• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮೋದಿ ಬಂದ ಮೇಲೆ ಭಯೋತ್ಪಾದನೆ ಗಡಿಯಲ್ಲಿ ನಿಂತಿದೆ – ಜೋಶಿ

ಕೃಷ್ಣ ಮಣಿ by ಕೃಷ್ಣ ಮಣಿ
May 11, 2025
in Top Story, ಕರ್ನಾಟಕ, ದೇಶ, ವಿಶೇಷ
0
ಮೋದಿ ಬಂದ ಮೇಲೆ ಭಯೋತ್ಪಾದನೆ ಗಡಿಯಲ್ಲಿ ನಿಂತಿದೆ – ಜೋಶಿ
Share on WhatsAppShare on FacebookShare on Telegram

ಹುಬ್ಬಳ್ಳಿ: ಪಾಕಿಸ್ತಾನದ ಮಿಲಿಟರಿ ಚುನಾಯಿತ ಸರ್ಕಾರದ ಮಾತು ಕೇಳಲ್ಲ, ಹೀಗಾಗಿ ಕದನ ವಿರಾಮ ಉಲ್ಲಂಘನೆ ಆಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ನಿನ್ನೆ ಪಾಕಿಸ್ತಾನದ ಡಿಜಿಎಂಒ ಭಾರತಕ್ಕೆ ಕರೆ ಮಾಡಿ ಕದನ ವಿರಾಮ ಘೋಷಣೆ ಮಾಡಿದ್ರು. ನಂತರ ಕದನ ವಿರಾಮ ಉಲ್ಲಂಘನೆ ಮಾಡಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಯನ್ನ ಪೋಷಿಸುತ್ತಾ ಇರ್ತಾರೆ ಎಂದಿದ್ದಾರೆ.

ADVERTISEMENT

ಮೊದಲ ಬಾರಿಗೆ ನಮ್ಮ ಡಿಫೆನ್ಸ್ ಫೋರ್ಸ್ ಹಾಗೂ ಮಿಲಿಟರಿ ಚೀಫ್​ಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದಾರೆ ಅನ್ನೋ ಅಭಿಪ್ರಾಯ ಬಂದಿದ್ದವು. ಕಳೆದ 30-40 ವರ್ಷದಿಂದ ನಮ್ಮ ದೇಶದಲ್ಲಿ ಭಯೋತ್ಪಾದನೆ ನಡೆದುಕೊಂಡೇ ಬಂದಿದೆ. 1980ರ ನಂತರ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನೆ ಚಟುವಟಿಕೆ ನಮ್ಮ ದೇಶದಲ್ಲಿ ನಡೆದಿವೆ. ಈ ಮೊದಲು ಪಹಲ್ಗಾಮ್​ಗಿಂತ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿವೆ. ಇದೀಗ ಮೊದಲ ಬಾರಿಗೆ ದೇಶ ಒಂದಾಗಿದೆ. ಸರ್ಕಾರ ತೀರ್ಮಾನ ಕೈಗೊಂಡು ಬಲವಾಗಿ ಪ್ರತೀಕಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

Shashi tarur on Indira Gandhi:ಇಂದಿರಾ ಗಾಂಧಿ 1971 ಒಂದು ದೊಡ್ಡ ಸಾಧನೆಯಾಗಿತ್ತು,#pratidhvani #indhiragandhi

ಪಾಕಿಸ್ತಾನ ಮಾಧ್ಯಮಗಳ ವರದಿ ಪ್ರಕಾರ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಟೆರರಿಸ್ಟ್​ಗಳ ಕುಟುಂಬಗಳು ಹತವಾಗಿವೆ. ಲಾಂಚಿಂಗ್ ಪ್ಯಾಡ್, ಅಡಗು ತಾಣ ಧ್ವಂಸಗೊಳಿಸಲು ಭಾರತದ ಮಿಲಿಟರಿಗೆ ಸಾಧ್ಯವಾಗಿದೆ. ಭಾರತ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಭಾರತೀಯ ಸೇನೆಗೆ ಮುಕ್ತ ಅವಕಾಶ ಕೊಟ್ಟಿತ್ತು. ಯುದ್ಧ ವಿರಾಮದ ಘೋಷಣೆಗಿಂತ ಮುಂಚೆ ಅತ್ಯಂತ ಕಠಿಣ ನಿಲುವು ತೆಗೆದುಕೊಂಡಿದೆ. ಭಯೋತ್ಪಾದನೆಯನ್ನ ಯುದ್ಧ ಅಂತ ಪರಿಗಣಿಸುತ್ತೇವೆ ಅನ್ನೋ ನಿಲುವು ಕೈಗೊಂಡಿದೆ. ಇನ್ನು ಮುಂದೆ ಭಯೋತ್ಪಾದನೆ ಆದರೆ ಅದನ್ನ ಯುದ್ಧ ಅಂತ ಪರಿಗಣಿಸಲಾಗುತ್ತ ಎಂದಿದ್ದಾರೆ.

ಪಾಕಿಸ್ತಾನ ಇನ್ನು ಮುಂದಾದರೂ ಬುದ್ದಿ ಕಲಿಯಬೇಕು. ನಾವು ಭಾರತೀಯರು ಶಾಂತಿ ಪ್ರಿಯರು. ಆದರೆ ನಮ್ಮ ಮೇಲೆ ಬಂದ್ರೆ ಬಿಡೋದಿಲ್ಲ ಅಂತ ಈ ಘಟನೆಯಿಂದ ಸ್ಪಷ್ಟ ಪಡಿಸಿದ್ದೇವೆ. ಕದನ ವಿರಾಮಕ್ಕೆ ಯುಪಿಎ ನಾಯಕರ ಸಂತಸ ವಿಚಾರ, ಅವರು ಯಾಕೆ ಖುಷಿ ಪಟ್ರು..? ಏನು ಟ್ವೀಟ್ ಮಾಡಿದ್ರು..? ಅದರ ಬಗ್ಗೆ ನಾನು ಮಾತಾಡೋದಿಲ್ಲ. ಭಾರತಕ್ಕೆ ಅದರದ್ದೇ ಆದ ಶಕ್ತಿ ಇದೆ. ಈ ಮೊದಲು ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನೆ ನಡೆದ್ರು ಸೌಮ್ಯವಾಗಿ ನಡೆದುಕೊಳ್ತಿದ್ವಿ. ಈ ಬಾರಿ ಮೊದಲ ದಿವಸವೇ 9ಕ್ಕೂ ಹೆಚ್ಚಿನ ಲಾಚಿಂಗ್ ಪ್ಯಾಡ್ ಮೇಲೆ ನಮ್ಮವರು ಅಟ್ಯಾಕ್ ಮಾಡಿದ್ದಾರೆ. ಅವರ ಅಡಗು ತಾಣಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸಂತಸ, ಟೀಕೆ ಮಾಡುವವರ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.

ದೇಶದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರವೇ ದೇಶದಲ್ಲಿ ನಡೆಯುವ ಭಯೋತ್ಪಾದನೆ ಚುಟುವಟಿಕೆ ಬಾರ್ಡರ್​ಗೆ ಸೀಮಿತ ಆಗಿದೆ. ಭಾರತ ಸರ್ಕಾರ, ಮಿಲಿಟರಿಗೆ ಅದರದ್ದೇ ಆದ ತಂತ್ರಗಳು ಇರುತ್ತವೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧ ಪಟ್ಟ ಎಲ್ಲಾ ವಿಷಯಗಳನ್ನು ವಿದೇಶಾಂಗ ವಕ್ತಾರರು ತಿಳಿಸುತ್ತಾರೆ. ಟ್ರಂಪ್ ಮಧ್ಯಸ್ತಿಕೆ ವಿಚಾರ ಹಾಗು ಪಾಕಿಸ್ತಾನದ ಡಿಜಿಎಂ ನೇರವಾಗಿ ಭಾರತಕ್ಕೆ ಮಾತನಾಡಿದ್ದಾರೆ ಅನ್ನೋ ವರದಿ ಬಂದಿದೆ. ಮುಂದಿನ ವಿಷಯ ಸಂಬಂಧ ಪಟ್ಟವರು ತಿಳಿಸುತ್ತಾರೆ. ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡೋದಿಲ್ಲ, ವಿದೇಶಾಂಗ ಮಂತ್ರಿ ಈ ಬಗ್ಗೆ ಮಾಹಿತಿ ಕೊಡ್ತಾರೆ ಎಂದಿದ್ದಾರೆ.

Tags: ind pakind pak newsind pak warind vs pakind vs pak war liveIndiaindia air strike on pakistanindia attack pakindia attack pakistanindia attacks pakistanIndia Pakistanindia pakistan conflictindia pakistan newsindia pakistan tensionindia pakistan tensionsindia pakistan warindia pakistan war newsindia vs pakistanindia vs pakistan newsindia vs pakistan warpakistan vs indiawar between india and pakistan
Previous Post

ಪಾಕ್​ ನಂಬಿಕೆಗೆ ಅರ್ಹವಲ್ಲ.. ಮೋದಿ ಟ್ರಂಪ್​ ಮಾತು ಕೇಳೋದು ತಪ್ಪು’

Next Post

ಭಾರತೀಯ ರಕ್ಷಣಾ ಪಡೆಗಳ ಜಂಟಿ ಸುದ್ದಿಗೋಷ್ಠಿ

Related Posts

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ
Top Story

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ

by ಪ್ರತಿಧ್ವನಿ
August 31, 2026
0

ಪ್ಯಾಕೆಟ್ ಆಹಾರ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು ಅಥವಾ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿದ್ದರೆ, ಗ್ರಾಹಕರಿಗೆ ಸುಲಭವಾಗಿ ತಿಳಿಯುವಂತೆ ಪ್ಯಾಕೆಟ್‌ನ ಮುಂಭಾಗದಲ್ಲೇ ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ ಅಳವಡಿಸುವ...

Read moreDetails
ರಾಮನಗರದಲ್ಲಿ ಖೋಟಾ ನೋಟು ದಂಧೆ ಬಯಲು:ಐವರು ವಶಕ್ಕೆ

ರಾಮನಗರದಲ್ಲಿ ಖೋಟಾ ನೋಟು ದಂಧೆ ಬಯಲು:ಐವರು ವಶಕ್ಕೆ

August 31, 2026
ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

August 31, 2026
ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

August 31, 2026
ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

August 31, 2026
Next Post

ಭಾರತೀಯ ರಕ್ಷಣಾ ಪಡೆಗಳ ಜಂಟಿ ಸುದ್ದಿಗೋಷ್ಠಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada