ಪಿರಿಯಾಪಟ್ಟಣ: ತಾಲೂಕಿನ ಕಕ್ಕುಂಡಿ ಗ್ರಾಮದಲ್ಲಿ ಶುಕ್ರವಾರ ಮಳೆಯಿಂದಾಗಿ ಮನೆಯ ಮಣ್ಣಿನ ಗೋಡೆ ಕುಸಿದು ಬೀಳುತ್ತಿದ್ದ ವೇಳೆ ಎರಡು ವರ್ಷದ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿ ಮೃತಪಟ್ಟರು. ತಾಲ್ಲೂಕು ಕಚೇರಿ ಗ್ರಾಮ ಸೇವಕ ಶಿವರಾಜು ಅವರ ಪತ್ನಿ ಹೇಮಲತಾ(22) ಮೃತರು.ಅವರು ಮನೆಯ ಹೊರಗಿದ್ದ ಶೌಚಾಲಯಕ್ಕೆ ಹೋಗಿ ಬರುವಾಗ ಗೋಡೆ ಕುಸಿಯುತ್ತಿರುವುದನ್ನು ಗಮನಿಸಿದ್ದಾರೆ. ಆಗ, ಜತೆಗಿದ್ದ ಮಗುವನ್ನು ದೂರಕ್ಕೆ ತಳ್ಳಿದ್ದಾರೆ. ಇದರಿಂದ ಮಗು (ಕೃಷಾಂತ್) ಪ್ರಾಣಾಪಾಯದಿಂದ ಪಾರಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಮಂಗಳೂರಲ್ಲಿ ಇವತ್ತು ಏನ್ ಆಗುತ್ತೆ.. ಹಿಂದೂ – ಮುಸ್ಲಿಂ ಸವಾಲು..!
ನಾಗಮಂಗಲ ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದ ಬಗ್ಗೆ ಪ್ರತಿಭಟನೆ ಮಾಡಿ ಮಾತನಾಡಿದ್ದ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್ ಈದ್ ಮಿಲಾದ್ ಮೆರವಣಿಗೆ ಹೇಗೆ...
Read more