ಯುಪಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು (ಬಿಎಸ್ಪಿ) ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಅರ್ಜಿ ಆಹ್ವಾನಿಸಲು ಆರಂಭಿಸಿದೆ.
ಪಕ್ಷವು ಕೆಲವು ಮಾನದಂಡಗಳನ್ನು ನಿಗದಿಪಡಿಸಿದ್ದು, ಅದರಲ್ಲಿ ಮುಖ್ಯವಾದದು ಭವಿಷ್ಯದ ಅಭ್ಯರ್ಥಿಗಳು ತಮ್ಮ ತಮ್ಮ ‘ಸಮುದಾಯ’ಕ್ಕಾಗಿ (ಜಾತಿ) ಏನು ಮಾಡಿದ್ದಾರೆ ಎಂಬ ವಿವರಗಳನ್ನು ಒದಗಿಸಬೇಕು.
ಒಬ್ಬ ಅಭ್ಯರ್ಥಿಯು ಬ್ರಾಹ್ಮಣರಾಗಿದ್ದರೆ, ಅವರು ಬಿಎಸ್ಪಿಯಿಂದ ಸ್ಪರ್ಧಿಸಲು ಇಚ್ಚಿಸುವ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕಾಗಿ ಮಾಡಿದ ಕೆಲಸಗಳನ್ನು ನಮೂದಿಸಬೇಕು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಅವರು ತಮ್ಮ ಸಮುದಾಯಕ್ಕಾಗಿ ಆಯೋಜಿಸಿರುವ ಸಭೆಗಳು, ಧರಣಿಗಳು ಬಗ್ಗೆ ಉಲ್ಲೇಖಿಸಬೇಕು. ಇದನ್ನೆಲ್ಲ 250-300 ಪದಗಳಲ್ಲಿ ಉಲ್ಲೇಖಿಸಬಹುದು ಎಂದು ತಿಳಿಸಲಾಗಿದೆ. ಅರ್ಜಿದಾರರು ರಾಜಕೀಯ ಮತ್ತು ವೈಯಕ್ತಿಕ ವಿವರಗಳ ಇತರ ಸಾಧನೆಗಳನ್ನು ಹೊರತುಪಡಿಸಿ ಈ ವಿವರಗಳನ್ನು ನೀಡಬೇಕು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಭ್ಯರ್ಥಿಗಳು ತಮ್ಮ ಸಮುದಾಯಕ್ಕೆ ಕೊಡುಗೆ ನೀಡುವುದರ ಹೊರತಾಗಿ, ಬಹುಜನ ಚಳುವಳಿಗೆ ತಮ್ಮ ಸಂಪರ್ಕದ ವಿವರಗಳನ್ನು ಸಹ ನೀಡಬೇಕು. ಅಭ್ಯರ್ಥಿಗಳು ತಮ್ಮ ಬಹುಜನ ಚಳುವಳಿಯಲ್ಲಿ ತಮ್ಮ ಪಾತ್ರ ಏನು ಮತ್ತು ಅವರು ಚಳುವಳಿಗಾಗಿ ಎಷ್ಟು ದಿನಗಳನ್ನು ಕಳೆದರು? ಅಭ್ಯರ್ಥಿಗಳು ತಮ್ಮ ಕುಟುಂಬದ ಹಿನ್ನೆಲೆ ಮತ್ತು ವೃತ್ತಿಯ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಬೇಕು, ಎಂದು ತಿಳಿಸಲಾಗಿದೆ.
ಸೆಪ್ಟೆಂಬರ್ ಅಂತ್ಯದೊಳಗೆ ಈ ವಿಧಾನವನ್ನು ಪೂರ್ಣಗೊಳಿಸಿ ಅಕ್ಟೋಬರ್ ಅಂತ್ಯದೊಳಗೆ ಟಿಕೆಟ್ಗಳನ್ನು ಅಂತಿಮಗೊಳಿಸಲಾಗುವುದು ನವೆಂಬರ್ ವೇಳೆಗೆ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಪಕ್ಷದ ಕಾರ್ಯಕಾರಿಣಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ಆಭ್ಯರ್ಥಿಗಳು ಕಡ್ಡಾಯವಾಗಿ ಸಂದರ್ಶನವನ್ನು ನೀಡಬೇಕು:
ಬಿಎಸ್ಪಿ ಪಕ್ಷವು ತನ್ನ ಅಭ್ಯರ್ಥಿ ಆಯ್ಕೆಯ ಮಾನದಂಡಗಳನ್ನು ಬದಲಾವಣೆ ಮಾಡಿರುವುದಾಗಿ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಪಕ್ಷವು ಪ್ರತಿ ಕ್ಷೇತ್ರದಲ್ಲಿಯೂ ಅರ್ಜಿಗಳನ್ನು ಆಹ್ವಾನಿಸುವಲ್ಲಿ ಪೂರ್ಣ ಪ್ರಮಾಣದ ವೃತ್ತಿಪರ ವಿಧಾನವನ್ನು ಅಳವಡಿಸಿಕೊಂಡಿದೆ ಮತ್ತು ಜಿಲ್ಲಾ ಘಟಕದ ಮುಖ್ಯಸ್ಥರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಪ್ರತಿ ಕ್ಷೇತ್ರದಲ್ಲಿ 10 ಅರ್ಜಿಗಳನ್ನು ಶಾರ್ಟ್ಲಿಸ್ಟ್ ಮಾಡಲು ಅಧಿಕಾರ ನೀಡಲಾಗಿದೆ ಎಂದು ಪಕ್ಷದ ಹಿರಯ ಮುಖಂಡರು ತಿಳಿಸಿದ್ದಾರೆ.
ಶಾರ್ಟ್ಲಿಸ್ಟ್ ಮಾಡಿದ ನಂತರ, ರಾಜ್ಯಾಧ್ಯಕ್ಷರು ಮತ್ತು ಹಿರಿಯ ರಾಜ್ಯ ನಾಯಕರು ಸೇರಿದಂತೆ ಸಮಿತಿಯು ಎರಡು ಅಥವಾ ಮೂರು ಅರ್ಜಿಗಳನ್ನು ಮೊದಲು ಶಾರ್ಟ್ಲಿಸ್ಟ್ ಮಾಡುತ್ತದೆ ಪಕ್ಷದ ವರಿಷ್ಠೆ ಮಾಯಾವತಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಯತ್ತಾರೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಹಲವು ಕ್ಷೇತ್ರಗಳಲ್ಲಿ ಜಾತಿ ಅಂಶ ಮುಖ್ಯವಾದುದ್ದರಿಂದ ನಾವು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಕಳಂಕರಹಿತ ಅಭ್ಯರ್ಥಿಗಳಿಗೆ ಪಕ್ಷ ಈ ಬಾರಿ ಟಿಕೆಟ್ ನೀಡಲಿದೆ ಎಂದು ಬಿಎಸ್ಪಿಯ ಪ್ರಯಾಗರಾಜ್ ಜಿಲ್ಲಾ ಘಟಕದ ಅಧ್ಯಕ್ಷರಾದ ಚಿಂತಾಮಣಿ ವರ್ಮರವರು ಹೇಳಿದ್ದಾರೆ.
ನಾವು ಅವರ ಸಮುದಾಯದ ಹಿನ್ನೆಲೆ ಮತ್ತು ಅವರು ಸಮುದಾಯಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದರಲ್ಲಿ ಯಾವುದೇ ತಪ್ಪಿಲ್ಲ .ಇದು ಎಲ್ಲಾ ಪಕ್ಷಗಳು ಸಂಗ್ರಹಿಸುವ ಪ್ರಾಥಮಿಕ ಮಾಹಿತಿ ಅದರಂತೆಯೇ ನಾವು ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ ಎಂದು ಬಿಎಸ್ಪಿ ವಕ್ತಾರ ಫೈಜಾನ್ ಖಾನ್ ಅವರು ಹೇಳಿದ್ದಾರೆ.