• Home
  • About Us
  • ಕರ್ನಾಟಕ
Friday, August 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಪಶ್ಚಿಮ ಬಂಗಾಳ, ಮಮತಾ ಬ್ಯಾನರ್ಜಿ ಮತ್ತು ಹಿಂಸಾತ್ಮಕ ರಾಜಕೀಯ

ನಾ ದಿವಾಕರ by ನಾ ದಿವಾಕರ
May 5, 2021
in ಅಭಿಮತ
0
ಪಶ್ಚಿಮ ಬಂಗಾಳ, ಮಮತಾ ಬ್ಯಾನರ್ಜಿ ಮತ್ತು ಹಿಂಸಾತ್ಮಕ ರಾಜಕೀಯ
Share on WhatsAppShare on FacebookShare on Telegram

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮರುದಿನವೇ ರಾಜಕೀಯ ಪ್ರೇರಿತ ಕೊಲೆ ಹಿಂಸಾಚಾರ ಕಂಡುಬರುತ್ತಿದೆ. ಎಡಪಕ್ಷದ ಕಾರ್ಯಕರ್ತರ ಮೇಲೆ, ಕಚೇರಿಗಳ ಮೇಲೆ ಧ್ವಂಸ ಕಾರ್ಯಾಚರಣೆ ನಡೆದಿದೆ. ಬಿಜೆಪಿ ಕಾರ್ಯಕರ್ತರೂ ಕೊಲೆಯಾಗಿದ್ದಾರೆ. ಬಂಗಾಲದ ರಾಜಕಾರಣದಲ್ಲಿ ಈ ಹಿಂಸಾತ್ಮಕ ರಾಜಕೀಯ ಮೇಲಾಟಕ್ಕೆ ಐದು ದಶಕಗಳ ಇತಿಹಾಸವಿದೆ. ರಾಜ್ಯದ ಜನತೆ ಮಮತಾ ದೀದಿಗೆ ಬೆಂಬಲ ನೀಡಿರುವ ಉದ್ದೇಶ ಫ್ಯಾಸಿಸ್ಟ್ ಕೋಮುವಾದಿ ರಾಜಕಾರಣವನ್ನು ಸೋಲಿಸುವುದೇ ಆಗಿದೆ. ಆದರೆ ಹಿಂಸೆ ಮತ್ತು ಗೂಂಡಾಗಿರಿಯೂ ಯಾರ ಸ್ವತ್ತೂ ಅಲ್ಲ. ನಾಗರಿಕ ಪ್ರಜ್ಞೆ ಇಲ್ಲದ ಎಲ್ಲ ಪಕ್ಷಗಳೂ ಹಿಂಸೆಯನ್ನು ಪ್ರತಿಕ್ರಿಯೆಯಾಗಿಯೋ, ಪ್ರಚೋದನೆಯಿಂದಲೋ ಅಥವಾ ಪ್ರಜ್ಞಾಪೂರ್ವಕವಾಗಿಯೋ ಬಳಸುತ್ತಲೇ ಇವೆ. ಮಮತಾ ದೀದಿ ಈ ಹಿಂಸಾತ್ಮಕ ರಾಜಕಾರಣಕ್ಕೆ ಕೊನೆ ಹಾಡುವ ಮೂಲಕ‌ ಮಾದರಿಯಾಗಬಹುದು. 

ADVERTISEMENT

ದೇಶದ ಉದ್ದಗಲಕ್ಕೂ ಈ ರೀತಿಯ ಹೊಡಿ ಬಡಿ ರಾಜಕಾರಣ ಸಹಜ ಪ್ರಕ್ರಿಯೆಯಾಗಿದೆ. ಅಧಿಕಾರ ಪೀಠ ಏರಲು ಹತ್ತು ಹಲವು ಹೆಣ ಬಿದ್ದರೂ ಅಡ್ಡಿಯೇನಿಲ್ಲ ಎನ್ನುವ ರಾಜಕೀಯ ಪ್ರಜ್ಞೆ ನಮ್ಮಲ್ಲಿ ಬೆಳೆದಿದ್ದರೆ ಅದಕ್ಕೆ ಮೂರು ನಾಲ್ಕು ದಶಕಗಳ ಇತಿಹಾಸವೇ ಇದೆ. ರಾಜಕೀಯ ದ್ವೇಷದಿಂದ ನೂರಾರು ಹೆಣಗಳು ಉರುಳಿದರೂ ಲೆಕ್ಕಿಸದೆ ಅಧಿಕಾರ ಪೀಠದಲ್ಲಿ ವಿರಾಜಮಾನರಾಗುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದೇವೆ. ನೂರಾರು ಸಾವುಗಳಿಗೆ ದಿವ್ಯ ಮೌನದ ಸ್ಪಂದನೆಯನ್ನು ರಾಜಧರ್ಮ ಎಂದು ಪರಿಭಾವಿಸುವ ವಿಕೃತ ಪರಂಪರೆಗೆ 2002ರಲ್ಲೇ ಅಡಿಗಲ್ಲು ಹಾಕಿದ್ದೇವೆ. ಈ ಅಸ್ತಿಭಾರದ ಮೇಲೆ ಒಂದು ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದೇವೆ. ತಾತ್ವಿಕ ನಿಲುವು, ಪಕ್ಷ ನಿಷ್ಠೆ, ಅಂಧಾಭಿಮಾನ, ನಾಯಕರ ಆರಾಧನೆ, ಅಧಿಕಾರ ದಾಹ ಮತ್ತು ಅವಕಾಶವಾದಿ ಸ್ವಾರ್ಥ ರಾಜಕಾರಣ ಇವೆಲ್ಲವೂ ಈ ವಿಕೃತ ಪರಂಪರೆಯನ್ನು ಪೋಷಿಸುತ್ತಿರುವ ಅಂಶಗಳು. ಮತ್ತೊಬ್ಬರ ಜೀವ ಒತ್ತೆ ಇಟ್ಟು ತಮ್ಮ ಅಧಿಕಾರ ಉಳಿಸಿಕೊಳ್ಳುವ ಒಂದು ನಾಯಕತ್ವದ ಪರಂಪರೆಯನ್ನೂ ಬೆಳೆಸಿಕೊಂಡು ಬಂದಿದ್ದೇವೆ. ಬಂಗಾಲದಲ್ಲಿ ಹತ್ಯೆಗೀಡಾದವರು ಈ ಮಾಯಾಲೋಕದ ಭ್ರಮೆಯಲ್ಲಿ ಸಿಲುಕಿದವರೇ ಆಗಿರುತ್ತಾರೆ. 

ಕೆಂಪುಕೋಟೆ’ಯಲ್ಲಿ ಕೇಸರಿ ಪಾರುಪಥ್ಯಕ್ಕೆ ನಾಂದಿಹಾಡಿತೆ ವಾಮ ತಂತ್ರ?

ಈ ಸಾವು, ನೋವು ಮತ್ತು ಹಿಂಸೆಯ ಮೂಲ ಅಧಿಕಾರ ರಾಜಕಾರಣದಲ್ಲಿ ಅಡಗಿದೆ. ಉತ್ತರದಾಯಿತ್ವ ಯಾರದು? ಲೆಕ್ಕ ಕೇಳುವುದು ಯಾರನ್ನು? ಸಾವಿರಾರು ಅಮಾಯಕ ಹೆಣಗಳು  ಎರಡು ದಶಕಗಳಿಂದಲೂ ಲೆಕ್ಕ ಕೇಳುತ್ತಲೇ ಇವೆ. ಪುಲ್ವಾಮಾದ 50 ಸೇನಾನಿ ಹೆಣಗಳು ಕಿವಿಯಗಲಿಸಿ ಮಲಗಿವೆ. ಕಾಶ್ಮೀರದ ಲಕ್ಷಾಂತರ ಶವಗಳು ಉತ್ತರದ ನಿರೀಕ್ಷೆಯಲ್ಲಿವೆ. ಎನ್ಕೌಂಟರ್ ಹತ್ಯೆಗಳನ್ನು ಅಪ್ಪಿಕೊಂಡ ದೇಶ ನಮ್ಮದು. ಇವೂ ಎನ್ಕೌಂಟರ್ ಹತ್ಯೆಗಳೇ. ಸಮವಸ್ತ್ರದ ಬದಲು ಪಕ್ಷ ನಿಷ್ಠೆ ಎದೆಯಲ್ಲಿ ಹುದುಗಿರುತ್ತದೆ. ಜಾತಿ, ಮತಧರ್ಮ, ಭಾಷೆ ಮತ್ತು ಸಿದ್ಧಾಂತ ಇವೆಲ್ಲವೂ ಸಾವಿನ ರಹದಾರಿಗಳಾಗಿಬಿಟ್ಟಿವೆ. ಹಾಗಾಗಿಯೇ ಹಥ್ರಾಸ್, ಕಥುವಾದ ಆಸಿಫಾ, ಅಕ್ಲಾಖ್  ನಮಗೆ ಸಹಜ ಘಟನೆಯಂತೆ ಕಾಣುತ್ತದೆ. ಬಂಗಾಲದ ರಾಜಕೀಯ ಘಟನೆ ನಮ್ಮ ಸತ್ತ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ. ಸತ್ತವರು  ” ನಮ್ಮವರು ” ಕೊಂದವರು ” ಅವರು “. ಇಷ್ಟು  ಸಾಕು, ಹೆಣಗಳನ್ನು ಎಣಿಸಿ ಪೇರಿಸಿ ವಿಂಗಡಿಸಲು. 

ಈ ಕ್ರೌರ್ಯವನ್ನು ಹೊತ್ತುಕೊಂಡೇ ” ಅವರ ” ಸಾವುಗಳನ್ನು ಸಂಭ್ರಮಿಸುತ್ತಾ ” ನಮ್ಮವರ ” ಸಾವಿಗೆ‌ ಮಿಡಿಯುತ್ತಾ ನಮ್ಮ ಪ್ರಜ್ಞಾ ಮಾಲಿನ್ಯವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿರುತ್ತೇವೆ. ಚಾಮರಾಜನಗರದ 24 ಸಾವುಗಳಿಗೆ ಯಾರಿಂದಲೂ ಉತ್ತರ ಬಯಸದ ನಾವು ಬಂಗಾಲದ ಹತ್ತು ಸಾವುಗಳಿಗೆ ಕರ್ನಾಟಕದ ಪ್ರಗತಿಪರ ಮನಸುಗಳಿಂದ ಪ್ರತಿಕ್ರಿಯೆ ಬಯಸುತ್ತೇವೆ. ಇಲ್ಲಿ ಸಾವು ಬಂಡವಾಳವಾಗುತ್ತದೆ. ಸತ್ತವರು ನಿಮಿತ್ತ ಆಗುತ್ತಾರೆ. ಕೊಂದವರು ಇತರ ಯಾವುದೋ ಒಂದು ಪರದೆಯ ಹಿಂದೆ ಅವಿತುಕೊಳ್ಳುತ್ತಾರೆ. ಸಾವನ್ನು ಸಂಭ್ರಮಿಸುವ ಮನಸುಗಳು ಈಗ ಇನ್ನೂ ಹೆಚ್ಚಿನ ಸಾವುಗಳ ನಿರೀಕ್ಷೆಯಲ್ಲಿರುವಂತಹ ಮಾತುಗಳು ಕೇಳಿಬರುತ್ತಿವೆ. ಆಮ್ಲಜನಕದ ಕೊರತೆಯಿಂದ ಅಸು ನೀಗುವ ಜೀವಗಳು ಇಲ್ಲಿ ನಿಕೃಷ್ಟವಾಗಿಬಿಡುತ್ತವೆ. 

ಪಶ್ಚಿಮ ಬಂಗಾಳ ಹಿಂಸಾಚಾರ: ದೇಶಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ

ಓರ್ವ ಮಹಿಳೆಯಾಗಿ, ಮಾದರಿ ನಾಯಕಿಯಾಗಿ ಮಮತಾ ದೀದಿ  ಸಂವೇದನಾಶೀಲ ರಾಜಕಾರಣದ ಮೂಲಕ ತಮ್ಮ ಪಾಳಯದ ಸರದಾರರನ್ನು ಸರಿದಾರಿಗೆ ತರಲು ಯತ್ನಿಸಬೇಕು. ಇನ್ನೂ ಕಾಲ ಮಿಂಚಿಲ್ಲ. ಹಾಗೆಂದ ಮಾತ್ರಕ್ಕೆ ಇತರರಿಗೆ ವಿನಾಯಿತಿ ನೀಡಬೇಕಿಲ್ಲ. ಕ್ರಿಯೆ ಪ್ರತಿಕ್ರಿಯೆಯ ಸಂಕಥನದಿಂದಾಚೆಗೂ ಮಾನವ ಸಮಾಜಕ್ಕೆ ಒಂದು ಬದುಕು ಇದೆ ಅಲ್ಲವೇ ? ಸಾವಿನ ದಲ್ಲಾಳಿಗಳ ನಡುವೆ ಬದುಕುತ್ತಿದ್ದೇವೆ. ಜೀವದ ಮೌಲ್ಯವನ್ನರಿತು ಮುನ್ನಡೆಯೋಣ. ಒಂದು ಸ್ವಸ್ಥ ಸಮಾಜದಲ್ಲಿ ಜೀವ ಬಂಡವಾಳವಾಗಬೇಕು , ಜೀವ ಸೇತುವೆಯಾಗಬೇಕು. ಕೊರೋನಾ ನಮ್ಮ ನಡುವಿನ ಸಾವುಗಳನ್ನು ಹೆಚ್ಚಿಸಿದೆ, ಕೊರೋನಾಗಿಂತಲೂ ಮಾರಕವಾದ ರಾಜಕೀಯ ವೈರಾಣುಗಳು , ಇನ್ನೂ ಹೆಚ್ಚಿನ ಸಾವುಗಳಿಗೆ ಕಾರಣವಾದರೂ, ನಮ್ಮ ನಡುವೆ ಜೀವಂತವಾಗಿವೆ. ಈ ವೈರಾಣುವಿನ ವಿರುದ್ಧ ಹೋರಾಡುವುದು ನಮ್ಮ ಆದ್ಯತೆಯಾಗಬೇಕಿದೆ. ಇದಕ್ಕಿರುವ ಲಸಿಕೆ ಒಂದೇ  “ಮನುಜ ಪ್ರಜ್ಞೆ”.  ಕೂಡಲೇ ಈ ಲಸಿಕೆ ಹಾಕಿಸಿಕೊಳ್ಳೋಣವೇ ?

Previous Post

ಸಣ್ಣ ಮಿಕಗಳನ್ನು ಹಿಡಿದಿರುವುದು ದೊಡ್ಡ ತಿಮಿಂಗಿಲಗಳ ರಕ್ಷಣೆಗಾ..? ತೇಜಸ್ವಿ ಪ್ರಹಸನಕ್ಕೆ ಸಿದ್ದರಾಮಯ್ಯ ತಿರುಗೇಟು

Next Post

ಬಾಡಿಗೆ ಕೇಳಿದರೆ ಬಿಲ್ಡಿಂಗ್ ಗೆ ಬಾಂಬ್ ಹಾಕ್ತೀನಿ ಎಂದು ಬೆದರಿಸಿದ ಬಿಜೆಪಿ ನಾಯಕ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಬಾಡಿಗೆ ಕೇಳಿದರೆ ಬಿಲ್ಡಿಂಗ್ ಗೆ ಬಾಂಬ್ ಹಾಕ್ತೀನಿ ಎಂದು ಬೆದರಿಸಿದ ಬಿಜೆಪಿ ನಾಯಕ

ಬಾಡಿಗೆ ಕೇಳಿದರೆ ಬಿಲ್ಡಿಂಗ್ ಗೆ ಬಾಂಬ್ ಹಾಕ್ತೀನಿ ಎಂದು ಬೆದರಿಸಿದ ಬಿಜೆಪಿ ನಾಯಕ

Please login to join discussion

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
Top Story

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

by ಪ್ರತಿಧ್ವನಿ
August 21, 2025
Top Story

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

by ಪ್ರತಿಧ್ವನಿ
August 21, 2025
Top Story

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

by ಪ್ರತಿಧ್ವನಿ
August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ
Top Story

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

by ಪ್ರತಿಧ್ವನಿ
August 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

August 21, 2025

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada