ಬೆಂಗಳೂರಿನಲ್ಲಿ(Bengaluru) ಇಂದು ನಡೆದ ರಾಜ್ಯಸಭಾ(Rajya Saba) ಚುನಾವಣೆಯ(Election) ಫಲಿತಾಂಶ(Result) ಪ್ರಕಟವಾಗಿದ್ದು, ಕಾಂಗ್ರೆಸ್(Congress) ನ ಮೂವರು, ಬಿಜೆಪಿಯ(BJP) ಓರ್ವ ಅಭ್ಯರ್ಥಿ ಜಯ ಸಾಧಿಸಿದ್ದಾರೆ.
ಕಾಂಗ್ರೆಸ್ ನ ಅಜಯ್ ಮಾಕೇನ್, ಯಾಸೀರ್ ಹುಸೇನ್ ಗೆ ತಲಾ 47, ಜಿ.ಸಿ.ಚಂದ್ರಶೇಖರ್ 45 ಹಾಗೂ ಬಿಜೆಪಿಯ ನಾರಾಯಣಸಾ ಭಾಂಡಗೆ 48 ಮತಗಳು ಸಿಕ್ಕಿವೆ.
ಎನ್ ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್(JDS) ನ ಕುಪೇಂದ್ರ ರೆಡ್ಡಿ 36 ಮತಗಳನ್ನ ಪಡೆದು 9 ಮತಗಳಿಂದ ಸೋಲನುಭವಿಸಿದ್ದಾರೆ.
ಮೈತ್ರಿ ಕೂಟಕ್ಕೆ ಸೋಲು: ರಾಜ್ಯಸಭಾ ಚುನಾವಣೆಯಲ್ಲಿ ಮೈತ್ರಿಯ ಲೆಕ್ಕಾಚಾರ ತಪ್ಪಾಗಿದ್ದು, ಬಿಜೆಪಿ, ಜೆಡಿಎಸ್ ಗೆ ಮುಖಭಂಗವಾಗಿದೆ. ಬಿಜೆಪಿಯ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ್ದಾರೆ. ಪಕ್ಷೇತರರ 4 ಮತಗಳು ಕಾಂಗ್ರೆಸ್ ಗೆ ಸಿಕ್ಕಿವೆ.
#RajyaSaba #Election #BJP #Congress #Results #Siddaramaiah #BYVijayendra