ಉದ್ಯಮಿ ವಿಜಯ್ ಟಾಟಾ (Vijay Tata) ಬೆದರಿಕೆ ಹಾಕಿದ ಆರೋಪದ ಕೇಸ್ ಗೆ ಸಂಬಂಧಪಟ್ಟಂತೆ ಎಂಎಲ್ಎಸಿ ರಮೇಶ್ ಗೌಡ (MLC Ramesh gowda) ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತಮ್ಮ ವಿರುದ್ದ ದಾಖಲಾಗಿರುವ FIR ರದ್ದು ಮಾಡಬೇಕೆಂದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಆಫೀಸ್ ಆಕ್ಷೇಪಣೆಗಳ ಸರಿ ಪಡಿಸಲು ಕೋರ್ಟ್ ಸೂಚನೆ ನೀಡಿದೆ. ನ್ಯಾ.ಹೇಮಂತ್ ಚಂದನಗೌಡರ್ ರ ಏಕಸದಸ್ಯ ಪೀಠ ಸೂಚನೆ ನೀಡಿದೆ.ಈ ಆಫೀಸ್ ಅಬ್ಜೆಕ್ಷನ್ಸ್ ಕ್ಲೀಯರ್ ಬಳಿಕ ಅ.21ಕ್ಕೆ ಅರ್ಜಿಯ ವಿಚಾರಣೆ ನಡೆಯಲಿದೆ.ಇದೊಂದು ಆಧಾರರಹಿತ ಕೇಸ್ ದಾಖಲಿಸಿಕೊಳ್ಳಲಾಗಿದೆ. ವಿನಾಕಾರಣ ಪ್ರಕರಣದಲ್ಲಿ ಕೇಂದ್ರ ಸಚಿವರ ಹೆಸರನ್ನೂ ಸೇರಿಸಲಾಗಿದೆ.
ಈ ದೂರು ದಾಖಲಿಸಿರುವ ವ್ಯಕ್ತಿಯ ವಿರುದ್ದವೇ ಕೇಸ್ ಗಳಿವೆ,ರಾಜಕೀಯ ಷಡ್ಯಂತ್ರದಿಂದ ಕೇಸ್ ದಾಖಲು ಮಾಡಲಾಗಿದೆ ಎಂದು ಅನೇಕ ಅಂಶಗಳ ಉಲ್ಲೇಖಿಸಿ ರಮೇಶ್ ಗೌಡ ಅರ್ಜಿ ಸಲ್ಲಿಸಿದ್ದಾರೆ.





