• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಿಬಿಎಂಪಿ ಕಾಂಪ್ಯಾಕ್ಟರ್ಸ್ ಮಿಸ್ಸಿಂಗ್ : ಕಸ ಸಾಗಿಸುವ ವಾಹನಗಳ ಲೆಕ್ಕವೇ ಸಿಗ್ತಿಲ್ಲ ಪಾಲಿಕೆಗೆ!

ಕರ್ಣ by ಕರ್ಣ
February 9, 2022
in ಕರ್ನಾಟಕ
0
ಬಿಬಿಎಂಪಿ ಕಾಂಪ್ಯಾಕ್ಟರ್ಸ್ ಮಿಸ್ಸಿಂಗ್ : ಕಸ ಸಾಗಿಸುವ ವಾಹನಗಳ ಲೆಕ್ಕವೇ ಸಿಗ್ತಿಲ್ಲ ಪಾಲಿಕೆಗೆ!
Share on WhatsAppShare on FacebookShare on Telegram

ಕೊರೋನಾ (Corona) ಹಾಗೂ ಬಿಬಿಎಂಪಿ (BBMP) ಬಜೆಟ್ ನಡುವೆ ಪಾಲಿಕೆಗೆ ಇದೀಗ ಮತ್ತೊಂದು ತಲೆನೋವು ಶುರುವಾಗಿದೆ. ಕಸ ಸಾಗಿಸೋ ಕಾಂಪ್ಯಾಕ್ಟ್ ವಾಹನಗಳ ಗಾರ್ಬೆಜ್ ಕಲೆಕ್ಟ್, ಲೋಕೇಶನ್ ಟ್ರೇಸ್ ಲೆಕ್ಕವೇ ಸಿಗ್ತಿಲ್ಲ. ವೆಹಿಕಲ್ ಗಳ GPS ಸಿಗ್ನಲ್ ಕೈಕೊಡ್ತಿದ್ದು, ಇವುಗಳನ್ನ ಪತ್ತೆಹಚ್ಚೋದು ಪಾಲಿಕೆಗೆ ದೊಡ್ಡ ಸವಾಲಾಗ್ತಿದ್ದು ಇದಕ್ಕೆ ಬಿಬಿಎಂಪಿ ಬೇರೇನೆ ದಾರಿ ಕಂಡುಕೊಂಡಿದೆ.

ADVERTISEMENT

ತಾಂತ್ರಿಕ ಎಡವಟ್ಟಿನಿಂದ ಟ್ರಾಕ್ ಆಗ್ತಿಲ್ಲ ಕಾಂಪ್ಯಾಕ್ಟ್ ವಾಹನ

ಬೆಂಗಳೂರನ್ನ ಗಾರ್ಡನ್ ಸಿಟಿ ಅಂತಾರೆ . ಆದರೆ ಕೆಲ ವರ್ಷಗಳ ಹಿಂದೆ ನಮ್ಮ ರಾಜಧಾನಿ ಗಾರ್ಬೇಜ್ ಸಿಟಿ ಅಂತ ವಿಶ್ವಮಟ್ಟದಲ್ಲಿ ಅಪಖ್ಯಾತಿಗೊಳಗಾಗಿತ್ತು. ನಂತರ ಎಚ್ಚೆತ್ತ ಬಿಬಿಎಂಪಿ ಸಿಲಿಕಾನ್ ಸಿಟಿಯ ತ್ಯಾಜ್ಯ ವಿಲೇವಾರಿಗೆ ಕಠಿಣ ಕ್ರಮ ಕೈಗೊಂಡು ಕಸದ ಸಮಸ್ಯೆ ಬಗೆಹರಿಸಿ ಕೇಂದ್ರ ಸರ್ಕಾರದ ಕಸ ಮುಕ್ತ ನಗರ ಎಂಬ ಪ್ರಶಸ್ತಿಗೆ ಪಾತ್ರವಾಗಿತ್ತು ಇದೆಲ್ಲ ಹಳೆ ವಿಷಯ ಬಿಡಿ. ಸದ್ಯ ಆಗುತ್ತಿರುವ ಸಮಸ್ಯೆ ಏನಂದರೆ ರಾಜಧಾನಿಯಲ್ಲಿ ಮತ್ತೆ ಸದ್ದಿಲ್ಲದೆ ಕೆಲ ಭಾಗಗಳಲ್ಲಿ ಕಸದ ಸಮಸ್ಯೆ ಸೃಷ್ಠಿಯಾಗ್ತಿದ್ದು, ಇದಕ್ಕೆ ಕಾರಣವೇನಂದ್ರೆದರೆ ಕಸ ಸಾಗಿಸೋ ವಾಹನಗಳ GPS ಟ್ರ್ಯಾಕಿಂಗ್ ಅವ್ಯವಸ್ಥೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 5,500 ಆಟೋ ಟಿಪ್ಪರ್ ಮತ್ತು 600 ಕಾಂಪ್ಯಾಕ್ಟರ್ ವಾಹನಗಳಿವೆ. ಕಸ ಸಂಗ್ರಹಕ್ಕಾಗಿ ಖಾಸಗಿಯವರಿಗೆ ಟೆಂಡರ್ ಕೊಟ್ಟಿರುವ ಪಾಲಿಕೆ, ಕಸ ಸಂಗ್ರಹಿಸಲು ಕೋಟ್ಯಾಂತ ರೂ ವೆಚ್ಚಮಾಡ್ತಿಡುತ್ತಿದೆ. ಈ ಹಿಂದೆ ಕಾಂಪ್ಯಾಕ್ಟ್ ವಾಹನಗಳ ಕೆಲಸದ ಬಗ್ಗೆ ದೂರು ಕೇಳಿಬಂದಾಗ ಈ ವೆಹಿಕಲ್ ಗಳ ಲೊಕೇಶನ್ ಟ್ರೇಸಿಂಗ್ ಗಾಗಿ GPS ಅನ್ನ ಅಳವಡಿಸಲಾಗಿತ್ತು. ಇದೀಗ ತಾಂತ್ರಿಕ ಯಡವಟ್ಟಿನಿಂದಾಗಿ ತ್ಯಾಜ್ಯ ವಿಲೇವಾರಿ ವಾಹನಗಳ ಲೊಕೇಶನ್ ಟ್ರಾಕ್ ಆಗ್ತಿಲ್ಲ. ಜಿಪಿಎಸ್ ಕೈಕೊಡ್ತಿರೋದ್ರಿಂದ ಕಸದ ವಾಹನಗಳ ಲೆಕ್ಕವೇ ಸಿಗ್ತಿಲ್ಲ ಪಾಲಿಕೆಗೆ. ಕಸದ ವಾಹನ ನಿತ್ಯ ಓಡಾಟ ನಡೆಸ್ತಿದ್ಯಾ ? ಕಸ ಸಂಗ್ರಹ ವಾಗ್ತಿದ್ಯಾ ಅನ್ನೋ ಮಾಹಿತಿ ಪಾಲಿಕೆ ಬಳಿಯೇ ಇಲ್ಲ. ಈ ಪೈಕಿ ಕೆಲವು ವಾಹನಗಳು ಅಡ್ರಸ್ ಗೆ ಇಲ್ಲದೇ ಮಿಸ್ಸಿಂಗ್ ಆಗಿವೆ, ಈ ಬಗ್ಗೆ ಪಾಲಿಕೆ ಅಧಿಕಾರಿಗಳ ವಿರುದ್ಧ ಅವ್ಯವಹಾರದ ಆರೋಪ ಕೇಳಿಬರ್ತಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಘನ ತ್ಯಾಜ್ಯ ವಿಲೇವಾರಿ ವಿಭಾಜಂಟಿ ಆಯುಕ್ತ ಸರ್ಫರಾಜ್ ಖಾನ್ ದೊಡ್ಡ ಪ್ರಮಾಣದಲ್ಲಿ GPS ಅಳವಡಿಸಿರೋದರಿಂದ ಟೆಕ್ನಿಕಲ್ ಎರರ್ಸ್ ಆಗುತ್ತಿದೆ. ಕಾಂಪ್ಯಾಕ್ಟ್ ವೆಹಿಕಲ್ಸ್ ಓಡಾಡೋಡುವ ಜಾಗಗಳಲ್ಲಿ ಮಾರ್ಷಲ್ಸ್, RF ಗಾರ್ಡ್ಸ್ ಟ್ರ್ಯಾಕ್ ಮಾಡುತ್ತಿದ್ದಾರೆ. ಇದರಲ್ಲಿ ಅವ್ಯವಹಾರ ಆಗಿದೆ ಅನ್ನೋ ಮಾತು ಸತ್ಯಕ್ಕೆ ದೂರವಾದದ್ದು. ದಿನನಿತ್ಯ 4.500 ಟನ್ ಕಸ ಪ್ಲಾಂಟ್ ಗಳಿಗೆ ಬರ್ತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ನಿಖರ ಮಾಹಿತಿಯನ್ನ ಕೊಡುತ್ತಿದ್ದಾರೆ. ಕೆಲ ವಾರ್ಡ್ ಗಳಲ್ಲಿ ಬ್ಲಾಕ್ ಗಳ ಸಂಖ್ಯೆ ಹೆಚ್ಚಳವಾಗಿದೆ. ಇದರ ಮ್ಯಾಫಿಂಗ್ ಮಾಡಬೇಕು. ಇದರಿಂದ ಗೊಂದಲ ಆಗಿದೆ. ಇದನ್ನ ಸರಿಪಡಿಸಲು ಮುಂದಿನ ದಿನಗಳಲ್ಲಿ ಆ್ಯಪ್ ಗಳ ಮೂಲಕ ಮಾನಿಟರ್ ಮಾಡಲು ಪಾಲಿಕೆ ಚಿಂತಿಸಿದೆ ಎಂದರು.

ಕಾಂಪ್ಯಾಕ್ಟ್ ವೆಹಿಕಲ್ಸ್ ಗಳ ಅವ್ಯವಸ್ಥೆಯ ಬಗ್ಗೆ ಪಾಲಿಕೆ ಎಚ್ಚರವಹಿಸಿದ್ದು ಅಂತಹ ಯಾವುದೇ ಪ್ರಾಬ್ಲಮ್ ಆಗ್ತಿಲ್ಲ ಎಂದಿದೆ. ಆದ್ರೆ GPS ಸಿಗ್ನಲ್ ಪ್ರಾಬ್ಲಮ್ ಆಗ್ತಿರೋದನ್ನ ಒಪ್ಪಿಕೊಂಡಿದ್ದು ಇದಕ್ಕೆ ಆ್ಯಪ್ ಒಂದನ್ನ ರೂಪಿಸ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಸರಿಹೋಗಲಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು.

Tags: BJPCongress PartyCovid 19ಕರೋನಾಕಸ ಸಾಗಿಸುವ ವಾಹನಕಾಂಪ್ಯಾಕ್ಟರ್ಸ್ ಮಿಸ್ಸಿಂಗ್ಕೋವಿಡ್-19ಬಿಜೆಪಿಬಿಬಿಎಂಪಿ
Previous Post

ಹಿಜಾಬ್ ವಿವಾದ : ಕೋರ್ಟ್ ನಲ್ಲಿ ನಡೆದ ವಾದ – ಪ್ರತಿವಾದದ ಪ್ರಮುಖ ಅಂಶಗಳು !

Next Post

ಪಾರಿವಾಳವನ್ನು ಹಿಂಬಾಲಿಸಿ ಭಾರತ ಗಡಿ ದಾಟಿದ ಪಾಕ್‌ ಬಾಲಕ: ಪ್ರಧಾನಿ ಮೋದಿಗೆ ಕುಟುಂಬಸ್ಥರಿಂದ ಮನವಿ

Related Posts

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?
Top Story

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

by ಪ್ರತಿಧ್ವನಿ
April 22, 2026
0

ಗದಗ :  ಬೇಸಿಗೆ ಕಾಲ ಆರಂಭವಾಗಿದ್ದು, ಬಿರು ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಜಿಲ್ಲೆಯಲ್ಲಂತೂ ದಿನದಿಂದ ದಿನಕ್ಕೆ ಸೂರ್ಯ ಕಾವೇರುತ್ತಿದ್ದಾನೆ. ಬಿಸಿಲಿನ ಹೊಡೆತ ತಾಳಲಾರದೆ ಜನರು ಹೈರಾಣಾಗಿದ್ದಾರೆ. https://youtu.be/dMLKOlJu3kY?si=xK3Kdu_8RkdSidp9...

Read moreDetails
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
Next Post
ಪಾರಿವಾಳವನ್ನು ಹಿಂಬಾಲಿಸಿ ಭಾರತ ಗಡಿ ದಾಟಿದ ಪಾಕ್‌ ಬಾಲಕ: ಪ್ರಧಾನಿ ಮೋದಿಗೆ ಕುಟುಂಬಸ್ಥರಿಂದ ಮನವಿ

ಪಾರಿವಾಳವನ್ನು ಹಿಂಬಾಲಿಸಿ ಭಾರತ ಗಡಿ ದಾಟಿದ ಪಾಕ್‌ ಬಾಲಕ: ಪ್ರಧಾನಿ ಮೋದಿಗೆ ಕುಟುಂಬಸ್ಥರಿಂದ ಮನವಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada