• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಗಾಂಧೀಜಿಯ ಆ ಒಂದು ಪತ್ರ ವೃದ್ಧ ಜೀವವನ್ನೇ ಬದುಕಿಸಿತು

by
January 30, 2020
in ದೇಶ
0
ಗಾಂಧೀಜಿಯ ಆ ಒಂದು  ಪತ್ರ ವೃದ್ಧ ಜೀವವನ್ನೇ ಬದುಕಿಸಿತು
Share on WhatsAppShare on FacebookShare on Telegram

ಗಾಂಧೀಜಿಯವರು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ ಮೇಲೆ ಇಲ್ಲಿಯ ಜನರ ಜೀವನ ಮೇಲೆ ಸತ್ಪರಿಣಾಮ ಉಂಟಾಯಿತು ಎಂಬುದು ಎಲ್ಲರಿಗೂ ಗೊತ್ತು. ಆದರೆ ಗಾಂಧೀಜಿ ತಮಗೆ ಬಂದ ಪತ್ರಕ್ಕೆ ಸ್ಪಂದಿಸಿ, ತಾವೂ ಒಂದು ಪತ್ರ ಬರೆದು ಅಂದಾನಪ್ಪ ದೊಡ್ಡಮೇಟಿ ಅವರ ತಾಯಿಯ ಜೀವ ಉಳಿಸಿದ್ದು ಹಲವರಿಗೆ ಗೊತ್ತಿಲ್ಲ.

ADVERTISEMENT

ಆ ಕತೆ ಹೀಗಿದೆ,

1940 ಡಿಸೆಂಬರ್ 8 ಮಹಾತ್ಮಗಾಂಧೀಜಿಯವರು ವೈಯಕ್ತಿಕ ಸತ್ಯಾಗ್ರಹದ ಆಂದೋಲನಕ್ಕೆ ಕರೆನೀಡಿದ ದಿನಗಳವು.. ಇಡೀ ರಾಷ್ಟ್ರದ ತುಂಬೆಲ್ಲಾ ಈ ಸತ್ಯಾಗ್ರಹ ಕಾವು ಪಡೆದುಕೊಂಡು.. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಬಿರುಸು ಪಡೆಯಿತು.. ಜಕ್ಕಲಿಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದಿನ ಬಯಲಿನಲ್ಲಿ ಈ ಭಾಗದ ಆಂದೋಲನದ ಕರ್ಣಧಾರತ್ವ ವಹಿಸಿದ್ದ ಅಂದಾನಪ್ಪ ದೊಡ್ಡಮೇಟಿ ಯವರನ್ನು ಅವರ ಅನೇಕ ಸಂಗಡಿಗರನ್ನು ಕೈದು ಮಾಡಿ ಧಾರವಾಡ ದ ವಿಶೇಷ ನ್ಯಾಯಾಧೀಶರ ಮುಂದೆ ಖಟ್ಲೆ ನಡಿಸಿದರು.. ಅಂದಾನಪ್ಪ ದೊಡ್ಡಮೇಟಿ ಯವರಿಗೆ ಒಂದು ವರ್ಷದ ಶಿಕ್ಷೆ ವಿಧಿಸಲು ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಡಲಾಯಿತು.

ಆಗ ಅಂದಾನಪ್ಪ ದೊಡ್ಡಮೇಟಿ ಯವರು. ಸೇವಾಗ್ರಾಮದಲ್ಲಿದ್ದ ಮಹಾತ್ಮ ಗಾಂಧೀಜಿಯವರಿಗೆ
ತಮ್ಮ ತಾಯಿ ಬಸಮ್ಮನವರ ಆರೋಗ್ಯ ವಿಷಮಿಸಿದ ಬಗ್ಗೆ ಬರೆಯುತ್ತಾ, “ಒಬ್ಬನೇ ಮಗನಾದ ನನ್ನನ್ನು ನೋಡಲು ನನ್ನ ತಾಯಿ ಆಕಾಂಕ್ಷೆ ಹೊಂದಿದ್ದರೂ.. ಬಿಡುಗಡೆ ಗಾಗಿ ನಾನು ಸರಕಾರವನ್ನು ಕೇಳಬಾರದೆಂದೇ ನಿರ್ಧರಿಸಿರುವೆ.. ಇದೇಡಿಸೆಂಬರ್ 10 ಕ್ಕೆ(1941) ನನ್ನ ಬಿಡುಗಡೆ ಯ ಅವಧಿಯು ಮುಗಿಯುವದು. ತಾಯಿಗೆ ನಿಮ್ಮಲ್ಲಿ ತುಂಬಾ ವಿಶ್ವಾಸ.. ಚೈತನ್ಯ ದಾಯಕ ಸಂದೇಶವನ್ನು ಕಳುಹಿಸಬೇಕಾಗಿ ವಿನಂತಿ, ಎಂದು ಕಾಗದವನ್ನು.,ಜೊತೆಗೆ ತಂತಿ ಯನ್ನು ಮಹಾತ್ಮಗಾಂಧೀಜಿಯವರಿಗಕಳಿಸಿದರು.

ಮಹಾತ್ಮ ಗಾಂಧೀಜಿಯವರು, ಸ್ವಾತಂತ್ರ್ಯ ಯೋಧ ಅಂದಾನಪ್ಪ ದೊಡ್ಡಮೇಟಿ ಯವರಿಗೆ ಹಾಗೂ ಅವರ ತಾಯಿ ಶ್ರೀಮತಿ ಬಸಮ್ಮ ಜ್ಞಾನಪ್ಪ ದೊಡ್ಡಮೇಟಿ ಯವರಿಗೆ ಬರೆದ ಸ್ವ ಹಸ್ತಾಕ್ಷರ ರದ ಪತ್ರ.

ಅದಕ್ಕೆ ತೀವ್ರ ವಾಗಿ ಸ್ಪಂದಿಸಿದ ಮಹಾತ್ಮಾಜಿಯವರು.. ದೊಡ್ಡ ಮೇಟಿಯವರ ತಂತಿಗೆ ಉತ್ತರವಾಗಿ 1.10.1940.ರಂದು ಸ್ವಹಸ್ತಾಕ್ಷರಗಳಲ್ಲಿ.. ಅಂದಾನಪ್ಪದೊಡ್ಡ ಮೇಟಿಯವರ ತಾಯಿ ಶ್ರೀಮತಿ ಬಸಮ್ಮನವರಿಗೆ ಪತ್ರ ಬರೆದು ಧೈರ್ಯ ಹಾಗು ಅಭಯದ ಬಗ್ಗೆ ವಿಶ್ವಾಸ ತುಂಬಿದರು..
ಅದರಂತೆ ಅಂದಾನಪ್ಪ ದೊಡ್ಡಮೇಟಿ ಯವರಿಗೆ ಸಂತೋಷ ವ್ಯಕ್ತಪಡಿಸಿ ಪತ್ರವನ್ನು ಬರೆದರು..
ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಲ್ಲಿ ಭಾಗವಹಿಸಿದವರ ಬಗ್ಗೆ ಅವರು ವಹಿಸುತ್ತಿದ್ದ ಕಾಳಜಿಗಳು.. ಅವರ ಕುಟುಂಬದ ಇತರ ಸದಸ್ಯರ ಬಗ್ಗೆ ಇರುವ ಗೌರವವಗಳಿಗೆ ಇದು ಸಾಕ್ಷಿಯಾಗಿದೆ. ಮಹಾತ್ಮ ಗಾಂಧೀಜಿಯವರ ದು ಮಾತೃಹೃದಯ ತಮ್ಮೊಡನಾಡಿಗಳ ನೋವುಗಳನ್ನು ಕಂಡು ತೀವ್ರ ವಾಗಿ ಸ್ಪಂದಿಸಿದ್ದರಿಂದ ಅವರೊಂದಿಗೆ ಜನಸಾಮಾನ್ಯರೂ ಐತಿಹಾಸಿಕ ಭಾರತೀಯ ರಾಷ್ಟ್ರೀ ಆಂದೋಲನದ ಭಾಗವಾದರು…ಮಹಾತ್ಮಜಿವರಿಗೆ ಸಾವು ಇಲ್ಲವೇ ಇಲ್ಲ..!.ಅವರು ಸದಾ ಇರುತ್ತಾರೆ ಜಗತ್ತಿನಲ್ಲಿ ಪ್ರೀತಿ.. ಅಹಿಂಸೆ ಯ ಸತ್ಯದ ಪ್ರತಿ ಪಾದಕರಾಗಿ ಹರಡುತ್ತಾರೆ..
ಮಹಾತ್ಮ ಗಾಂಧೀಜಿಯವರ ಈ ಪತ್ರ ದೊಡ್ಡ ಮೇಟಿ ಯವರ ತಾಯಿಯವರಿಗೆ ಬದುಕಲು ಸಂಜೀವಿನಿಯಾಯಿತು ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದ ಬಸಮ್ಮನವರು ತಮ್ಮಮಗ ಜೈಲಿನಿಂದ ಬಿಡುಗಡೆಯಾಗುವವರೆಗೂ ನಂತರ ಕೆಲವರ್ಷ ಜೀವಹಿಡಿದುಕೊಂಡಿದ್ದರು!

ಇದನ್ನು ‘ಪ್ರತಿಧ್ವನಿ’ ತಂಡಕ್ಕೆ ತಿಳಿಸಿದ ಅದೇ ಕುಟುಂಬದವರಾದ ರವೀಂದ್ರ ದೊಡ್ಡಮೇಟಿ ಆ ಪತ್ರವನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ.

ರವೀಂದ್ರನಾಥ ಅವರು, “ಗಾಂಧೀಜಿ ಬರೀ ಒಬ್ಬ ವ್ಯಕ್ತಿ ಅಥವಾ ಹೆಸರು ಅಲ್ಲ, ಅವರೆಂದರೆ ಒಂದು ಶಕ್ತಿ. ನಮ್ಮ ಭಾಗದ ಜನರು ಗಾಂಧೀಜಿ ಭೇಟಿ ಕೊಟ್ಟು ಹೋಗುವಾಗ ಅವರ ತುಳಿದ ಹೋದ ಹೆಜ್ಜೆಯ ಗುರುತಿದ್ದ ಮಣ್ಣನ್ನು ತಮ್ಮ ಸೆರಗಿನಲ್ಲಿ ಕಟ್ಟಿಕೊಂಡಿದ್ದರು. ಗಾಂಧೀಜಿ ಹುತಾತ್ಮರಾದ ದಿನದಂದು ಕೆಲವರು ಚಪ್ಪಲಿ ಧರಿಸುವುದಿಲ್ಲವೆಂದು ನಿರ್ಧರಿಸಿದರು, ಕೆಲವರು ಸಿಹಿ ತಿನ್ನುವುದು ನಿಲ್ಲಿಸಿದರು, ಇವತ್ತಿಗೂ ಗಾಂಧೀಜಿ ಬಗ್ಗೆ ನಮ್ಮ ಹಿರಿಯರು ಹೇಳಿದ ಮಾತು ಗುಂಗು ಹಿಡಿಸುತ್ತಲೇ ಇವೆ”.

Tags: Gandhi SignnatureLetterMahatma Gandhjiಗಾಂಧೀಜಿಪತ್ರವೃದ್ಧ ಜೀವ
Previous Post

ಬಿಜೆಪಿ ನಾಯಕರ ಪ್ರಚೋದನೆ ಬೆನ್ನಲ್ಲೇ ಜಾಮಿಯಾ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ

Next Post

ಪುತ್ರನ ಕಾರಣಕ್ಕೆ ಮೆತ್ತಗಾದ ರಾಜಾಹುಲಿ

Related Posts

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..
Top Story

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) ರಾಷ್ಟ್ರಗಳಿಗೆ ಬೆಳವಣಿಗೆ ಮತ್ತು ಸಸ್ಥಿರತೆಯನ್ನು ಸಮನ್ವಯಗೊಳಿಸುವ ಜಾಗತಿಕ ಚೌಕಟ್ಟನ್ನು ಒದಗಿಸುತ್ತವೆ. ಆದ್ದರಿಂದ ಅಭಿವೃದ್ಧಿ ಮತ್ತು ಸುಸ್ಥಿರತೆ ಹಾಗೂ ಒಳಗೊಳ್ಳುವಿಕೆಯ ಗುರಿಯ...

Read moreDetails
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

April 18, 2026
Next Post
ಪುತ್ರನ ಕಾರಣಕ್ಕೆ ಮೆತ್ತಗಾದ ರಾಜಾಹುಲಿ

ಪುತ್ರನ ಕಾರಣಕ್ಕೆ ಮೆತ್ತಗಾದ ರಾಜಾಹುಲಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada