ಕಳೆದ 24 ಗಂಟೆಗಳಲ್ಲಿ ಭಾರತ ಸುಮಾರು 62,000 ಹೊಸ ಕರೋನ ಪಾಸಿಟಿವ್ ವರದಿಯಾಗಿದೆ ಮತ್ತು ಎರಡು ತಿಂಗಳಲ್ಲಿ ಇದೆ ಮೊದಲು ಕನಿಷ್ಠ 1,587 ಸಾವುಗಳನ್ನು ವರದಿ ಮಾಡಿದೆ. ಮುಂಬೈ ಮತ್ತು ನವದೆಹಲಿಯಂತಹ ನಗರಗಳಲ್ಲಿ ಕರೋನ ಪಾಸಿಟಿವಿಟಿ ರೇಟ್ ಕಡಿಮೆಯಾದ ಪರಿಣಾಮ ತಮ್ಮ ಕಠಿಣ ಲಾಕ್ಡೌನ್ಗಳನ್ನು ಸಡಿಲಗೊಳಿಸಲು ಮುಂದಾಗಿದೆ. ಆದರೆ ಕಳೆದ ಎರಡು ತಿಂಗಳುಗಳಲ್ಲಿ ಹತ್ತಾರು ಜನರನ್ನು ಕೊಂದ ಮತ್ತು ಆರೋಗ್ಯ ಮೂಲಸೌಕರ್ಯವನ್ನು ಧ್ವಂಸಗೊಳಿಸಿದ ಸಾಂಕ್ರಾಮಿಕ ಉಲ್ಬಣದಿಂದ ಹೊರಬಂದ ಭಾರತವು ಮೂರನೇ ಅಲೆ ದೇಶವನ್ನು ಮತ್ತೊಮ್ಮೆ ದುರ್ಬಲಗೊಳಿಸುವ ಸಾಧ್ಯತೆಗಳೆ ಹೆಚ್ಚು.
ದೆಗಲಿ, ಮಹಾರಾಷ್ಟ್ರ, ಹೈದರಾಬಾದ್ ನಿಂದ ಬೆಂಗಳೂರಿನವರೆಗೂ ಎಲ್ಲಾ ಆಡಳಿತ ಸರ್ಕಾರ ವ್ಯಾಪಾರ, ವ್ಯವಹಾರ, ಆರ್ಥಿಕ ಚಟುವಟಿಕೆಗಳನ್ನು ಮತ್ತೆ ಪುನಾರಂಭಗೊಳಿಸುವ ಮೊದಲು ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಕೇವಲ ಒಂದೇ ಒಂದು ತಿಂಗಳ ಹಿಂದೆ ಕಂಡ ಹೃದಯ ವಿದ್ರಾವಕ ದೃಶ್ಯಗಳನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಮರೆಯಬಾರದು. ಜನರು ತಮ್ಮ ಪ್ರೀತಿಪಾತ್ರರನ್ನು ಉಳಿಸಿಕೊಳ್ಳಲು ಆಮ್ಲಜನಕ ಸಿಲಿಂಡರ್ಗಳಿಗಾಗಿ ಪರದಾಡಿದ್ದನ್ನು, ಆಸ್ಪತ್ರೆಗಳು ಹಾಸಿಗೆಗಳಾಗಿ ಗೋಗರಿದದನ್ನು. ಆಕ್ಸಿಜನ್ ಇಲ್ಲದೆ ಸಾಲು ಸಾಲು ಹೆಣಗಳು ಬಿದ್ದಿದ್ದನ್ನು, ಐಸಿಯು ಬೆಡ್ ಸಿಗದೆ ಸಾವಿರಾರು ಜನ ಸತ್ತಿದ್ದನ್ನು ಮರೆಯಬಾರದು.
ಇಡೀ ದೇಶವನ್ನು ಆವರಿಸಿರುವ ಒಂದು ಅಲೆಯಾಗಿದ್ದು, ಆ ಅನುಭವದಿಂದ ಕಲಿತ ಪಾಠಗಳನ್ನು ಈಗ ಕಾರ್ಯರೂಪಕ್ಕೆ ತರಬೇಕಾಗಿದೆ.
ಬ್ರೆಜಿಲ್ ಜೊತೆ ಭಾರತವು ಏಳು ದಿನಗಳ ದೈನಂದಿನ ಸರಾಸರಿ ಸಾವುಗಳನ್ನು ವರದಿ ಮಾಡುವ ದೇಶಗಳಲ್ಲಿ ಒಂದಾಗಿದೆ. ಉದಾಹರಣೆಗೆ, ಮಹಾರಾಷ್ಟ್ರದ 9,830 ಹೊಸ ಸೋಂಕಿನ ಸಂಖ್ಯೆ ಭಾರತದ ಒಟ್ಟು 29.76 ಮಿಲಿಯನ್ ಸೋಂಕುಗಳಲ್ಲಿ ಐದನೇ ಒಂದು ಭಾಗವಾಗಿದೆ ಮತ್ತು ಅದರ ಸಾವಿನ ಸಂಖ್ಯೆ 116,000 ಕ್ಕಿಂತ ಹೆಚ್ಚಿರುವುದನ್ನು ಕಾಣಬಹುದು.
ಆದ್ದರಿಂದ ಮೂರನೇ ಅಲೆ ದೇಶಾದ್ಯಂತ ಹರಡುವುದನ್ನು ತಪ್ಪಿಸಬೇಕಾದರೆ ಅಥವಾ ಹೆಚ್ಚು ಹೊಡೆತಗಳಿಂದ ತಪ್ಪಿಸಿಕೊಳ್ಳಬೇಕಾದರೆ, ಸ್ಪಷ್ಟವಾದ ಸಾಂಕ್ರಾಮಿಕ ನಿರ್ವಹಣಾ ಯೋಜನೆಯನ್ನು ಸಿದ್ದಪಡಿಸಿಕೊಳ್ಳುವುದು ಈ ಸಮಯದ ಅತ್ಯಗತ್ಯವಾಗಿದೆ ಮತ್ತು ಆರೋಗ್ಯ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಎಲ್ಲಾ ಆಸ್ಪತ್ರೆಗಳು ಮತ್ತು ಆರೋಗ್ಯ ವೃತ್ತಿಪರರು ಮುಂದಿನ ಅಲೆಯನ್ನು ಸಾಧ್ಯವಾದಷ್ಟು ತಡೆಗಟ್ಟುವ ಸ್ಪಷ್ಟ ಗುರಿಯನ್ನು ಹೊಂದಬೇಕಿದೆ. ತುರ್ತು ಪರಿಸ್ಥಿತಿಯಲ್ಲಿ ಪ್ರೋಟೋಕಾಲ್ಗಳನ್ನು ಸ್ಪಷ್ಟವಾಗಿ ಜಾರಿಗೊಳಿಸಬೇಕಿದೆ. ಕೋವಿಡ್ ಕರ್ತವ್ಯಕ್ಕೆ ಜೊತೆಯಾಗುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರಿಯಾದ ವೈದ್ಯಕೀಯ ಮೂಲಸೌಕರ್ಯವನ್ನು ಒದಗಿಸಬೇಕಾಗಿದೆ. ಸಂಬಂಧಿತ ಆರೋಗ್ಯ ವೃತ್ತಿಪರರಿಗೆ ಕರೋನ ಚಿಕಿತ್ಸೆ ಕುರಿತು ತರಬೇತಿ ನೀಡಲು ಈ ಸಮಯವನ್ನು ಬಳಸಿಕೊಳ್ಳಬೇಕು.
ರಾಜ್ಯಗಳು ಮತ್ತು ಕೇಂದ್ರ ಸರ್ಕಾರವು ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸುವಾಗ, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮುಂತಾದ ಸೂಕ್ತವಾದ ಕೋವಿಡ್ ನಡವಳಿಕೆಯನ್ನು ಜಾರಿಗೆ ತರಲು ಅವಕಾಶವಿಲ್ಲ ಅಥವಾ ಪ್ರಯೋಜನ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ರಾಷ್ಟ್ರೀಯ ವ್ಯಾಕ್ಸಿನೇಷನ್ ಡ್ರೈವ್ ಅನ್ನು ತುರ್ತಾಗಿ ವೇಗಗೊಳಿಸಬೇಕು. ದೇಶದ 950 ಮಿಲಿಯನ್ ಅರ್ಹ ವಯಸ್ಕರಲ್ಲಿ ಕೇವಲ 5% ನಷ್ಟು ಜನರಿಗೆ ಮಾತ್ರ ಲಸಿಕೆ ಹಾಕುವಲ್ಲಿ ಭಾರತ ಯಶಸ್ವಿಯಾಗಿದೆ.
ಈ ಎಲ್ಲಾ ಸಾಮೂಹಿಕ ಪ್ರಯತ್ನಗಳಿಂದ, ಮುಂದಿನ ಕರೋನ ಮೂರನೇ ಅಲೆಯಿಂದಾಗೂವ ಉಲ್ಬಣವನ್ನು ಎದುರಿಸಲು ಭಾರತ ದೇಶ ಖಂಡಿತವಾಗಿಯೂ ಉತ್ತಮವಾಗಿ ಸಿದ್ಧವಾಗಬಹುದು. ಇಲ್ಲವೇ ಎರಡನೇ ಅಲೆಯ ಚಿತ್ರಣ ಮತ್ತೆ ಮರುಕಳಿಸುವುದರಲ್ಲಿ ಸಂಶಯವಿಲ್ಲ.






