Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

Achievement is possible only with hard work : ಸಾಧನೆ ಅನ್ನೋದು ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ..!

ಪ್ರತಿಧ್ವನಿ

ಪ್ರತಿಧ್ವನಿ

May 24, 2023
Share on FacebookShare on Twitter

ಸಾಧನೆ ಅನ್ನೋದು ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ. ಬದುಕಲ್ಲಿ ಏನನ್ನಾದರೂ ಗಳಿಸಬೇಕು ಅಂದ್ರೆ ಶ್ರದ್ಧೆ ಹಾಗೂ ಶ್ರಮ ಅತ್ಯಗತ್ಯ. ಇದೇ ದಿಕ್ಕಿನಲ್ಲಿ ಮೈಸೂರು ಜಿಲ್ಲೆಯ ಮೂವರು ಭಾರತೀಯ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಜಿಲ್ಲೆಗೆ ಇನ್ನಷ್ಟು ಕೀರ್ತಿ ತಂದಿದ್ದಾರೆ .

ಹೆಚ್ಚು ಓದಿದ ಸ್ಟೋರಿಗಳು

Implementation of Congress Five Guarantee : ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳ ಜಾರಿ : ನಾಳೆ ನಿಗದಿಯಾಗಿದ್ದ ಸಚಿವ ಸಂಪುಟ ಸಭೆ ಮುಂದೂಡಿಕೆ

​ಗ್ಯಾರಂಟಿ ಯೋಜನೆ ಜಾರಿ ಸಿದ್ದರಾಮಯ್ಯ ಸುಪರ್ದಿಗೆ ನೀಡಿದ ಸಚಿವರು

Protest of wrestlers : ಕುಸ್ತಿಪಟುಗಳ ಪ್ರತಿಭಟನೆ ; ‘ಮಹಾ ಪಂಚಾಯತ್‌’ ನಡೆಸುವುದಾಗಿ ಟಿಕಾಯತ್‌ ಹೇಳಿಕೆ..!

ಮೈಸೂರಿನ ಪೂಜಾ ಎಂಬುವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 390ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.ಭಾರತ ಲೋಕಸೇವಾ ಆಯೋಗವು ನಡೆಸಿದ 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಮೈಸೂರಿನ ಕುವೆಂಪುನಗರದ ಪೂಜಾ ಅವರು 390ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಇದಲ್ಲದೇ , ವಿಜಯನಗರದ ನಿವಾಸಿ ಕೆ.ಸೌರಭ್ಗೆ 260ನೇ ಸ್ಥಾನ, ಕೆ.ಆರ್.ನಗರದ ಡಾ.ಕೆ.ಭಾನುಪ್ರಕಾಶ್ಗೆ 448ನೇ ಸ್ಥಾನ ದೊರೆತಿದೆ. ಸತತ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಅಭ್ಯರ್ಥಿಗಳು ರಿಸಲ್ಟ್ ನೋಡಿ ಖುಷ್ ಆಗಿದ್ದಾರೆ.

ಪೂಜಾ ಪರಿಶ್ರಮ..
ಇನ್ನು, ಪೂಜಾ ಕುವೆಂಪುನಗರದ ಕಾವೇರಿ ಶಾಲೆಯಲ್ಲಿ 1ರಿಂದ 10ನೇ ತರಗತಿ, ಮರಿಮಲ್ಲಪ್ಪ ಪಿಯು ಕಾಲೇಜಿನಲ್ಲಿ ಪಿಯು ಹಾಗೂ ಗೋಕುಲಂನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿರುವ ಪೂಜಾ ಮುಕುಂದ ಹಾಗೂ ಪದ್ಮಾವತಿ ದಂಪತಿಯ ಪುತ್ರಿ. ಪೂಜಾ ಯಾವುದೇ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷವಾಗಿದೆ ಕಳೆದ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಂದರ್ಶನ ಹಂತದವರೆಗೂ ಹೋಗಿದ್ದರು. ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಎರಡನೇ ಬಾರಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ.2019ರಲ್ಲಿ ಪದವಿ ಮುಗಿಸಿದ್ದ ಇವರು 2020 ಡಿಸೆಂಬರ್‌ನಿಂದ ತಯಾರಿ ಆರಂಭಿಸಿ ಅಣಕು ಪರೀಕ್ಷೆಗಳನ್ನು ತೆಗೆದುಕೊಂಡಿದ್ದರು. .

ಐಎಎಸ್ ಅಥವಾ ಐಪಿಎಸ್ ಹುದ್ದೆ ಸಿಗುವ ನಿರೀಕ್ಷೆ ಇದೆ ಎಂದು ಪೂಜಾ ಹೇಳಿಕೊಂಡಿದ್ದಾರೆ. ʻಶಿಸ್ತು ಹಾಗೂ ಶ್ರಮವನ್ನು ಪರೀಕ್ಷೆ ಬೇಡುತ್ತದೆ. ಉತ್ತಮವಾಗಿ ತಯಾರಿ ನಡೆಸಿದ್ದರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು. ಧೈರ್ಯದಿಂದ ಮುನ್ನುಗ್ಗಬೇಕುʼ ಎಂದು ಪೂಜಾ ತಮ್ಮ ತಯಾರಿ ಬಗ್ಗೆ ಇತರರಿಗೆ ಟಿಪ್ಸ್ ನೀಡಿದ್ದಾರೆ.

ಸೌರಭ್ ಸ್ಫೂರ್ತಿ.
ಇನ್ನು ಜಿಲ್ಲೆಯ ಮತ್ತೊಬ್ಬ ವಿದ್ಯಾರ್ಥಿ ಸೌರಭ್ ಸಾಕಷ್ಟು ಕಠಿಣ ಶ್ರಮ ವಹಿಸಿ 260ನೇ ರ್ಯಾಂಕ್ ಪಡೆದಿದ್ದಾರೆ. ಯಾರೇ ಭಾರತೀಯ ಲೋಕಸೇವಾ ಆಯೋಗದ ಪರೀಕ್ಷೆ ತೆಗೆದುಕೊಂಡರೂ ಛಲದಿಂದ ಪರೀಕ್ಷೆ ಎದುರಿಸುವಂತೆ ಯುವ ಉತ್ಸಾಹಿಗಳಿಗೆ ಸಲಹೆ ಕೊಟ್ಟಿದ್ದಾರೆ.

ಭಾನುಪ್ರಕಾಶ್ ಮನದಾಳ..
ಮತ್ತೊಂದೆಡೆ ಭಾನುಪ್ರಕಾಶ್ ವೃತ್ತಿಯಲ್ಲಿ ವೈದ್ಯರಾಗಿದ್ದು , ಈ ಬಾರಿ 448 ನೇ ರ್ಯಾಂಕ್ ಗಳಿಸಿದ್ದಾರೆ. ಬಾಲ್ಯದಿಂದಲೂ ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು ಕಂಡಿರಲಿಲ್ಲ. ಅಮ್ಮ ಅಂಗನವಾಡಿ ಶಿಕ್ಷಕಿ. ಕೋವಿಡ್ ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವಾಗ ನಾಗರಿಕ ಸೇವಾ ಅಧಿಕಾರಿ ಆಗಬೇಕೆಂಬ ಕನಸು ಮೂಡಿತು ಎಂದು ಹೇಳಿಕೊಂಡಿದ್ದಾರೆ.

RS 500
RS 1500

SCAN HERE

Pratidhvani Youtube

«
Prev
1
/
4511
Next
»
loading
play
Siddaramaiah | ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಸಚಿವರ ಜೊತೆ ಸಭೆ ನಡೆಸಿದ ಸಿಎಂ #Pratidhvani
play
Live : ಡಿಸಿಎಂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ #congress #dcmdkshivakumar
«
Prev
1
/
4511
Next
»
loading

don't miss it !

ಎಮ್.ವೈ.ಪಾಟೀಲ ಶಾಸಕರಾಗಿ ಆಯ್ಕೆ: ದೀಡ್​​ ನಮಸ್ಕಾರ ಹಾಕಿದ ಅಭಿಮಾನಿ ಚಂದು ಕರಜಗಿ
ರಾಜಕೀಯ

ಎಮ್.ವೈ.ಪಾಟೀಲ ಶಾಸಕರಾಗಿ ಆಯ್ಕೆ: ದೀಡ್​​ ನಮಸ್ಕಾರ ಹಾಕಿದ ಅಭಿಮಾನಿ ಚಂದು ಕರಜಗಿ

by Prathidhvani
May 28, 2023
Economic recession : ಅಮೆರಿಕ, ಬ್ರಿಟನ್​ ಬೆನ್ನಲ್ಲೇ ಜರ್ಮನಿಯಲ್ಲೂ ಆರ್ಥಿಕ ಹಿಂಜರಿತ : ಭಾರತಕ್ಕೂ ಕಾದಿದ್ಯಾ ಸಂಕಷ್ಟ?
Top Story

Economic recession : ಅಮೆರಿಕ, ಬ್ರಿಟನ್​ ಬೆನ್ನಲ್ಲೇ ಜರ್ಮನಿಯಲ್ಲೂ ಆರ್ಥಿಕ ಹಿಂಜರಿತ : ಭಾರತಕ್ಕೂ ಕಾದಿದ್ಯಾ ಸಂಕಷ್ಟ?

by ಪ್ರತಿಧ್ವನಿ
May 27, 2023
60ನೇ ವಯಸ್ಸಿಗೆ ಮತ್ತೊಮ್ಮೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿರಿಯ ನಟ ಆಶಿಶ್​ ವಿದ್ಯಾರ್ಥಿ
ಸಿನಿಮಾ

60ನೇ ವಯಸ್ಸಿಗೆ ಮತ್ತೊಮ್ಮೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿರಿಯ ನಟ ಆಶಿಶ್​ ವಿದ್ಯಾರ್ಥಿ

by Prathidhvani
May 25, 2023
ರಾಜಕೀಯ ನಿವೃತ್ತಿ ಘೋಷಣೆಗೆ ಮುಂದಾಗಿದ್ದರಾ ಎನ್​. ಚಲುವರಾಯಸ್ವಾಮಿ..?
ರಾಜಕೀಯ

ರಾಜಕೀಯ ನಿವೃತ್ತಿ ಘೋಷಣೆಗೆ ಮುಂದಾಗಿದ್ದರಾ ಎನ್​. ಚಲುವರಾಯಸ್ವಾಮಿ..?

by Prathidhvani
May 25, 2023
ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್​ಐಎ ದಾಳಿ : ನಾಲ್ವರು ವಶಕ್ಕೆ
ಕರ್ನಾಟಕ

ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್​ಐಎ ದಾಳಿ : ನಾಲ್ವರು ವಶಕ್ಕೆ

by Prathidhvani
May 31, 2023
Next Post
ಮಾಜಿ ಸಚಿವ ಡಾ. ಸಿ.ಎನ್​ ಅಶ್ವತ್ಥ ನಾರಾಯಣ ವಿರುದ್ಧ ಎಫ್​ಐಆರ್​ ದಾಖಲು

ಮಾಜಿ ಸಚಿವ ಡಾ. ಸಿ.ಎನ್​ ಅಶ್ವತ್ಥ ನಾರಾಯಣ ವಿರುದ್ಧ ಎಫ್​ಐಆರ್​ ದಾಖಲು

Congress is preparing Lok Sabha Elections | ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಎಲೆಕ್ಷನ್‌ ಗೆ ಕಾಂಗ್ರೆಸ್  ಭರ್ಜರಿ ಸಿದ್ಧತೆ..!

Congress is preparing Lok Sabha Elections | ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಎಲೆಕ್ಷನ್‌ ಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ..!

ಶ್ರೀಸಾಮಾನ್ಯನ ಸ್ವಾವಲಂಬನೆಯೂ ಮಾರುಕಟ್ಟೆ ಆಧಿಪತ್ಯವೂ..ನವ ಉದಾರವಾದವು  ಶ್ರಮಿಕವರ್ಗವನ್ನು ಹೆಚ್ಚು ಪರಾವಲಂಬಿಗಳನ್ನಾಗಿ ಮಾಡುತ್ತಿದೆ

ಶ್ರೀಸಾಮಾನ್ಯನ ಸ್ವಾವಲಂಬನೆಯೂ ಮಾರುಕಟ್ಟೆ ಆಧಿಪತ್ಯವೂ..ನವ ಉದಾರವಾದವು  ಶ್ರಮಿಕವರ್ಗವನ್ನು ಹೆಚ್ಚು ಪರಾವಲಂಬಿಗಳನ್ನಾಗಿ ಮಾಡುತ್ತಿದೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist