ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯ (Pahalgam terror attack) ಕುರಿತು ಬಿಬಿಸಿ ನ್ಯೂಸ್ ಚಾನಲ್ (BBC News channel) ಪೂರ್ವಾಗ್ರಹ ಪೀಡಿತವಾಗಿ ವರದಿ ಪ್ರಸಾರ ಮಾಡಿರುವ ಹಿನ್ನಲೆ ಭಾರತ ರೊಚ್ಚಿಗೆದ್ದಿದ್ದು, ಇದೀಗ ಕೇಂದ್ರ ಸರ್ಕಾರ ಬಿಬಿಸಿ ಸುದ್ದಿ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.

ಹೌದು ಪಹಲ್ಗಾಮ್ ದಾಳಿಯ ಬಗ್ಗೆ ಬಿಬಿಸಿ ತಪ್ಪು ತಪ್ಪಾಗಿ ವರದಿ ಪ್ರಸಾರ ಮಾಡಿರುವ ಹಿನ್ನಲೆ ಕೇಂದ್ರ ಸರ್ಕಾರದ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಬಿಬಿಸಿ ನ್ಯೂಸ್ ಚಾನಲ್ ಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ, ಉಗ್ರರನ್ನು ಉಗ್ರರುರೆನ್ನುವ ಬದಲು ಬೇರೆ ಪದ ಬಳಕೆ ಮಾಡಿರುವ ಕಾರಣ ಕೇಂದ್ರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಉಗ್ರರ ದಾಳಿಯ ಬಗ್ಗೆ ಸರಿಯಾದ ಮಾಹಿತಿ ಅರಿಯದೇ ಪೂರ್ವಾಗ್ರಹಪೀಡಿತರಾಗಿ ಉಗ್ರಗಾಮಿ ದಾಳಿ ಬಗ್ಗೆ ವರದಿ ಮಾಡಲಾಗಿದೆ ಎಂದು ಆಕ್ಷೇಪ ಮಾಡಲಾಗಿದ್ದು, ತಪ್ಪು ದಾರಿಗೆಳೆಯುವ ಸೋಷಿಯಲ್ ಮೀಡಿಯಾ ಪೋಸ್ಟ್ ಗೆ ಕೇಂದ್ರ ಸರ್ಕಾರದ ಆಕ್ಷೇಪ ವ್ಯಕ್ತಪಡಿಸಿದಿದೆ.
ಇನ್ನುಳಿದಂತೆ ಪಾಕಿಸ್ತಾನದ ಡಾನ್, ಸ್ಕೈ ನ್ಯೂಸ್, ಸಾಮಾ ಟಿವಿ, ಎಆರ್ವೈ, ಜಿಯೋ ನ್ಯೂಸ್ ಚಾನಲ್ ಗಳು ಭಾರತದಲ್ಲಿ ಬ್ಯಾನ್ ಮಾಡಲಾಗಿದ್ದು, ಬಿಬಿಸಿ ಸಂಸ್ಥೆಗೂ ಛೀಮಾರಿ ಹಾಕಲಾಗಿದೆ.