2014ರಲ್ಲಿ ಅಸ್ಥಿತ್ವಕ್ಕೆ ಬಂದ ತೆಲಂಗಾಣ ರಾಜ್ಯ ಪ್ರತ್ಯೇಕ ರಾಜ್ಯದ ಜೂಗನ್ನು ಮುನ್ನೆಲಗೆ ತಂದು ಅವಿರತವಾಗಿ ಶ್ರಮಿಸಿದವರು ಇಂದಿನ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಅಂದು ಬಿಜೆಪಿಯೊಂದಿಗಿದ್ದ ಒಡನಾಟ ಅಷ್ಟಿಷ್ಟಲ್ಲಾ.
ಕಳೆದ ರಾಷ್ಟ್ರಪತಿ ಚುನಾವಣೆ ಸಮಯದಲ್ಲಿ ಅವರು ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ರಾಮನಾಥ್ ಕೋವಿಂದ್ಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದರು ಇದಲ್ಲದೆ ಸಂಸತ್ತಿನಲ್ಲಿ ಹಲವು ಭಾರೀ ಕೇಂದ್ರ ಸರ್ಕಾರದ ಕ್ರಮಗಳನ್ನು ಅವರ ಪಕ್ಷದ ಸಂಸದರು ಬೆಂಬಲಿಸಿದ್ದಾರೆ.
ಆದರೆ, ಕಳೆದ 5 ವರಷ್ಗಳ ಹಿಂದೆ ಇರುವ ದೃಶ್ಯ ಈಗ ಕಾಣ ಸಿಗುವುದಿಲ್ಲ. ಯಾಕೆಂದರೆ ಪ್ರಧಾನಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಭಾರೀ ತೆಲಂಗಾಣಕ್ಕೆ ಬೇಟಿ ನೀಡಿದ್ದಾರೆ (ಇಂದಿನ ಕಾರ್ಯಕಾರಿಣಿ ಸಭೆ ಸೇರಿ) ಆದರೆ, ತೆಲಂಗಾಣ ಮುಖ್ಯಮಂತ್ರಿ ಪ್ರಧಾನಿಯನ್ನು ಸ್ವಾಗತಿಸಲು ಸೌಜನ್ಯಕ್ಕಾದರು ಹೋಗಿಲ್ಲ. ಆದರೆ, ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಗೆ ಕೆಂಪುಹಾಸನ್ನು ಹಾಸಿ ಸ್ವಾಗತಿಸಿದ್ದಾರೆ.
ದಕ್ಷಿಣದ ರಾಜ್ಯಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಮುಂದಾಗಿರುವ ಬಿಜೆಪಿ ಶನಿವಾರ ಹಾಗು ಭಾನುವಾರ ರಾಷ್ಟ್ರೀಯ ಕಾರ್ಯಕಾರಿಣಿ ನಡೆಸುತ್ತಿದೆ. ಅದರೆ, ಈ ವಿಚಾರವನ್ನ ಟೀಕಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು ದೇಶದ ರಾಜಕೀಯ ಪ್ರವಾಸಿಗರು ಸೇರಿರುವ ಒಂದು ಸರ್ಕಸ್ ಎಂದು ಟೀಕಿಸಿದೆ.
ಇತ್ತ ರಾವ್ ಬಿಜೆಪಿ ವಿರುದ್ದ ರಾಷ್ಟ್ರೀಯ ಮಟ್ಟದಲ್ಲಿ ಬಹಿರಂಗವಾಗಿ ಯುದ್ದ ಸಾರಿದ್ದಾರೆ. ಅದಕ್ಕೆ ಪೂರಕವೆಂಬಂತೆ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳನ್ನ ಸುತ್ತಿ ದೊಡ್ಡ ಮೈತ್ರಿಯನ್ನು ರಚಿಸಲು ಮುಂದಾಗಿದ್ದಾರೆ. ಅದರೆ, ರಾವ್ರನ್ನು ಕೆಳಗಿಳಿಸಿ ತಮ್ಮ ಪಕ್ಷದ ಬಾವುಟವನ್ನು ಹಾರಿಸಲು ಬಿಜೆಪಿ ತಂತ್ರ ಹೆಣೆಯುತ್ತಿರುವುದರಲ್ಲಿ ನಿರತವಾಗಿದೆ.
ಎರಡು ದಿನಗಳ ರಾಷ್ಟ್ರೀ ಕಾರ್ಯಕಾರಿಣಿಗಾಗಿ ಹೈದರಾಬಾದಿಗೆ ಬಂದಿಳಿದ ರಾಷ್ಟ್ರೀಯ ನಾಯಕರು ತಮ್ಮ ಮಾಜಿ ಸ್ನೇಹಿತ ಶಿವಸೇನೆ ಮುಖ್ತಸ್ಥ ಉದ್ದವ್ ಠಾಕ್ರೆಗೆ ಕಾಣಿಸಿದ ಗತಿಯನ್ನು ಕೆಸಿಆರ್ಗೆ ಕಾಣಿಸಲು ತಂತ್ರ ಹೆಣೆಯುತ್ತಿದ್ದಾರೆ ಎಂದು ವರದಿಯಾಗಿದೆ.
2009 ಹಾಗು 2014ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಟಿಆರ್ಎಸ್ ಪಕ್ಷವು ಕ್ರಮೇನ 2019ರಲ್ಲಿ ಮೋದಿ ಸರ್ಕಾರವು ಎರಡನೇ ಭಾರೀ ಅಧಿಕಾರಕ್ಕೇರಿದ್ದಾಗ ಕಾಲಕ್ರಮೇಣ ಬಿಜೆಪಿ ವಿರುದ್ದ ಬಹಿಂರಗವಾಗಿ ಕಿಡಿಕಾರುತ್ತಾ ಅಂತರ ಕಾಯ್ದುಕೊಳ್ಳಲು ಶುರು ಮಾಡಿತ್ತು.
ಅದಕ್ಕೆ ಪೂರಕವೆಂಬಂತೆ ಕಳೆದ ಕೆಲವು ಚುನಾವಣೆಗಳಲ್ಲಿ ಬಿಜೆಪಿ ಉತ್ತಮವಾಗಿ ಪ್ರದರ್ಶಿಸಿರುವುದು ಲೋಕಸಭೆ, ಸ್ಥಳೀಯ ಸಂಸ್ಥೆ ಹಾಗೂ ನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷ ಟಿಆರ್ಎಸ್ಗೆ ಸರಿಸಮಾನವಾದ ಪೈಪೋಟಿ ನೀಡಿರುವುದು.
ಇದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗಾಗಿ ಹೈದರಾವಾದ್ ಆಯ್ಕೆ ಮಾಡಿಕೊಂಡಿರುವುದು. ಯಾಕೆಂದರೆ ಪಕ್ಷವು ರಾಜ್ಯ ವಿಧಾನಸಭೆಯಲ್ಲಿ ಕೇವಲ ಮೂರು ಶಾಸಕರನ್ನು ಹೊಂದಿದ್ದು ತನ್ನ ಪ್ರಬಲ ನೆಲೆಯನ್ನು ವಿಸ್ತರಿಸಲು ಯೋಜಿಸಿದೆ.
2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ತನ್ನ ಕಾರ್ಯಕಾರಿಣಿ ಸಭೆಯನ್ನು ರಾಷ್ಟ್ರರಾಜಧಾನಿಯ ಹೊರಗೆ ಇದು ಮೂರನೇ ಭಾರೀ ಮಾಡುತ್ತಿರುವುದು 2015ರಲ್ಲಿ ಬೆಮಗಳೂರು, 2016ರಲ್ಲಿ ಕೇರಳ ಹಾಗು 2017ರಲ್ಲಿ ಓಡಿಶಾದಲ್ಲಿ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸಿತ್ತು.
ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ತನ್ನ ನೆಲೆಯನ್ನ ವಿಸ್ತರಿಸಲು ಯಶಸ್ವಿಯಾಗಿದೆ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದಾರೆ ಓಡಿಶಾದಲ್ಲಿ ಹಾಗು ಕೇರಳದಲ್ಲಿ ಒಂದು ವಿರೋಧ ಪಕ್ಷವಾಗಿ ಹೊರಹೊಮ್ಮಿದೆ.
ಆದರೆ, ಜನರು ಬಿಜೆಪಿ ತೆಲಂಗಾಣದಲ್ಲಿ ಅನುಸರಿಸಿದ ಪಥವನ್ನ ಯಾವ ರಾಜ್ಯದಲ್ಲಿ ಅನುಸಿರುಸತ್ತದೆ ಎಂಬುದನ್ನ ಕಾದು ನೋಡಬೇಕಿದೆ.