಮ್ ಖುದ್ದು ಅಖಾಡಕ್ಕೆ ಇಳಿದಿದ್ದು, ಬಿಡದಿ ಸ್ಟೇಷನ್ನಲ್ಲಿ ಸಭೆ, ಸ್ಥಳ ಮಹಜರು, ದಾಳಿ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. DySPಗಳ ನೇತೃತ್ವದಲ್ಲಿ ತನಿಖೆಗಾಗಿ 3 ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.

ಎಸ್ಪಿ ಶ್ರೀನಿವಾಸ್ ಗೌಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಮಾಡಲಾಗಿದೆ. ರಿಕ್ಕಿ ರೈ ಎಂಬುವವರ ಮೇಲೆ ತಡರಾತ್ರಿ ಅಟ್ಯಾಕ್ ಆಗಿದೆ. ಬಿಡದಿಯ ಅವರ ಫಾರ್ಮ್ ಹೌಸ್ ಎದುರು ಗುಂಡಿನ ದಾಳಿ ಆಗಿದೆ. ಈ ಸಂಬಂಧ ಬಿಡದಿ ಠಾಣೆಯಲ್ಲಿ ಏಫ್ಐಆರ್ ದಾಖಲಾಗಿದೆ. ಗಾಯಾಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಅವರ ಸ್ಟೇಟ್ ಮೆಂಟ್ ಪಡೆದು ತನಿಖೆ ಮುಂದುವರಿಸುತ್ತೇವೆ. ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನ ವಶಕ್ಕೆ ತೆಗೆದುಕೊಂಡು ಪರಿಶೀಲನೆ ಮಾಡ್ತಿದ್ದೇವೆ. ಯಾವ ಗನ್ನಿಂದ ಫೈರಿಂಗ್ ಆಗಿದೆ ಅಂತ ತನಿಖೆ ಮಾಡ್ತಿದ್ದೇವೆ. ರಿಕ್ಕಿ ರೈ ಹೆಚ್ಚಾಗಿ ಹೊರದೇಶದಲ್ಲಿ ಇರ್ತಾರೆ. ಯಾವುದೋ ಕೋರ್ಟ್ ಕೇಸ್ ಅಟೆಂಡ್ ಮಾಡಲು ಬಂದಿದ್ದರು. ಬಿಡದಿ ನಿವಾಸಕ್ಕೆ ಬಂದು ವಾಪಸ್ ಹೋಗುವಾಗ ದಾಳಿ ಆಗಿದೆ. ರಿಕ್ಕಿ ರೈ ಜೊತೆ ಡ್ರೈವರ್, ಗನ್ ಮ್ಯಾನ್ ಜೊತೆ ಇದ್ರು. ಡ್ರೈವರ್ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.

ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೆಲವರ ಮೇಲೆ ಅನುಮಾನ ಇದೆ ಅಂತ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಭೂಗತ ಲೋಕದ ನಂಟಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಘಟನೆ ಸಂಬಂಧ ಯಾರನ್ನೂ ವಶಕ್ಕೆ ಪಡೆದಿಲ್ಲ. ಸದ್ಯಕ್ಕೆ ಮೂರು ಡಿವೈಎಸ್ಪಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದೇವೆ. ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದೇವೆ ಎಂದಿದ್ದಾರೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ.