
ಕಾಂಗ್ರೆಸ್ ಸರ್ಕಾರ ಕೆಲವೊಂದು ವಿಚಾರಗಳನ್ನು ತನ್ನಷ್ಟಕ್ಕೆ ತಾನೇ ಮೈಮೇಲೆ ಎಳೆದುಕೊಳ್ತಿದ್ಯಾ ಅನ್ನೋ ಶಂಕೆ ವ್ಯಕ್ತವಾಗ್ತಿದೆ. ಹುಬ್ಬಳ್ಳಿ ಗಲಭೆ ಕೇಸ್ನಲ್ಲಿ ಭಾಗಿಯಾದವರ ವಿರುದ್ಧದ ಕೇಸ್ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸುವ ಕೆಲಸ ಮಾಡ್ತಿದೆ ಅನ್ನೋ ಆರೋಪಕ್ಕೆ ಗುರಿಯಾಗಿದೆ. ಅದರಲ್ಲೂ ಮುಸ್ಲಿಂ ಸಮುದಾಯ ಪೊಲೀಸರ ಮೇಲೆ ಹಲ್ಲೆ ಮಾಡಿ, ವಾಹನಗಳನ್ನು ಜಖಂ ಮಾಡಿದ್ದ ಕೇಸ್ ವಾಪಸ್ ಪಡೆದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗ್ತಿದೆ. ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕಾಂಗ್ರೆಸ್ ಸರ್ಕಾರ ಸಮರ್ಥನೆಗೆ ಮುಂದಾಗಿದೆ.
ಹುಬ್ಬಳ್ಳಿ ಕೇಸ್ ವಾಪಸ್ ಪಡೆದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ್ದು, ರಾಜ್ಯದಲ್ಲಿ ಕೇಸ್ ವಾಪಸ್ ಪಡೆಯುವ ಅಧಿಕಾರ ಸೆಕ್ಷನ್ 321ರ ಅನ್ವಯ ಎಲ್ಲಾ ಸರ್ಕಾರಗಳಿಗೂ ಅಧಿಕಾರವಿದೆ. ಸಹಜವಾಗಿ ಸಾಮಾನ್ಯ ಜನರು ಗೃಹ ಇಲಾಖೆಗಳಿಗೆ ಮನವಿಯನ್ನ ಸಲ್ಲಿಸುತ್ತಾರೆ. ಅನೇಕ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಕೇಸ್ ಹಾಕಿರುತ್ತಾರೆ. ರೈತರ ಚಳುವಳಿಯಲ್ಲಿ ಅನೇಕ ಮಂದಿ ಭಾಗಿಯಾಗಿರುತ್ತಾರೆ. ಪ್ಯಾಂತ್ಯ, ಭಾಷಾ, ನೀರಿಗಾಗಿ ಹೋರಾಟ ಮಾಡಿದವರೂ ಇದ್ದಾರೆ. ಕೆಲವೊಂದು ಚಳುವಳಿಗಳು ಸಹ ನಡೆದಿವೆ. ಆಗ ಅವರು ಕೇಸ್ ವಾಪಸ್ ತೆಗೆದುಕೊಳ್ಳಿ. ನಾವು ಹೋರಾಟ ಮಾಡಿದ್ದು ರಾಜ್ಯದ ಹಿತಕ್ಕಾಗಿ ಎಂದು ಮನವಿ ಮಾಡ್ತಾರೆ. ಆಗ ಸರ್ಕಾರ ಬಹಳ ಹಿಂದಿನಿಂದಲೂ ಸಹ ಕೇಸ್ ವಾಪಸ್ ಪಡೆಯುವ ಕೆಲಸ ಮಾಡ್ತಿದೆ ಎಂದಿದ್ದಾರೆ.

ಈಗ ನಮ್ಮ ಸರ್ಕಾರ ಸುಮಾರು 43 ಕೇಸ್ಗಳನ್ನು ವಾಪಸ್ ಪಡೆಯುವ ಕೆಲಸ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 365 ಕೇಸ್ಗಳನ್ನ ವಾಪಸ್ ಪಡೆಯಲಾಗಿದೆ. ಅದರಲ್ಲಿ 183 ಕೇಸ್ ಪೊಲೀಸ್ ಗಿರಿ, ಹಿಜಾಬ್ ಪ್ರಕರಣ ಆಗಿದೆ. ಒಟ್ಟು ಎರಡು ಸಾವಿರ ಆರೋಪಿಗಳನ್ನ ಬಿಜೆಪಿ ಅವರು ವಿಥ್ ಡ್ರಾ ಮಾಡಿಕೊಂಡಿದ್ದಾರೆ. 2020 ರಲ್ಲಿ 67 ಪ್ರಕರಣಗಳನ್ನ ವಿಥ್ ಡ್ರಾ ಮಾಡ್ತಾರೆ. ಅದನ್ನು ಜೆ.ಸಿ ಮಾಧುಸ್ವಾಮಿ ಡಿಫೆಂಡ್ ಮಾಡಿಕೊಳ್ತಾರೆ. ಸಿ.ಟಿ.ರವಿ, ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಹಾಲಪ್ಪ ಆಚಾರ್ ಕೇಸ್ಗಳನ್ನೂ ವಿಥ್ ಡ್ರಾ ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿರುವ ಬಲಪಂಥಿಯರಾದ ಶ್ರೀರಾಮಸೇನೆ, ಭಜರಂಗದಳ ಹಾಗೂ ಬಿಜೆಪಿಯ ಬಹುತೇಕ ಕಾರ್ಯಕರ್ತರ ಕೇಸ್ ವಾಪಸ್ ಪಡೆದಿದ್ದಾರೆ. 2018 ರಿಂದ 2020 ರವರೆಗೆ 128 ಕೇಸ್ಗಳನ್ನ ಬಿಜೆಪಿ ವಿಥ್ ಡ್ರಾ ಮಾಡಿದ್ದಾರೆ ಎಂದಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲೂ ಕೇಸ್ ವಾಪಸ್ ಪಡೆಯಲಾಗಿದೆ ಎಂದಿರುವ ಸಚಿವರು, ಪೊಲೀಸರ ಮೇಲೆ ದೊಂಬಿ ಮಾಡಿದ ಕೇಸ್ ವಾಪಸ್, ಎಸ್ಡಿಪಿಐ, ಪಿಎಫ್ಐ ಕೇಸ್ ವಾಪಸ್ ಪಡೆದಿದ್ರು. ಬಿಜೆಪಿಯವರು ಹುಡುಕಿ ಹುಡುಕಿ ಕೇಸ್ ಹಾಕ್ತಿದ್ರು. ಬಲ್ಕಿಷ್ ಬಾನು ಕೇಸ್ ವಾಪಸ್ ಪಡೆದುಕೊಂಡ್ರು. ಅತ್ಯಾಚಾರ ಮಾಡಿದವರ ಕೇಸ್ ವಾಪಸ್ ಪಡೆದ್ರು. ಅಂತವರಿಗೆ ಬಿಜೆಪಿ ಸನ್ಮಾನ ಮಾಡ್ತು. ನಮ್ಮ ಬಗ್ಗೆ ಮಾತನಾಡೋಕೆ ಬಿಜೆಪಿ ನಾಯಕರಿಗೆ ನೈತಿಕತೆ ಇದ್ಯಾ? ಅವರಿಗೆ ದೇಶದ ಬಗ್ಗೆ ಭಕ್ತಿ ಇಲ್ಲ. ಸುಮ್ಮನೆ ನಮ್ಮ ಮೇಲೆ ಆರೋಪ ಮಾಡ್ತಾರೆ. ಯಾಕೆ ಎಸ್ಡಿಪಿಐ, ಪಿಎಫ್ಐ ಕೇಸ್ ವಾಪಸ್ ಪಡೆದ್ರು..? ಯಾವ ಕಾರಣಕ್ಕೆ ಬಿಜೆಪಿ ವಾಪಸ್ ಪಡೆಯಿತು ಎಂದು ಪ್ರಶ್ನಿಸಿದ್ದಾರೆ.
