• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ʻಜೈ ಭೀಮ್ʼ ಅಲ್ಲ ʻಜೈ ಅಂಬೇಡ್ಕರ್ʼ ಘೋಷವಾಕ್ಯದೊಂದಿಗೆ UP ಚುನಾವಣೆಗೆ ಸಜ್ಜಾದ ಬಿಜೆಪಿ!

ಕರ್ಣ by ಕರ್ಣ
August 7, 2021
in ದೇಶ, ರಾಜಕೀಯ
0
ʻಜೈ ಭೀಮ್ʼ ಅಲ್ಲ ʻಜೈ ಅಂಬೇಡ್ಕರ್ʼ ಘೋಷವಾಕ್ಯದೊಂದಿಗೆ UP ಚುನಾವಣೆಗೆ ಸಜ್ಜಾದ ಬಿಜೆಪಿ!
Share on WhatsAppShare on FacebookShare on Telegram

ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಜಾತಿ ರಾಜಕಾರಣದ ಕಾರ್ಡನ್ನು ಮುನ್ನೆಲೆಗೆ ತಂದಿದೆ. ಈಗಾಗಲೇ ಹಿಂದುಳಿದ ವರ್ಗಗಳಿಗೆ 27% ನೀಟ್ ಮೀಸಲಾತಿ ಘೋಷಿಸಿ ತಳ ಸಮುದಾಯಗಳ ಓಲೈಕೆಗೆ ಮುಂದಾಗಿರುವ ಬಿಜೆಪಿ ಉತ್ತರ ಪ್ರದೇಶದಲ್ಲಿ ಮತ್ತೊಂದು ಚುನಾವಣಾ ದಾಳ ಉರುಳಿಸಿದೆ. ಉತ್ತರದ ಪ್ರದೇಶದ ಮೋಹನ್ ಲಾಲ್ಗಂಜ್ ಕ್ಷೇತ್ರದಿಂದ ಆಯ್ಕೆಯಾಗಿ ಬಂದ ಸಂಸದ ಕೌಶಲ್ ಕಿಶೋರ್ ಮುಂದಿಟ್ಟುಕೊಂಡು ದಲಿತರ ಮತ ಸೆಳೆಯುವ ಹುನ್ನಾರ ಮಾಡುತ್ತಿದೆ. ಕೌಶಲ್ ಕಿಶೋರ್ ಮೂಲತಃ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಸದ್ಯ ಮೋದಿ ಕ್ಯಾಬಿನೆಟ್ನಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವರಾಗಿದ್ದಾರೆ.

ADVERTISEMENT

2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ. ಇದೇ ವೇಳೆ ಕೊರೋನಾ ನಿರ್ವಹಣಾ ವೈಫಲ್ಯ, ರಫೇಲ್ ಹಗರಣ, ಯೋಗಿ ಆದಿತ್ಯನಾಥ್ ಆಡಳಿತ ವೈಫಲ್ಯ ಮುಂದಿಟ್ಟುಕೊಂಡು ಬಿಎಸ್ಪಿ, ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಈ ಬಾರಿ ಚುನಾವಣಾ ಕಣಕ್ಕಿಳಿಯಲಿದೆ. ಇದೇ ಕಾರಣಕ್ಕೆ ದಲಿತ ಸಮುದಾಯದ ಓಲೈಕೆ ಮಾಡಿ ನಾಗಲೋಟ ಮುಂದುರೆಸುವ ಲೆಕ್ಕಾಚಾರ ಬಿಜೆಪಿಯದ್ದು. 

ಮುಖ್ಯವಾಗಿ ಈ ಬಾರಿ ಸಮಾಜವಾದಿ ಪಕ್ಷ ಹಾಗೂ ಮಾಯವಾತಿ ನೇತೃತ್ವದ ಬಿಎಸ್ಪಿಯನ್ನು ಗುರಿ ಮಾಡಿಕೊಂಡಂತಿದೆ ಭಾಜಪ. ಇದೇ ಕಾರಣಕ್ಕೆ ದಲಿತ ಅಸ್ಮಿತವಾದವನ್ನು ಮುಂದಿಟ್ಟುಕೊಂಡು ಈಗಲೇ ಪ್ರಚಾರ ಶುರುಮಾಡಿಕೊಂಡಿದೆ. ರಾಷ್ಟ್ರೀಯ ಸುದ್ದಿ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಕೌಶಲ್ ಕಿಶೋರ್ ಹೇಳಿಕೊಂಡಿದ್ದು ಈ ಬಾರಿ ದಲಿತರೇ ನಮ್ಮ ಟಾರ್ಗೆಟ್ ಎನ್ನುವಂತಿತ್ತು ಅವರ ಮಾತು. ಮುಖ್ಯವಾಗಿ ಬಿಎಸ್ಪಿ ಬಳಸಿಕೊಳ್ಳುವ ʻಜೈ ಭೀಮ್ʼ ಘೋಷಣೆಗೆ ಸೆಡ್ಡುಹೊಡೆಯುವಂತೆ ಉತ್ತರ ಪ್ರದೇಶದಲ್ಲಿ ಬಿಜೆಪಿ ʻಜೈ ಅಂಬೇಡ್ಕರ್ʼ ಎಂಬ ಘೋಷವಾಕ್ಯದೊಂದಿಗೆ ಚುನಾವಣೆಗೆ ಸಿದ್ಧಗೊಂಡಿದೆ. 

ಈ ಬಗ್ಗೆ ಕೌಶಲ್ ಕಿಶೋರ್, ಜೈ ಭೀಮ್ ಎನ್ನುವುದು ಕೇವಲ ಬಿಎಸ್ಪಿ ಪಕ್ಷದ ಮಾತ್ರ ಧ್ಯೇಯ ವಾಕ್ಯವಾಗಿದ್ದು ಅದರಿಂದ ದಲಿತರ ಉದ್ದೇರ ಮತ್ತು ಇಡೀ ಸಮುದಾಯವನ್ನು ಒಳಗೊಳ್ಳಲು ಸಾಧ್ಯವಾಗಿಲ್ಲ. ಜೈ ಭೀಮ್ ಮಾಯಾವತಿಯ ಒಂದು ಪೊಲಿಟಿಕಲ್ ಗಿಮಿಕ್ ಹೊರತು ಅದರಿಂದ ಈ ಸಮಾಜದ ಒಳಗೊಳ್ಳುವಿಕೆಯಿಂದ ದಲಿತರು ದೂರ ಉಳಿದಿದ್ದಾರೆ. ಆದರೆ ಬಿಜೆಪಿ ಪ್ರಮಾಣಿಕವಾಗಿ ದಲಿತರನ್ನು ಈ ಸಮಾಜದ ಜೊತೆ ಬೆರೆಸುವ ಕೆಲಸ ಮಾಡಿಕೊಂಡಿದೆ. ಸಮುದಾಯಕ್ಕೆ ವಿಶೇಷ ಪ್ರಾತಿನಿಧ್ಯ ಕೊಟ್ಟು ಮುಂದು ತರುತ್ತಿದೆ. ಇದಕ್ಕೆ ಜ್ವಲಂತ ಸಾಕ್ಷಿ ನಾನು. ದಲಿತ ಸಮುದಾಯದಿಂದ ಬಂದ ನಾನು ಬಿಜೆಪಿಯಲ್ಲಿ ಈಗ ಸಚಿವನಾಗಿದ್ದೇನೆ. ನನಗಿಂತ ಒಳ್ಳೆಯ ಉದಾಹರಣೆ ಬೇರೊಂದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. 

ಇದೇ ವೇಳೆ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಇತ್ತ ಬಿಜೆಪಿ ಬಿಎಸ್ಪಿಯ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟಿದ್ದರೆ, ಅತ್ತ ಮಾಯಾವತಿ ʻಬ್ರಾಹ್ಮಣ ಸಮಾವೇಶʼಗಳನ್ನು ನಡೆಸಿ ಬಿಜೆಪಿಯ ಮತಗಳನ್ನು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಇತ್ತೇಚೆಗೆ ಕೆಲ ಮಾಧ್ಯಮಗಳು ವರದಿ ಮಾಡಿತ್ತು. 

ಅಂಬೇಡ್ಕರ್ ತತ್ವಗಳನ್ನು ಕಟ್ಟಿದ ಜೈ ಭೀಮ್ ಎಂಬ ಪರಂಪರೆಯನ್ನೇ ಕೆಡವಲು ಈ ಮೂಲಕ ಬಿಜೆಪಿ ಸಜ್ಜಾಗಿದೆ. ಯಾವುದೇ ಸಂಶಯವಿಲ್ಲದೆಯೇ ಇದೊಂದು ಬಿಜೆಪಿಯ ಚುನಾವಣಾ ತಂತ್ರ ಎಂಬುವುದು ಸತ್ಯ. ಜೈ ಭೀಮ್ ಬದಲಿಗೆ ಜೈ ಅಂಬೇಡ್ಕರ್ ಎಂಬ ಘೋಷವಾಕ್ಯವನ್ನು ಈಗಾಗಲೇ ಮುನ್ನೆಲೆಗೆ ತಂದು ಚುನಾವಣಾ ಅಖಾಡಕ್ಕಿಳಿದಿರುವ ಬಿಜೆಪಿ ಅಪ್ನಾ ಬೂತ್ ಕೊರೋನಾ ಮುಕ್ತ್ ಎಂಬ ಮತ್ತೊಂದು ಗಿಮಿಕ್ನೊಂದಿಗೆ ಬಂದಿದೆ. ಆದರೆ ಈ ಬಾರಿಯ ರಾಜಕೀಯ ಲೆಕ್ಕಾಚಾರಗಳು ಮೊದಲಿನಂತಿಲ್ಲ ಎಂಬುವುದು ದಿಟ. ಇದೇ ಕಾರಣಕ್ಕೆ ತಮ್ಮ ಸಂಪ್ರಾದಾಯಿಕ ಮತವನ್ನು ಗಳಿಸಿಕೊಳ್ಳುವುದು ಮಾತ್ರವಲ್ಲದೆ, ವಿರೋಧ ಪಕ್ಷಗಳ ಮತ್ರವನ್ನು ಕೆಡಿಸಿವುದು ಕೂಡ ಅಷ್ಟೇ ಮುಖ್ಯವಾಗಿದೆ. ಇದೇ ಕಾರಣಕ್ಕೆ ಈ ಬಾರಿ ದಲಿತ ಅಸ್ಮಿತಾವಾದಕ್ಕೆ ಹೊಸ ವ್ಯಾಖ್ಯಾನ ನೀಡಿ ಮತ್ತೊಂದು ಹೊಸ ನಾಟಕಕ್ಕೆ ಬಿಜೆಪಿ ಉತ್ತರ ಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿದಿದೆ. 

Tags: BJPBSPJai AmbedkarJai BheemKaushal KishoreSamajwadi Partyಬಿಜೆಪಿ
Previous Post

ಭುಗಿಲೇಳುತ್ತಿರುವ ಅತೃಪ್ತಿಯ ಅಲೆ ನಿಭಾಯಿಸಬಲ್ಲರೆ ನೂತನ ಸಿಎಂ ಬೊಮ್ಮಾಯಿ?

Next Post

ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ ರೈತ ಸಂಸತ್ತು!

Related Posts

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ
Top Story

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

by ಪ್ರತಿಧ್ವನಿ
April 23, 2026
0

ನಾಗರಿಕರಿಗೆ ಇನ್ನಷ್ಟು ಹತ್ತಿರದಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಇ-ಆಡಳಿತ ಇಲಾಖೆಯ ಅಡಿಯಲ್ಲಿನ ನಾಗರಿಕ ಸೇವೆಗಳ ವಿದ್ಯುನ್ಮಾನ ವಿತರಣಾ...

Read moreDetails
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

April 23, 2026
ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
Next Post
ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ ರೈತ ಸಂಸತ್ತು!

ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ ರೈತ ಸಂಸತ್ತು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada