
ಮುತ್ತಪ್ಪ ರೈ ಕಿರಿಯ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿದ್ದಾರೆ ಬಿಡದಿ ಪೊಲೀಸರು. ಫೈರಿಂಗ್ ಸಂಬಂಧ ಹಲವರ ವಿಚಾರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಮನೆ ಕೆಲಸಗಾರರು, ಸಿಬ್ಬಂದಿ ಹಾಗೂ ರಿಕ್ಕಿ ರೈ ಅಂಗ ರಕ್ಷಕರ ವಿಚಾರಣೆಗೆ ತಯಾರಿ ನಡೆದಿದೆ. ಸದಾ ಐದಾರು ಮಂದಿ ಅಂಗ ರಕ್ಷಕರ ಜೊತೆ ಓಡಾಡುತ್ತಿದ್ದ ರಿಕ್ಕಿ ರೈ, ಗುಂಡು ಹಾರಿದ ದಿನ ಕೇವಲ ಓರ್ವ ಅಂಗ ರಕ್ಷಕನ ಜೊತೆ ಹೊರಟಿದ್ದು ಯಾಕೆ ಎಂದು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.

ಈಗಾಗಲೇ ಕಾರು ಚಾಲಕ ಬಸವರಾಜ್, ಗನ್ ಮ್ಯಾನ್ ರಾಜ್ ಪಾಲ್ ವಿಚಾರಣೆ ಮಾಡಿದ್ದು, ರಿಕ್ಕಿ ರೈ ಸ್ನೇಹಿತ ಫರ್ಹಾನ್ ವಿಚಾರಣೆ ಕೂಡ ನಡೆಸಿದ್ದಾರೆ. ಇನ್ನುಳಿದಂತೆ ಘಟನಾ ಸ್ಥಳದ ಟವರ್ ಲೋಕೇಷನ್, ಮೊಬೈಲ್ ಸಿಡಿಆರ್ಗಳ ಪರಿಶೀಲನೆ ಮಾಡಿದ್ದು, ಟವರ್ ಡಂಪ್ ತೆಗೆದು ಪರಿಶೀಲನೆ ನಡೆಸಿದ್ದಾರೆ. ಫೈರಿಂಗ್ ಮಾಡಿದ ಶೂಟರ್ಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗ್ತಿದೆ. ರಿಕ್ಕಿ ರೈ ಮೇಲೆ ಫೈರಿಂಗ್ಗೆ ಬಳಸಿರುವ ಗನ್ ಗುರುತು ಪತ್ತೆ ಆಗಿದೆ. ಪ್ರಾಥಮಿಕ ತನಿಖೆ ವೇಳೆ Twelve ಬೋರ್ ಗನ್ ಬಳಕೆ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ..

Twelve ಬೋರ್ ಶಾರ್ಟ್ ಗನ್ ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗುಂಡು ಹಾರಿದ ಸ್ಥಳದಲ್ಲಿ ಸಿಕ್ಕ ಕಾಟ್ರೆಡ್ಜ್, ಗುಂಡುಗಳ ಪರಿಶೀಲನೆಯಿಂದ ಈ ಮಾಹಿತಿ ಲಭ್ಯವಾಗಿದೆ. ಪೊಲೀಸರು ಹಾಗೂ ಎಫ್ಎಸ್ಎಲ್ ತಂಡದಿಂದ ಬುಲೆಟ್ ಮತ್ತು ಕಾಟ್ರೆಡ್ಜ್ ಪರಿಶೀಲನೆ ಮಾಡಿದ್ದು, ಈ ವೇಳೆ Twelve ಬೋರ್ ಶಾರ್ಟ್ ಗನ್ನಲ್ಲಿ ಬಳಸುವ ಬುಲೆಟ್ ಮತ್ತು ಕಾಟ್ರೆಡ್ಜ್ ಎಂಬುದು ಪತ್ತೆಯಾಗಿದೆ. Twelve ಬೋರ್ ಶಾರ್ಟ್ ಗನ್ ಫೈರ್ ಮಾಡಿದ್ದಾನೆ ಶೂಟರ್. ಈ ಬಗ್ಗೆ ಸೊಕೋ ಮತ್ತು ಎಫ್ಎಸ್ಎಲ್ ತಂಡದಿಂದ ತನಿಖೆ ಮುಂದುವರಿದಿದೆ.

Twelve ಬೋರ್ ಗನ್ನಿಂದ ಸುಮಾರು 40 ರಿಂದ 60 ಮೀಟರ್ ದೂರದಿಂದಲೇ ಫೈರ್ ಮಾಡಬಹುದು. ಪೊಲೀಸರು ಫೈರಿಂಗ್ ಸ್ಥಳದಲ್ಲಿ ಮೆಜರ್ಮೆಂಟ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 50 ಮೀಟರ್ ಅಂತರದಲ್ಲಿ ಫೈರಿಂಗ್ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ರಿಕ್ಕಿ ರೈ ಮೇಲೆ Twelve ಬೋರ್ ಗನ್ನಿಂದ ಫೈರ್ ಆಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಬಗ್ಗೆ ಸ್ಪೆಷಲ್ ಟೀಮ್ಸ್ ತನಿಖೆ ಮುಂದುವರಿಸಿವೆ.

ಗುಂಡಿನ ದಾಳಿ ಬಗ್ಗೆ ಆಸ್ಪತ್ರೆಯಲ್ಲಿ ರಿಕ್ಕಿ ರೈ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ ಬಿಡದಿ ಪೊಲೀಸರು. ಎಫ್ಐಆರ್ ನಲ್ಲಿ ಉಲ್ಲೇಖಿಸಿರುವ ಅಂಶಗಳನ್ನೇ ಹೇಳಿಕೆ ಕೊಟ್ಟಿದ್ದಾರೆ ರಿಕ್ಕಿ ರೈ ಎನ್ನಲಾಗಿದೆ. ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ವಿರುದ್ಧ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಜಮೀನು ವಿವಾದ ಸಂಬಂಧ ಕೋರ್ಟ್ ಕೇಸ್ ಇತ್ತು. ಹಾಗಾಗಿ ರಷ್ಯಾದಿಂದ ಬೆಂಗಳೂರಿಗೆ ಬಂದಿದ್ದೆ. ಶುಕ್ರವಾರ ಸಂಜೆ ಸದಾಶಿವನಗರ ಮನೆಯಿಂದ ಬಿಡದಿ ಮನೆಗೆ ಹೋಗಿದ್ದೆ. ರಾತ್ರಿ ವಾಪಸ್ ಬರುವಾಗ ಮನೆಯಿಂದ ಬರುವಾಗ ಕಾರಿನ ಮೇಲೆ ಫೈರ್ ಆಗಿದೆ ಎಂದು ಬಹುತೇಕ ಎಫ್ಐಆರ್ ನಲ್ಲಿ ಉಲ್ಲೇಖಿಸಿರುವ ಅಂಶಗಳನ್ನೆ ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ.