• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಆಧುನಿಕ ತಲೆಮಾರಿಗೆ ಮಾದರಿಯಾದ ಮಹಾಲಿಂಗ ನಾಯ್ಕ : ಕರಾವಳಿಯ ಭಗೀರಥನಿಗೆ ಒಲಿದ ಪದ್ಮಶ್ರೀ

Any Mind by Any Mind
January 26, 2022
in ಕರ್ನಾಟಕ
0
ಆಧುನಿಕ ತಲೆಮಾರಿಗೆ ಮಾದರಿಯಾದ ಮಹಾಲಿಂಗ ನಾಯ್ಕ : ಕರಾವಳಿಯ ಭಗೀರಥನಿಗೆ ಒಲಿದ ಪದ್ಮಶ್ರೀ
Share on WhatsAppShare on FacebookShare on Telegram

ಕರಾವಳಿ ಅಂದ್ರೇನೆ ಹಾಗೆ ಅದೊಂದು ಸುಂದರ ತಾಣ. ಹಚ್ಚ ಹಸಿರಿನ ನಡುವೆ ಪ್ರಕೃತಿ ನಡುವೆ ತುಳುನಾಡು ಸದಾ ಕಂಗೊಳಿಸುತ್ತಲೇ ಇರುವ ಸುಂದರ ಸ್ಥಳ. ಒಂದು ಕಾಲದಲ್ಲಿ ಕೃಷಿಯೇ ಜೀವಾಳವಾಗಿದ್ದ ಕರಾವಳಿಗರಿಗೆ ಇತ್ತೀಚೆಗೆ ಕೃಷಿಯತ್ತ ಒಲವು ಕಡಿಮೆಯಾಗುತ್ತಿದೆ. ಆದರೂ ಕೆಲವು ಬೆರಳೆಣಿಕೆಯಷ್ಟು ಮಂದಿ ಪ್ರಗತಿಪರ ಕೃಷಿಯಲ್ಲಿ ತೊಡಗಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುಂದುವರೆಯುತ್ತಿದ್ದಾರೆ.

ADVERTISEMENT

ಈ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಪ್ರಗತಿಪರ ಕೃಷಿಕ 73 ವರ್ಷದ ಅಮೈ ಮಹಾಲಿಂಗ ನಾಯ್ಕ ಅವರು 2022 ನೇ ಸಾಲಿನ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಮಂದಿ ಕೃಷಿಕರನ್ನು ಗಮನಿಸಬಹುದು. ಕೆಲವರು ವಿದ್ಯಾಭ್ಯಾಸ ಉಳ್ಳವರಾದರೆ ಇನ್ನೂ ಅನೇಕರು ಶಾಲೆ ಮುಖವನ್ನೇ ನೋಡಲಿಲ್ಲ. ಆದರೂ, ತಮ್ಮ ಹಠ ಬಿಡದೇ ಕೃಷಿಯಲ್ಲಿ ವಿನೂತನ ಪ್ರಯತ್ನಗಳನ್ನು ಮಾಡುತ್ತಾ ಸದಾ ಸುದ್ದಿಯಾಗುತ್ತಾರೆ.

ಶಾಲೆಯ ಮುಖ ನೋಡಲಿಲ್ಲ, ಛಲಬಿಡಲಿಲ್ಲ!

ಇನ್ನು ಮಹಾಲಿಂಗ ನಾಯ್ಕ ಅವರ ಕುರಿತು ಹೇಳುವುದಾದರೆ, ಇವರು ಕೂಡ ಶಾಲೆಗೆ ಹೋಗಲಿಲ್ಲ, ಆದರೂ ನೀರಿನಿಂದ ನೆಮ್ಮದಿಯನ್ನು ಕಾಣುತ್ತಿರುವ ಇವರು ಪ್ರಗತಿಪರ ಕೃಷಿಕರು ಎಂದೆನಿಸಿಕೊಂಡಿದ್ದಾರೆ. ಇವರ ಬಗ್ಗೆ ಹೇಳೋದಾದ್ರೆ, ಈ ಸಾಧಕ ಬೋಳುಗುಡ್ಡೆಯಲ್ಲಿ ತೆಂಗಿನೆಣ್ಣೆ ದೀಪದ ಬೆಳಕಿನಲ್ಲಿ ಪ್ರತಿ ವರ್ಷ ತಲಾ ಒಂದರಂತೆ 25-30 ಮೀಟರ್ ಉದ್ದದ ಸತತ ಐದು ಸುರಂಗಗಳನ್ನು ಕೊರೆದಿದ್ದಾರೆ. 62 ಮೀಟರ್ ಉದ್ದದ ಆರನೇ ಸುರಂಗದ ಪ್ರಯತ್ನ ಕೊನೆಗೂ ಫಲ ನೀಡಿ, ಸುರಂಗದಲ್ಲಿ ನೀರು ಜಿನುಗಳು ಪ್ರಾರಂಭವಾಯಿತು.

ಅನಂತರ ಏಳನೇ ಹಂತದ ಸುರಂಗ ಮಾರ್ಗ ಕೊರೆಯುವ ಸಮಯದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ನೀರು ಕಾಣಿಸಿಕೊಂಡಿದ್ದು, ಒಂದು ಎಕ್ರೆ ತೋಟಕ್ಕೆ ಸಾಕಾಗುವಷ್ಟು ನೀರು ಕಾಣಿಸಿಕೊಂಡಿತ್ತು. ಈಗ ಎರಡು ಬೋರ್ ವೆಲ್ ಗಳನ್ನು ತೋಡಿ, ಪಂಪ್ ಸೆಟ್ ಹಾಕಿಕೊಂಡಿದ್ದಾರೆ. ತೋಟದ ನಡುವೆಯೂ ಅಲ್ಲಲ್ಲಿ ಇಂಗುಗುಂಡಿ ನಿರ್ಮಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರಿಂದ ಸನ್ಮಾನ

ಸತತ ಪ್ರಯತ್ನದಿಂದ ಸುರಂಗ ಮಾರ್ಗ ನಿರ್ಮಿಸಿದ ಕಾರ್ಯದಲ್ಲಿ ಯಶಸ್ವಿಯಾದ ಇವರು ಕರಾವಳಿಯ ಭಗೀರಥ ಎಂದೇ ಖ್ಯಾತರಾಗಿದ್ದು, ಇದೀಗ ಈ ಸಾಧಕನಿಗೆ ಕರಾವಳಿಯಲ್ಲಿ ಸನ್ಮಾನಗಳ ಮಹಾಪೂರವೇ ಹರಿದುಬರುತ್ತಿದ್ದು,ಜಿಲ್ಲಾ ಉಸ್ತುವರಿ ಸಚಿವ ಸುನೀಲ್ ಕುಮಾರ್ ಸನ್ಮಾನಿಸಿದ್ದಾರೆ, ಈ ವೇಳೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಹರೇಕಳ ಹಾಜಬ್ಬ ಕೂಡ ಉಪಸ್ಥಿತರಿದ್ದರು.

ಕರಾವಳಿ ಜಿಲ್ಲೆಗಳಲ್ಲಿ ಕೃಷಿ ನಿಧಾನವಾಗಿ ಹಿನ್ನಲೆಗೆ ಸರಿಯುತ್ತಿರುವ ಹಂತದಲ್ಲಿ ಕೃಷಿಯೇ ಬದುಕಿಗೆ ಮೂಲಾಧಾರವೆಂಬ ಕಲ್ಪನೆಯನ್ನು ಬಿತ್ತುತ್ತಿರುವ ಸಾಧಕ ಅಮೈ ಮಹಾಲಿಂಗ ನಾಯ್ಕ ಕೃಷಿಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಹೊಸ ತಲೆಮಾರಿಗೆ ತಿಳಿಸಿಕೊಟ್ಟಿದ್ದಾರೆ.

Tags: ಆಧುನಿಕ ತಲೆಮಾರುಭಗೀರಥ
Previous Post

20 ಸಾವಿರಕ್ಕೂ ಹೆಚ್ಚು ಭಕ್ತರನ್ನು ಸ್ವಾತಂತ್ರ್ಯ ಹೋರಾಟಕ್ಕಿಳಿಸಿದ ಇಂಚಗೇರಿ ಮಠ

Next Post

ಸ್ವಾತಂತ್ರ್ಯ ಪೂರ್ವದಲ್ಲೇ ಶೋಷಣೆ ವಿರುದ್ಧ ಹೋರಾಡಿದ ನಾರಾಯಣಗುರುಗಳಿಗೆ ಕೇಂದ್ರದಿಂದ ಅಗೌರವ : DK Shivakumar | KPCC

Related Posts

DK Shivakumar Oath Taking Ceremony
Top Story

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಹೇಗಿರುತ್ತೆ : ಡಿಕೆ ಶಿವಕುಮಾರ್‌ ಏನಂದ್ರು..?

by ಪ್ರತಿಧ್ವನಿ
May 31, 2026
0

ಬೆಂಗಳೂರು : ಜೂನ್ 3ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿದ ಬಳಿಕ ರೇಸ್ ಕೋರ್ಸ್ ರಸ್ತೆ ಬಳಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ...

Read moreDetails
BREAKING NEWS : ಟಾಸ್‌ ಗೆದ್ದ RCB ; ಬೌಲಿಂಗ್‌ ಆಯ್ಕೆ ಮಾಡಿಕೊಂಡ ರಜತ್ ಪಾಟಿದಾರ್..

BREAKING NEWS : ಟಾಸ್‌ ಗೆದ್ದ RCB ; ಬೌಲಿಂಗ್‌ ಆಯ್ಕೆ ಮಾಡಿಕೊಂಡ ರಜತ್ ಪಾಟಿದಾರ್..

May 31, 2026
“ಸಿದ್ದರಾಮಯ್ಯ ಅವ್ರನ್ನ ಡೀಡ್ ನಲ್ಲಿನ ವೈಫಲ್ಯಕ್ಕಾಗಿ ಟೀಕಿಸಬಹುದು, ಆದ್ರೆ ಇಂಟೆಂಟ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ರೆ ಅನ್ಯಾಯ ಮಾಡಿದಂತೆ”

“ಸಿದ್ದರಾಮಯ್ಯ ಅವ್ರನ್ನ ಡೀಡ್ ನಲ್ಲಿನ ವೈಫಲ್ಯಕ್ಕಾಗಿ ಟೀಕಿಸಬಹುದು, ಆದ್ರೆ ಇಂಟೆಂಟ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ರೆ ಅನ್ಯಾಯ ಮಾಡಿದಂತೆ”

May 31, 2026
RCB‌ ಅಭಿಮಾನಿಗಳ ಸಂಭ್ರಮಕ್ಕೆ ಖಾಕಿ ಬ್ರೇಕ್‌ : ಬೆಂಗಳೂರಲ್ಲಿ ಆಯುಕ್ತರಿಂದ ಯಾವೆಲ್ಲ ರೂಲ್ಸ್..?

RCB‌ ಅಭಿಮಾನಿಗಳ ಸಂಭ್ರಮಕ್ಕೆ ಖಾಕಿ ಬ್ರೇಕ್‌ : ಬೆಂಗಳೂರಲ್ಲಿ ಆಯುಕ್ತರಿಂದ ಯಾವೆಲ್ಲ ರೂಲ್ಸ್..?

May 31, 2026
ಸಿದ್ದರಾಮಯ್ಯ ರಾಜ್ಯಸಭೆಯಲ್ಲಿದ್ದು ಲೋಹಿಯಾ ಕನಸುಗಳ ಸಾಕಾರಕ್ಕೆ ಶ್ರಮಿಸಬೇಕು : ಮೋಹನ್‌ ಕೊಂಡಜ್ಜಿ ಒತ್ತಾಯ..

ಸಿದ್ದರಾಮಯ್ಯ ರಾಜ್ಯಸಭೆಯಲ್ಲಿದ್ದು ಲೋಹಿಯಾ ಕನಸುಗಳ ಸಾಕಾರಕ್ಕೆ ಶ್ರಮಿಸಬೇಕು : ಮೋಹನ್‌ ಕೊಂಡಜ್ಜಿ ಒತ್ತಾಯ..

May 31, 2026
Next Post
ಸ್ವಾತಂತ್ರ್ಯ ಪೂರ್ವದಲ್ಲೇ ಶೋಷಣೆ ವಿರುದ್ಧ ಹೋರಾಡಿದ ನಾರಾಯಣಗುರುಗಳಿಗೆ ಕೇಂದ್ರದಿಂದ ಅಗೌರವ : DK Shivakumar | KPCC

ಸ್ವಾತಂತ್ರ್ಯ ಪೂರ್ವದಲ್ಲೇ ಶೋಷಣೆ ವಿರುದ್ಧ ಹೋರಾಡಿದ ನಾರಾಯಣಗುರುಗಳಿಗೆ ಕೇಂದ್ರದಿಂದ ಅಗೌರವ : DK Shivakumar | KPCC

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada