ಬೆಂಗಳೂರು : ಏ.೦೨: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಉರೀಗೌಡ-ದೊಡ್ಡನಂಜೇಗೌಡರ ಬಗ್ಗೆ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದ ಸಚಿವ ಮುನಿರತ್ನಗೆ ಒಕ್ಕಲಿಗ ಸಮುದಾಯದಿಂದ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಚಿತ್ರದ ನಿರ್ಮಾಣವನ್ನು ಕೈಬಿಟ್ಟು ಸುಮ್ಮನಾಗಿದ್ದರು. ಆದ್ರೆ ಈಗ ಸಚಿವ ಮುನಿರತ್ನ ಅವರ ಸ್ಪರ್ಧೆ ಮಾಡುವ ಆರ್ ಆರ್ ನಗರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಲ್ಲತಹಳ್ಳಿಯ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ಸ್ಥಳೀಯರು ಮಾಡಿದ್ದರು.
ಇದರ ಮುಂದುವರಿದ ಭಾಗವಾಗಿ ಸುನಂದ ಟಾಕೀಸ್ ಬ್ಯಾನರ್ ಅಡಿಯಲ್ಲಿ ಮಲ್ಲತ್ತಹಳ್ಳಿ ಕೆರೆಯ ಬಗ್ಗೆ ನೈಜ ಘಟನೆಗಳ ಆಧಾರಿತ ʼಕೆರೆ ಕಳ್ಳʼ ಚಲನಚಿತ್ರ ಮೋಷನ್ ಪೋಸ್ಟರ್ ಅತೀ ಶೀಘ್ರದಲ್ಲಿ ಬರಲಿದೆ ಎಂದು ಸೂರ್ಯ ಮುಕುಂದರಾಜ್ ಅವರು ಫೇಸ್ ಬುಕ್ ಪೇಜ್ ಬರೆದುಕೊಂಡಿದ್ದಾರೆ. ಅಷ್ಟೆ ಅಲ್ಲದೆ ಕೆರೆ ಕಳ್ಳ ಚಿತ್ರದ ಹೆಸರನ್ನು ಕೂಡ ರಿಜಿಸ್ಟರ್ ಮಾಡಿಸಿರುವ ಫೋಟೋ ವನ್ನು ಹಂಚಿಕೊಂಡಿದ್ದಾರೆ. . ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗಿತ್ತಿದ್ದು, ಚಿತ್ರದ ಬಗ್ಗೆ ಪರ-ವಿರೋಧ ವ್ಯಕ್ತವಾಗುತ್ತಿದೆ..