ತುಮಕೂರು: ಡಿನ್ನರ್ ಪಾರ್ಟಿ ರದ್ದು ಆದ ಬಗ್ಗೆ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಡಿನ್ನರ್ ಪಾರ್ಟಿ ಕ್ಯಾನ್ಸಲ್ ಎಲ್ಲಿ ಆಗಿದೆ. ಯಾರ್ ರೀ ಹೇಳಿದವರು ಎಂದಿರುವ ಸಚಿವರು, ಡಿನ್ನರ್ ಮೀಟಿಂಗ್ ಮುಂದೂಡಿದ್ದೀವಿ ಅಷ್ಟೇ, ಕ್ಯಾನ್ಸಲ್ ಮಾಡಿಲ್ಲ.

ಈಗಾಗ್ಲೆ ಇದ್ರ ಬಗ್ಗೆ ಸನ್ಮಾನ್ಯ ಪರಮೇಶ್ವರ್ ಹೇಳಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ಮೊನ್ನೆ ನಡೆದಿರೊ ಡಿನ್ನರ್ ಪಾರ್ಟಿ ಬಗ್ಗೆ ಗೊಂದಲ ಆಗಿದೆ. ಆ ಗೊಂದಲದ ಜೊತೆಗೆ ಇನ್ನೊಂದು ಗೊಂದಲ ಆಗೊದು ಬೇಡ. ಅದನ್ನ ಮುಂದೂಡಬೇಕು ಅಂತ ಹೇಳಿದೆ, ಅದಕ್ಕೆ ಮುಂದೂಡಿದ್ದೇವೆ ಎಂದಿದ್ದಾರೆ.
ಡಿನ್ನರ್ ಪಾರ್ಟಿ ವಿಚಾರದ ಬಗ್ಗೆ ಡಿಸಿಎಂ ಡಿ. ಕೆ. ಶಿವಕುಮಾರ್ ಬೇಜಾರ್ ಮಾಡ್ಕೊಂಡಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಡಿ.ಕೆ ಶಿವಕುಮಾರ್ ಬೇಜಾರ್ ಆಗೋಕ್ಕೆ ಅವ್ರ ಆಸ್ತಿನಾ ಏನಾದ್ರೂ ಬರೆಸಿಕೊಂಡಿದ್ದೀರಾ..? ಇದೆಲ್ಲ ಸುಮ್ನೆ ಅಷ್ಟೇ, ಪ್ರೀ ಯೂನಿರ್ವಸಿಟಿಗಳಲ್ಲಿ ಎಸ್ಪಿ-ಎಸ್ಟಿ ಮಕ್ಕಳಿಗೆ ಹಾಸ್ಟೆಲ್ ಸೀಟು ಸಿಗ್ತಿಲ್ಲ. ಜೊತೆಗೆ ಮ್ಯಾನೇಜ್ ಮೆಂಟ್ ಸಿಟ್ ಪಡೆದ ಎಸ್ಸಿ – ಎಸ್ಟಿ ಮಕ್ಕಳಿಗೆ ಸ್ಕಾಲರ್ ಶಿಫ್ ಸಿಗ್ತಿಲ್ಲ, ಹಾಸ್ಟೆಲ್ ಕೊಡ್ತಿಲ್ಲ. ಇಂತಹ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡಲು ಮಿಟಿಂಗ್ ಕರೆದರೆ, ನೀವು ಮಾಡ್ಬೇಡಿ ಅಂದ್ರೆ ಹೇಗೆ ಅಂದಿದ್ದಾರೆ.

ಇವರೆಲ್ಲಾ ಏನು ಎಸ್ಸಿ ಎಸ್ಟಿ ಸಮುದಾಯಗಳ ವಿರೋಧಿಗಳಾ..? ಎಂದು ಗರಂ ಆಗಿರುವ ರಾಜಣ್ಣ, ಇವೆಲ್ಲಾ ಬಹಳಷ್ಟು ದಿನ ನಡೆಯೋದಿಲ್ಲ. ಹಾಸ್ಟೆಲ್ ಸೀಟ್ ಸಿಗಲ್ಲ, ಸಣ್ಣಪುಟ್ಟ ಸಾಲ ಮಾಡಿ.. ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ತಗೊಂಡವನಿಗೆ ಸ್ಕಾಲರ್ಶಿಪ್ ಇಲ್ಲ. ಇದು ಎಸ್ಸಿ – ಎಸ್ಟಿ ಮಕ್ಕಳ ಜ್ವಲಂತ ಸಮಸ್ಯೆ. ಇಂತಹ ಹತ್ತು ಹಲವಾರು ಸಮಸ್ಯೆಗಳಿವೆ. ಇಂತಹವುಗಳ ಬಗ್ಗ ಚರ್ಚೆ ಮಾಡಲು ಮೀಟಿಂಗ್ ಕರೆದರೆ. ಇದಕ್ಕೆ ರಾಜಕೀಯ ಬಣ್ಣ ಕೊಟ್ಟು ಬಿಟ್ಟು, ಮಾಡ್ಬೇಡಿ ಅಂತ ಹೇಳೊದು, ಎಸ್ಸಿ ಎಸ್ಟಿ ಸಮಾಜಕ್ಕೆ ಮಾಡೊ ಅನ್ಯಾಯ ಎಂದಿದ್ದಾರೆ.

ಡಿನ್ನರ್ ಮೀಟಿಂಗ್ ವಿಚಾರ ಮುಂದೆ ಮಿಟಿಂಗ್ ಡೇಟ್ ತಿಳಿಸುತ್ತೇವೆ. ಮುಂದಿನ ತಿಂಗಳ 14ನೇ ತಾರೀಕು ಎಂಎಂ ಹಿಲ್ಸ್ ನಲ್ಲಿ ಕ್ಯಾಬಿನೆಟ್ ನಡೆಯುತ್ತದೆ. ಚಾಮರಾಜನಗರ ಜಿಲ್ಲೆಗೆ ಹೋದ್ರೆ ಮುಖ್ಯಮಂತ್ರಿ, ಸಚಿವ ಸ್ಥಾನ ಹೋಗ್ತದೆ ಅಂತ ಹೇಳ್ತಿದ್ದಾರೆ. ಅಷ್ಟರೊಳಗೆ ಸಭೆ ಮಾಡ್ತೀವಿ, ಇಲ್ಲ ಅಂದ್ರೆ ಕ್ಯಾಬಿನೆಟ್ ಮಿಟಿಂಗ್ ಬಳಿಕ ಸಭೆ ಮಾಡ್ತೀವಿ, ತಿಳಿಸುತ್ತೇವೆ. ಕ್ಯಾಬಿನೆಟ್ ವಿಸ್ತರಣೆ ಯಾವುದು ಇಲ್ಲ. ಯಾವುದೇ ರಾಜಕೀಯ ತೀರ್ಮಾನಗಳಿಲ್ಲ ಎಂದಿದ್ದಾರೆ.