• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಯಾವ್ದೋ ಜಾತಿ, ಯಾವ್ದೋ ಧರ್ಮ? ನಾವೆಲ್ಲ ಸೇರಿ ಕಟ್ಟಿರೊ ದೇಶ ಕಣೊ ಇದು: ತೇಜಸ್ವಿ ವಿರುದ್ಧ ಝಮೀರ್ ಕಿಡಿ

Any Mind by Any Mind
May 6, 2021
in ಕರ್ನಾಟಕ
0
ಯಾವ್ದೋ ಜಾತಿ, ಯಾವ್ದೋ ಧರ್ಮ? ನಾವೆಲ್ಲ ಸೇರಿ ಕಟ್ಟಿರೊ ದೇಶ ಕಣೊ ಇದು: ತೇಜಸ್ವಿ ವಿರುದ್ಧ ಝಮೀರ್ ಕಿಡಿ
Share on WhatsAppShare on FacebookShare on Telegram

ಬಿಬಿಎಂಪಿ ಬೆಡ್‌ ಬುಕಿಂಗ್‌ ಹಗರಣಕ್ಕೆ ಕೋಮು ಆಯಾಮ ನೀಡಿದ ತೇಜಸ್ವಿ ಸೂರ್ಯನನ್ನ ಶಾಸಕ ಝಮೀರ್‌ ಅಹ್ಮದ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ADVERTISEMENT

ಕೋವಿಡ್ ವಾರ್ ರೂಮಿನಲ್ಲಿ 205 ಜನ ಕೆಲಸ ಮಾಡ್ತಾರೆ, ಅವರಲ್ಲಿ 17 ಮುಸ್ಲಿಮರ ಹೆಸರುಗಳನ್ನು ಮಾತ್ರ ಎತ್ತಿಹೇಳಿ, ಇಡೀ ರಾಜ್ಯದಲ್ಲಿ ನಡೆಯುತ್ತಿರುವ ಕೊರೊನಾ ಸೋಂಕಿತರ ಮಾರಣ ಹೋಮವನ್ನೇ ಬೇರೆಡೆಗೆ ತಿರುಗಿಸಲು ಯತ್ನಿಸಿದ್ದೀರಲ್ಲ..ಛೀ, ಎಂಥಾ ಹೀನ ಮನಸ್ಥಿತಿ ನಿಮ್ಮದು ಎಂದು ಝಮೀರ್‌ ಅಹ್ಮದ್‌ ಪ್ರಶ್ನಿಸಿದ್ದಾರೆ.

ಕಳೆದ ವರ್ಷ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೊರೊನಾ ಇಂದ ಮೃತಪಟ್ಟ 558 ಶವಗಳನ್ನು ನನ್ನದೇ ಟೀಮಿನ ಮುಸ್ಲಿಂ ಯುವಕರ ತಂಡ ಮೃತರ ಧಾರ್ಮಿಕ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನಡೆಸಿತ್ತು. ಆಗ ನೀವೆಲ್ಲಿದ್ದಿರಿ? ಹುಟ್ಟು ಸಾವಿಗೆ ಧರ್ಮವಿಲ್ಲ ಅಂತಾರೆ, ಅದರಲ್ಲೂ ನಿಮ್ಮ ಹೊಲಸು ರಾಜಕೀಯ ಮಾಡುತ್ತೀರಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಣ್ಣೆ ತಿಂದ ಕೋತಿ ಮೇಕೆ ಮೂತಿಗೆ ಒರೆಸಿತು – ಬೆಡ್ ದಂಧೆಯಲ್ಲಿ ಬಿಜೆಪಿ ಶಾಸಕ ಶಾಮೀಲು?

ತಂದೆ, ತಾಯಿ ಸತ್ತಾಗ ಸ್ವಂತ ಮಕ್ಕಳೂ ಶವಸಂಸ್ಕಾರ ಮಾಡಲು ಮುಂದೆ ಬಂದಿಲ್ಲ, ಆಗ ಮಗನಾಗಿ, ತಮ್ಮನಾಗಿ, ಅಣ್ಣನಾಗಿ ಮುಂದೆ ನಿಂತು ಶವಸಂಸ್ಕಾರ ಮಾಡಿದವರು ನೀವೇ ಹೇಳುವ ಪಂಚರ್ ಹಾಕುವ ಮಂದಿ. ಪಂಚರ್ ಹಾಕುವವರಲ್ಲಿ ಇರುವ ಮನುಷ್ಯತ್ವ ನಿಮ್ಮಲ್ಲಿ ಇಲ್ಲವಲ್ಲ. ಎಲ್ಲರ ಗಾಡಿಯೂ ಒಂದಿನ ಪಂಚರ್ ಆಗುತ್ತೆ, ಹಾಗೆ ನಿಮ್ಮ ಗಾಡಿಯೂ ಆಗಬಹುದು. ಮತ್ತೆ ನಿಮ್ಮ ಗಾಡಿ ಮುಂದೆ ಸಾಗಬೇಕು ಅಂದ್ರೆ ಅದೇ ಪಂಚರ್ ಹಾಕುವವನ ಅಂಗಡಿಗೇ ಹೋಗಬೇಕು. ಹೊಟ್ಟೆಪಾಡಿಗೆ ಮಾಡುವ ಉದ್ಯೋಗವನ್ನು ಹಂಗಿಸಿದಾಗಲೇ ನಿಮ್ಮ ಮನಸ್ಥಿತಿ ಎಂಥದ್ದು ಎಂಬ ಅರಿವು ನಮಗಾಗಿತ್ತು ಎಂದು ಝಮೀರ್‌ ಹೇಳಿದ್ದಾರೆ.

ಸೌದಿ ಅರೇಬಿಯಾ, ಖತಾರ್, ಯು.ಎ.ಈ ಮುಂತಾದ ಮುಸ್ಲಿಂ ರಾಷ್ಟ್ರಗಳು ಭಾರತಕ್ಕೆ ಆಕ್ಸಿಜನ್ ಕಳುಹಿಸಿಕೊಟ್ಟಿವೆ. ಆ ದೇಶಗಳೇನಾದ್ರೂ ನಾವು ಕಳುಹಿಸಿದ ಆಕ್ಸಿಜನ್ ಅನ್ನು ಭಾರತದ ಮುಸ್ಲೀಮರಿಗೆ ಮಾತ್ರ ಕೊಡಿ ಎಂದು ಹೇಳಿದ್ದಾವಾ? ಜಗತ್ತು ಭಾರತವನ್ನು ಮಾನವೀಯತೆಯ ಕಣ್ಣಿನಿಂದ ನೋಡ್ತಿದೆ, ನೀವ್ಯಾಕೆ ಭಾರತೀಯರನ್ನೇ ದ್ವೇಷಿಸುತ್ತೀರ? ಯಾರೂ ನಾವು ಇದೇ ಧರ್ಮದಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿ ಹುಟ್ಟುವುದಿಲ್ಲ. ಧರ್ಮ ನಮ್ಮ ವೈಯಕ್ತಿಕ ಆಚರಣೆಗೆ ಸೀಮಿತ. ರಾಜಕೀಯ ಮತ್ತು ಧರ್ಮವನ್ನು ಒಟ್ಟು ಮಾಡಬೇಡಿ.  ಸಾಧ್ಯವಾದ್ರೆ ಸತ್ಯ, ಧರ್ಮದ ಹಾದಿಯಲ್ಲಿ ರಾಜಕೀಯ ಮಾಡಿ, ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಯಲ್ಲಿರಿ ಎಂದು ಝಮೀರ್‌ ಅಹ್ಮದ್‌ ಆಗ್ರಹಿಸಿದ್ದಾರೆ.

ಆಪದ್ಭಾಂದವ ಶ್ರೀನಿವಾಸ್ ಮತ್ತು ಅದೃಷ್ಟವಂತ ತೇಜಸ್ವಿ ಸೂರ್ಯ, ಯಾರು ನಿಜವಾದ ಜನನಾಯಕ?

ನಿಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜಯನಗರ, ಚಿಕ್ಕಪೇಟೆ, ಬಸವನಗುಡಿಯ ಜನ ಆಕ್ಸಿಜನ್, ರೆಮ್ಡಿಸಿವರ್ ಗಾಗಿ ನನಗೆ ಕರೆ ಮಾಡುತ್ತಾರೆ. ನಾನು ಅವರಿಗೆ ಸಹಾಯ ಮಾಡ್ತಾ ಇದ್ದೀನಿ. ನೀವು ಅವರ ಕರೆ ಸ್ವೀಕರಿಸಲ್ಲವಂತೆ ಯಾಕೆ? ಹೊರಗೆ ಬಂದ್ರೆ ಕೊರೊನಾ ಬರುತ್ತೆ ಎಂದು ಭಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ತೇಜಸ್ವಿ ಸೂರ್ಯ ಬೆಡ್ ಹಗರಣ ಬಯಲಿಗೆಳೆದ ನಂತರ BBMP ಹೆಲ್ಪ್ ಲೈನ್ ಕರೆ ಸಂಪರ್ಕವೇ ಆಗುತ್ತಿಲ್ಲ
Previous Post

ಆಕ್ಸಿಜನ್ ಕೊರತೆಯ ಗಂಭೀರತೆ ಬಗ್ಗೆ ಒತ್ತು: ಮುಖ್ಯಮಂತ್ರಿಗೆ ಮತ್ತೊಂದು ಪತ್ರ ಬರೆದ ಹೆಚ್‌.ಕೆ ಪಾಟೀಲ

Next Post

ಆಮ್ಲಜನಕ ಪೂರೈಕೆ: ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆಹೋದ ಕೇಂದ್ರ ಸರ್ಕಾರ

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post
ಆಮ್ಲಜನಕ ಪೂರೈಕೆ: ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆಹೋದ ಕೇಂದ್ರ ಸರ್ಕಾರ

ಆಮ್ಲಜನಕ ಪೂರೈಕೆ: ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೊರೆಹೋದ ಕೇಂದ್ರ ಸರ್ಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada