ಭಾನುವಾರ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯೊಬ್ಬರ ಮೇಲೆ ಆನೆ ದಾಳಿ ಮಾಡಿ ಮೃತಪಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದೆ.
ಇತ್ತೀಚಿಗೆ ಈ ಕುರಿತು ಮಾತನಾಡಿದ ಶಾಸಕ ಕುಮಾರಸ್ವಾಮಿ ನಾನು ದಲಿತನೆಂಬ ಕಾರಣಕ್ಕೆ ಗೃಹ ಸಚಿವರಿಂದ ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಬೇಸರ ಹೊರಹಾಕಿದ್ದರು. ಇದಕ್ಕೆ ಪ್ರತಿಯಾಗಿ ರಾಜ್ಯ ಕಾಂಗ್ರೆಸ್ ತಮ್ಮದೇ ಪಕ್ಷದ ದಲಿತ ಶಾಸಕರೊಬ್ಬರ ಮೇಲೆ ಹಲ್ಲೆಯಾಗಿದೆ. ಎಂ.ಪಿ ಕುಮಾರಸ್ವಾಮಿ ಪ್ರತಿ ದಿನವೂ ಆ ಬಗ್ಗೆ ಗೋಳಾಡುತ್ತಿದ್ದಾರೆ .
ಆದರೆ, ಯಾವೊಬ್ಬ ಬಿಜೆಪಿಗರೂ ಬಹಿರಂಗವಾಗಿ ಒಂದೇ ಒಂದು ಮಾತನಾಡಿಲ್ಲ. ಗೃಹಸಚಿವರು ಶಾಸಕರನ್ನು ಮಾತಾಡಿಸಿಲ್ಲ, ತಮ್ಮ ಇಲಾಖೆಯ ವೈಫಲ್ಯಕ್ಕೆ ಕ್ಷಮೆ ಕೇಳಿಲ್ಲ, ದಲಿತರಿಗೆ ಕನಿಷ್ಠ ಬೆಲೆಯನ್ನೂ ಬಿಜೆಪಿ ನೀಡುವುದಿಲ್ಲ ಎಂದು ಕಿಡಿಕಾರಿದೆ.






