• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಸದನದಲ್ಲಿನ ತಮ್ಮ ಕೊನೆಯ ಭಾಷಣದಲ್ಲಿ ಯಡಿಯೂರಪ್ಪ ಭಾವುಕ

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
February 23, 2023
in ಅಂಕಣ
0
ನನ್ನ ಜೀವನದ ಕೊನೆಯ ಅಧಿವೇಶನ ಎಂದ ಬಿಎಸ್‌ವೈ …!
Share on WhatsAppShare on FacebookShare on Telegram

ಬಹುಶಃ ಭಾರತದ ವಿಧಾನ ಮಂಡಳಗಳ ಇತಿಹಾಸದಲ್ಲೇ ಸ್ವಪಕ್ಷಿಯರಿಂದ ಅತ್ಯಂತ ಹೆಚ್ಚಿನ ಮಟ್ಟದ ನೋವನ್ನು ಅನುಭವಿಸಿ ತನ್ನ ರಾಜಕೀಯ ಜೀವನದ ವಿದಾಯ ಭಾಷಣವನ್ನು ಅತ್ಯಂತ್ಯ ನೋವಿನಿಂದ ಕೊನೆಗೊಳಿಸಿದ ಏಕೈಕ ಜನನಾಯಕ ಯಡಿಯೂರಪ್ಪನವರು ಎಂದರೆ ತಪ್ಪಾಗಲಿಕ್ಕಿಲ್ಲ. ಕಳೆದ ನಾಲ್ಕು ದಶಕಗಳ ಉದ್ದಕ್ಕೂ ಯಡಿಯೂರಪ್ಪ ಕರ್ನಾಟಕ ರಾಜಕೀಯದ ಅವಿಭಾಜ್ಯ ಅಂಗವಾಗಿದ್ದರು. ಆರಂಭದಿಂದಲೂ ಅವರನ್ನು ಲಿಂಗಾಯತ ಸಮುದಾಯದ ಮತ ಸೆಳೆಯುವ ಶಕ್ತಿಯಾಗಿ ಬಿಜೆಪಿ ಮತ್ತು ಸಂಘ ಬಳಸಿಕೊಂಡಿತೆ ಹೊರತು ಒಬ್ಬ ರಾಜಕೀಯ ನಾಯಕನಾಗಿ ಯಡಿಯೂರಪ್ಪನವರ ಶಕ್ತಿಯನ್ನು ಅವು ಧನಾತ್ಮಕವಾಗಿ ಬಳಸಿಕೊಳ್ಳಲಿಲ್ಲ.

ADVERTISEMENT

ಯಡಿಯೂರಪ್ಪ ನಿನ್ನೆ ನಡೆದ ವಿಧಾನಮಂಡಲದ ಬಜೆಟ್ ಅಧಿವೇಷನದಲ್ಲಿ ತಮ್ಮ ಅತ್ಯಂತ ನೋವಿನಿಂದ ಕೂಡಿದ ವಿಧಾಯ ಭಾಷಣವನ್ನು ಮಾಡಿದ್ದಾರೆ. ಇದು ಸದನದಲ್ಲಿ ನನ್ನ ಕೊನೆಯ ಮಾತು ಎನ್ನುವಾಗ ಯಡಿಯೂರಪ್ಪನವರ ಧ್ವನಿಯಲ್ಲಿ ಅತ್ಯಂತ ಹೆಚ್ಚಿನ ನೋವು ಎದ್ದು ಕಾಣುತ್ತಿತ್ತು. ಕರ್ನಾಟಕದಲ್ಲಿ ಜೀರೊ ಹಂತದಲ್ಲಿದ್ದ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ಬೆಳೆಸಿದ ಯಡಿಯೂರಪ್ಪನವರಿಗೆ ಕನಿಷ್ಟ ಸರಳ ಬಹುಮತದಿಂದ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಎರಡು ಸಲ ಅಡ್ಡ ಮಾರ್ಗದಿಂದ ಸರಕಾರ ರಚಿಸಿದಾಗಲೂ ಕೂಡ ಅವರನ್ನು ಅವಧಿ ಪೂರ್ಣ ಅಧಿಕಾರದಲ್ಲಿ ಅವರ ಪಕ್ಷ ಮುಂದುವರೆಸಲಿಲ್ಲ ಎನ್ನುವ ನೋವಿನೊಂದಿಗೆ ಅವರು ತಮ್ಮ ಸದನದಲ್ಲಿ ರಾಜಕೀಯ ಜೀವನದ ಕೊನೆಯ ಭಾಷಣ ಮಾಡಬೇಕಾಯಿತು.

ಬಿಜೆಪಿ ಮತ್ತು ಸಂಘದ ವಿಭಜಕ ನೀತಿಯನ್ನು ಯಡಿಯೂರಪ್ಪ ದೂರದಲ್ಲಿಟ್ಟೆ ಪಕ್ಷವನ್ನು ಕಟ್ಟಿದವರು. ಎಲ್ಲರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದಷ್ಟೆ ಅಲ್ಲದೆ ಕೇವಲ ಲಿಂಗಾಯತರನ್ನು ನಂಬಿಕೊಂಡರೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಅಸಾಧ್ಯವೆಂದು ಅವರು ಅರಿತಿದ್ದರು. ಏಕೆಂದರೆ ವಿರೋಧ ಪಕ್ಷಗಳಲ್ಲಿ ಬಹುತೇಕ ನಾಯಕರು ಲಿಂಗಾಯತ ಸಮುದಾಯಕ್ಕೆ ಸೇರಿದವರು ಮತ್ತು ಲಿಂಗಾಯತ ಸಮುದಾಯದಲ್ಲಿ ಅಪಾರ ಸಂಖ್ಯೆಯ ಮತದಾರರು ಜಾತ್ಯಾತೀತರು ಆಗಿದ್ದು ಅವರೆಲ್ಲರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವುದು ಯಡಿಯೂರಪ್ಪನವರು ಚೆನ್ನಾಗಿ ಅರಿತಿದ್ದರು. ಆ ಕಾರಣದಿಂದಲೆ ಅವರು ಈಡಿಗˌ ಉಪ್ಪಾರˌ ಮುಂತಾದ ಅಲ್ಪ ಸಂಖ್ಯಾತ ಹಿಂದುಳಿದ ವರ್ಗಗಳ ಮತ್ತು ಭೋವಿˌ ಲಂಬಾಣಿ ಮುಂತಾದ ಸ್ಪರ್ಶ ದಲಿತರ ಹಾಗು ಎಡ ಅಸ್ಪರ್ಶ ದಲಿತ ಮಾದಿಗ ಜನಾಂಗದ ಸಂಪೂರ್ಣ ಬೆಂಬಲವನ್ನು ಬಿಜೆಪಿ ಪರವಾಗಿ ಸಂಘಟಿಸುವ ಮೂಲಕ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಮೈಕ್ರೋ ಸೋಷಲ್ ಇಂಜಿನೀಯರಿಂಗ್ ಪ್ರಯೋಗ ಮಾಡಿದ ನಾಯಕರೆನ್ನಿಸಿಕೊಂಡರು.

ಯಡಿಯೂರಪ್ಪ ತಮ್ಮ ಪಕ್ಷದ ಮೇಲೆ ಹೊಂದಿದ್ದ ನಿಯಂತ್ರಣವನ್ನು ತಪ್ಪಿಸಲು ಕೇಶವಕೃಪಾದ ಆಚಾರ್ಯರು ಸದಾ ಹೊಂಚು ಹಾಕುತ್ತಲೆ ಇದ್ದರು. ಕೇವಲ ಪಕ್ಷದ ಮೇಲಷ್ಟೆ ಅಲ್ಲದೆ ಲಿಂಗಾಯತ ಸಮುದಾಯದ ಮೇಲೆ ಯಡಿಯೂರಪ್ಪ ಹೊಂದಿರುವ ನಿಯಂತ್ರಣದ ಮೇಲೂ ಕೇಶವಕೃಪಾದ ಆಚಾರ್ಯರಿಗೆ ಹೊಟ್ಟೆಕಿಚ್ಚು ಇತ್ತು ಎನ್ನುವುದು ಇತ್ತೀಚಿನ ಪಂಚಮಸಾಲಿ ಮೀಸಲಾತಿ ಹೋರಾಟದಿಂದ ಬಹಿರಂಗಗೊಂಡಿತ್ತು. ಒಟ್ಟಾರೆ ಯಡಿಯೂರಪ್ಪನವರ ಬಿಜೆಪಿ ಮೇಲಿನ ಹಾಗು ಲಿಂಗಾಯತ ಸಮುದಾಯದ ಮೇಲಿನ ಹಿಡಿತವನ್ನು ಒಟ್ಟೊಟ್ಟಿಗೆ ಹುಡಿಗೊಳಿಸಿ ಬ್ರಾಹ್ಮಣ ನಿಯಂತ್ರಿತ ಹಿಂದುತ್ವದ ಆಧಾರದಲ್ಲಿ ಬಿಜೆಪಿಯನ್ನು ಬಲಪಡಿಸುವುದು ಕೇಶವಕೃಪಾದ ಆಚಾರ್ಯರ ಹುನ್ನಾರ ಮೇಲುಗೈ ಪಡೆಯಿತು. ಯಡಿಯೂರಪ್ಪನವರ ನಂತರ ಅವರ ಮಗನನ್ನು ಮುನ್ನೆಲೆಗೆ ಬರದಂತೆ ತಡೆಯುವಲ್ಲಿಯೂ ಕೂಡ ಆಚಾರ್ಯರ ಪಡೆ ಭಾಗಶಃ ಯಶಸ್ವಿಯಾಗಿದೆ. ೨೦೨೩ ರ ಚುನಾವಣೆಯು ಬಿಜೆಪಿ ಪಾಲಿಗು ಮತ್ತು ಕರ್ನಾಟಕದ ರಾಜಕೀಯ ಕ್ಷೇತ್ರದ ಪಾಲಿಗು ಯಡಿಯೂರಪ್ಪನವರನ್ನು ಹೊರತುಪಡಿಸಿದ ಚುನಾವಣೆಯಾಗಲಿದೆ.

ಮೊನ್ನಿನ ವಿದಾಯ ಭಾಷಣದಲ್ಲಿ ಯಡಿಯೂರಪ್ಪನವರು ಬಹಳ ಸೂಚ್ಯವಾಗಿ “ಈ ಯಡಿಯೂರಪ್ಪ ಸುಮ್ಮನೆ ಕೂಡುವವನಲ್ಲ” ಎಂದು ಬಹಳ ಮಾರ್ಮಿಕವಾಗಿ ತಮ್ಮ ಒಳ-ಹೊರಗಿನ ವಿರೋಧಿಗಳಿಗೆ ಒಂದು ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ನಿಜˌ ಯಡಿಯೂರಪ್ಪ ಎಂದಿಗೂ ಸುಮ್ಮನೆ ಕೂಡುವವರಲ್ಲ. ಯಡಿಯೂರಪ್ಪನವರನ್ನು ಬಳಸಿಕೊಂಡು ಬೆಳೆದು ಅಧಿಕಾರ ಮತ್ತು ಹಣ ಗಳಿಸಿದವರು ಅವರನ್ನು ಮತ್ತು ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಿಹಾಕಲು ಮಾಡುತ್ತಿರುವ ಹುನ್ನಾರಗಳಿಗೆ ಯಡಿಯೂರಪ್ಪ ಈ ಚುನಾವಣೆಯ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎನ್ನುವ ಸಂದೇಶವಂತೂ ಅವರ ವಿದಾಯದ ಭಾಷಣ ರವಾನಿಸಿದ್ದು ಸುಳ್ಳಲ್ಲ.

Tags: ಬಿ.ಎಸ್ ಯಡಿಯೂರಪ್ಪಬಿಜೆಪಿ
Previous Post

ವಿನೂತನ ಪ್ರಚಾರ: 3 ನಿಮಿಷದಲ್ಲಿ 184 ಸೆಲ್ಫಿ ತೆಗೆದು ಗಿನ್ನೆಸ್‌ ದಾಖಲೆ ಬರೆದ ಅಕ್ಷಯ್‌ ಕುಮಾರ್

Next Post

ನಿರುದ್ಯೋಗ ಬಿಕ್ಕಟ್ಟು: 6 ಸಾವಿರ ಹುದ್ದೆಗೆ 12 ಲಕ್ಷಕ್ಕೂ ಅಧಿಕ ಅರ್ಜಿ.!

Related Posts

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ
ಅಂಕಣ

ಮರುಕಳಿಸಿದ ಪ್ರತ್ಯೇಕ ಮತದಾರರ ಪರಂಪರೆ

by ಪ್ರತಿಧ್ವನಿ
May 13, 2026
0

ಮೂಲ : ಝಿಯಾ ಉಸ್‌ ಸಲಾಂ ಕನ್ನಡಕ್ಕೆ : ನಾ ದಿವಾಕರ (ಆಧಾರ The insidious return of separate electorates Zia us Salam ದ...

Read moreDetails
ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

ಸಂದಿಗ್ಧ ಮತದಾರ ನಿರ್ದೇಶಿತ ಮತದಾನ

May 11, 2026
ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

ಜನಮತ – ಆಯ್ಕೆ ಆದ್ಯತೆ ಮತ್ತು ಪರ್ಯಾಯ

May 9, 2026
ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

May 7, 2026
ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ

ಕುಸಿದ ಭೂಮಿಕೆಯ ಮೇಲೆ  ಶ್ರಮಿಕರ ಮೇ ದಿನಾಚರಣೆ

May 4, 2026
Next Post
ನಿರುದ್ಯೋಗ ಬಿಕ್ಕಟ್ಟು: 6 ಸಾವಿರ ಹುದ್ದೆಗೆ 12 ಲಕ್ಷಕ್ಕೂ ಅಧಿಕ ಅರ್ಜಿ.!

ನಿರುದ್ಯೋಗ ಬಿಕ್ಕಟ್ಟು: 6 ಸಾವಿರ ಹುದ್ದೆಗೆ 12 ಲಕ್ಷಕ್ಕೂ ಅಧಿಕ ಅರ್ಜಿ.!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada