• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, June 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ʼಈಗಾಗಲೇ ಕಷ್ಟದಲ್ಲಿದ್ದೇವೆʼ..ವಿನೀಶ್ ಕಾರು ಅಪಘಾತದ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು..?

ಪ್ರತಿಧ್ವನಿ by ಪ್ರತಿಧ್ವನಿ
June 26, 2026
in Top Story, ಕರ್ನಾಟಕ, ಸಿನಿಮಾ
0
ʼಈಗಾಗಲೇ ಕಷ್ಟದಲ್ಲಿದ್ದೇವೆʼ..ವಿನೀಶ್ ಕಾರು ಅಪಘಾತದ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು..?
Share on WhatsAppShare on FacebookShare on Telegram

ಬೆಂಗಳೂರು: ನಟ ದರ್ಶನ್ ಅವರ ಪುತ್ರ ವಿನೀಶ್ ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸಣ್ಣ ರಸ್ತೆ ಅಪಘಾತಕ್ಕೀಡಾಗಿದ್ದು, ವಿನೀಶ್ ಕಾರು ಚಲಾಯಿಸಿ ಅಪಘಾತ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗಿತ್ತು. ಅಲ್ಲದೇ ವಿನೀಶ್ ಸ್ಥಳೀಯರೊಂದಿಗೆ ಮಾತನಾಡುತ್ತಿದ್ದ ವಿಡಿಯೋ ಕೂಡ ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಹೀಗಾಗಿ ಈ ಬಗ್ಗೆ ಸ್ವತಃ ವಿನೀಶ್ ವಿಜಯಲಕ್ಷ್ಮಿ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.

ADVERTISEMENT
Darshan on Supreme Court : ನನ್ನ ವೃತ್ತಿ ಬದುಕು ಹಾಳಾಗಿದೆ! #darshan #supremecourt

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಕೆಲವು ಮಾಧ್ಯಮಗಳು ಪ್ರಸಾರ ಮಾಡುತ್ತಿರುವ, ವಿನೀಶ್ ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂಬುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದಿದ್ದಾರೆ.

ವಿನೀಶ್ ಸಂಪೂರ್ಣವಾಗಿ ಸುರಕ್ಷಿತರಾಗಿದ್ದು ಆರೋಗ್ಯವಾಗಿದ್ದಾರೆ. ಅವರು ವಾಹನವನ್ನು ಚಾಲನೆ ಮಾಡುತ್ತಿರಲಿಲ್ಲ, ಎಂದಿನಂತೆ ನಮ್ಮ ಚಾಲಕರೇ ವಾಹನ ಚಲಾಯಿಸುತ್ತಿದ್ದರು. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಾಮಾನ್ಯವಾಗಿ ನಡೆಯುವಂತಹ ಒಂದು ಸಣ್ಣ ರಸ್ತೆ ಘಟನೆ ಸಂಭವಿಸಿತು. ಇದರಲ್ಲಿ ಭಾಗಿಯಾಗಿದ್ದ ಇನ್ನೊಂದು ಪಕ್ಷವೇ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯನ್ನೂ ಕೇಳಿದೆ.

ವಿನೀಶ್ ಅವರು ಕೇವಲ ಬೈಕ್‌ನಲ್ಲಿದ್ದವರು ಸುರಕ್ಷಿತರಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಾಹನದಿಂದ ಇಳಿದಿದ್ದರು. ದುರದೃಷ್ಟವಶಾತ್, ಆ ಕೆಲ ಕ್ಷಣಗಳ ದೃಶ್ಯಗಳನ್ನು ಸಂದರ್ಭದಿಂದ ಹೊರತೆಗೆದು ಸಂಪೂರ್ಣ ತಪ್ಪು ರೀತಿಯಲ್ಲಿ ಪ್ರದರ್ಶಿಸಲಾಗಿದೆ.

Nivedith Gowda Controversy : ನವಿಲು ನಮ್ಮರಾಷ್ಟ್ರ ಪಕ್ಷಿ,ತಪ್ಪಾಯ್ತು ಎಂದ ನಿವೇದಿತಾ ಗೌಡ.! #nivedithagowda

ಒಂದು ಕುಟುಂಬವಾಗಿ ನಾವು ಈಗಾಗಲೇ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ. ಇಂತಹ ದೃಢೀಕರಿಸದ ಮತ್ತು ಸಂಚಲನ ಸೃಷ್ಟಿಸುವ ಸುದ್ದಿಗಳ ಪ್ರಸಾರವು ನಮ್ಮ ನೋವು ಹಾಗೂ ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ, ವಿಶೇಷವಾಗಿ ಮಾಧ್ಯಮ ಸಂಸ್ಥೆಗಳು, ಯಾವುದೇ ಮಾಹಿತಿಯನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ನಾವು ವಿನಂತಿಸುತ್ತೇವೆ. ಇಂತಹ ಸುಳ್ಳು ವರದಿಗಳನ್ನು ನಂಬಬೇಡಿ ಹಾಗೂ ಹಂಚಿಕೊಳ್ಳಬೇಡಿ ಎಂದು ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತೇವೆ ಎಂದು ವಿಜಯಲಕ್ಷ್ಮಿ ದರ್ಶನ್ ಸ್ಪಷ್ಟನೆ ನೀಡಿದ್ದಾರೆ.

Previous Post

ಖಾಸಗಿ ಫೋಟೋ-ವಿಡಿಯೋ ಅಕ್ರಮ ಪ್ರಸಾರ: ಪೊಲೀಸರಿಗೆ ಗೃಹ ಸಚಿವರಿಂದ ಖಡಕ್‌ ಸಂದೇಶ

Next Post

ದೇಣಿಗೆ ಹಣ ನಾಪತ್ತೆ: ರಾಮ ಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ

Related Posts

ನಾಳೆ ಬೆಳಗ್ಗೆ 4 ಗಂಟೆಯಿಂದಲೇ ಮೆಟ್ರೋ ಸಂಚಾರ; ಬಿಎಂಟಿಸಿಎಲ್‌ನಿಂದ ವಿಶೇಷ ಸೇವೆ: ಯಾಕೆ ?
Top Story

ಬಿಗ್ ಬಾಸ್ ಕನ್ನಡ-13 ಕನಸುಗಾರರಿಗೆ ಮತ್ತೊಂದು ಅವಕಾಶ; ಅನುಪಮಾ ಗೌಡರಿಂದ ಗುಡ್‌ನ್ಯೂಸ್

by ಪ್ರತಿಧ್ವನಿ
June 26, 2026
0

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಭಾಗವಹಿಸಲು ಬಯಸುವ ಜನಸಾಮಾನ್ಯರಿಗೆ ಮತ್ತೊಮ್ಮೆ ಅವಕಾಶ ಲಭ್ಯವಾಗಿದೆ. ಅಧಿಕೃತ ಆಡಿಷನ್‌ಗೆ ನಿಗದಿಪಡಿಸಿದ್ದ ಅಂತಿಮ ದಿನಾಂಕ ಮುಕ್ತಾಯಗೊಂಡಿದ್ದರೂ, ಅವಕಾಶ ತಪ್ಪಿಸಿಕೊಂಡವರಿಗೆ...

Read moreDetails
ನಾಳೆ ಬೆಳಗ್ಗೆ 4 ಗಂಟೆಯಿಂದಲೇ ಮೆಟ್ರೋ ಸಂಚಾರ; ಬಿಎಂಟಿಸಿಎಲ್‌ನಿಂದ ವಿಶೇಷ ಸೇವೆ: ಯಾಕೆ ?

ರಾಮಮಂದಿರದ ಬೆಳ್ಳಿ ಇಟ್ಟಿಗೆ ವಿವಾದಕ್ಕೆ ಹೊಸ ತಿರುವು; ಎಸ್‌ಐಟಿ ತನಿಖೆಯಲ್ಲಿ ಬಯಲಾದ ಮಾಹಿತಿ

June 26, 2026
ನಾಳೆ ಬೆಳಗ್ಗೆ 4 ಗಂಟೆಯಿಂದಲೇ ಮೆಟ್ರೋ ಸಂಚಾರ; ಬಿಎಂಟಿಸಿಎಲ್‌ನಿಂದ ವಿಶೇಷ ಸೇವೆ: ಯಾಕೆ ?

ನಾಳೆ ಬೆಳಗ್ಗೆ 4 ಗಂಟೆಯಿಂದಲೇ ಮೆಟ್ರೋ ಸಂಚಾರ; ಬಿಎಂಟಿಸಿಎಲ್‌ನಿಂದ ವಿಶೇಷ ಸೇವೆ: ಯಾಕೆ ?

June 26, 2026
ವಿದ್ಯುತ್ ಸುರಕ್ಷತೆ ಕುರಿತ ಜಾಗೃತಿಗೆ ಎಸ್ಕಾಂಗಳಿಂದ ಆರ್ಥಿಕ ನೆರವು: ಗೌರವ್ ಗುಪ್ತ

ವಿದ್ಯುತ್ ಸುರಕ್ಷತೆ ಕುರಿತ ಜಾಗೃತಿಗೆ ಎಸ್ಕಾಂಗಳಿಂದ ಆರ್ಥಿಕ ನೆರವು: ಗೌರವ್ ಗುಪ್ತ

June 26, 2026
ಬೈರಮಂಗಲದಲ್ಲಿ ಮುಖ್ಯಮಂತ್ರಿಗಾಗಿ ಕಾಯುತ್ತೇನೆ: ಹೆಚ್.ಡಿ ಕುಮಾರಸ್ವಾಮಿ

ಬೈರಮಂಗಲದಲ್ಲಿ ಮುಖ್ಯಮಂತ್ರಿಗಾಗಿ ಕಾಯುತ್ತೇನೆ: ಹೆಚ್.ಡಿ ಕುಮಾರಸ್ವಾಮಿ

June 26, 2026
Next Post
ದೇಣಿಗೆ ಹಣ ನಾಪತ್ತೆ: ರಾಮ ಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ

ದೇಣಿಗೆ ಹಣ ನಾಪತ್ತೆ: ರಾಮ ಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada