• Home
  • About Us
  • ಕರ್ನಾಟಕ
Saturday, December 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಸ್ಟೂಡೆಂಟ್‌ ಕಾರ್ನರ್

ಸದೃಢ ದೇಶ ಸ್ಥಾಪಿಸಬೇಕಿದ್ದ ಯುವ ಜನತೆ ಎತ್ತ ಸಾಗುತ್ತಿದೆ?

by
March 2, 2020
in ಸ್ಟೂಡೆಂಟ್‌ ಕಾರ್ನರ್
0
ಸದೃಢ ದೇಶ ಸ್ಥಾಪಿಸಬೇಕಿದ್ದ ಯುವ ಜನತೆ ಎತ್ತ ಸಾಗುತ್ತಿದೆ?
Share on WhatsAppShare on FacebookShare on Telegram

ಮಾನವ ಸಂಪನ್ಮೂಲ ಯಾವುದೇ ಒಂದು ದೇಶದ ಅತಿ ದೊಡ್ಡ ಶಕ್ತಿ. ಅದನ್ನು ಸದ್ವಿನಿಯೋಗಿಸಿಕೊಂಡರೆ, ಸಕಾರಾತ್ಮಕವಾಗಿ ಬೆಳೆಸಿದರೆ, ಸರಿ ದಿಕ್ಕಿನಲ್ಲಿ ನಡೆಯುವಂತೆ ಪ್ರೇರೇಪಿಸಿದರೆ ಸಹಜವಾಗಿಯೇ ದೇಶವನ್ನು ಆಂತರಿಕವಾಗಿ ಬಲಪಡಿಸಬಹುದು. ಅದರಲ್ಲೂ ಯುವಶಕ್ತಿಯ ಮನಸ್ಥಿತಿ, ವರ್ತನೆ, ಆಲೋಚನಾ ಕ್ರಮ ದೇಶದ ಭವಿಷ್ಯಕ್ಕೆ ಮುನ್ನುಡಿ ಇದ್ದಂತೆ. ಒಂದುವೇಳೆ ಈ ಶಕ್ತಿಯೇ ಸಮಾಜದ ಸಾಮರಸ್ಯ ತತ್ವಕ್ಕೆ ವಿರುದ್ಧವಾಗಿ ಚಲಿಸಿದರೆ ಅದು ದೊಡ್ಡ ಅನಾಹುತವನ್ನೇ ಸೃಷ್ಟಿಸುತ್ತದೆ.

ADVERTISEMENT

ಇಂದು ಭಾರತದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ, ಯುವ ಸಮೂಹದ ಮನಸ್ಥಿತಿ, ವರ್ತನೆಗಳನ್ನು ನೋಡಿದಾಗ ನಮ್ಮ ದೇಶದ ಬಹುಮುಖ್ಯ ಸಂಪನ್ಮೂಲವೇ ಪೋಲಾಗುತ್ತಿರುವಂತೆ ಕಾಣುತ್ತದೆ. ಗಲಭೆ, ಹಿಂಸಾಚಾರ, ಕೋಮು ಸಂಘರ್ಷಗಳಲ್ಲಿ ಎದ್ದು ಕಾಣುವ ಯುವಕರ ಆಕ್ರೋಶ ಭರಿತ ಮುಖಗಳು ವರ್ತಮಾನದ ದುರಂತ ಕತೆಗಳನ್ನು ಹೇಳುತ್ತಿವೆ. ಪ್ರಸ್ತುತ ರಾಜಕೀಯ ವ್ಯವಸ್ಥೆ, ಸಮಾಜದ ಹಿತಕ್ಕಿಂತ ಸ್ವಹಿತವೇ ಮುಖ್ಯವೆಂದುಕೊಂಡ ರಾಜಕಾರಣಿಗಳ ದಂಡು, ಧರ್ಮದ ಅಮಲನ್ನು ನೆತ್ತಿಗೇರಿಸಿಕೊಂಡ ಸಂಘಟನೆಗಳು, ಜನಪ್ರಿಯತೆಗಾಗಿ ಹಪಹಪಿಸುವ ನಾಯಕರು.. ಹೀಗೆ ಸಮಾಜಕ್ಕೆ ಹೊರೆಯೇ ಆಗಿರುವ ಈ ಗುಂಪಿನೊಳಗೆ ಗೊತ್ತೋ, ಗೊತ್ತಿಲ್ಲದೆಯೋ ಸೇರಿಕೊಂಡಿರುವವರಲ್ಲಿ ಯುವ ಸಮೂಹದ ಪಾಲು ದೊಡ್ಡದಿದೆ. ಯುವಜನರನ್ನು ತಮ್ಮ ಕಾರ್ಯಕರ್ತರುಗಳನ್ನಾಗಿ, ಪ್ರಚಾರಕರನ್ನಾಗಿ, ಗುರಾಣಿಗಳನ್ನಾಗಿ ಬಳಸಿಕೊಳ್ಳುವ ರಾಜಕೀಯ ವ್ಯವಸ್ಥೆ, ರಾಜಕಾರಣಿಗಳು ಹೊಸಬರೇನಲ್ಲ. ಇತಿಹಾಸದುದ್ದಕ್ಕೂ ತಮ್ಮ ರಕ್ಷಣೆಗಾಗಿ ಹೀಗೆ ಸಶಕ್ತ ಪಡೆಯನ್ನು ಸುತ್ತಲೂ ಇಟ್ಟಕೊಂಡು, ಕೊನೆಗೆ ಅವರನ್ನೇ ಬಲಿಪಶುಗಳನ್ನಾಗಿಸಿದ ಹಲವು ಕತೆಗಳಿವೆ. ರಾಜಕೀಯ, ಧಾರ್ಮಿಕ, ಸೈದ್ಧಾಂತಿಕ ಕಾರಣಗಳಿಗಾಗಿ ಕಿತ್ತಾಡುವ ಅದೆಷ್ಟೋ ವಿದ್ಯಾರ್ಥಿಗಳು ಹೀಗೆ ಯಾರದೋ ಹಿತಾಸಕ್ತಿಗಾಗಿ ಬಲಿಯಾಗುತ್ತಲೇ ಇದ್ದಾರೆ.

ಕಾಲೇಜು ಮಟ್ಟದಲ್ಲಿರುವ ವಿದ್ಯಾರ್ಥಿ ಸಂಘಟನೆಗಳಿಗೂ ಜಾತಿ, ಧರ್ಮ, ಸಿದ್ಧಾಂತ, ರಾಜಕೀಯ ವಿಚಾರಗಳ ಲೇಪನ ಮಾಡಿರುವುದರಿಂದ, ಅಲ್ಲಿ ನಡೆಯುವ ಪ್ರತಿ ಚಟುವಟಿಕೆಗಳು ಹೊರ ಜಗತ್ತಿನ ಪ್ರಭಾವದಿಂದಲೇ ನಡೆಯುತ್ತಿರುತ್ತವೆ. ಇತ್ತೀಚೆಗೆ ನಡೆದ ಕೆಲವು ಘಟನೆಗಳು ಅದಕ್ಕೆ ತಾಜಾ ಉದಾಹರಣೆಯಂತಿವೆ. “ಪಾಕಿಸ್ತಾನ್ ಜಿಂದಾಬಾದ್” ಘೋಷಣೆ, “ಫ್ರೀ ಕಾಶ್ಮೀರ್” ಕೂಗು, ಪ್ರತಿಭಟನೆ ವೇಳೆಯಲ್ಲಿ ಬಂದೂಕು ಹಿಡಿದ ಯುವಕರು, ಕಲ್ಲು ತೂರಾಟ ನಡೆಸಿದವರು, ಧಾರ್ಮಿಕ ಕಟ್ಟಡಗಳ ಮೇಲೇರಿ ಸ್ವಾಸ್ಥ್ಯ ಕದಡಿದ ಹುಡುಗರ ಬೆನ್ನೆಲುಬಿನ ಮೂಲ ಹುಡುಕಿ ಹೊರಟರೆ ಮತ್ತದೇ ಸ್ವಹಿತಾಸಕ್ತರ ನೆರಳು ಕಾಣುತ್ತದೆ. ಇತ್ತೀಚೆಗೆ ಕೇರಳದ ಶಾಲಾ – ಕಾಲೇಜುಗಳ ಆಡಳಿತ ಮಂಡಳಿಗಳು “ಚಳವಳಿಗಳಿಂದ ಶಾಂತಿಯುತ ವಾತಾವರಣಕ್ಕೆ ಧಕ್ಕೆ ಉಂಟಾಗುತ್ತಿದೆ” ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಅದನ್ನು ಪುರಸ್ಕರಿಸಿದ ಹೈಕೋರ್ಟ್, ಶಾಲಾ – ಕಾಲೇಜುಗಳಲ್ಲಿ ನಡೆಸುವ ಎಲ್ಲಾ ರೀತಿಯ ಚಳವಳಿಗಳಿಗೆ ನಿಷೇಧ ಹೇರಿದೆ. ಶಿಕ್ಷಣ ಸಂಸ್ಥೆಗಳ ವಾತಾವರಣ ಕೆಡಿಸುವ, ಕಾರ್ಯಕ್ಕೆ ಅಡ್ಡಪಡಿಸುವ ಪ್ರತಿಭಟನೆಗಳಿಗೆ ಅವಕಾಶವಿಲ್ಲವೆಂದೂ, ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳನ್ನು ಯಾರೂ ಪ್ರೇರೇಪಿಸುವಂತಿಲ್ಲವೆAದೂ ಆದೇಶ ಹೊರಡಿಸಿದೆ.

ಮೇಲ್ನೋಟಕ್ಕೆ ಇಂತಹ ಆದೇಶಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವೆಂಬAತೆ ಕಂಡರೂ ಪ್ರಸಕ್ತ ಸನ್ನಿವೇಶವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಯುವಸಮುದಾಯದ ಮನಸ್ಸು ಕಲುಷಿತಗೊಳ್ಳುತ್ತಿರುವುದನ್ನು ತಪ್ಪಿಸಲು ಈ ರೀತಿಯ ನಿರ್ಧಾರ ಅನಿವಾರ್ಯವೆಂದೂ ಅನ್ನಿಸುತ್ತದೆ. ವಿದ್ಯಾರ್ಥಿಗಳಲ್ಲಿ ದ್ವೇಷ ಮನೋಭಾವವನ್ನು ಬಿತ್ತುವ, ಸೈದ್ಧಾಂತಿಕ, ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ದಾಳವಾಗಿಸಿಕೊಂಡು ಸಂಘರ್ಷಕ್ಕೆ ಪ್ರೇರೇಪಿಸುವ ಕುತಂತ್ರಗಳು ಹೆಚ್ಚುತ್ತಿರುವಾಗ ಅವುಗಳನ್ನು ಹಾಗೆಯೇ ಬಿಟ್ಟರೆ ಒಂದಿಡೀ ಪೀಳಿಗೆಯ ಮನಸ್ಥಿತಿ ಕಲುಷಿತಗೊಳ್ಳುವುದು ನಿಶ್ಚಿತ. ಈ ದೃಷ್ಟಿಯಿಂದ ನೋಡಿದಾಗ ಇಂತಹ ಅನಾಹುತಗಳನ್ನು ತಪ್ಪಿಸಲು ಕೆಲ ಕಟು ನಿರ್ಧಾರಗಳನ್ನು ಕೈಗೊಳ್ಳಲೇಬೇಕು. ಅಂತೆಯೇ, ಬೇರೆ ಬೇರೆ ನೆಲೆಗಳಲ್ಲಿ ಆಗುತ್ತಿರುವ ಗಲಭೆ, ಹಿಂಸಾಚಾರಗಳಿಗೆ ಕಡಿವಾಣ ಹಾಕಲು, ಯುವಸಮೂಹ ದಿಕ್ಕು ತಪ್ಪದಂತೆ ಜಾಗೃತೆ ವಹಿಸಲು ಸರ್ಕಾರ ಮುಂದಾಗಲೇಬೇಕು. ಶಿಕ್ಷಣ ಸಂಸ್ಥೆಗಳಿAದ ದ್ವೇಷ ರಾಜಕಾರಣವನ್ನು ದೂರವಿಡುವುದು ಈ ಕ್ಷಣದ ತುರ್ತು. ಶಿಕ್ಷಣ ಪಡೆಯುವ ವಯಸ್ಸಿನಲ್ಲಿ ಧರ್ಮಾಧಾರಿತ, ಸಿದ್ಧಾಂತ ಆಧಾರಿತ ಗುಂಪುಗಳಾದರೆ ಮುಂದೆ ಇಡೀ ಸಮಾಜವೇ ಈ ತಪ್ಪಿಗಾಗಿ ಪರಿತಪಿಸಬೇಕಾಗುತ್ತದೆ.

ಪ್ರಜಾಪ್ರಭುತ್ವದಡಿಯಲ್ಲಿ ಪ್ರತಿಯೊಬ್ಬರಿಗೂ ಸಾಂವಿಧಾನಿಕವಾಗಿ ಪ್ರತಿಭಟಿಸುವ ಹಕ್ಕಿದೆಯೇ ವಿನಃ ಸಾರ್ವಜನಿಕ ಆಸ್ತಿಯನ್ನು ಹಾನಿಗೆಡವುವ ಹಕ್ಕಾಗಲೀ, ಕೊಲ್ಲುವ ಹಕ್ಕಾಗಲೀ ಇಲ್ಲ. ರಾಜಕಾರಣಿಗಳು ತಮ್ಮ ತೋಳ್ಬಲದ ಪ್ರದರ್ಶನಕ್ಕಾಗಿ, ಪ್ರತಿಷ್ಠೆಗಾಗಿ ಈ ಕ್ಷಣಕ್ಕೆ ಇಂತಹ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದಾದರೆ, ತಮ್ಮ ಸ್ವಾರ್ಥಕ್ಕಾಗಿ ಒಂದು ತಲೆಮಾರನ್ನೇ ಕೆಡಿಸಿದ ಪಾಪ ಅವರಿಗಂಟಲಿ!

Tags: Delhi ViolenceIndiaYouthyouth in VIolenceಕೋಮು ಸಂಘರ್ಷಯುವ ಜನತೆಸದೃಢ ದೇಶ
Previous Post

ಕೇಂದ್ರದಿಂದ ತೆರಿಗೆ ಹಂಚಿಕೆ ಕಡಿತ; ಕೊರತೆ ನೀಗಿಸಲು ಸಾಲ ಪಡೆಯಬೇಕಿದೆ ರಾಜ್ಯ ಸರ್ಕಾರ

Next Post

KIADB ಅಧಿಕಾರಿಗಳ ದಿವ್ಯ ನಿರ್ಲ್ಯಕ್ಷ; ಬೆಂಗಳೂರಿನ ಕೈ ತಪ್ಪಿದ ಮಹತ್ವದ ಯೋಜನೆ

Related Posts

Top Story

ಸರಕಾರಿ ಶಾಲೆಗಳಿಗೆ ಟೆಲಿಸ್ಕೋಪ್‌ ವಿತರಣೆ ಯೋಜನೆ ವಿಸ್ತರಿಸಲು ಚಿಂತನೆ: ಸಚಿವ ಎನ್.ಎಸ್. ಭೋಸರಾಜು

by ಪ್ರತಿಧ್ವನಿ
December 4, 2025
0

- ಕ್ರೈಸ್‌ ಶಾಲಾ ಶಿಕ್ಷಕರುಗಳಿಗೆ ಟೆಲಿಸ್ಕೋಪ್‌ ನಿರ್ವಹಣೆಯ ತರಬೇತಿ ಉದ್ಥಾಟನೆ - 2026 ನೇ ಸಾಲಿನ ಆಸ್ಟ್ರೋನಾಮಿಕಲ್‌ ಕ್ಯಾಲೆಂಡರ್‌ ಅನಾವರಣ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು...

Read moreDetails

DCM DK Shivakumar: ಕೆಜೆ ಜಾರ್ಜ್ ರವರನ್ನು ಬೇಟಿ ಮಾಡಿ ನಾಯಕತ್ವ ಬದಲಾವಣೆಯ ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್

November 24, 2025

Lakshmi Hebbalkar: ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 20, 2025

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

October 30, 2025

CM Siddaramaiah: ವಿಜ್ಞಾನ ಓದಿಯೂ ಮೌಡ್ಯ ನಂಬುತ್ತೀರಿ ಅಂದರೆ ನೀವು ಓದಿದ್ದೇ ದಂಡ ತಾನೇ..?

October 14, 2025
Next Post
KIADB ಅಧಿಕಾರಿಗಳ ದಿವ್ಯ ನಿರ್ಲ್ಯಕ್ಷ; ಬೆಂಗಳೂರಿನ ಕೈ ತಪ್ಪಿದ ಮಹತ್ವದ ಯೋಜನೆ

KIADB ಅಧಿಕಾರಿಗಳ ದಿವ್ಯ ನಿರ್ಲ್ಯಕ್ಷ; ಬೆಂಗಳೂರಿನ ಕೈ ತಪ್ಪಿದ ಮಹತ್ವದ ಯೋಜನೆ

Please login to join discussion

Recent News

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ
Top Story

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

by ಪ್ರತಿಧ್ವನಿ
December 13, 2025
BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ
Top Story

BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

by ಪ್ರತಿಧ್ವನಿ
December 13, 2025
Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ
Top Story

Winter Session 2025: ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು- ಸಚಿವ ಸಂತೋಷ್ ಲಾಡ್ ಸ್ಪಷ್ಟನೆ

by ಪ್ರತಿಧ್ವನಿ
December 13, 2025
ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ
Top Story

ಬೆಂಗಳೂರಿನಲ್ಲಿ ತೀವ್ರ ಹದಗೆಟ್ಟ ಗಾಳಿಯ ಗುಣಮಟ್ಟ: ಇದು ಎಚ್ಚರಿಕೆ ಗಂಟೆ

by ಪ್ರತಿಧ್ವನಿ
December 13, 2025
ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ
Health Care

ಸಾಮಾಜಿಕ ವ್ಯಸನಗಳೂ ಶಾಸನಾತ್ಮಕ ಚಿಕಿತ್ಸೆಯೂ

by ನಾ ದಿವಾಕರ
December 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

ಲೆಜೆಂಡ್‌ ಮೆಸ್ಸಿ ನೋಡಲು ಬಂದ ಫ್ಯಾನ್ಸ್‌ಗೆ ನಿರಾಸೆ: ಕ್ರೀಡಾಂಗಣಕ್ಕೆ ನುಗ್ಗಿ ಆಕ್ರೋಶ

December 13, 2025
BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

BBK 12: ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ರಾಶಿಕಾ ಜೊತೆ ಸೂರಜ್ ಕಿತ್ತಾಟ

December 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada