• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸಾಮಾಜಿಕ ಜಾಲತಾಣಗಳು ಬಂದಾಗುವ ಸಾಧ್ಯತೆ? ಹೊಸ ನಿಯಮ ಪಾಲನೆಯ ಗಡುವು ಇಂದಿಗೆ ಮುಕ್ತಾಯ!

Any Mind by Any Mind
June 5, 2021
in ದೇಶ
0
ಸಾಮಾಜಿಕ ಜಾಲತಾಣಗಳು  ಬಂದಾಗುವ ಸಾಧ್ಯತೆ? ಹೊಸ ನಿಯಮ ಪಾಲನೆಯ ಗಡುವು ಇಂದಿಗೆ ಮುಕ್ತಾಯ!
Share on WhatsAppShare on FacebookShare on Telegram

ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ ಹೊಸ ಐಟಿ ಮಾರ್ಗ ಸೂಚಿಗಳನ್ನು ಅನುಸರಿಸದಿದ್ದರೆ ಸಾಮಾಜಿಕ ಜಾಲತಾಣಗಳಾದ ಫೇಸ್, ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮ ಜರುಗಿಸಿ ಸೇವೆ ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ADVERTISEMENT
ಮಾಹಿತಿ ತಂತ್ರಜ್ಞಾನದ ಹೊಸ ನಿಯಮ‌ ನಮ್ಮ ಡಿಜಿಟಲ್ ಹಕ್ಕುಗಳನ್ನು ಕಿತ್ತುಕೊಳ್ಳಲಿದೆಯೇ?

ಕೇಂದ್ರ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣಗಳು, ಒಟಿಟಿ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಹೊಸ ಐಟಿ ನಿಯಮವನ್ನು ರೂಪಿಸಿದೆ. ಆ ನಿಯಮಗಳ ಪಾಲನೆಗೆ ಮೂರು ತಿಂಗಳ ಗಡುವು ನೀಡಲಾಗಿತ್ತು. ಇದೀಗ ಗಡುವು ಮೇ 25 ಕ್ಕೆ ಕೊನೆಗೊಳ್ಳುತ್ತದೆ ಆದರೆ ಇದುವರೆಗೂ ವಾಟ್ಸಪ್, ಫೇಸ್ಬುಕ್, ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳು ಹೊಸ ನಿಯಮಗಳನ್ನು ಪಾಲಿಸಿಲ್ಲ, ಟ್ವಿಟರ್‌ನ ಭಾರತೀಯ ಆವೃತ್ತಿಯಾದ ಕೂ, ಮೇ 25 ರ ಗಡುವಿಗೆ ಮುಂಚಿತವಾಗಿ ಹೊಸ ಮಾರ್ಗಸೂಚಿಗಳನ್ನು ಅನುಸರಿಸಿದ ಏಕೈಕ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದೆ. ಇದರಿಂದ ಸರ್ಕಾರ ಸಾಮಾಜಿಕ ಜಾಲತಾಣಗಳ ವಿರುದ್ಧ ಕ್ರಮಕೈಗೊಳ್ಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ನಿಯಮ ಅನುಸರಿಸದ ಸಾಮಾಜಿಕ ಜಾಲತಾಣ ಸಂಸ್ಥೆಯ ಮಾನ್ಯತೆ ರದ್ದಾಗುವ ಸಾಧ್ಯತೆಯಿದೆ ಹಾಗು ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

ಸೋಷಿಯಲ್ ಮೀಡಿಯಾ ಕಂಪೆನಿಗಳಿಗೆ ಇದೊಂದು ನಿರ್ಣಾಯಕ ಕ್ಷಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಫೇಸ್ಬುಕ್ ವಕ್ತಾರರು ನಾವು ಐಟಿ ನಿಯಮಗಳ ನಿಬಂಧನೆಗಳನ್ನು ಪಾಲಿಸುವ ಗುರಿ ಹೊಂದಿದ್ದೇವೆ ಮತ್ತು ಕೆಲವು ಸಮಸ್ಯೆಗಳ ಬಗ್ಗೆ ಸರ್ಕಾರದ ಜತೆ ಹೆಚ್ಚಿನ ವಿವರಣೆ ಅಗತ್ಯವಿರುವುದರಿಂದ ಚರ್ಚೆಯನ್ನು ಮುಂದುವರಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಜೊತೆಗೆ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ, ನಾವು ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸಲು ಹಾಗು ದಕ್ಷತೆಯನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದೇವೆ. ತಮ್ಮ ವೇದಿಕೆಯಲ್ಲಿ ಮುಕ್ತ ಹಾಗೂ ಸುರಕ್ಷಿತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಜನರ ಆಯ್ಕೆಗೆ ಫೇಸ್ಬುಕ್ ಬದ್ಧವಾಗಿರಲಿದೆ ಎಂದು ಹೇಳಿದ್ದಾರೆ.

ಇನ್ನುಮುಂದೆ ಒಟಿಟಿ, ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಮೂಗುದಾರ

ಎಲೆಕ್ಟ್ರಾನಿಕ್ಸ್ ಹಾಗು ಮಾಹಿತಿ ತಂತ್ರಜ್ಞಾನ ಸಚಿವಾಲಯ ಘೋಷಿಸಿದ ಹೊಸ ನಿಯಮಗಳು ವಿದೇಶಿ ಮತ್ತು ಸ್ವದೇಶಿ ಕಂಪನಿಗಳೆರಡಕ್ಕೂ ಅನ್ವಯವಾಗಲಿದೆ. ಈ ನಿಯಮಗಳನ್ನು ಸಾಮಾಜಿಕ ಜಾಲತಾಣ ಕೂ ಹೊರತುಪಡಿಸಿ ಬೇರೆಯಾವ ಸಾಮಾಜಿಕ ಜಾಲತಾಣವು ಸ್ಥಳೀಯ ಅಹವಾಲು ಅಧಿಕಾರಿಗಳನ್ನು ನೇಮಕ ಮಾಡಿಲ್ಲ, ಅಂದರೆ ಹೊಸ ಕಾನೂನಿನ ಪ್ರಕಾರ ಸಾಮಾಜಿಕ ಜಾಲತಾಣಗಳು ಹಾಗೂ ಒಟಿಟಿಗಳು ಸ್ಥಳೀಯ ಅಹವಾಲು ಅಧಿಕಾರಿಗಳನ್ನು ನೇಮಕ ಮಾಡಬೇಕು ಅವರ ಹೆಸರು ಮತ್ತು ಭಾರತದಲ್ಲಿನ ಅವರ ಸಂಪರ್ಕ ವಿಳಾಸಗಳನ್ನು ನೀಡಬೇಕು. ಆಕ್ಷೇಪಾರ್ಹ ವಿಷಯಗಳ ಪರಿಶೀಲನೆ, ದೂರು ನಿರ್ಣಯ, ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕುವುದು, ವರದಿಗಳನ್ನು ಸಲ್ಲಿಸುವುದು ಅವರ ಜವಾಬ್ದಾರಿ ಎಂದು ಸೂಚಿಸಲಾಗಿದೆ.

ಡಿಜಿಟಲ್‌ ಮಾಧ್ಯಮ ನಿಯಂತ್ರಣಕ್ಕೆ ಹೊಸ ನಿಯಮಾವಳಿ: ಹೈಕೋರ್ಟ್‌ ಮೆಟ್ಟಿಲೇರಿದ ದ ವೈರ್‌

ರಕ್ಷಣೆ, ವಿದೇಶಾಂಗ, ಗೃಹ ಸಚಿವಾಲಯ, ಕಾನೂನು, ವಾರ್ತಾ ಮತ್ತು ಪ್ರಸಾರ, ಐಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ನೀತಿ ಸಂಹಿತೆ ಜಾರಿಯ ಮೇಲುಸ್ತುವಾರಿ ವಹಿಸಲಿದೆ. ನಿಯಮ ಉಲ್ಲಂಘನೆಯಾದರೆ ಈ ಸಮಿತಿಯು ಸ್ವಯಂ ಪ್ರೇರಿತ ವಿಚಾರಣೆ ನಡೆಸಬಹುದು. ಅಂತಹ ವಿಷಯಗಳನ್ನು ಬ್ಲ್ಯಾಕ್ ಮಾಡಲು ಸೂಚಿಸ ಬಹುದು.

ಸುದ್ದಿ ಜಾಲತಾಣ ಹಾಗೂ OTTಗಳನ್ನು ನಿಯಂತ್ರಿಸಲಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ
Previous Post

ಸಿಬಿಐ ನಿರ್ದೇಶಕ ಹುದ್ದೆಯ ಆಯ್ಕೆ ಪ್ರಕ್ರಿಯೆಗೆ CJI ರಮಣ ವಿರೋಧ : ಆಯ್ಕೆ ಪಟ್ಟಿಯನ್ನು ಕೈ ಬಿಟ್ಟ ಕೇಂದ್ರ.!

Next Post

ವ್ಯಾಕ್ಸಿನೇಷನ್: ಬದ್ಧತೆ ಮರೆತ ಮೋದಿ ಸರ್ಕಾರದ ಮಾನ ಉಳಿಸಲು ಹೋಗಿ ಆರ್ಥಿಕ ಹೊರೆ ಹೊತ್ತ ರಾಜ್ಯ ಸರ್ಕಾರ!

Related Posts

ವಿದ್ಯಾರ್ಥಿಗಳ ವಿರುದ್ಧ ಪ್ರಭುತ್ವ-ಕಲಿಯಬೇಕಾದ ಪಾಠಗಳು
Top Story

ವಿದ್ಯಾರ್ಥಿಗಳ ವಿರುದ್ಧ ಪ್ರಭುತ್ವ-ಕಲಿಯಬೇಕಾದ ಪಾಠಗಳು

by ಪ್ರತಿಧ್ವನಿ
August 5, 2026
0

ಮೂಲ : ಶಶಾಂಕ್ ಪಾಂಡೆ ಕನ್ನಡಕ್ಕೆ : ನಾ ದಿವಾಕರ (ಮೂಲ ಲೇಖನ : The state against itş students lessons to remember –ಶಶಾಂಕ್...

Read moreDetails
Udhayanidhi Stalin: ನಟಿ ತ್ರಿಶಾ ವಿರುದ್ಧ ವಿವಾದಾತ್ಮಕ ಹೇಳಿಕೆ: ಉದಯನಿಧಿ ಸ್ಟಾಲಿನ್ ಬಂಧನ

Udhayanidhi Stalin: ನಟಿ ತ್ರಿಶಾ ವಿರುದ್ಧ ವಿವಾದಾತ್ಮಕ ಹೇಳಿಕೆ: ಉದಯನಿಧಿ ಸ್ಟಾಲಿನ್ ಬಂಧನ

August 4, 2026
Prashant Kishor: ಬಿಜೆಪಿಯ ಭದ್ರಕೋಟೆಯಲ್ಲಿ ಪ್ರಶಾಂತ್ ಕಿಶೋರ್ ಐತಿಹಾಸಿಕ ಗೆಲುವು

Prashant Kishor: ಬಿಜೆಪಿಯ ಭದ್ರಕೋಟೆಯಲ್ಲಿ ಪ್ರಶಾಂತ್ ಕಿಶೋರ್ ಐತಿಹಾಸಿಕ ಗೆಲುವು

August 4, 2026
Kerala Rain: ಕೇರಳದಲ್ಲಿ ಮತ್ತೆ ಭೂಕುಸಿತ: ಮೂವರು ಸಾ**

Kerala Rain: ಕೇರಳದಲ್ಲಿ ಮತ್ತೆ ಭೂಕುಸಿತ: ಮೂವರು ಸಾ**

August 1, 2026
ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಮತ್ತೋರ್ವ ಕಾರ್ಮಿಕ ಸಾ**

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಮತ್ತೋರ್ವ ಕಾರ್ಮಿಕ ಸಾ**

August 1, 2026
Next Post
ವ್ಯಾಕ್ಸಿನೇಷನ್: ಬದ್ಧತೆ ಮರೆತ ಮೋದಿ ಸರ್ಕಾರದ ಮಾನ ಉಳಿಸಲು ಹೋಗಿ ಆರ್ಥಿಕ ಹೊರೆ ಹೊತ್ತ ರಾಜ್ಯ ಸರ್ಕಾರ!

ವ್ಯಾಕ್ಸಿನೇಷನ್: ಬದ್ಧತೆ ಮರೆತ ಮೋದಿ ಸರ್ಕಾರದ ಮಾನ ಉಳಿಸಲು ಹೋಗಿ ಆರ್ಥಿಕ ಹೊರೆ ಹೊತ್ತ ರಾಜ್ಯ ಸರ್ಕಾರ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada