• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

‘INDIA’ ಗೆಲುವಿಗೆ ಇರುವ ಪ್ರಮುಖ ಕಾರಣಗಳು ಏನೇನು..?

ಕೃಷ್ಣ ಮಣಿ by ಕೃಷ್ಣ ಮಣಿ
July 19, 2023
in ಅಂಕಣ, ಅಭಿಮತ
0
‘INDIA’ ಗೆಲುವಿಗೆ ಇರುವ ಪ್ರಮುಖ ಕಾರಣಗಳು ಏನೇನು..?
Share on WhatsAppShare on FacebookShare on Telegram

ಕಾಂಗ್ರೆಸ್​​ ಪಕ್ಷದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಬಿಜೆಪಿ ವಿರೋಧಿ ಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಎಂದು ನಾಮಕರಣ ಮಾಡಲಾಗಿದೆ. ಇಂಡಿಯಾ ಮುನ್ನುಗ್ಗುತ್ತಿರುವ ರೀತಿಯನ್ನು ಗಮನಿಸಿದರೆ ಈ ಬಾರಿ ಭಾರತದಲ್ಲಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. 24 ಪಕ್ಷಗಳು ಒಟ್ಟಿಗೆ ಸೇರಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರಬಲ ಪೈಪೋಟಿ ನೀಡುತ್ತಾ ಅಧಿಕಾರ ಕಿತ್ತುಕೊಳ್ಳುವ ಸಮಯ ಸಮೀಪಿಸುವಂತಿದೆ. ಈ ರೀತಿಯ ಲಕ್ಷಣಗಳು ಕಾಣಿಸಲು ಪ್ರಮುಖ ಕಾರಣ ಏನು ಅನ್ನೋದನ್ನು ನೋಡೋದಾದ್ರೆ ಮೂರ್ನಾಲ್ಕು ಅಂಶಗಳನ್ನು ಪಟ್ಟಿ ಮಾಡಬಹುದಾಗಿದೆ.

ADVERTISEMENT

ಪ್ರಧಾನಿ ಹುದ್ದೆಗೆ ನಾನು ಆಕಾಂಕ್ಷಿಯಲ್ಲ – ಕಾಂಗ್ರೆಸ್​​

ಯಾವುದೇ ಒಂದು ಮೈತ್ರಿಕೂಟದಲ್ಲಿ ಮೊದಲಿಗೆ ಬಿರುಕು ತರುವುದೇ ಅಧಿಕಾರ. ಗೆಲುವು ಸಾಧಿಸಿದ ಬಳಿಕ ಪ್ರಧಾನಿ ಯಾರು..? ರಾಹುಲ್​ ಗಾಂಧಿ ಮೋದಿಗೆ ಪರ್ಯಾಯರೇ..? ಎಂದು ಬಿಜೆಪಿ ಹಾಗು ಮಿತ್ರಪಕ್ಷಗಳು ಪ್ರಶ್ನೆ ಮಾಡುತ್ತವೆ. ಆದರೆ ಬೆಂಗಳೂರಿನ ಸಭೆಯಲ್ಲಿ ಕಾಂಗ್ರೆಸ್​ ಪಕ್ಷ ಈ ವಿಚಾರವನ್ನು ಸ್ಪಷ್ಟಪಡಿಸಿದ್ದು, ಕಾಂಗ್ರೆಸ್​​ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದೆ ಎನ್ನಲಾಗಿದೆ. ಅಂದ್ರೆ ಕಾಂಗ್ರೆಸ್​ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳ ಪ್ರಮುಖ ಅಜೆಂಡಾ ನರೇಂದ್ರ ಮೋದಿ ಸರ್ಕಾರವನ್ನು ಉರುಳಿಸುವುದೇ ಆಗಿದೆ. ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಿ, ಬಿಜೆಪಿಯನ್ನು ಮಣಿಸಿದ ಬಳಿಕ ಅಧಿಕಾರ ಹಂಚಿಕೆ ಕಸರತ್ತಿಗೆ ಕೈ ಹಾಕುವುದು ಆಗಿದೆ.

11 ಜನರನ್ನು ಸೇರಿಸಿ ಸಮನ್ವಯ ಸಮಿತಿ ರಚನೆ..!

‘INDIA’ ಮೈತ್ರಿಕೂಟದಲ್ಲಿ ಇರುವ 24 ರಾಜಕೀಯ ಪಕ್ಷಗಳು ತನ್ನ ತನ್ನ ರಾಜ್ಯಗಳಲ್ಲಿ ಪ್ರಬಲವಾಗಿದೆ. ಶಕ್ತಿಶಾಲಿ ಪ್ರಾದೇಶಿಕ ಪಕ್ಷಗಳನ್ನು ಒಟ್ಟಿಗೆ ಸೇರಿಕೊಂಡು ಕಾಂಗ್ರೆಸ್​​ ಮುನ್ನುಗ್ಗತ್ತಿರುವುದು ಕಾಂಗ್ರೆಸ್​ ಪಕ್ಷಕ್ಕೆ ಮುಳ್ಳಾಗುತ್ತದೆ ಅನ್ನೋ ಚರ್ಚೆಗಳು ಸಹ ನಡೆದಿವೆ. ಆದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಪಂಜಾಬ್​ ಹಾಗು ದೆಹಲಿಯಲ್ಲಿ ಆಮ್​ ಆದ್ಮಿ ಪಾರ್ಟಿಗೆ ಮಾನ್ಯತೆ ಕೊಡುವುದು. ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಡಪಕ್ಷಗಳು ಸೇರಿದಂತೆ ಯಾರು ಪ್ರಬಲ ಆಗಿದ್ದಾರೆ ಎನ್ನುವುದರ ಆಧಾರದಲ್ಲಿ ಟಿಕೆಟ್​​ ಹಂಚಿಕೆ ಮಾಡಿ, ಗೆಲುವೇ ಮಾನದಂಡ ಎನ್ನುವ ಆಧಾರದಲ್ಲಿ ಟಿಕೆಟ್​ ಹಂಚಿಕೆ ಸೇರಿದಂತೆ ಯಾವುದೇ ಗೊಂದಲ ಆಗದಂತೆ ತಡೆಯಲು ಸಮನ್ವಯ ಸಮಿತಿ ರಚನೆ ಮಾಡಲು ನಿರ್ಧಾರ ಮಾಡಲಾಗಿದೆ. ಮುಂದಿನ ಸಭೆ ಮುಂಬೈನಲ್ಲಿ ನಿಗದಿಯಾಗಿದ್ದು, ಸಮನ್ವಯ ಸಮಿತಿಯಲ್ಲಿ ಯಾರೆಲ್ಲಾ ಇರಬೇಕು ಅನ್ನೋ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎನ್ನಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯೇ ಪೂರ್ವ ತಯಾರಿ..!

ಇನ್ನೇನು ಕೆಲವೇ ತಿಂಗಳಲ್ಲಿ ದೇಶದ ಮೂರು ರಾಜ್ಯಗಳ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶ, ರಾಜಸ್ಥಾನ್ ಹಾಗು ಛತ್ತೀಸ್​ಗಢದಲ್ಲಿ ಚುನಾವಣೆ ನಡೆಯಲಿದ್ದು, ‘INDIA’ ಮೈತ್ರಿಕೂಟ ಒಟ್ಟಾಗಿ ಸ್ಪರ್ಧೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಅಬ್ಬರದ ಚುನಾವಣೆಯಲ್ಲಿ ಕಮಲ ನೆಲಕಚ್ಚಿದ್ದು, ಕಾಂಗ್ರೆಸ್​​ ಪಾಲಿಗೆ ಬೂಸ್ಟ್​ ಆಗಿದೆ ಎನ್ನಬಹುದು. ಇದೀಗ ಮುಂಬರುವ ಮೂರು ರಾಜ್ಯಗಳ ವಿಧಾನಸಭೆಯಲ್ಲಿ ಸಣ್ಣ ಪುಟ್ಟ ಪಕ್ಷಗಳನ್ನು ಒಟ್ಟಿಗೆ ಸೇರಿಸಿಕೊಂಡು ಚುನಾವಣೆ ನಡೆಸಿ, ಬಿಜೆಪಿ ಮುಗ್ಗರಿಸುವಂತೆ ಮಾಡುವ ಲೆಕ್ಕಾಚಾರ ಹಾಕಲಾಗ್ತಿದೆ. ಒಂದು ವೇಳೆ ಪ್ರಧಾನಿ ಮೋದಿ ಮೂರೂ ರಾಜ್ಯಗಳಲ್ಲಿ ಸೋಲುಂಡರೆ ದೇಶದ ಜನರ ಚಿಂತನೆ ಬದಲಾಗಿದೆ ಎಂದೇ ಅರ್ಥ. ದೇಶಪ್ರೇಮ, ಭಾರತ ಮಾತೆ ಮುಖ ನೋಡಿ ಮತ ಹಾಕುವುದಿಲ್ಲ ಎನ್ನುವ ಸಂದೇಶ ಹೊರಬೀಳಲಿದೆ.

ಕೃಷ್ಣಮಣಿ

Tags: IndiaOppositionRahul Gandhi
Previous Post

ಗೃಹಲಕ್ಷ್ಮೀ ಯೋಜನೆ 2 ಸಾವಿರ ಕ್ಯಾಶ್​​ ಗ್ಯಾರಂಟಿ..! ಆನ್​ಲೈನ್​ನಲ್ಲಿ​ ಅಪ್ಲೈ ಮಾಡಬಹುದಾ..?

Next Post

ಶಂಕಿತ ಉಗ್ರರ ಬಂಧನ; ಕಾನೂನು ಸುವ್ಯವಸ್ಥೆ ಬಿಗಿ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

Related Posts

ಆಧಿಪತ್ಯದ ಪರಂಪರೆಯಿಂದ ಒಳಗೊಳ್ಳುವ ಸಂಸ್ಕೃತಿಯೆಡೆಗೆ
ಅಂಕಣ

ಆಧಿಪತ್ಯದ ಪರಂಪರೆಯಿಂದ ಒಳಗೊಳ್ಳುವ ಸಂಸ್ಕೃತಿಯೆಡೆಗೆ

by ಪ್ರತಿಧ್ವನಿ
May 1, 2026
0

ನಾ ದಿವಾಕರ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಹಾಗೂ ಜಾಗತಿಕ ಆರ್ಥಿಕತೆಯ ನಡುವೆ ಜಗತ್ತಿನಾದ್ಯಂತ ಶ್ರಮಜೀವಿಗಳ ಚಳುವಳಿಗಳು, ವಿಶೇಷವಾಗಿ ಕಾರ್ಮಿಕ ಸಂಘಗಳ (Trade Unions) ಹೋರಾಟಗಳು ಮನ್ವಂತರದ...

Read moreDetails
ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ

April 30, 2026
ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

April 30, 2026
ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

April 29, 2026
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

April 28, 2026
Next Post
ಹೆಚ್‌ಡಿ ಕುಮಾರಸ್ವಾಮಿ

ಶಂಕಿತ ಉಗ್ರರ ಬಂಧನ; ಕಾನೂನು ಸುವ್ಯವಸ್ಥೆ ಬಿಗಿ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada