• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಸಂಘಟಿತ ದಾಳಿ: ಮೋದಿ-ಶಾ ಮೌನಕ್ಕೆ ಕಾರಣಗಳೇನು?

ಫೈಝ್ by ಫೈಝ್
January 19, 2022
in ದೇಶ, ರಾಜಕೀಯ
0
ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಸಂಘಟಿತ ದಾಳಿ: ಮೋದಿ-ಶಾ ಮೌನಕ್ಕೆ ಕಾರಣಗಳೇನು?
Share on WhatsAppShare on FacebookShare on Telegram

ಭಾರತದಾದ್ಯಂತ ಮುಸ್ಲಿಮರ ಹಾಗೂ ಕ್ರಿಶ್ಚಿಯನ್ನರ ವಿರುದ್ಧ ಸಂಘಟಿತ ದಾಳಿಗಳು ಏಕಾಏಕಿ ಉಲ್ಬಣಗೊಂಡಿದೆ. ಅಲ್ಪಸಂಖ್ಯಾತರನ್ನು ಪ್ರತ್ಯೇಕಿಸಲು ಹಾಗೂ ಅವರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಲು ಇಂತಹ ದಾಳಿಗಳು ನಡೆಸಲಾಗುತ್ತದೆ ಎಂಬುದಕ್ಕಿಂತ, ಅಲ್ಪಸಂಖ್ಯಾತರನ್ನು ವಶಪಡಿಸಿಕೊಳ್ಳುವ ಅಭಿವ್ಯಕ್ತಿ ಹಾಗೂ ಧಾರ್ಮಿಕ ಅಸಹಿಷ್ಣುತೆಯಿಂದ ಇಂತಹ ದಾಳಿಗಳು ನಡೆಯುವುದಾಗಿ ರಾಜಕೀಯಶಾಸ್ತ್ರಜ್ಞೆ ಝೋಯಾ ಹಸನ್‌ ಅಭಿಪ್ರಾಯ ಪಡುತ್ತಾರೆ.

ADVERTISEMENT

2021ರ ಮಧ್ಯಂತರದಿಂದ ಹೆಚ್ಚಾದ ದಾಳಿಗಳನ್ನು ಗಮನಿಸಿದರೆ, ಅದು ಹಿಂದಿನ ದಾಳಿಗಳಿಗಿಂತ ಭಿನ್ನವಾಗಿ ಸಂಘಟಿತವಾಗಿ ಮಾಡಿದವುಗಳಾಗಿವೆ. ಸಾಮಾನ್ಯ ಮಾದರಿಯ ದಾಳಿಗೆ ಬದಲಾಗಿ ಇತ್ತೀಚಿನ ಘಟನೆಗಳು ಆಡಳಿತ ಪಕ್ಷದ ರಾಜಕೀಯ ಅವಶ್ಯಕತೆಗಳಿಗೆ ಅನುಗುಣವಾಗಿ, ಸಂಘಟಿತವಾಗಿ, ಕೇಂದ್ರೀಕೃತವಾಗಿ ಹೊಂದಿಕೊಂಡಿವೆ.

ಇಂತಹ ಸಂಘಟಿತ ದಾಳಿಯು ಸ್ಥಳೀಯ ಮಟ್ಟದಲ್ಲಿ ಅಲ್ಪಸಂಖ್ಯಾತರಲ್ಲಿ ಅಭದ್ರತೆಯನ್ನು ಸೃಷ್ಟಿಸುವ ಸಲುವಾಗಿ ನಡೆಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇಂತಹ ದಾಳಿಗಳನ್ನು ಖಂಡಿಸುವವರೆಗೂ ಇದು ಮುಂದುವರೆಯುತ್ತದೆ. ಪ್ರಧಾನಿ ಕಾರ್ಯಾಲಯ ಒಂದು ಸೂಚನೆ ನೀಡಿದರೆ ಇಂತಹ ದಾಳಿಗಳು ಇಲ್ಲವಾಗಿಬಿಡುತ್ತವೆ. ಉದಾಹರಣೆಗೆ ಕುಂಭಮೇಳವನ್ನೇ ಗಮನಿಸಿ, ಕೋವಿಡ್‌ ಎರಡನೇ ಅಲೆ ತೀವ್ರವಾಗುತ್ತಿದ್ದ ನಡುವೆಯೂ ಯಾವುದೇ ಕಾರಣಕ್ಕೂ ಮೇಳದಿಂದ ಹಿಂದೆ ಸರಿಯದಿದ್ದ ಭಕ್ತಾದಿಗಳು ಕುಂಭಮೇಳ ಸ್ಥಘಿತಗೊಳಿಸುವಂತೆ ಪ್ರಧಾನಿ ಮನವಿ ಮಾಡಿದ ತಕ್ಷಣವೇ ತಮ್ಮ ಡೇರೆಗಳನ್ನು ಕಳಚಿ ಚದುರಿದ್ದು ನೆನಪಿಸಬಹುದು. ಅಂತಹದ್ದೇ ಒಂದು ಹೇಳಿಕೆ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ವಿರುದ್ಧ ನೀಡಿದರೆ ಇದು ನಿಲ್ಲದೇ ಹೋಗುತ್ತದೆಯೇ?

ಒಟ್ಟಾರೆ,ಇಂತಹ ಪ್ರಚೋದನಕಾರಿ ಕೃತ್ಯಗಳು ಮತ್ತು ಹೇಳಿಕೆಗಳ ಹಿಂದಿನ ಉದ್ದೇಶವೆಂದರೆ ಸ್ಥಳೀಯ ಸಮುದಾಯಗಳಲ್ಲಿ ಧರ್ಮಗಳ ಬಗ್ಗೆ ತೀವ್ರ ಚರ್ಚೆಗಳನ್ನು ಹುಟ್ಟುಹಾಕುವುದು, ಅವುಗಳನ್ನು ವಿಭಜಿಸುವುದು ಕಡೆಯದಾಗಿ ಅವುಗಳನ್ನು ಬಿಜೆಪಿಯ ಅಲ್ಪಸಂಖ್ಯಾತ ವಿರೋಧಿ ಮತ ಬ್ಯಾಂಕ್‌ಗಳಾಗಿ ಪರಿವರ್ತಿಸುವುದು. ಉತ್ತರ ಪ್ರದೇಶದಲ್ಲಿ ಕೋಮು ಬೆಂಕಿಗೆ ಇಂಧನ ಸುರಿಯಲು ಯೋಗಿ ಆದಿತ್ಯನಾಥ ಈಗಾಗಲೇ ಆರಂಭಿಸಿದ್ದಾರೆ. ಮುಂಬರಲಿರುವ ಯುಪಿ ವಿಧಾನಸಭೆ ಚುನಾವಣೆಯು 80% ಮಂದಿಯ (ಹಿಂದೂಗಳ) ಹಾಗೂ 20% (ಮುಸ್ಲಿಮರ) ನಡುವಿನ ಹೋರಾಟವೆಂಬಂತೆ ಆದಿತ್ಯನಾಥ್‌ ಬಿಂಬಿಸಿದ್ದು ಇದಕ್ಕೆ ತಾಜಾ ಉದಾಹರಣೆ.

ದೇಶದ ಉನ್ನತ ಆಡಳಿತಗಾರರು ಈಗಾಗಲೇ ತಮ್ಮ ಪರಿವಾರವನ್ನು ತಮಗೆ ಅನುಕೂಲಕರ ವಾತಾವರಣ ನಿರ್ಮಿಸಲು, ರಾಜಕೀಯ ಲಾಭದ ಅಗತ್ಯಗಳಿಗೆ ಸಜ್ಜುಗೊಳಿಸಿಟ್ಟಿದ್ದಾರೆ. ಎಲ್ಲಾ ಹಕ್ಕುಗಳನ್ನು ಉಲ್ಲಂಘಿಸಿಯಾದರೂ ಕಟ್ಟ ಕಡೆಗೆ ರಾಜಕೀಯ ಉದ್ದೇಶಗಳನ್ನು ಪೂರೈಸುವ ಧ್ಯೇಯದೊಂದಿಗೆ ಕಾರ್‌ಯನಿರ್ವಹಿಸುತ್ತಿದೆ.

ಹರಿದ್ವಾರ್ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಿದ ಬಳಿಕವೂ ಹತ್ಯಾಕಾಂಡಕ್ಕೆ, ಅಧಿಕೃತವಾಗಿ ಅನುಮತಿ ನೀಡಿದಂತೆ ಪ್ರಭುತ್ವ ಮೌನವಹಿಸಿ ಕುಳಿತಿರುವುದು, ಇತ್ತೀಚೆಗೆ ದೆಹಲಿಯಲ್ಲಿ ಯುವ ವಾಹಿನಿಯ ಕಾರ್ಯಕರ್ತರು ಸುದರ್ಶನ್‌ ಟಿವಿಯ ಎಡಿಟರ್‌ ಸಮ್ಮುಖದಲ್ಲಿ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಾಯಲೂ ಸಿದ್ದ, ಕೊಲ್ಲಲೂ ಸಿದ್ದ ಎಂದು ಪ್ರಮಾಣ ವಚನ ಸ್ವೀಕರಿಸಿರುವುದು, ಉತ್ತರದ ವಿವಿಧ ಅಖಾಡಾಗಳು ಮುಸ್ಲಿಮರ ವಿರುದ್ಧ ಹೋರಾಡಲು ಕೋರ್ ಕಮಿಟಿಗಳನ್ನು ರಚಿಸುವ ಮತ್ತು ಅವರ ವಿರುದ್ಧ ಸಶಸ್ತ್ರ ಹೋರಾಟಗಳನ್ನು ಪ್ರಾರಂಭಿಸುವ ನಿರ್ಧಾರವನ್ನು ಪ್ರಕಟಿಸಿರುವುದು ಹಾಗೂ ಬುಲ್ಲೀ ಬಾಯ್‌ಯಂತಹ ಅಪ್ಲಿಕೇಶನ್‌ಗಳು ಮುಸ್ಲಿಂ ಮಹಿಳೆಯರನ್ನು ಹರಾಜಿಗಿಡುವುದು ಮೊದಲಾದವುಗಳೆಲ್ಲಾ ಅದರ ಕಾರ್ಯತಂತ್ರದ ಭಾಗ.

ಈ ಬಹಿರಂಗ ದ್ವೇಷ ಮತ್ತು ಹಿಂಸಾಚಾರವು ಮುಸ್ಲಿಂ ವ್ಯಾಪರಿಗಳನ್ನು, ತರಕಾರಿ, ಬಿಸ್ಕತ್ತು ಮತ್ತು ಬಳೆ ಮಾರಾಟಗಾರರನ್ನು ವ್ಯಾಪಾರ ಮಾಡದಂತೆ ತಡೆಯುವ ಘಟನೆಗಳಿಗೆ ಕಾರಣವಾಗುತ್ತಿದೆ. ಮುಸ್ಲಿಂ ಅಂಗಡಿಗಳನ್ನು ಸಮುದಾಯ ಬಹಿಷ್ಕಾರಕ್ಕೆ ಒಳಪಡಿಸುವಂತೆ, ಶುಕ್ರವಾರದ ಸಾಮೂಹಿಕ ನಮಾಜ್‌ಗೆ ತಡೆ ನೀಡುವಂತೆ ಮಾಡಲು ಪ್ರೇರೇಪಿಸುತ್ತಿದೆ. ಕ್ರಿಶ್ಚಿಯನ್ ಹಕ್ಕುಗಳ ಸಂಸ್ಥೆ ಒದಗಿಸಿದ ಲೆಕ್ಕಾಚಾರದ ಪ್ರಕಾರ, ಡಿಸೆಂಬರ್ 2021 ರಲ್ಲಿ 486 ಸ್ಥಳಗಳಲ್ಲಿ ಕ್ರಿಸ್‌ಮಸ್ ಆಚರಣೆಗಳಿಗೆ ಅಡ್ಡಿಪಡಿಸಲಾಯಿತು, ಚರ್ಚ್ಗಳ ಮೇಲೆ ದಾಳಿ ನಡೆಸಲಾಯಿತು ಮತ್ತು ಧಾರ್ಮಿಕ ಪುಸ್ತಕಗಳನ್ನು ನಾಶಪಡಿಸಲಾಯಿತು. ಇಂತಹ ದಾಳಿಗಳು ಹಿಂದೆಂದೂ ಆಗಿರಲಿಲ್ಲ. ಅದಾಗ್ಯೂ, ಅಲ್ಪಂಖ್ಯಾತರ ಮೇಲಿನ ನಿರಂತರ ದಾಳಿಗೆ ದೇಶದ ಪ್ರಭಾವಿ ನಾಯಕರಾದ ಮೋದಿ, ಅಮಿತ್‌ ಷಾ ಯಾಕೆ ಮೌನವಹಿಸಿದ್ದಾರೆಂದರೆ, ಅವರಿಗೆ ದೇಶ ಕೋಮು ಧ್ರುವೀಕರಣಗೊಳ್ಳುವ ಅನಿವಾರ್ಯತೆ ಇದೆ.

ಇತ್ತೀಚಿನ ಕೆಲವು ಚುನಾವಣೆಗಳಲ್ಲಿ ಬಿಜೆಪಿಯ ಕಳಪೆ ಪ್ರದರ್ಶನ, ಭಾರತದ ಆರ್ಥಿಕತೆ ಮೊದಲಾದವು ಮೋದಿ-ಷಾ ಜೋಡಿಯ ಕಂಗೆಡಿಸಿದೆ. ಕೇವಲ ಆರು ತಿಂಗಳಲ್ಲಿ ಬಿಜೆಪಿ ಆಡಳಿತ ಇರುವ 4 ರಾಜ್ಯಗಳ ಸಿಎಂ ಬದಲಾವಣೆ ಆಗಿದೆ. ಅತಿ ಹೆಚ್ಚು ವಿಧಾನಸಭೆ ಕ್ಷೇತ್ರ ಇರುವ ಉತ್ತರಪ್ರದೇಶದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿಲ್ಲ. ಯೋಗಿ ಆದಿತ್ಯನಾಥ್‌ ಮಗ್ಗುಲ ಮುಳ್ಳಾಗಿದ್ದಾರೆ. ಇದರೆಲ್ಲದರ ನಡುವೆ ಮುಂಬರಲಿರುವ ಚುನಾವಣೆಯನ್ನು ಗೆಲ್ಲಲೇ ಬೇಕೆಂದರೆ ಹಿಂದೂ ಮತಗಳನ್ನು ಕ್ರೋಢೀಕರಿಸಿ, ಮತಬ್ಯಾಂಕ್ ಮಾಡಬೇಕಿದೆ.ಅದಕ್ಕಾಗಿ, ಕೋಮು ಧ್ರುವೀಕರಣವನ್ನು ವೇಗವಾಗಿ ಮಾಡಿಸುತ್ತಿದ್ದಾರೆ. ಹಾಗಾಗಿ ಅಲ್ಪಸಂಖ್ಯಾತರ ಮೇಲಿನ ನಿರಂತರ ದಾಳಿಯನ್ನು ನಿಲ್ಲಿಸಲು ಸಾಧ್ಯವಿದ್ದರೂ, ಕನಿಷ್ಟ ಖಂಡನೆಯನ್ನೂ ವ್ಯಕ್ತಪಡಿಸುತ್ತಿಲ್ಲ.

Tags: attack on minority silence of mdoi shah whats the reasonBJPCongress Partyಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ಯುಪಿ ಚುನಾವಣೆ : ಯೋಗಿ ಆದಿತ್ಯನಾಥ್ ಸ್ಪರ್ಧೆಗೆ ಕಠಿಣ ಸವಾಲು ನೀಡ್ತಾರಾ ಅಖಿಲೇಶ್?

Next Post

ಸರಳವಾಗಿ ಜರುಗಿದ ದಕ್ಷಿಣ ಭಾರತದ ಕುಂಬಮೇಳ ಖ್ಯಾತಿಯ ಕೊಪ್ಪಳದ ಗವಿಮಠ ಜಾತ್ರೆ

Related Posts

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..
ರಾಜಕೀಯ

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

by ಪ್ರತಿಧ್ವನಿ
May 27, 2026
0

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಇದೀಗ ಅಂತಿಮ ಹಂತ ತಲುಪಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಅಧಿಕಾರ ಹಂಚಿಕೆ ಸೂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ...

Read moreDetails
ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
Next Post
ಸರಳವಾಗಿ ಜರುಗಿದ ದಕ್ಷಿಣ ಭಾರತದ ಕುಂಬಮೇಳ ಖ್ಯಾತಿಯ ಕೊಪ್ಪಳದ ಗವಿಮಠ ಜಾತ್ರೆ

ಸರಳವಾಗಿ ಜರುಗಿದ ದಕ್ಷಿಣ ಭಾರತದ ಕುಂಬಮೇಳ ಖ್ಯಾತಿಯ ಕೊಪ್ಪಳದ ಗವಿಮಠ ಜಾತ್ರೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada