• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರಾಹುಲ್‌ ಅಪ್ರಬುಧ್ಧ, ಯುಪಿಎ ಸರ್ಕಾರದಲ್ಲಿ ಸೋನಿಯಾ ಪಾತ್ರ ನಿರ್ಣಾಯಕ; ಪಕ್ಷ ತೊರೆದ ಬಳಿಕ ಆಜಾದ್‌ ಪತ್ರ

ಫೈಝ್ by ಫೈಝ್
August 26, 2022
in ದೇಶ, ರಾಜಕೀಯ
0
ರಾಹುಲ್‌ ಅಪ್ರಬುಧ್ಧ, ಯುಪಿಎ ಸರ್ಕಾರದಲ್ಲಿ ಸೋನಿಯಾ ಪಾತ್ರ ನಿರ್ಣಾಯಕ; ಪಕ್ಷ ತೊರೆದ ಬಳಿಕ ಆಜಾದ್‌ ಪತ್ರ
Share on WhatsAppShare on FacebookShare on Telegram

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್‌ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಹುಲ್ ಗಾಂಧಿ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದಾರೆ. ರಾಹುಲ್‌ ಗಾಂಧಿ ಗಂಭೀರತೆಯಿಲ್ಲದ ವ್ಯಕ್ತಿ ಎಂದು ಆಝಾದ್‌ ಕರೆದಿದ್ದು, ಪಕ್ಷದಲ್ಲಿನ ಸಂಪೂರ್ಣ ಸಮಾಲೋಚನಾ ಕಾರ್ಯವಿಧಾನವನ್ನು ರಾಹುಲ್‌ ಕೆಡವಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ.

ADVERTISEMENT

ಪಕ್ಷದ ಎಲ್ಲಾ ಹಿರಿಯ ಮತ್ತು ಅನುಭವಿ ನಾಯಕರನ್ನು ಬದಿಗಿಟ್ಟು, ಹೊಸ ಕೂಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗೂ ಅನನುಭವಿಗಳು ಪಕ್ಷವನ್ನು ನಡೆಸುತ್ತಿದ್ದಾರೆ ಎಂದು ಗುಲಾಂ ನಬಿ ಆಝಾದ್‌ ಸೋನಿಯಾ ಗಾಂಧಿಗೆ ಬರೆದ ಪತ್ರೆದಲ್ಲಿ ಹೇಳಿದ್ದಾರೆ.

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲು ಗಾಂಧಿಗಳು ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದ ನಡುವೆ, ಸೋನಿಯಾಗೆ ಐದು ಪುಟಗಳ ಪತ್ರ ಬರೆದಿರುವ ಆಝಾದ್, “ಕಾಂಗ್ರೆಸ್ ಪಕ್ಷದ ಪರಿಸ್ಥಿತಿಯು ಈಗ ಮರಳಿ ಬಾರದಂತಹ ಹಂತವನ್ನು ತಲುಪಿದೆ. ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಲು ‘ಪ್ರಾಕ್ಸಿ’ಗಳನ್ನು ಬೆಂಬಲಿಸಲಾಗುತ್ತಿದೆ. ಪಕ್ಷವು ಎಷ್ಟು ಸಮಗ್ರವಾಗಿ ನಾಶವಾಗಿದೆಯೆಂದರೆ ಪರಿಸ್ಥಿತಿಯನ್ನು ಬದಲಾಯಿಸಲಾಗದು, ಆದಕಾರಣ ಈ ಪ್ರಯೋಗವು ಅವನತಿ ಹೊಂದುತ್ತದೆ. ಇದಲ್ಲದೆ, ಆಯ್ಕೆಯಾದವರು ಕೈ ಬೊಂಬೆಗಳಿಗಿಂತ ಹೆಚ್ಚೇನೂ ಆಗಿರುವುದಿಲ್ಲ, ”ಎಂದು ಹೇಳಿದ್ದಾರೆ.

#BREAKING: Senior Congress leader Gulam Nabi Azad resigns from primary membership of Congress. Blames Rahul Gandhi in his letter. pic.twitter.com/Pd3j0uWOJu

— Suraj Suresh (@Suraj_Suresh16) August 26, 2022

ರಾಹುಲ್ ಗಾಂಧಿಯ ಬಾಲಿಶ ವರ್ತನೆಯು ಪ್ರಧಾನಿ ಮತ್ತು ಭಾರತ ಸರ್ಕಾರದ ಅಧಿಕಾರವನ್ನು ಸಂಪೂರ್ಣವಾಗಿ ಬುಡಮೇಲು ಮಾಡಿದೆ. ರಾಹುಲ್ ಅವರ ಅಪ್ರಬುದ್ಧತೆಗೆ ಇದು ಅತ್ಯಂತ ಜ್ವಲಂತ ಉದಾಹರಣೆ ಎಂದು ಅವರು ಕಿಡಿಕಾರಿದ್ದಾರೆ.

ಬಲಪಂಥೀಯ ಶಕ್ತಿಗಳು ಮತ್ತು ಕೆಲವು ನಿರ್ಲಜ್ಜ ಕಾರ್ಪೊರೇಟ್ ಹಿತಾಸಕ್ತಿಗಳ ಸಂಯೋಜನೆಯಿಂದ ಯುಪಿಎ ಸರ್ಕಾರದ ವಿರುದ್ಧ ಅಪಪ್ರಚಾರ ಮತ್ತು ಪ್ರಚೋದನೆಯು 2014 ರಲ್ಲಿ ಯುಪಿಎ ಸರ್ಕಾರದ ಸೋಲಿಗೆ ಗಮನಾರ್ಹವಾದ ಕೊಡುಗೆ ನೀಡಿತ್ತು. ಅದಾಗ್ಯೂ ಯುಪಿಎ-1 ಮತ್ತು ಯುಪಿಎ-II ಎರಡೂ ಸರ್ಕಾರಗಳ ರಚನೆಯಲ್ಲಿ ಪಕ್ಷದ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಉತ್ತಮ ಪಾತ್ರ ವಹಿಸಿದ್ದಾರೆ ಎಂದು ಸೋನಿಯಾ ಬಗ್ಗೆ ಆಝಾದ್‌ ಹೊಗಳಿದ್ದಾರೆ. .

“ಈ ಯಶಸ್ಸಿಗೆ ಒಂದು ಪ್ರಮುಖ ಕಾರಣವೆಂದರೆ ಅಧ್ಯಕ್ಷರಾಗಿ ನೀವು ಹಿರಿಯ ನಾಯಕರ ಬುದ್ಧಿವಂತ ಸಲಹೆಯನ್ನು ಪಾಲಿಸಿದ್ದೀರಿ, ಅವರ ತೀರ್ಪನ್ನು ನಂಬಿ ಮತ್ತು ಅವರಿಗೆ ಅಧಿಕಾರವನ್ನು ವಹಿಸಿಕೊಟ್ಟಿದ್ದೀರಿ. ಆದರೆ, ದುರದೃಷ್ಟವಶಾತ್ ರಾಹುಲ್ ಗಾಂಧಿಯವರು ರಾಜಕೀಯ ಪ್ರವೇಶಿಸಿದ ನಂತರ ಮತ್ತು ವಿಶೇಷವಾಗಿ ಜನವರಿ 2013 ರ ನಂತರ, ಅವರು ನಿಮ್ಮಿಂದ ಉಪಾಧ್ಯಕ್ಷರಾಗಿ ನೇಮಕಗೊಂಡ ನಂತರ, ಮೊದಲು ಅಸ್ತಿತ್ವದಲ್ಲಿದ್ದ ಸಂಪೂರ್ಣ ಸಮಾಲೋಚನಾ ಕಾರ್ಯವಿಧಾನವನ್ನು ಅವರು ಕೆಡವಿದರು, ”ಎಂದು ಅವರು ಆಝಾದ್‌ ಹೇಳಿದ್ದಾರೆ.
.

Tags: BJPCongress Partyಎಚ್ ಡಿ ಕುಮಾರಸ್ವಾಮಿಕರೋನಾನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕಲೆಗೆ ಬೆಲೆ ಕೊಡುವವರಿಗೆ ಡೊಳ್ಳು ಇಷ್ಟ ಆಗುತ್ತೆ: Director Pavan Wadeyar Wife Apeksha

Next Post

ಅಗ್ನಿ ಅವಘಢದಲ್ಲಿ ಮನೆಯಲ್ಲಿದ್ದ 3 ಮಕ್ಕಳು ಸೇರಿ 5 ಮಂದಿ ದುರ್ಮರಣ

Related Posts

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?
Top Story

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

by ಪ್ರತಿಧ್ವನಿ
April 29, 2026
0

ಲಕ್ನೋ: ಉತ್ತರ ಪ್ರದೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್  ಉತ್ತರ ಪ್ರದೇಶದ ಶಾಸಕಿ ಹಾಗೂ...

Read moreDetails
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
Next Post
ದೆಹಲಿ ವಾಣಿಜ್ಯ ಕಟ್ಟಡದಲ್ಲಿ ಅಗ್ನಿ ದುರಂತಕ್ಕೆ 27 ಮಂದಿ ದುರ್ಮರಣ

ಅಗ್ನಿ ಅವಘಢದಲ್ಲಿ ಮನೆಯಲ್ಲಿದ್ದ 3 ಮಕ್ಕಳು ಸೇರಿ 5 ಮಂದಿ ದುರ್ಮರಣ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada