ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ವಸತಿ ಸಚಿವ ವಿ.ಸೋಮಣ್ಣ, ಹದಿನೈದು ನಿಮಿಷಗಳ ಮಾತುಕತೆ ಮಾಡಿದ್ದಾರೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ ವಿರುದ್ಧ ಆರೋಪಗಳನ್ನು ಮಾಡಿರುವ ಸೋಮಣ್ಣ, ತನ್ನನ್ನು ಬೆಳೆಯಲು ಬಿಡುತ್ತಿಲ್ಲ, ಪದೇ ಪದೇ ತಮ್ಮ ಹಾದಿಗೆ ಮುಳ್ಳಾಗುತ್ತಿಸ್ದಾರೆ ಎಂದು ಆರೋಪಿಸಿದ್ದಾರೆ.
ತಮ್ಮ ರಾಜಕೀಯ ಏಳಿಗೆಯನ್ನು ಬಿಎಸ್ವೈ ಮತ್ತು ಅವರ ಪುತ್ರ ತಡೆಯುತ್ತಿರುವುದಾಗಿ ಕಂಪ್ಲೇಟ್ ನೀಡಿರುವ ವಿ.ಸೋಮಣ್ಣ, ತನ್ನನ್ನು ಲಿಂಗಾಯತ ನಾಯಕನಾಗಿ ಹೊರ ಹೊಮ್ಮುವುದು ಸಹಿಸುತ್ತಿಲ್ಲ. ಪ್ರತಿ ಹಂತದಲ್ಲಿ ಕಾಲೇಳಿಯುವ ಪ್ರಯತ್ನ ಮಾಡಲಾಗುತ್ತಿದೆ. ಪುತ್ರನ ಮೇಲಿನ ಅಂಧ ಪ್ರೀತಿಯಲ್ಲಿ ಲಿಂಗಾಯತ ನಾಯಕರು ಬೆಳೆಯಲು ಅವಕಾಶ ನೀಡ್ತಿಲ್ಲ ಎಂದು ಗಂಭೀರ ಆರೋಪವನ್ನು ಸಚಿವ ಸೋಮಣ್ಣ ಮಾಡಿದ್ದಾರೆ.
ನನಗೆ ಸಾಕಾಗಿದೆ, ನಾನು ರಾಜೀನಾಮೆ ಕೊಡುವೆ. ಒಳ್ಳೆ ಖಾತೆಯೂ ಇಲ್ಲ, ಜಿಲ್ಲಾ ಉಸ್ತುವಾರಿಯೂ ಇಲ್ಲ. ಹದಿನೈದು ವರ್ಷಗಳಿಂದ ನನ್ನದು ಒಂದೇ ಮನವಿ ಮಾಡುತ್ತಿದ್ದೇನೆ. ಜಿಲ್ಲಾ ರಾಜಕಾರಣಕ್ಕೆ ತೆರಳುವ ಅವಕಾಶ ಕೇಳುತ್ತಿದ್ದೇನೆ. ತುಮಕೂರು ಅಥಾವ ಚಾಮರಾಜನಗರ ಜಿಲ್ಲೆಗೆ ತೆರಳುವುದಾಗಿ ಹೇಳಿತ್ತಿದ್ದೇನೆ. ಆದರೆ, ನನಗೆ ಬಿಎಸ್ ಯಡಿಯೂರಪ್ಪ ಅವಕಾಶ ನೀಡುತ್ತಿಲ್ಲ. ಈಗ ರಾಜಕೀಯವಾಗಿ ಮಾನ್ಯತೆ ನೀಡುತ್ತಿಲ್ಲ, ಸೋಲಿಸುವ ಹುನ್ನಾರವೂ ನಡೆಯುತ್ತಿದೆ. ಇನ್ಯಾವ ಕಾರಣಕ್ಕೆ ನಾನು ಪಕ್ಷದಲ್ಲಿ ಉಳಿಯಬೇಕು ಎಂದು ಸೋಮಣ್ಣ ಪ್ರಶ್ನಿಸಿದ್ದು, ರಾಜೀನಾಮೆ ಇಂಗಿತವನ್ನು ಅಮಿತ್ ಶಾರಲ್ಲಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ತಮ್ಮ ಕುಟುಂಬದಲ್ಲೂ ಬಿಎಸ್ವೈ ಪುತ್ರ ಹಸ್ತಕ್ಷೇಪ ಮಾಡಿರುವ ಬಗ್ಗೆ ಆರೋಪ ಮಾಡಿರುವ ಸೋಮಣ್ಣ, ಅಮಿತ್ ಶಾ ಮುಂದೆ ಕುಟುಂಬ ರಾಜಕೀಯದ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.
“ನನ್ನ ಮಗನಿಗೆ ರಾಜಕೀಯ ಹುಚ್ಚು ಇಡಿಸಿದ್ದು ಇವರೇ! ಈಗ ಅವರ ರಾಜಕೀಯ ಬೆಳವಣಿಗೆ ತಡೆಯುತ್ತಿರುವುದು ಇವರೇ. ನನ್ನ ಸಹೋದರ ಮಗನಿಗೂ ರಾಜಕೀಯ ಆಮಿಷ ತೋರಿಸಿ ಇಂದು ಕೈ ಬಿಟ್ಟಿದ್ದಾರೆ ಎಂದು ಬಿಎಸ್ವೈ ಹಾಗೂ ಬಿವೈವಿ ವಿರುದ್ಧ ಸೋಮಣ್ಣ ದೂರು ನೀಡಿದ್ದಾರೆ.
ತಗತೆ ಮಾತ್ರವಲ್ಲದೆ, ತನ್ನ ಪುತ್ರನ ರಾಜಕೀಯ ಬೆಳವಣಿಗೆ ತಡೆಯುತ್ತಿರುವುದಾಗಿ ವಿಜಯೇಂದ್ರ ವಿರುದ್ಧ ದೂರು ನೀಡಿದ್ದಾರೆ.