• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಯಾರು ಈ ಯಹೂದಿಗಳು?: ಯಹೂದಿಗಳ ನಿಜವಾದ ಪರಿಚಯ : ಡಾ. ಜೆ ಎಸ್ ಪಾಟೀಲ ಅವರ ಬರಹ

Any Mind by Any Mind
December 8, 2023
in ಅಂಕಣ, ಅಭಿಮತ
0
ಯಾರು ಈ ಯಹೂದಿಗಳು?: ಯಹೂದಿಗಳ ನಿಜವಾದ ಪರಿಚಯ : ಡಾ. ಜೆ ಎಸ್ ಪಾಟೀಲ ಅವರ ಬರಹ
Share on WhatsAppShare on FacebookShare on Telegram

ADVERTISEMENT

ಮೊನ್ನೆ ಒಬ್ಬ ಮಹಾಶಯ ತನ್ನ ಸಮುದಾಯ ಯಹೂದಿಗಳಂತೆ ಎದ್ದು ನಿಲ್ಲಬೇಕು ಎಂದು ಕೇಳಿಕೆ ನೀಡಿದ್ದ. ಯಹೂದಿಗಳಂತೆ ಎದ್ದು ನಿಲ್ಲಲು ಮೊಟ್ಟಮೊದಲು ಬೇಕಾಗುವುದು ಸ್ವಾಭಿಮಾನˌ ಹುಟ್ಟು ಪ್ರತಿಭೆˌ ಛಲ ಮತ್ತು ರಾಜಿಯಾಗದ ಸ್ವಭಾವ. ಈ ಯಾವ ಗುಣಗಳೂ ಹೊಂದಿರದವರು ಕೇವಲ ತಮ್ಮ ಕುತಂತ್ರ ˌ ಕುಟಿಲತೆಗಳಿಂದ ಮಾತ್ರ ಯಹೂದಿಗಳಂತೆ ಎದ್ದು ನಿಲ್ಲುವುದು ಅಸಾಧ್ಯದ ಮಾತು. ಯಹೂದಿಗಳು ಜಗತ್ತಿನ ಜ್ಞಾನ-ವಿಜ್ಞಾನಕ್ಕೆ ನೀಡಿದ ಕೊಡುಗೆ ಅವರ ಹುಟ್ಟು ಪ್ರತಿಭೆಯ ಮೂಲಕವೆ ಹೊರತು ಇನ್ನೊಬ್ಬರ ಪ್ರತಿಭೆ ಕಳ್ಳತನ ಮಾಡಿ ಅಲ್ಲ. ಅವರು ತಮಗೆ ಅನ್ಯಾಯವಾದಾಗ ಎಂತಹ ಬಲಾಢ್ಯನೊಂದಿಗೂ ಸೆಣಸಬಲ್ಲರು ಹಾಗು ಯಾರೊಂದಿಗೂ ರಾಜಿ ಸಂಧಾನ ಮಾಡಿಕೊಳ್ಳಲಾರರು. ಅವರಂತೆ ಎದ್ದು ನಿಲ್ಲುವ ಮಹತ್ವಾಕಾಂಕ್ಷೆ ಹೊಂದಿದವರು ಕನಿಷ್ಠ ತಮ್ಮ ಕುತಂತ್ರ ಬುದ್ದಿಯಾದರೂ ಬಿಡಬೇಕು. ಹುಟ್ಟು ಪ್ರತಿಭಾವಂತರಾಗಿರಬೇಕು ಹಾಗು ಬಲಾಢ್ಯರೊಂದಿಗೆ ನೇರವಾಗಿ ಸೆಣಸುವ ಗಟ್ಟಿತನ ಬೆಳೆಸಿಕೊಳ್ಳಬೇಕು.

ಇಂತಹ ಮೂರ್ಖರ ಹೇಳಿಕೆಯಿಂದ ಇವತ್ತು ಅನೇಕ ಜನರು ಇಂದಿನ ಯಹೂದಿಗಳು ಯಾರು ಎನ್ನುವ ಕುರಿತು ಬಹಳಷ್ಟು ಗೊಂದಲಕ್ಕೊಳಗಾಗಿದ್ದಾರೆ ಹಾಗೂ ಇತರರನ್ನೂ ಕೂಡ ಗೊಂದಲಕ್ಕೆ ದೂಡಿದ್ದಾರೆ. ಬಹುತೇಕ ಭಾರತೀಯರಿಗೆ ಯಹೂದಿಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಆದರೆ ಸತ್ಯ ಸಂಗತಿನ್ನು ಹೊರಗೆಡವಲು ಸರಿಯಾದ ಮಾಹಿತಿಯ ಅವಶ್ಯಕತೆ ಇರುತ್ತದೆ ಮತ್ತು ಆ ಮಾಹಿತಿಯನ್ನು ಸೂಕ್ತವಾಗಿ ನಿರ್ಣಯಿಸುವುದು ಹಾಗು ವಿಶ್ಲೇಷಿಸುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಇಂದಿನ ದಿನದ ಮುಖ್ಯ ಚರ್ಚೆ ಏನೆಂದರೆ ಪ್ರಾಚೀನ ಯಹೂದಿಗಳು, ಹಾಗೂ ಇಂದಿನ ಯಹೂದಿಗಳು ಯಾರು ಮತ್ತು ಅವರ ನಡುವಿನ ಅಂತರವೇನು ಎನ್ನುವುದು. ಈ ಯಹೂದಿಗಳು ಮತ್ತು ಭಾರತದ ಬ್ರಾಹ್ಮಣರು ತಳೀಯವಾಗಿ ಒಂದೇ ಜನಾಂಗವೆ ಎನ್ನುವುದನ್ನು ತಿಳಿಯಲು ಉತ್ಸುಕರಾಗಿರುವ ಓದುಗರಿಗೆ ಇಲ್ಲಿ ಪ್ರಸ್ತುತಪಡಿಸಲಾಗುವ ವಿಶ್ಲೇಷಣೆಯು ಉಪಯುಕ್ತವಾಗಲಿದೆ ಎಂದು ನಾನು ಭಾವಿಸುತ್ತೇನೆ.

ಪ್ರಾಚೀನ ಕಾಲದಲ್ಲಿ, ಮೆಡಿಟರೇನಿಯನ್ ಪ್ರದೇಶ ಅಥವಾ ಭೂಮಧ್ಯ ಸಾಗರ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನಾಂಗವನ್ನು ಭಾರತದಲ್ಲಿ ದ್ರಾವಿಡರು ಎಂದು ಗುರುತಿಸಲಾಗುತ್ತಿತ್ತು. ಕ್ರಿ. ಪೂ. ೮-೧೦ ಸಾವಿರ ವರ್ಷಗಳ ಹಿಂದೆ ಸಿಂಧ್‌ನಿಂದ ಸುಮೇರಿಯಾ, ಅರೇಬಿಯಾ, ಈಜಿಪ್ಟ್, ಕೆನಾನ್, ಕ್ರೀಟ್‌ಗಳ ವರೆಗೆ ಹರಡಿದ್ದ ಮೂಲ ಭಾರತೀಯ ಜನರು ಇವರು. ಶಕ, ಕುಸ, ಕಸ್ಸಪ, ಪಾಲ್ ಈ ರೀತಿಯ ಅನೇಕ ಹೆಸರುಗಳು ಮೆಡಿಟರೇನಿಯನ್ ಮೂಲದ ಈ ಬುಡಕಟ್ಟು ಜನರ ಕುಲಗಳಾಗಿದ್ದವು. ಅವರಲ್ಲಿ ಜುಡಾ ಅಥವಾ ಜೂಡೋ ಎಂಬ ಒಂದು ಬುಡಕಟ್ಟು ಕೂಡ ಅಸ್ತಿತ್ವದಲ್ಲಿತ್ತು. ಇದನ್ನು ಲ್ಯಾಟಿನ್‌ನಲ್ಲಿ ಜೂಡಿಯಸ್ ಎಂದು, ಗ್ರೀಕ್‌ನಲ್ಲಿ ಯುದಾ, ಫ್ರೆಂಚ್‌ನಲ್ಲಿ ಜುಯಿಫ್, ಜರ್ಮನ್‌ನಲ್ಲಿ ಜೂಡ್ ಮತ್ತು ಇಂಗ್ಲಿಷ್‌ನಲ್ಲಿ ಯಹೂದಿ ಎಂದು ಕರೆಯಲಾಗುತ್ತದೆ. ಈ ಜುಡಾ ಬುಡಕಟ್ಟು ಜನರು ವಾಸಿಸುತ್ತಿದ್ದ ಪ್ರದೇಶದ ಹೆಸರು ಜುಡಾಹ ಎಂದಿದ್ದು, ಅದನ್ನು ಗ್ರೀಕ್ ಇತಿಹಾಸಕಾರರು ಜುಡಿಯಾ ಎಂದು ಕರೆದಿದ್ದಾರೆ.

ಇಂದು ಆ ಪ್ರದೇಶದಲ್ಲಿ ಪ್ಯಾಲೆಸ್ತೀನ್, ಮತ್ತು ಇಸ್ರೇಲ್ ದೇಶಗಳು ನೆಲೆಗೊಂಡಿದೆ. ಯಹೂದಿಗಳ ಆಡು ಭಾಷೆ ಸೆಮಿಟಿಕ್ ವರ್ಗದ ಹೀಬ್ರೂ ಭಾಷೆಯಾಗಿತ್ತು. ಜುಡಾವನ್ನು ಹೀಬ್ರೂ ಭಾಷೆಯಲ್ಲಿ ಯೆಹೂದಾˌ ಪ್ರಾಚೀನ ಹೀಬ್ರೂವಿನಲ್ಲಿ ಯಾಹವೊ ಮತ್ತು ಆರಂಭಿಕ ಹೀಬ್ರೂನಲ್ಲಿ ಇವೆರಿಮ್ ಎಂದು ಕರೆಯಲಾಗುತ್ತಿತ್ತು. ಇಬ್ರ್ ಪದದಿಂದ ಇಬ್ರು, ಹೀಬ್ರೂ, ಅಬ್ರ್, ಅಬೀರ್, ಅಭೀರ್, ಅಹಿರ್, ಓಫಿರ್, ಇವರಿಮ್ ಎಂಬ ಪದಗಳು ರೂಪುಗೊಂಡವು. ಇಬ್ರಾಹಿಂ ಮತ್ತು ಅಬ್ರಹಾಂ ಎಂಬ ಪದಗಳು ಇವರಿಮ್‌ ಶಬ್ಧದಿಂದ ಹುಟ್ಟಿಕೊಂಡಿವೆ, ಇದನ್ನು ಭಾರತದಲ್ಲಿ ಬ್ರಹ್ಮ ಎಂದು ಕರೆಯಲಾಗುತ್ತದೆ. ಇರಾನಿನ ಸಾಹಿತ್ಯದಲ್ಲಿ ಅಬ್ರಾಹಮನನ್ನು ಅಹಿರಾವಣ ಅಥವಾ ಅಹಿರ್ಮಾನ್ ಎಂದೂ ಕರೆಯುತ್ತಾರೆ. ಕ್ರಿ. ಪೂ. ೭ ನೇ ಶತಮಾನದಲ್ಲಿ ಅಸಿರಿಯನ್ ಆಕ್ರಮಣದ ನಂತರ, ಅಲ್ಲಿನ ಕೆಲವು ಜುಡಾ ಬುಡಕಟ್ಟು ಜನಾಂಗಗಳು ಇರಾನ್ ಮತ್ತು ಭಾರತದ ಕಡೆಗೆ ವಲಸೆ ಬಂದು ಇಲ್ಲಿಯೆ ಶಾಸ್ವತವಾಗಿ ನೆಲೆಸಿದವು.

ಈ ಜುಡಾ ಬುಡಕಟ್ಟಿನ ಜನರನ್ನು ಭಾರತದಲ್ಲಿ ಯದು, ಯಾದವ್, ಜಾಧವ್, ಜಾದೋನ್, ಜಡೇಜಾ, ಅಭೀರ್, ಅಹಿರ್ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಜುಡಿಯಾದಲ್ಲಿ ಉಳಿದವರು ಕ್ರಿ. ಪೂ. ೨ ನೇ ಶತಮಾನದಲ್ಲಿ ಬೌದ್ಧರಾಗಿ ಬದಲಾದರು. ಜುಡಿಯನ್ ಬೌದ್ಧ ನಾಗರಿಕತೆಯನ್ನೆ ಯಹೂದಿ ಧರ್ಮದವರೆಂದು ಕರೆಯಲಾಯಿತು. ಗ್ರೀಕ್ ನಾಗರಿಕತೆಯ ಪ್ರಭಾವದಿಂದ ಇದನ್ನು ಹೆಲೆನಿಸ್ಟಿಕ್ ಯಹೂದಿ ಧರ್ಮವೆಂತಲೂ ಕರೆಯಲಾಯಿತು. ಫರಿಸಿ ಮತ್ತು ಸದೂಕಿ ಜನಾಂಗಗಳ ನಡುವಿನ ಸಂಘರ್ಷದಿಂದಾಗಿ ಹೆಲೆನಿಸ್ಟಿಕ್ ಬೌದ್ಧ-ಯಹೂದಿ ಧರ್ಮದ ಅವನತಿಯು ಕ್ರಿ. ಶ. ೨ ನೇ ಶತಮಾನದಲ್ಲಿ ಪ್ರಾರಂಭವಾಯಿತು. ಕ್ರಮೇಣ ಫರಿಸಿ ನಂಬಿಕೆಗಳು ಪುರೋಹಿತಶಾಹಿ ಯಹೂದಿ ಧರ್ಮದ ಆಚರಣೆಗಳಿಗೆ ಆಧಾರವಾದವು. ಕ್ರಿ. ಶ ೬ ನೇ ಶತಮಾನದ ತಾಲ್ಮೂಡ್ ಗ್ರಂಥದ ಕ್ರೂಢೀಕರಣದ ನಂತರ ರಬ್ಬಿನಿಕ್ (ಪುರೋಹಿತಶಾಹಿ) ಯಹೂದಿ ಧರ್ಮವು ಮುಖ್ಯವಾಹಿನಿಗೆ ಬಂತು.

ಇಲ್ಲಿ ಯಹೂದಿ ಧರ್ಮ ಸೇರಿದವರನ್ನು ಸೆಫಾರ್ಡಿ, ಸಿರಿಯನ್, ಮಿಜ್ರಾಹಿ, ಯೆಮೆನೈಟ್, ಬಾಗ್ದಾದಿ ಯಹೂದಿಗಳು, ಆಫ್ರಿಕನ್ ಯಹೂದಿಗಳು ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿತ್ತು. ೮ ನೇ ಶತಮಾನದಲ್ಲಿ, ದಕ್ಷಿಣ ರಷ್ಯಾದ ಖಜಾರ್ ಸ್ಟೆಪ್ಸ್ (ಜಾರ್ಜಿಯಾ) ಪ್ರದೇಶದಲ್ಲಿನ ಕೆಲವು ಹೆಫ್ತಾಲೈಟ್‌ ಗುಂಪಿನ ಜನರು ರಬ್ಬಿನಿಕ್ ಯಹೂದಿ ಧರ್ಮಕ್ಕೆ ಸೇರಿಕೊಂಡರು. ಈ ಹೆಫ್ತಾಲೈಟ್‌ಗಳು ೬-೭ ನೇ ಶತಮಾನದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ್ದು ಅದೇ ಗುಂಪಿನ ಜನರು ಎಂಬುದನ್ನು ನಾವು ಗಮನಿಸಬೇಕು. ಭಾರತೀಯ ಇತಿಹಾಸದಲ್ಲಿ ಇವರನ್ನು ಹೂಣರೆಂದು ಕರೆಯಲಾಗಿದೆ. ವಾಸ್ತವವಾಗಿ ಈ ಗುಂಪುಗಳು ದಕ್ಷಿಣ ರಷ್ಯಾದ ಹುಲ್ಲುಗಾವಲು ಪ್ರದೇಶದ ಅಲೆಮಾರಿಗಳ ಗುಂಪುಗಳಾಗಿವೆ. ಇಂದಿನ ತುರ್ಕಮೆನಿಸ್ತಾನ್ ಸ್ಟೆಪ್ಸ್ ಪ್ರದೇಶದ ಹೈತಾಲ್/ಅಫದಲ್ ಪ್ರದೇಶದಲ್ಲಿ ನೆಲೆಸಿರುವ ಕಾರಣದಿಂದ ಇತಿಹಾಸಕಾರರು ಇವರನ್ನು ಹೆಫ್ತಾಲೈಟ್‌ಗಳು ಎಂದೂ ಕರೆದಿದ್ದಾರೆ.

ಇದೇ ಗ್ಯಾಂಗ್ ಗಳಿಂದ ಕೆಲವರು ಭಾರತಕ್ಕೆ ಬಂದು ಬ್ರಾಹ್ಮಣರಾದರು, ಇರಾನ್‌ಗೆ ಹೋಗಿ ಪಾರ್ಸಿಗಳಾದರು, ಅಫ್ಘಾನಿಸ್ತಾನಕ್ಕೆ ಹೋಗಿ ಅಬ್ದಾಲಿ, ಅಫ್ರಿದಿ, (ದುರಾನಿ ಮುಸ್ಲಿಮರು) ಗಳಾದರು, ಅಂದಿನ ಭಾರತದ ಸಿಂಧ್ (ಪಾಕಿಸ್ತಾನ) ಪ್ರದೇಶಕ್ಕೆ ಹೋಗಿ ಹುಸೇನಿ ಬ್ರಾಹ್ಮಣರಾದರು ಮತ್ತು ಕೆಲವರು ಖಜಾರ್ (ಜಾರ್ಜಿಯಾ) ಗೆ ಹೋಗಿ ಯಹೂದಿಗಳು/ಜ್ಯೂ ಧರ್ಮದವರಾದರು. ಇದೇ ಖಜಾರಿಯನ್ ಹೆಫ್ತಾಲೈಟ್ ಯಹೂದಿಗಳು ೧೦ ನೇ ಶತಮಾನದಲ್ಲಿ ತಮ್ಮನ್ನು ಅಶ್ಕೆನಾಜಿ ಯಹೂದಿಗಳೆಂದು ಘೋಷಿಸಿಕೊಂಡರು. ಇಲ್ಲಿಂದ ಈ ಅಶ್ಕೆನಾಜಿಗಳು ಪೂರ್ವ ಯುರೋಪ್, ಜರ್ಮನಿ, ರಷ್ಯಾ, ಅಮೆರಿಕಕ್ಕೂ ಹರಡಿದರು. ಹಿಂದಿನ ಸೆಮಿಟಿಕ್ ಯಹೂದಿಗಳು ಬಹು ಸಂಖ್ಯೆಯಲ್ಲಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದರ ಪರಿಣಾಮವಾಗಿ ಯಹೂದಿಗಳ ಜನಸಂಖ್ಯೆ ಕ್ಷೀಣಿಸಿತು. ಅದಕ್ಕಾಗಿಯೇ ಇಂದು ಜಗತ್ತಿನಲ್ಲಿ ಯಹೂದಿಗಳಲ್ಲಿ ಶೆ. ೯೯ ರಷ್ಟು ಅಶ್ಕೆನಾಜಿ ಯಹೂದಿಗಳೆ ಇದ್ದಾರೆ.

ಹೊಸ ವಿಶ್ವ ಸುವ್ಯವಸ್ಥೆಯ (ನ್ಯೂ ವರ್ಲ್ಡ್ ಆರ್ಡರ್) ಸಂಕಲ್ಪದೊಂದಿದೆ ಇಡೀ ಜಗತ್ತನ್ನು ಆಳಲು ಇಂದು ಎಲ್ಲಿಲ್ಲದ ಷಡ್ಯಂತ್ರಗಳನ್ನು ಮಾಡುತ್ತಿರುವವರು ಬೇರಾರೂ ಅಲ್ಲದೆ ಈ ಹಯೂದಿಗಳೆ. ಈ ಅಶ್ಕೆನಾಜಿ ಯಹೂದಿಗಳು ಪ್ಯಾಲೆಸ್ತೀನ್ ಮೇಲೆ ಸುಳ್ಳು ಹಕ್ಕುಗಳನ್ನು ಪ್ರತಿಪಾದಿಸಿ ದಬ್ಬಾಳಿಕೆಯ ಮೂಲಕ ಪ್ಯಾಲೆಸ್ತೀನ್ ಮೂಲ ನಿವಾಸಿಗಳನ್ನು ಅವರ ನೆಲದಿಂದ ಓಡಿಸಿ ಇಸ್ರೇಲ್ ರಾಷ್ಟ್ರವನ್ನು ಸೃಷ್ಟಿಸಿಕೊಂಡು ಪ್ಯಾಲೆಸ್ತೀನ್ ಭೂಮಿಯನ್ನು ಕಬಳಿಸಿದ್ದಾರೆ. ವಾಸ್ತವವೆಂದರೆ ಈ ಅಶ್ಕೆನಾಜಿ ಯಹೂದಿಗಳು ಪ್ಯಾಲೆಸ್ತೀನ್ ಜನಾಂಗ ಮತ್ತು ಹಳೆಯ ದ್ರಾವಿಡ ಯಹೂದಿಗಳೊಂದಿಗೆ ಯಾವುದೇ ಮಾನವಶಾಸ್ತ್ರೀಯ ಅಥವಾ ಧಾರ್ಮಿಕ ಸಂಬಂಧವನ್ನು ಹೊಂದಿರಲಿಲ್ಲ. ಪುರಾತನ ಜುಡಾ/ಯಹೂದಿ ಎಂಬುದು ಮೆಡಿಟರೇನಿಯನ್ (ದ್ರಾವಿಡ) ಬುಡಕಟ್ಟಿನ ಹೆಸರು, ಅದು ಧರ್ಮವಲ್ಲ ಎನ್ನುವುದು ಗಮನಿಸಬೇಕು. ಇಂದು ಯಹೂದಿ ಎಂಬುದು ಒಂದು ವಂಶವಾಹಿನಿ ಹೊಂದಿರುವ ಜನಾಂಗದ ಧರ್ಮದ ಹೆಸರಾಗಿದೆ.

ಮಹತ್ವಪೂರ್ಣ ವಿಷಯವೇನೆಂದರೆ, ಬಹುತೇಕ ವಂಶವಾಹಿನಿ ಸಂಶೋಧನಾ (DNA) ವರದಿಗಳು ಅಶ್ಕೆನಾಜಿ ಯಹೂದಿಗಳು R1a1a ಹ್ಯಾಪ್ಲೋಟೈಪ್ ವಂಶವಾಹಿನಿ ಹೊಂದಿರುವುದಾಗಿ ಹೇಳುತ್ತವೆ. ಇದೇ ಮಾದರಿಯ ಹ್ಯಾಪ್ಲೋಟೈಪ್ R1a1a ವಂಶವಾಹಿನಿಯು ಇಂದಿನ ಉತ್ತರ ಭಾರತದ ನಿವಾಸಿಗಳಾಗಿರುವ ಹಲವು ಬ್ರಾಹ್ಮಣ ಸಮುದಾಯಗಳಲ್ಲಿ ಮತ್ತು ಅದೇ ಭಾಗದಲ್ಲಿ ನೆಲೆಸಿರುವ ಕ್ಷತ್ರಿಯ ಸಮುದಾಯಗಳಲ್ಲೂ ಕಂಡುಬರುತ್ತದೆ. ಇದರಿಂದ ಸ್ಪಷ್ಟವಾಗುವ ಸಂಗತಿ ಏನೆಂದರೆ, ಅಶ್ಕೆನಾಜಿ ಯಹೂದಿಗಳು ಮತ್ತು ಬ್ರಾಹ್ಮಣರು ಒಂದೆ ಬಗೆಯ ವಂಶವಾಹಿನಿ ಹೊಂದಿರುವುದರಿಂದ ತಳೀಯವಾಗಿ ಒಂದೇ ವಂಶವಾಹಿನಿ ವರ್ಗಕ್ಕೆ ಸೇರಿದವರು ಎನ್ನುವುದು ನಿರ್ವಿವಾದ. ಕೆಲವು ಸ್ವಯಂಘೋಷಿತ ಸಂಶೋಧಕರು ಬ್ರಾಹ್ಮಣರ ಮೂಲವನ್ನು ಯಮನ್ ಸಂಸ್ಕೃತಿಯೊಂದಿಗೆ ಜೋಡಿಸುವ ವಿಫಲ ಯತ್ನ ಕೂಡ ಮಾಡುತ್ತಿದ್ದಾರೆ. ವಾಸ್ತವವಾಗಿ, ಯೆಮೆನ್ ಸಂಸ್ಕೃತಿಯ ಜನರು R1b ಹ್ಯಾಪ್ಲೋಟೈಪ್‌ಗೆ ವಂಶವಾಹಿನಿ (DNA) ಹೊಂದಿದ್ದಾರೆ.

ಈ R1b ಹ್ಯಾಪ್ಲೋಟೈಪ್‌ ವಂಶವಾಹಿನಿಯು ಇಂದಿನ ಬ್ರಿಟಿಷ್, ಫ್ರೆಂಚ್, ಡಚ್, ಪೋರ್ಚುಗೀಸ್, ಐಬೇರಿಯನ್, ರಷ್ಯನ್, ಗ್ರೀಕ್, ಇತ್ಯಾದಿ ಪಶ್ಚಿಮ ಯುರೋಪಿಯನ್ ಜನರ ಪೂರ್ವಜರ ವಂಶವಾಹಿನಿಯಾಗಿದೆ. ಆದರೆˌ ನಾವೆಲ್ಲ ನೆನಪಿಟ್ಟುಕೊಳ್ಳಬೇಕಾದ ಇನ್ನೊಂದು ಪ್ರಮುಖ ಸಂಗತಿ ಏನೆಂದರೆˌ ಬ್ರಾಹ್ಮಣರು ಯಾವುದೇ ಒಂದು ಸಂಸ್ಕೃತಿಗೆ ಸೇರಿದವರಲ್ಲ ಎನ್ನುವುದು. ಇಂದಿನ ಯಹೂದಿಗಳಂತೆ, ೬-೭ ನೇ ಶತಮಾನದಲ್ಲಿ ಖಜಾರ್‌ ದಿಂದ ಭಾರತಕ್ಕೆ ಬಂದ ಬ್ರಾಹ್ಮಣರು ಸಹ ಭಾರತದ ಪ್ರಾಚೀನ ಬ್ರಾಹ್ಮಣರಗಿಂತ ಮತ್ತು ಪಾರ್ಸಿ ಅಥರ್ವಣ ಬ್ರಾಹ್ಮಣರಿಗಿಂತ ಭಿನ್ನರಾಗಿದ್ದರು. ಇಂದು ಅವರ ನಡುವೆ ಬೆರೆಕೆಯಾಗಿದೆ. ಹಾಗಾಗಿ ವೇದ ಕಾಲದ ಕೆಲವು ಆಚರಣೆಗಳನ್ನು ಉಳಿಸಿಕೊಂಡು ತೀರ ಇತ್ತೀಚಿಗೆ ಕೃತಕವಾಗಿ ಸೃಷ್ಠಿಸಲಾಗಿರುವ ವೈದಿಕ ಧರ್ಮವನ್ನು ೫ ಸಾವಿರ ವರ್ಷಗಳಷ್ಟು ಹಳೆಯದೆಂದು ಕರೆಯಲಾಗುತ್ತದೆ. ಅದಾಗ್ಯೂ ˌ ಬ್ರಾಹ್ಮಣರು ಮತ್ತು ಯಹೂದಿಗಳಲ್ಲಿ ಕೆಲವು ಸಾಮ್ಯತೆಗಳನ್ನು ಕಾಣಬಹುದು.

ಭಾರತದ ಬ್ರಾಹ್ಮಣರಂತೆಯೆˌ ಇಂದಿನ ಯಹೂದಿಗಳು ಕೂಡ ೬ ನೇ ಶತಮಾನದಲ್ಲಿ ಸೃಷ್ಠಿಸಲಾಗಿರುವ ತಮ್ಮ ರಬ್ಬಿನಿಕ್ (ಪುರೋಹಿತಶಾಹಿ) ಯಹೂದಿ ಧರ್ಮವನ್ನು ೪೦೦೦ ವರ್ಷಗಳಷ್ಟು ಪ್ರಾಚೀನವಾದದ್ದು ಎಂದು ಕರೆದುಕೊಳ್ಳುತ್ತಾರೆ. ಬ್ರಾಹ್ಮಣರು ತಮ್ಮನ್ನು ತಾವು ದೇವರೆಂದು (ಭೂಸುರರು) ಪರಿಗಣಿಸಿದರೆ, ಅದೇ ರೀತಿಯಲ್ಲಿ ಅಶ್ಕೆನಾಜಿ ಯಹೂದಿಗಳು ಕೂಡ ತಮ್ಮನ್ನು ತಾವು ದೇವರು ಆಯ್ಕೆ ಮಾಡಿದ ಹಾಗು ದೇವರಿಗೆ ಇಷ್ಟವಾದ ಜನರು ಎಂದು ಪರಿಗಣಿಸುತ್ತಾರೆ. ಬ್ರಾಹ್ಮಣ ಮತ್ತು ಯಹೂದಿ ಎರಡೂ ಧರ್ಮಗಳಿಗೆ ಬೇರೆ ಧರ್ಮದ ಯಾವುದೇ ವ್ಯಕ್ತಿ ಮತಾಂಂತರಗೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶ್ರೇಷ್ಠತೆಯ ವ್ಯಸನಧಾರಿಗಳಾಗಿರುವ ಬ್ರಾಹ್ಮಣರು ಮತ್ತು ಯಹೂದಿಗಳಿಬ್ಬರೂ ಸೂಪರೀಯಾರಿಟಿ ಕಾಂಪ್ಲೆಕ್ಸ್‌ನ ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಸಮಾನ ಅಂಶವನ್ನು ಹೊಂದಿದ್ದಾರೆ.

ಹೀಗೆ ಬ್ರಾಹ್ಮಣರು ಮತ್ತು ಯಹೂದಿಗಳಲ್ಲಿ ಕೆಲವು ಸಾಮ್ಯತೆಗಳಿದ್ದಾಗ್ಯೂ ಯಹೂದಿಗಳು ಹುಟ್ಟು ಪ್ರತಿಭಾವಂತರಾದರೆ ಬ್ರಾಹ್ಮಣರು ದಡ್ಡರು ಭಯಂಕರ ಕುಟಿಲರು. ಅಂತೆಯೆˌ ಹಯೂದಿಗಳು ಸ್ವಾವಲಂಬಿಗಳಾದರೆˌ ಬ್ರಾಹ್ಮಣರು ಪರಾವಲಂಬಿಗಳು. ಜಗತ್ತಿನ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಿಗೆ ಯಹೂದಿಗಳ ಕೊಡುಗೆ ಅಪಾರವಾದದ್ದು. ಆದರೆ ಬ್ರಾಹ್ಮಣರ ಕೊಡುಗೆ ನಗಣ್ಯ. ಯಹೂದಿಗಳು ಧೈರ್ಯಶಾಲಿಗಳುˌ ಶೂರರುˌ ಆತ್ಮಸ್ಥೈರ್ಯವುಳ್ಳ ಛಲವಾದಿಗಳಾದರೆ ಬ್ರಾಹ್ಮಣರು ಸ್ವಭಾವತಃ ಪುಕ್ಕಲರು ಮತ್ತು ರಾಜಿ ಸ್ವಭಾವದವರು. ಯಹೂದಿಗಳು ಜಗತ್ತಿನ ಎಲ್ಲಾ ದೇಶಗಳಲ್ಲಿ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದರೆ ಬ್ರಾಹ್ಮಣರ ಆಟ ಕೇವಲ ಭಾರತದಲ್ಲಿ ಮಾತ್ರ ನಡೆಯುತ್ತದೆ. ಇಂದಿನ ಜಾಗತೀಕರಣˌ ಖಾಸಗೀಕರಣಗ ಮೂಲಕ ಜಗತ್ತಿನ ಆರ್ಥಿಕತೆಯನ್ನು ಯಹೂದಿಗಳು ನಿಯಂತ್ರಿಸುತ್ತಿದ್ದಾರೆ.

ಆದರೆˌ ಬ್ರಾಹ್ಮಣರು ತಾವು ಹೋದಲ್ಲೆಲ್ಲಾ ಮಂದಿರಗಳನ್ನು ನಿರ್ಮಿಸುತ್ತ ಜನರ ಮೂರ್ಖತನವನ್ನು ಬಳಸಿಕೊಂಡುˌ ಅವರಲ್ಲಿ ಧಾರ್ಮಿಕ ಮೌಢ್ಯಗಳನ್ನು ಬಿತ್ತಿ ತಾವು ಜಾಣರೆನ್ನಿಸಿಕೊಳ್ಳುತ್ತಾರೆ. ಇಲ್ಲಿ ಓದುಗರು ಗೊಂದಲಕ್ಕೊಳಗಾಗಬಾರದು. ಏಕೆಂದರೆˌ ಭಾರತದಲ್ಲಿ ಇಂದು ವಾಸಿಸುವ ಪ್ರಾಚೀನ ಯಹೂದಿಗಳ ವಂಶಸ್ಥರು ಬ್ರಾಹ್ಮಣರಲ್ಲ. ಭಾರತದಲ್ಲಿರುವ ಪ್ರಾಚೀನ ಯಹೂದಿಗಳೆಂದರೆ ಕೇವಲ ಯಾದವ್, ಜಾಧವ್, ಅಹಿರ್ ಮುಂತಾದ ಜನರು ಮಾತ್ರ ಎಂಬುದು ಸ್ಪಷ್ಟವಾಗಿ ಗಮನಿಸಬೇಕು. ಅದರಂತೆˌ ಇಂದಿನ ಜಗತ್ತಿರುವ ಯಹೂದಿಗಳು, ಪಾರ್ಸಿಗಳು, ಮತ್ತು ಭಾರತದ ಬ್ರಾಹ್ಮಣರು ಮೂಲದಲ್ಲಿ ರಷ್ಯಾದ ಹುಲ್ಲುಗಾವಲುಗಳಲ್ಲಿ ವಾಸಿಸುತ್ತಿದ್ದ ಅಲೆಮಾರಿ ಬುಡಕಟ್ಟಿನ ಜನರು. ಆದ್ದರಿಂದ ಈ ಲೇಖನವನ್ನು ಓದಿ ಅರ್ಥಮಾಡಿಕೊಳ್ಳುವವರು ಇಂದಿನ ಅಶ್ಕೆನಾಜಿ ಯಹೂದಿಗಳನ್ನು ಪ್ರಾಚೀನ ದ್ರಾವಿಡ ಯಹೂದಿಗಳೆಂದು ಪರಿಗಣಿಸುವ ಐತಿಹಾಸಿಕ ತಪ್ಪನ್ನು ಮಾಡಬಾರದು.

~ಡಾ. ಜೆ ಎಸ್ ಪಾಟೀಲ.

(ಈ ಲೇಖನವು ಹರ್ಷದ್ ರೂಪವತೆ ಅವರ ಹಿಂದಿ ಲೇಖನ ಮತ್ತು ಬಾಮ್ಸೆಫ್ ಸಾಹಿತ್ಯವನ್ನು ಆದರಿಸಿ ಬರೆಯಲಾಗಿದೆ)

Tags: BJPಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಸಂವಿಧಾನ ಆಶಯಗಳೂ ನ್ಯಾಯಾಂಗದ ಜವಾಬ್ದಾರಿಯೂ : ನಾ ದಿವಾಕರ ಅವರ ಬರಹ

Next Post

Toxic Rocking Star Yash: ಯಶ್‌ ಹೊಸ ಸಿನಿಮಾ ಟೈಟಲ್‌ ಬಿಡುಗಡೆ, ಈ ಸಿನಿಮಾಕ್ಕೆ ಯಶ್‌ ಕೂಡಾ ಬಂಡವಾಳ

Related Posts

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ
ಅಂಕಣ

ಮತದಾನದ ಹಕ್ಕು- ಬದುಕುವ ಹಕ್ಕು – ಪ್ರಜಾತಂತ್ರ

by ಪ್ರತಿಧ್ವನಿ
May 27, 2026
0

ನಾ ದಿವಾಕರ ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಎಂದು ಪರಿಗಣಿಸಲು ಕಾರಣ ಎಂದರೆ ಈ ಶಾಸನಾತ್ಮಕ ಗ್ರಂಥದಲ್ಲಿ ಅಳವಡಿಸಲಾಗಿರುವ ಮಾನವೀಯ ಮೌಲ್ಯಗಳು. ನಮ್ಮ ಸಂವಿಧಾನ ಮೂಲತಃ ವ್ಯಕ್ತಿ...

Read moreDetails
ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ-ಎಸ್‌ಐಆರ್‌

May 26, 2026
ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

ಸಾಧನೆ-ಸಮಾವೇಶ ಮತ್ತು ವಾಸ್ತವದ ವಿಡಂಬನೆ

May 23, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 22, 2026
ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

ಬಹುತ್ವ ಭಾರತ ಮತ್ತು ಮತಾಂಧ ರಾಜಕಾರಣ

May 21, 2026
Next Post
Toxic Rocking Star Yash: ಯಶ್‌ ಹೊಸ ಸಿನಿಮಾ ಟೈಟಲ್‌ ಬಿಡುಗಡೆ, ಈ ಸಿನಿಮಾಕ್ಕೆ ಯಶ್‌ ಕೂಡಾ ಬಂಡವಾಳ

Toxic Rocking Star Yash: ಯಶ್‌ ಹೊಸ ಸಿನಿಮಾ ಟೈಟಲ್‌ ಬಿಡುಗಡೆ, ಈ ಸಿನಿಮಾಕ್ಕೆ ಯಶ್‌ ಕೂಡಾ ಬಂಡವಾಳ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada