ಮೈಸೂರು : ದೇಶದಲ್ಲಿಎಸ್ ಐ ಆರ್ ವಿರೋಧಿಸಿದ್ದ ಮಮತಾ ಬ್ಯಾನರ್ಜಿಯನ್ನು ಜನ ತಿಪ್ಪೆಗೆ ಎಸೆದಿದ್ದಾರೆ. ಇಲ್ಲಿನ ಎನ್.ಆರ್. ಕ್ಷೇತ್ರದಲ್ಲಿ ಖಾಲಿ ಸೈಟ್ ನಲ್ಲಿ 20 ಮತದಾರರಿದ್ದರು. ಚುನಾವಣೆ ಹಿಂದಿನ ದಿನ ಕವರ್ ಕೊಡಲು ಕಾಂಗ್ರೆಸ್ ನವರು ಬರುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಎದ್ದು ಕೂತಿದ್ದಾರೆ, ಬಿಎಲ್ಓಗಳನ್ನೆ ಮಸೀದಿಗೆ ಕರೆಸಿ ಯಾಕೆ ಅರ್ಜಿ ತುಂಬಿಸುತ್ತಿದ್ದಿರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ್ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಚೌಟ್ರಿ, ಮಸೀದಿಗಳಿಗೆ ಕರೆಸಿ ಅರ್ಜಿ ತುಂಬಿದರೆ ಅನಧಿಕೃತ ಮತದಾರರು ಸೇರುತ್ತಾರೆ. ಹಿಂದೂಗಳು ಇರುವ ಕಡೆ ಯಾಕೆ ದೇವಸ್ಥಾನಗಳಲ್ಲಿ, ಛತ್ರಗಳಲ್ಲಿ ಗುಂಪು ಕಟ್ಟಿಕೊಂಡು ಅರ್ಜಿ ತುಂಬುತ್ತಿಲ್ಲ?ಮುಸ್ಲಿಮರು ಹೆಚ್ಚಾಗಿ ಇರುವ ಕಡೆ ಯಾಕೆ ಗುಂಪಾಗಿ ಅರ್ಜಿ ತುಂಬುತ್ತಿದ್ದಾರೆ. ಇವತ್ತಿನ ಸಿಎಂ ಧಮ್ಕಿ ಹಾಕಿಯೆ ಕೆಲಸ ಮಾಡಿಸುತ್ತಾರೆ. ಬಿಎಲ್ಓಗಳ ಮೇಲೆ ಸರ್ಕಾರ ಒತ್ತಡ ಹೇರಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಗೃಹ ಸಚಿವರಿಗೆ ಎಸ್ ಐ ಆರ್ (Special Intensive Revision) ಎಂಬುದು ಅವರ ವಿದ್ಯಾರ್ಹತೆ ಮೀರಿದ ವಿಚಾರ ಆಗಿದೆ. ನಕಲಿ ಮತದಾರರನ್ನು ನಂಬಿಕೊಂಡೇ ಕಾಂಗ್ರೆಸ್ ಇದೆ. ಸಂಸದ ಯದುವೀರ ಮಹಾರಾಜರು ಎಸ್ ಐ ಅರ್ ಬಗ್ಗೆ ಧ್ವನಿ ಎತ್ತಿದ್ದಾರೆ. ಕೆಲವು ಜನರು ನಾವು ವೋಟ್ ಹಾಕಿಲ್ವಾ ಎಂದು ಯದುವೀರ ವಿರುದ್ದವಾಗಿ ಮಾತನಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಪ್ರಾಬಲ್ಯ ಇರುವ ಬೂತ್ಗಳಲ್ಲಿ ಬಿಜೆಪಿಗೆ ನೂರು ಮತ ಬಂದಿದ್ದೀಯಾ? ಕಾಂಗ್ರೆಸ್ ಅಭ್ಯರ್ಥಿಗೆ ಲಕ್ಷ ಮತ ಹಾಕಿದ್ದೀರಾ ಎಂದು ಪರೋಕ್ಷವಾಗಿ ಮುಸ್ಲಿಂರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಗೆ ನಾವು ವೋಟು ಹಾಕಿದ್ದೇವೆ ಅಂದ್ರೆ ಎಲ್ಲಿ ಹೋಯ್ತು ವೋಟು ? ಈ ರೀತಿ ಸುಳ್ಳು ಹೇಳಿಕೆಯನ್ನು ಬಿಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಾ ಪ್ರಹಾರ ಮಾಡಿದ್ದಾರೆ.





