ಯಡಿಯೂರಪ್ಪನವರ ರಾಜಿನಾಮೆ ಬಳಿಗ ಅವರ ಸಂಘಟನಾ ಕಾರ್ಯ, ಪಕ್ಷಕ್ಕೆ ದುಡಿದ ರೀತಿಯನ್ನು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಹಾಡಿ ಹೊಗಳಿದ್ದಾರೆ.
ಯಡಿಯೂರಪ್ಪ ಸಿಎಂ ರಾಜಿನಾಮೆ ಕುರಿತಾಗಿ ವ್ಯಾಪಕ ಚರ್ಚೆಗಳ ನಂತರ ಸೋಮವಾರ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡುವುದಾಗಿ ಘೋಷಿಸಿದರು. ಇದಾದ ಬೆನ್ನಲ್ಲೇ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು. ಅನೇಕ ವಿಶ್ಲೇಷಕರು, ವಿಮರ್ಶಕರು ಪ್ರಹ್ಲಾದ್ ಜೋಶಿ, ಮುರುಗೇಶ್ ನಿರಾಣಿ ಇಲ್ಲವೇ ಅರವಿಂದ್ ಬೆಲ್ಲದ್ ಮುಖ್ಯಮಂತ್ರಿ ಸ್ಥಾನ ಏರಲಿದ್ದಾರೆ ಎಂಬ ಸಾಲು ಸಾಲು ವಿಸ್ತೃತ ವರದಿಯನ್ನು ಮಾಡಿದರು ಸಹ ಇದೆಲ್ಲವನ್ನೂ ಉಲ್ಟಾ ಪಲ್ಟಾ ಮಾಡುವಂತಹ ನಿರ್ಧಾರನ್ನು ತೆಗೆದುಕೊಂಡ ಬಿಜೆಪಿ ಹೈಕಮಾಂಡ್ ದಿಢೀರನೆ ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಹುದ್ದೆಗೆ ಕೂಸಿದ್ದಾರೆ. ರಾಜ್ಯಕ್ಕೆ ಹೊಸ ಸಿಎಂ ನೇಮಕವಾಗಿದ್ದು ಅವರಿಗೆ ಶುಭ ಆರೈಸುತ್ತಾ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೆಲಸವನ್ನು ಟ್ವೀಟ್ ಮಾಡುವ ಮೂಲಕ ಹಾಡಿ ಹೊಗಳಿದ್ದಾರೆ ಮೋದಿ.
ಯಡಿಯೂರಪ್ಪ ಅವರನ್ನು ಹಾಡಿ ಹೋಗಳಿ ಟ್ವೀಟ್ ಮಾಡಿದ ಮೋದಿ:
ಬಿಜೆಪಿ ಪಕ್ಷ ಮತ್ತು ಕರ್ನಾಟಕದಲ್ಲಿ ಪಕ್ಷದ ಬೆಳವಣಿಗೆಗೆ ಯಡಿಯೂರಪ್ಪನವರು ನೀಡಿದ ಸ್ಮರಣೀಯ ಕೊಡುಗೆ ಬಗ್ಗೆ ಮಾತನಾಡಲು ಯಾವ ಪದಗಳೂ ನ್ಯಾಯ ಒದಗಿಸುವುದಿಲ್ಲ. ಅರ್ಥಾತ್ ಪದಗಳೇ ಇಲ್ಲ. ಅದೆಷ್ಟೋ ದಶಕಗಳಿಂದ ಯಡಿಯೂರಪ್ಪ ಅವರು ಬಿಜೆಪಿ ಪಕ್ಷಕ್ಕಾಗಿ ಶ್ರಮವಹಿಸಿ ದುಡಿದಿದ್ದಾರೆ. ಪಕ್ಷ ಸಂಘಟನೆಗಾಗಿ ಕರ್ನಾಟಕವನ್ನು ಸುತ್ತಿದ್ದಾರೆ. ಪಕ್ಷವನ್ನು ಜನರು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ಸಾಮಾಜಿಕ ಅಭಿವೃದ್ಧಿ ಕಾರ್ಯಗಳಿಂದ ಮೆಚ್ಚುಗೆ ಪಡೆದಿದ್ದಾರೆ ಎಂದು ಹೊಗಳಿದ್ದಾರೆ.
ನೂತನ ಮುಖ್ಯಮಂತ್ರಿಗೆ ಶುಭ ಆರೈಸಿದ ಮೋದಿ:
ಪ್ರಧಾನಿ ಮೋದಿಯವರು ಕರ್ನಾಟಕ ನೂತನ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಶುಭಹಾರೈಸಿದ್ದಾರೆ. ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಬೊಮ್ಮಾಯಿಯವರಿಗೆ ಶಾಸಕಾಂಗ ಮತ್ತು ಆಡಳಿತಾತ್ಮಕವಾಗಿ ಅಪಾರ ಅನುಭವ ಇದೆ. ಈಗಾಗಲೇ ಕರ್ನಾಟಕದಲ್ಲಿ ನಮ್ಮ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಾರೆಂಬ ಆತ್ಮವಿಶ್ವಾಸ ನನಗೆ ಇದೆ. ಅವರ ಮುಂದಿನ ಆಡಳಿತಕ್ಕೆ ನನ್ನ ಶುಭ ಹಾರೈಕೆಗಳು ಎಂದು ಹೇಳಿದ್ದಾರೆ.