
ಜನಿವಾರ ಧರಿಸಿದ ಕಾರಣಕ್ಕೆ ಕೆ-ಸಿಇಟಿ ಪರೀಕ್ಷೆಯಿಂದ ಬೀದರ್ನ ವಿದ್ಯಾರ್ಥಿ ವಂಚಿತ ಆಗಿದ್ದ ಪ್ರಕರಣದಲ್ಲಿ ಇಬ್ಬರನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ. ಆದರೆ ಕಾಲೇಜು ಟ್ರಸ್ಟ್ ಬೀದರ್ನ ಸಾಯಿ ದೀಪ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಇಬ್ಬರನ್ನೂ ವಜಾ ಮಾಡಿ ಆದೇಶ ಮಾಡಿದ್ದಾರೆ.
ಸಾಯಿ ಸ್ಪೂರ್ತಿ ಖಾಸಗಿ ಕಾಲೇಜು ಪ್ರಿನ್ಸಿಪಾಲ್ ಚಂದ್ರಶೇಖರ್ ಬಿರಾದಾರ್ ಹಾಗೂ ಕಾಲೇಜು ತಪಾಸಣಾ ಸಿಬ್ಬಂದಿ ದ್ವಿತೀಯ ದರ್ಜೆ ಸಹಾಯಕ ಸತೀಶ್ ಎಂಬುವವರು ವಜಾ ಮಾಡಿ ಆದೇಶ ಮಾಡಿದ್ದಾರೆ. ಇಬ್ಬರನ್ನ ಅಮಾನತುಗೊಳಿಸಿ ವರದಿ ಸಲ್ಲಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿತ್ತು.

ಪರೀಕ್ಷಾ ಕೇಂದ್ರದ ಪ್ರಾಂಶುಪಾಲರು ಹಾಗೂ ಅಲ್ಲಿನ ಸಿಬ್ಬಂದಿ ಲೋಪ ಎಸಗಿರುವುದು ತನಿಖೆ ವೇಳೆ ದೃಢವಾಗಿದೆ. ಪರೀಕ್ಷಾ ವೀಕ್ಷಕರಾಗಿದ್ದ ಔರಾದ್ ಆರ್ಎಫ್ಒ ಮೊದ್ದಸಿರ್ ಅವರಿಗೆ ಕಾರಣ ಕೇಳಿ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ. ಈ ಬಗ್ಗೆ KEAಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ ಬೀದರ್ ಡಿಸಿ ಶಿಲ್ಪಾ ಶರ್ಮಾ.
ಏಪ್ರಿಲ್ 17ರಂದು ಸಾಯಿ ಸ್ಫೂರ್ತಿ ಕಾಲೇಜಿನಲ್ಲಿ ಕೆ – ಸಿಇಟಿ ಗಣಿತ ಪರೀಕ್ಷೆ ಬರೆಯಲು ಹೋಗಿದ್ದ ಸುಚಿವೃತ್, ಜನಿವಾರ ಧರಿಸಿದ್ದಕ್ಕೆ ಸುಚಿವೃತ್ಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿರಲಿಲ್ಲ. ತೀವ್ರ ವಿರೋಧದ ಬಳಿಕ ಇದೀಗ ಲೋಪ ಎಸಗಿದ ಇಬ್ಬರನ್ನು ಅಮಾನತು ಮಾಡಲಾಗಿದೆ

ಸಿಇಟಿ ಎಕ್ಸಾಂನಲ್ಲಿ ಜನಿವಾರ ತೆಗೆಸಿ ಪರೀಕ್ಷೆ ಬರೆಸಿದ ಪ್ರಕರಣದಲ್ಲಿ ಯಾದಗಿರಿಯಲ್ಲಿ ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ ಮಾಡಲಾಗಿದೆ. ಯಾದಗಿರಿ ಶಹಾಪೂರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಪ್ರತಿಭಟನೆ ಮಾಡಲಾಗಿದೆ. ಕೆಂಭಾವಿ ಪಟ್ಟಣದ ಉತ್ತರಾಧಿಮಠದ ಮುಂಭಾಗ ಪ್ರತಿಭಟನೆ ಮಾಡಿದ್ದು, ಜನಿವಾರ ತೆಗೆಸಿದ ಅಧಿಕಾರಿ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಜನಿವಾರ ತೆಗೆಸಿರುವ ಅಧಿಕಾರಿಯನ್ನ ವಜಾ ಮಾಡುವಂತೆ ಆಗ್ರಹ ಮಾಡಲಾಗಿತ್ತು.