Tag: Taliban

ತಾಲಿಬಾನ್‌ ಅಡಗುದಾಣದ ಮೇಲೆ ಪಾಕಿಸ್ಥಾನ ಸೇನೆ ಧಾಳಿ ; ಅಪ್ಘನ್‌ ಸರ್ಕಾರದಿಂದ ಪ್ರತೀಕಾರ ಘೋಷಣೆ

ಪೇಶಾವರ: ನೆರೆಯ ಅಫ್ಘಾನಿಸ್ತಾನದೊಳಗಿನ ಪಾಕಿಸ್ತಾನಿ ತಾಲಿಬಾನ್‌ಗಳ ಅನೇಕ ಶಂಕಿತ ಅಡಗುತಾಣಗಳನ್ನು ಗುರಿಯಾಗಿಸಿ ಪಾಕಿಸ್ತಾನವು ಮಂಗಳವಾರ ಅಪರೂಪದ ವೈಮಾನಿಕ ದಾಳಿಗಳನ್ನು ನಡೆಸಿದ್ದು, ತರಬೇತಿ ಕೇಂದ್ರವನ್ನು ನಾಶ ಮಾಡಿದ್ದು ಕೆಲವು ...

Read moreDetails

ತಾಲಿಬಾನ್ ಬದಲಾದರೂ ಪಾಕಿಸ್ತಾನ ಬದಲಾಗಲ್ಲ – ಮೋಹನ್ ಭಾಗವತ್‌

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗ್ವತ್ ವಿಜಯದಶಮಿ ಉತ್ಸವ ಕಾರ್ಯಕ್ರಮದ ತಮ್ಮ ಭಾಷಣದಲ್ಲಿ ತಾಲಿಬಾನ್ಗಳು ಬದಲಾದರು ಪಾಕಿಸ್ಥಾನ ಬದಲಾಗಲ್ಲ ಎಂದು ಹೇಳಿದ್ದಾರೆ. ...

Read moreDetails

ʻʻಸಿದ್ಧರಾಮಯ್ಯ ಒಬ್ಬ ಭಯೋತ್ಪಾದಕʼʼ : ನಳಿನ್‌ ಕುಮಾರ್‌ ಕಟೀಲು

ಸಿದ್ಧರಾಮಯ್ಯ ಮತ್ತು ಬಿಜೆಪಿ ನಾಯಕರ ನಡುವೆ ನಡೆಯುತ್ತಿರುವ ʻRSS ತಾಲಿಬಾನ್‌ʼ  ವಾಕ್ಸಮರ ಮತ್ತೆ ಮುಂದುವರೆದಿದೆ.  "ಸಿದ್ದರಾಮಯ್ಯ ಒಬ್ಬ ದೊಡ್ಡ ಭಯೋತ್ಪಾದಕ" ಎಂದು ಹೇಳುವ ಮೂಲಕ  ಬಿಜೆಪಿ ರಾಜ್ಯಾಧ್ಯಕ್ಷ ...

Read moreDetails

ತಾಲಿಬಾನ್ ಬೆಂಬಲಿಸುವುದು ದೇಶದ್ರೋಹಕ್ಕೆ ಸಮ: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಮುಖ್ಯಮಂತ್ರಿ  ಯೋಗಿ ಮತ್ತೆ ಸುದ್ದಿಯಲ್ಲಿದ್ದಾರೆ,  ಸಾರ್ವಜನಿಕ ಸಭೆಯೊಂದರಲ್ಲಿ, ಯೋಗಿ ಆದಿತ್ಯನಾಥ್ ತಾಲಿಬಾನ್ ಬೆಂಬಲಿಸುವುದು ದೇಶ ದ್ರೋಹಕ್ಕೆ ಸಮ ಎಂದು ಹೇಳಿದ್ದಾರೆ. ಪಶ್ಚಿಮ ಯುಪಿಯ ಹಾಪುರ್ ...

Read moreDetails

ತಾಲಿಬಾನ್‌ ಸೇನಾ ಮುಖ್ಯಸ್ಥನಾಗಿ ಆಯ್ಕೆಯಾದ ಉಗ್ರ ಖಾರಿ ಫಾಸೀಹುದ್ದೀನ್ ಯಾರು?

ಅಮೆರಿಕಾ ತನ್ನ ಸಂಪೂರ್ಣ ಸೇನೆಯನ್ನು ವಾಪಸ್ಸು ಕರೆಸಿಕೊಂಡ ಮೇಲೆ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಿರುವ ತಾಲಿಬಾನಿಗಳು ಮತ್ತೊಂದು ಮಜಲನ್ನ ಏರಿದ್ದಾರೆ. ಖಾರಿ ಫಾಸೀಹುದ್ದೀನ್ಗೆ ಸೇನಾ ಮುಖ್ಯಸ್ಥನ ಪಟ್ಟ ...

Read moreDetails

ಪಂಜಶೀರನಲ್ಲಿ 20 ಮಂದಿಯನ್ನು ಕೊಂದ ತಾಲಿಬಾನಿಗಳು; ಅಫ್ಘಾನ್ ಉಪ ಪ್ರಧಾನಿ ಬರಾದಾರ್ ನಾಪತ್ತೆ

ಕ್ರೌರ್ಯವನ್ನೇ ಉಸಿರಾಡಿ ಗದ್ದುಗೆ ಏರಿರೋ ತಾಲಿಬಾನಿಗಳು ಒಳಗೊಳಗೇ ಅಸಮಾಧಾನದ ಬೇಗುದಿಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಾಮ ಇಸ್ಲಾಮಿಕ್ ಎಮಿರೇಟ್‌ ಸರ್ಕಾರದ ಹೊಸ ಸಂಪುಟದ ಬಗ್ಗೆ ಉಪ ಪ್ರಧಾನಿ ...

Read moreDetails

ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶರಿಯಾ ಕಾನೂನು ಜಾರಿಗೊಳಿಸಿದ ತಾಲಿಬಾನ್; ಅಫ್ಘಾನರ ಗೋಳು ಹೇಳತೀರದು

ಬುದ್ಧ ನೆಲದಲ್ಲಿ ಮುಗ್ಧ ಜನರ ನರಮೇಧ ನಡೆಸಿದ ತಾಲಿಬಾನ್ ಉಗ್ರರು ಕೊನೆಗೂ ಕ್ರೂರ ಸರ್ಕಾರಕ್ಕೆ ನಾಂದಿ ಹಾಡಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಲವು ಕಾನೂನುಗಳನ್ನೂ ಘೋಷಣೆ ಮಾಡಿಕೊಂಡಿದ್ದಾರೆ. ...

Read moreDetails

ಬೆಂಗಳೂರು: ತಾಲಿಬಾನ್, ಪಾಕಿಸ್ತಾನದ ವಿರುದ್ಧ ಅಫ್ಘಾನ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಬುಧವಾರ ಬೆಂಗಳೂರಿನಲ್ಲಿ ತಮ್ಮ ದೇಶವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಮತ್ತು ಪಾಕಿಸ್ತಾನ್‌ ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ . ...

Read moreDetails

‘ಸಂಪೂರ್ಣ ಸ್ವಾತಂತ್ರ್ಯ’ ಘೋಷಿಸಿಕೊಂಡ ತಾಲಿಬಾನ್

ಕಳೆದ ಎರಡು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿದ್ದ ಅಮೇರಿಕಾ ಸೇನಾಪಡೆಯು ಸಂಪೂರ್ಣವಾಗಿ ವಾಪಾಸಾಗಿದೆ. ಈ ಬಾರಿ ತಾಲಿಬಾನ್ ಉಗ್ರರು ಮತ್ತಷ್ಟು ಬಲಿಷ್ಟವಾಗಿ ಹೊರಹೊಮ್ಮಿದ್ದಾರೆ. ಅಮೇರಿಕಾ ಪಡೆಗಳು ದೇಶವನ್ನು ಬಿಡುವ ಮುನ್ನವೇ, ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡಿದ್ದಾರೆ.  ಮಂಗಳವಾರ ಮುಂಜಾನೆ ಕಾಬೂಲ್ ಏರ್ಪೋರ್ಟ್ ಅನ್ನು ವಶಪಡಿಸಿಕೊಂಡ ತಾಲಿಬಾನಿಗಳು ‘ಸಂಪೂರ್ಣ ಸ್ವಾತಂತ್ರ್ಯ’ವನ್ನು ಘೋಷಿಸಿದ್ದಾರೆ. ಮಧ್ಯರಾತ್ರಿ ಹನ್ನೆರಡು ಗಂಟೆಗೆ ಕೆಲವೇ ನಿಮಿಷಗಳ ಮೊದಲು ಅಮೇರಿಕಾದ ಕೊನೆಯ ಸ್ಥಳಾಂತರ ಕಾರ್ಯಾಚರಣೆಯ ವಿಮಾನ ಟೇಕ್ ಆಫ್ ಆಗಿತ್ತು. ಇದಾದ ಕೆಲವೇ ನಿಮಿಷಗಳ ಬಳಿಕ ತಾಲಿಬಾನ್ ಉಗ್ರರು ಏರ್ಪೋರ್ಟ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.  “ಅಮೇರಿಕಾದ ಕಟ್ಟ ಕಡೇಯ ಸೈನಿಕ ಕುಡಾ ಕಾಬೂಲ್ ಏರ್ಪೋರ್ಟ್ ಬಿಟ್ಟು ಹೋಗಿದ್ದಾರೆ. ಇದು ನಮ್ಮ ದೇಶಕ್ಕೆ ಲಭಿಸಿರುವ ಸಂಪೂರ್ಣ ಸ್ವಾತಂತ್ರ್ಯ,” ಎಂದು ತಾಲಿಬಾನ್ ವಕ್ತಾರ ಕಾರಿ ಯೂಸುಫ್ ಅವರು ಅಲ್-ಜಝೀರಾ ಟಿವಿಗೆ ನೀಡಿರುವ ಸಂದರ್ಶನದಲ್ಲಿ  ಹೇಳಿದ್ದಾರೆ.  ಅಮೇರಿಕಾ ಇತಿಹಾಸದಲ್ಲಿಯೇ ಅತ್ಯಂತ ದಿರ್ಘ ಕಾಲದ ಯುದ್ದ ಇದಾಗಿತ್ತು. ಇದರಲ್ಲಿ ಸುಮಾರು 2,500 ಅಮೇರಿಕಾ ಸೈನಿಕರು ಸಾವನ್ನಪ್ಪಿದ್ದರೆ, 2,40,000 ಅಫ್ಘಾನಿಗಳು ಸಾವನ್ನಪ್ಪಿದ್ದರು.  ಈ ಯುದ್ದದಿಂದಾಗಿ ಅಮೇರಿಕಾದ ಮೇಲೆ ಎರಡು ಟ್ರಿಲಿಯನ್  ಡಾಲರ್ ಹೆಚ್ಚುವರಿ ಹೊರೆ ಬೀಳುತ್ತಿತ್ತು.  ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ತನ್ನ ನೆಲೆ ವಿಸ್ತರಿಸಿಕೊಳ್ಳುವುದನ್ನು ಯಶಸ್ವಿಯಾಗಿ ಅಮೇರಿಕಾ ತಡೆದಿತ್ತು. ಮಾತ್ರವಲ್ಲದೇ, ಅಲ್-ಖೈದಾ ಮುಖ್ಯಸ್ಥ ಬಿನ್ ಲಾಡೆನ್  ಹತ್ಯೆಗೈಯುವಲ್ಲಿಯೂ ಸಫಲವಾಗಿತ್ತು.  ತಾಲಿಬಾನ್ ಆಡಳಿತದಿಂದ ಹೆದರಿ ಲಕ್ಷಾಂತಹ ಅಫ್ಘಾನಿಗಳು ಈಗಾಗಲೇ ದೇಶವನ್ನು ತೊರೆದಿದ್ದಾರೆ. ಕಾಬೂಲ್’ನಿಂದ ಲಕ್ಷಕ್ಕು ಹೆಚ್ಚು ಜನರನ್ನು ಏರ್ ಲಿಫ್ಟ್ ಮಾಡಲಾಗಿದೆ. ಆದರೆ, ಕಳೆದ ಇಪ್ಪತ್ತು ವರ್ಷಗಳ ಯುದ್ದದ ಸಂದರ್ಭದಲ್ಲಿ ಅಮೇರಿಕಾ ಸೇನೆಗೆ ನೆರವಾಗಿದ್ದ ಸಾವಿರಾರು ಜನರು ಇನ್ನೂ ಅಫ್ಘಾನಿಸ್ತಾನದಲ್ಲಿ ಬಾಕಿಯಾಗಿದ್ದಾರೆ. “ಯಾರನ್ನೆಲ್ಲಾ ಅಫ್ಘಾನಿಸ್ತಾನದಿಂದ ಹೊರತೆಬೇಕು ಎಂದು ಆಶಿಸಿದ್ದೇವೋ, ಅವರೆಲ್ಲರನ್ನೂ ಕರೆತರಲು ಸಾಧ್ಯವಾಗಿಲ್ಲ. ಅಲ್ಲಿನ ಇನ್ನೂ ಹತ್ತು ದಿನ ಉಳಿದಿದ್ದರೂ ಅದು ಸಾಧ್ಯವಾಗುತ್ತಿರಲಿಲ್ಲ,” ಎಂದು ಅಮೇರಿಕಾದ ಸೆಂಟ್ರಲ್ ಕಮಾಂಡ್ ಜನರಲ್ ಫ್ರ್ಯಾಂಕ್ ಮೆಕೆಂಜಿ ಹೇಳಿದ್ದಾರೆ. 

Read moreDetails

ಪಾಕ್ ಜೊತೆಗೂಡಿ ಭಾರತದ ವಿರುದ್ಧ ಪಿತೂರಿ ಮಾಡುವುದಿಲ್ಲ : ತಾಲಿಬಾನ್ ಸ್ಪಷ್ಟನೆ!

ತಾಲಿಬಾನ್ ನೇತೃತ್ವದ ಸರ್ಕಾರ ಅಫ್ಘಾನಿಸ್ತಾನದಲ್ಲಿ ರಚನೆಯಾಗುವುದು ಸನ್ನಿಹಿತವಾಗಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಇದು ಪಾಕ್ ಗೆಲುವೆಂದು ಸಂಭ್ರಮಾಚರಣೆ ನಡೆದಿದೆ. ಭಾರತದ ವಿರುದ್ಧ ಏರಿ ಹೋಗಲು ತನಗೆ ತಾಲಿಬಾನ್ನ ಶಕ್ತಿ ...

Read moreDetails

ಕಾಬೂಲ್‌ ನಲ್ಲಿ ರಾಕೆಟ್ ದಾಳಿ: ಮಗು ಸೇರಿ ಇಬ್ಬರು ಸಾವು, ಮೂವರಿಗೆ ಗಂಭೀರ ಗಾಯ

ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಸ್ಫೋಟದ ಸದ್ದು ಕೇಳಿ ಬಂದ ನಂತರ, ಕಾಬೂಲ್ ವಿಮಾನ ನಿಲ್ದಾಣದ ಬಳಿ ಇರುವ ಖವಾಜ ಬುಗ್ರ ಪ್ರದೇಶ ಮನೆಯೊಂದಕ್ಕೆ ರಾಕೆಟ್ ಅಪ್ಪಳಿಸಿದೆ ಎಂದು ವರದಿಯಾಗಿದೆ. ...

Read moreDetails

ಪತ್ರಕರ್ತನ್ನು ರಕ್ಷಿಸುವ ತಾಲಿಬಾನ್ ಭರವಸೆ ಎಲ್ಲಿ ಹೋಯಿತು?

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ನಂತರ ಸರಣಿ ಭರವಸೆಗಳನ್ನು ನಿಡಲಾಗಿತ್ತು. ವಿಶ್ವದಾದ್ಯಂತ ತಾಲಿಬಾನ್’ನ ಕಳೆದ ಆಡಳಿತವನ್ನು ನೆನಪಿಸಿಕೊಂಡು ಆತಂಕವನ್ನು ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲಿ, ಮಹಿಳಾ ಶಿಕ್ಷಣ, ಪತ್ರಿಕಾ ಸ್ವಾತಂತ್ರ್ಯ ...

Read moreDetails

ಸರ್ವಪಕ್ಷ ಸಭೆ: ಅಫ್ಘಾನ್ ಕುರಿತು “ಕಾದು ನೋಡುವ ನೀತಿ” ಅನುಸರಿಸಲು ಭಾರತದ ನಿರ್ಧಾರ

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು ಭಾರತವು ಕಾದು ನೋಡುವ ನೀತಿಯನ್ನು ಅನುಸರಿಸಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರೊಂದಿಗೆ, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಅಲ್ಲಿಂದ ರಕ್ಷಿಸಲು ನಡೆಸುವ ...

Read moreDetails

ತಾಲಿಬಾನ್: ಅತಂತ್ರದಲ್ಲಿ ಮಹಿಳಾ ಸ್ವಾತಂತ್ರ್ಯ

“ನಮ್ಮನ್ನು ಮನೆಯಲ್ಲಿಯೇ ಬಂಧಿಯಾಗಿ ಇರಿಸಲಾಗಿದೆ. ಕೆಲಸ ಮಾಡಲು ಅಥವಾ ನಮ್ಮ ಧ್ವನಿ ಎತ್ತಲು ಇಲ್ಲಿ ಅವಕಾಶವಿಲ್ಲ. ನಾನು ದೈಹಿಕವಾಗಿ ಸತ್ತಿಲ್ಲವಾದರೂ, ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಸತ್ತಂತೆಯೇ ಭಾಸವಾಗುತ್ತಿದೆ.” ಇಂದು ಅಫ್ಘಾನಿಸ್ತಾನದಲ್ಲಿರುವ ಬಹುತೇಕ ಮಹಿಳೆಯರು, ತಮ್ಮ ವ್ಯಾಸಂಗ ಪ್ರಮಾಣಪತ್ರಗಳನ್ನು ಸುಟ್ಟು ಹಾಕುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು, ಬಹಿರಂಗವಾಗಿ ತೆಗೆದಂತಹ ಫೋಟೋಗಳನ್ನು ಅಳಿಸಿ ಹಾಕುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರ ನಡೆಸಿ ಆರ್ಥಿಕ ಸ್ವಾವಲಂಬನೆಯತ್ತ ದೃಷ್ಟಿ ನೆಟ್ಟಿದ್ದ ಮಹಿಳೆಯರು, ತಮ್ಮ ಅಂಗಡಿಗಳನ್ನು ಮುಚ್ಚಿ ಮನೆಯಲ್ಲಿಟ್ಟಿದ್ದ ಬುರ್ಖಾ ಹುಡುಕುವತ್ತ ಗಮನ ನೀಡಿದ್ದಾರೆ.  ಕಳೆದ ಎರಡು ತಿಂಗಳಿನಿಂದ ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು, ಆ ದೇಶವನ್ನು ಎರಡು ದಶಕಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗಿದೆ. ಮುಖ್ಯವಾಗಿ, ಅಲ್ಲಿನ ಮಹಿಳೆಯರು ತಮಗಿದ್ದ ಸ್ವಾತಂತ್ರ್ಯವನ್ನು ಕಳೆದುಕೊಂಡು, ತಮ್ಮ ಹೆಣ್ಣು ಮಕ್ಕಳ ಭವಿಷ್ಯ ಎಲ್ಲಿ ಕಮರಿ ಹೋಗುವುದೋ ಎಂಬ ಭಯದಲ್ಲಿ ಬದುಕುತ್ತಿದ್ದಾರೆ.  1996ರಿಂದ 2001ರ ನಡುವಿನ ತಾಲಿಬಾನ್ ಆಡಳಿತವನ್ನು ಮತ್ತೆ ನೆನಪಿಸಿಕೊಂಡರೆ, ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ಇರಲಿಲ್ಲ. ಮಹಿಳೆಯರಿಗೆ ಕೆಲಸಕ್ಕೆ ಹೋಗುವ ಸ್ವಾತಂತ್ರ್ಯ ಇರಲಿಲ್ಲ. ಮನೆಯಿಂದ ಹೊರಗೆ ಬರುವಾಗ ತಮ್ಮ ಮುಖವನ್ನು ಇಸ್ಲಾಮಿಕ್ ಬುರ್ಖಾ ಧರಿಸಿ ಮುಚ್ಚಬೇಕಿತ್ತು. ಮನೆಯ ಗಂಡು ಸದಸ್ಯರ ಸಹಾಯದೊಂದಿಗೆ ಮಾತ್ರ ಮನೆಯಿಂದ ಹೊರ ಬರಬೇಕಿತ್ತು. ಇಂತಹ ಕರಾಳ ದಿನಗಳನ್ನು ನೋಡಿರುವ ಅಲ್ಲಿನ ಮಹಿಳೆಯರು, ಮತ್ತೆ ಸ್ವಾತಂತ್ರ್ಯದ ಹರಣಕ್ಕೆ ಸಾಕ್ಷಿಯಾಗಿದ್ದಾರೆ.  ಇಂದಿಗೂ 90ರ ದಶಕದ ಅತ್ಯಂತ ಕ್ರೂರ ಶಿಕ್ಷೆಗಳಾದ ಛಡಿಯೇಟು ಹಾಗೂ ಕಲ್ಲುಗಳನ್ನು ಎಸೆಯುವುದನ್ನು ಮಹಿಳೆಯರು ಇನ್ನೂ ಮರೆತಿಲ್ಲ. ಇಂತಹ ಕಠೋರವಾದ ಇಸ್ಲಾಮಿಕ್ ನಿಯಮಗಳನ್ನು ಜಾರಿಗೆ ತರಲಾಗಿತ್ತು.  ತಮ್ಮ ಮೊತ್ತ ಮೊದಲ ಸುದ್ದಿಗೋಷ್ಟಿಯಲ್ಲಿ ಮಹಿಳೆಯರಿಗೆ ‘ಇಸ್ಲಾಮಿಕ್ ನಿಯಮಗಳ’ ಅಡಿಯಲ್ಲಿ ಶಿಕ್ಷಣ ಹಾಗೂ ಕೆಲಸಕ್ಕೆ ಹೋಗಲು ಅವಕಾಶ ನೀಡಲಾಗುವುದು, ಎಂದು ತಾಲಿಬಾನ್ ಹೇಳಿದೆ. ಆದರೆ, ತಾಲಿಬಾನ್ ಈ ಹಿಂದೆ ದೇಶದ ಜನರೊಂದಿಗೆ ನಡೆದುಕೊಂಡಿರುವ ಕ್ರೂರ ರೀತಿಯಿಂದ ಯಾರೂ ಈ ಮಾತುಗಳನ್ನು ನಂಬಲು ಸಿದ್ದರಿಲ್ಲ. ಮಿಗಿಲಾಗಿ, ಕೆಲಸಕ್ಕೆಂದು ಹೋದ ಮಹಿಳೆಯರನ್ನು ವಾಪಾಸ್ ಮನೆಗೆ ಕಳುಹಿಸಿರುವ ತಾಜಾ ಉದಾಹರಣೆಗಳು ಕಣ್ಣ ಮುಂದಿರುವಾಗ, ಬಂದೂಕಿನಿಂದ ಶಾಂತಿ ಸ್ಥಾಪನೆಗೆ ಹೊರಟವರ ಮಾತುಗಳನ್ನು ನಂಬುವುದಾದರೂ ಹೇಗೆ?  ಅಫ್ಘಾನಿಸ್ತಾನದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿದ್ದ ಪತ್ರಕರ್ತೆಯೊಬ್ಬರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ತಾಲಿಬಾನ್ ಪಡೆಗಳು ಕಾಬೂಲನ್ನು ವಶಪಡಿಸಿಕೊಂಡ ಕೇವಲ ಮೂರು ದಿನಗಳ ನಂತರ ಸಂಪೂರ್ಣ ದೇಶದ ಚಿತ್ರಣವೇ ಬದಲಾಗಿ ಹೋಗಿದೆ. ಮಹಿಳೆಯರು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ, ಎಂದು ಅವರು ಹೇಳಿದ್ದಾರೆ.  “ನಾನು ತಾಲಿಬಾನಿಗಳ ವಿರುದ್ದ, ಅವರ ಕಾರ್ಯಾಚರಣೆಗಳ ಕುರಿತು ನೂರಾರು ವರದಿಗಳನ್ನು ಮಾಡಿದ್ದೆ. ಈಗ ಅವರು ನನ್ನ ಗುರುತು ಪತ್ತೆ ಹಚ್ಚಿದರೆ ಏನು ಮಾಡುತ್ತಾರೆ ಎಂದೂ ತಿಳಿದಿಲ್ಲ. ನನ್ನ ಅಸ್ಮಿತೆಯನ್ನೇ ಬಚ್ಚಿಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ,” ಎಂದು ಅವರು ರಾಯಿಟರ್ಸ್’ಗೆ ಹೇಳಿಕೆ ನೀಡಿದ್ದಾರೆ.  “ನಮ್ಮನ್ನು ಮನೆಯಲ್ಲಿಯೇ ಬಂಧಿಯಾಗಿ ಇರಿಸಲಾಗಿದೆ. ಕೆಲಸ ಮಾಡಲು ಅಥವಾ ನಮ್ಮ ಧ್ವನಿ ಎತ್ತಲು ಇಲ್ಲಿ ಅವಕಾಶವಿಲ್ಲ. ನಾನು ದೈಹಿಕವಾಗಿ ಸತ್ತಿಲ್ಲವಾದರೂ, ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಸತ್ತಂತೆಯೇ ಭಾಸವಾಗುತ್ತಿದೆ,” ಎಂದು ಅವರು ಕಣ್ಣೀರಿಟ್ಟಿದ್ದಾರೆ.  ಕಾಬೂಲ್’ನಲ್ಲಿ ಸಲೂನ್ ನಡೆಸುತ್ತಿದ್ದ ಮಹಿಳೆಯೊಬ್ಬರು ತಮ್ಮ ವ್ಯಾಪಾರವನ್ನು ಮುಚ್ಚಿ ಈಗ ಮನೆಯಲ್ಲಿ ಅವಿತು ಕುಳಿತಿದ್ದಾರೆ.  “ನನ್ನ ಅಂಗಡಿಯಿಂದ ಕನಿಷ್ಟ 24 ಜನರ ಕುಟುಂಬಗಳು ಬದುಕುತ್ತಿದ್ದವು. ಅದು ಕೂಡಾ ಎಲ್ಲಾ ಕೆಲಸಗಾರರು ಮಹಿಳೆಯರಾಗಿದ್ದರು. ಈಗ ಅದು ಇತಿಹಾಸವಾಗಿದೆ. ತಾಲಿಬಾನ್ ಭಯದಿಂದ ಮಹಿಳೆಯರು ಮನೆಯಿಂದ ಹೊರಹೋಗಲೂ ಅಂಜುತ್ತಿದ್ದಾರೆ,” ಎಂದು ಆ ಮಹಿಳೆ ಹೇಳಿದ್ದಾರೆ.  ಪ್ರತಿರೋಧದ ಆರಂಭ ತಾಲಿಬಾನ್ ವಿರುದ್ದ ಈಗಾಗಲೇ ಮಹಿಳೆಯರ ಪ್ರತಿರೋಧ ಆರಂಭವಾಗಿದೆ. ಮಹಿಳೆಯರ ಒಂದು ಸಣ್ಣ ಗುಂಪು ಕಾಬೂಲ್’ನ ಬೀದಿಗಳಲ್ಲಿ ತಾಲಿಬಾನ್ ವಿರುದ್ದ ಪ್ರತಿಭಟನೆಯನ್ನು ನಡೆಸುತ್ತಿದೆ.  “ಅಫ್ಘಾನಿಸ್ತಾನದ ಮಹಿಳೆಯರಿಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಇಲ್ಲಿನ ಮಹಿಳೆಯರ ಹೃದಯದಲ್ಲಿ ಅಡಗಿರುವ ಭಯವನ್ನು ಹೋಗಲಾಡಿಸಲು ನಾವು ಪ್ರತಿಭಟಸುತ್ತಿದ್ದೇವೆ. ಭಯದಿಂದ ಮನೆಯಲ್ಲಿ ಕುಳಿತಿರುವ ಪ್ರತಿಯೊಬ್ಬ ಮಹಿಳೆಯೂ ನಮ್ಮೊಂದಿಗೆ ಕೈಜೋಡಿಸಬೇಕು. ದೇವರಿಚ್ಚೆ ಇದ್ದರೆ ನಾವು ನಮ್ಮ ಪ್ರತಿರೋಧವನ್ನು ಮುಂದುವರೆಸುತ್ತೇವೆ. ಇನ್ನು ಹೆಚ್ಚಿನ  ಮಹಿಳೆಯರು ನಮ್ಮೊಂದಿಗೆ ಸೇರುತ್ತಾರೆ,” ಎಂದು ಪ್ರತಿಭನಾನಿರತ ಮಹಿಳೆ ಸೂದಾವರ್ ಕಬೀರಿ ಹೇಳಿದ್ದಾರೆ.  https://twitter.com/missnzl/status/1427914119370264580 ಕಳೆದ ಇಪ್ಪತ್ತು ವರ್ಷಗಳಲ್ಲಿ ಅಫ್ಘಾನ್ ಮಹಿಳೆಯರು ಪಡೆದಿರುವ ಧ್ವನಿಯನ್ನು ಈಗ ಮೌನವಾಗಿಸಲು ನಾವು ಬಿಡುವುದಿಲ್ಲ ಎಂದು ತಾಲಿಬಾನಿಗಳ ಕ್ರೌರತೆಯ ವಿರುದ್ದ ತೊಡೆ ತಟ್ಟಿ ನಿಂತಿದ್ದಾರೆ.  90ರ ದಶಕದ ಕರಾಳ ನೆನಪುಗಳನ್ನು ಮೀರಿ ನಿಲ್ಲುವಂತಹ ಪ್ರಗತಿಯನ್ನು ಅಫ್ಘಾನ್ ಮಹಿಳೆಯರು ಸಾಧಿಸಿದ್ದರು. ಶಿಕ್ಷಣ, ವಿಜ್ಞಾನ, ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿ ಸಾಧಿಸುವ ಅವಕಾಶ ಒದಗಿ ಬಂದಿತ್ತು. ಆದರೆ, ಈಗ ಆ ಪ್ರಗತಿ ಮತ್ತೆ ಅಧಃಪತನದತ್ತ ಸಾಗುತ್ತಿದೆ. ಮಹಿಳಾ ಸ್ವಾತಂತ್ರ್ಯವೆಂಬುದು ಕೇವಲ ಕನಸಾಗಿ ಉಳಿಯುವ ದಿನಗಳು ಮುಂದೆ ಕಾಣುತ್ತಿವೆ ಎಂಬ ಭಯ ಅಲ್ಲಿನ ಮಹಿಳೆಯರಲ್ಲಿ ಕಾಡುತ್ತಿದೆ.  ಈಗ ಬೀದಿಗಿಳಿದು ಪ್ರತಿಭಟಿಸುತ್ತಿರುವ ಮಹಿಳೆಯ ವಿರುದ್ದ ತಾಲಿಬಾನಿನ ಕ್ರೂರ ದೃಷ್ಟಿ ಬೀರುವ ಸಾಧ್ಯತೆಯಿದ್ದರೂ, ತಮ್ಮ ಹಕ್ಕುಗಳಿಗಾಗಿ ಮಹಿಳೆಯರ ಹೊರಾಟ ನಿರಂತರವಾಗಿ ಸಾಗಿದೆ.  “ಅಫ್ಘಾನಿಸ್ತಾನದಲ್ಲಿ 18 ಮಿಲಿಯನ್ ಮಹಿಳೆಯರಿದ್ದಾರೆ. ಅವರೆಲ್ಲರನ್ನು ಮನೆಯ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿಸುವುದು ಕಷ್ಟ. ...

Read moreDetails

ತಾಲಿಬಾನ್ ಐಎಸ್ಐನ ಸೂತ್ರದ ಗೊಂಬೆ- ಅಸಾದುದ್ದೀನ್ ಒವೈಸಿ

ಅಖಿಲ ಭಾರತ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್   (AIMIM) ಅಧ್ಯಕ್ಷರು ಹಾಗೂ ಸಂಸದರೂ ಆಗಿರುವ ಅಸಾದುದ್ದೀನ್ ಒವೈಸಿ ಅವರು, ಅಫ್ಘಾನಿಸ್ತಾನದ ಪ್ರಸ್ತುತ ಸ್ಥಿತಿಗತಿಗಳ ಕುರಿತು ಪ್ರಧಾನಿ ಮೋದಿಯವರ ಮೌನವನ್ನು ಟೀಕಿಸಿದ್ದಾರೆ. ಐಎಸ್ಐ ಹಿಡಿತದಲ್ಲಿರುವ ತಾಲಿಬಾನ್ ಅನ್ನು ಯಾವುದೇ ಸಂದರ್ಭದಲ್ಲಿಯೂ ಭಾರತದ ವಿರುದ್ದ ಪಾಕಿಸ್ತಾನ ಬಳಸಿಕೊಳ್ಳಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದ್ದಾರೆ.  ಹೈದಾರಾಬಾದ್’ನಲ್ಲಿ ಮೊಹರಂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿರುವ ಒವೈಸಿ, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿರುವುದು ಪಾಕಿಸ್ತಾನಕ್ಕೆ ವರದಾನವಾಗಿದೆ. ಇಂಟರ್‌ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ತಾಲಿಬಾನ್ ಅನ್ನು ಸೂತ್ರದ ಗೊಂಬೆಯಂತೆ ಬಳಸಿಕೊಳ್ಳುತ್ತದೆ, ಎಂದಿದ್ದಾರೆ.  “ಅಲ್ ಖೈದ ಹಾಗೂ ದಯೇಶ್’ನಂತಹ ಭಯೊತ್ಪಾದಕ ಸಂಘಟನೆಗಳು ಈಗಾಗಲೇ ಅಫ್ಘಾನಿಸ್ತಾನ್ ಸೇರಿ ಆಗಿದೆ. ಐಎಎಸ್ಐ ಮೇಲ್ವಿಚಾರಿಕೆಯಲ್ಲಿ ಇದೆಲ್ಲಾ ನಡೆಯುತ್ತಿದೆ. ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಚೀನಾ ಕೂಡಾ ಈ ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ,” ಎಂದಿದ್ದಾರೆ.  ಕಾಬುಲ್ ಮುಖಾಂತರ ಇರಾನ್’ಗೆ ಅಂತರಾಷ್ಟ್ರೀಯ ಹೆದ್ದಾರಿ ನಡೆಸಲು ಚೀನಾ ದೇಶಕ್ಕೆ ಪಾಕಿಸ್ತಾನ ನೆರವಾಗಲಿದೆ. ಇದನ್ನು ತಡೆಯಲು ನೀವೇನು ಮಾಡುತ್ತಿದ್ದೀರಾ? ಕ್ವಾಡ್ ಒಪ್ಪಂದದ ಪ್ರಕಾರ ರಷ್ಯಾ, ಉಜ್ಬೇಕಿಸ್ತಾನ್, ತುರ್ಕ್ಮೆನಿಸ್ತಾನ್, ತಜೆಕಿಸ್ತಾನ್ ದೇಶಗಳು ಕಾಬುಲ್ ಗೆ ರಸ್ತೆ ಸಂಪರ್ಕ ಹೊಂದಲು ಸಾಧ್ಯವಿಲ್ಲ. ಅಮೇರಿಕಾದ ಕಾರಣದಿಂದ ಇಷ್ಟೆಲ್ಲಾ ನಡೆದಿದೆ. ನೀವು ಡೊನಾಲ್ಡ್ ಟ್ರಂಪ್ ಅವರನ್ನು ಅಪ್ಪಿಕೊಳ್ಳುವಲ್ಲಿ ನಿರತರಾಗಿದ್ರಿ, ಎಂದು ಪ್ರಧಾನಿ ಮೋದಿ ವಿರುದ್ದ ಒವೈಸಿ ಕಿಡಿಕಾರಿದ್ದಾರೆ.  ಇದರೊಂದಿಗೆ ಮುಂಬರುವ ದಿನಗಳಲ್ಲಿ ಪಾಕಿಸ್ತಾನ, ಚೀನಾ ಹಾಗೂ ತಾಲಿಬಾನ್ ನಿಂದ ದೇಶಕ್ಕೆ ಒದಗಿ ಬರಲಿರುವ ಆಪತ್ತಿನ ಕುರಿತು ಈಗಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಒವೈಸಿ, ಆದಷ್ಟು ಶೀಘ್ರದಲ್ಲಿ ದೇಶದ ನಿಲುವು ಸ್ಪಷ್ಟಪಡಿಸುವಂತೆ ಕೇಳಿದ್ದಾರೆ.

Read moreDetails

ತಾಲಿಬಾನ್ ಉಗ್ರರ ವಿರುದ್ಧ ಹೋರಾಡಲು ಬಂದೂಕು ಹಿಡಿದಿದ್ದ ದಿಟ್ಟ ಹೋರಾಟಗಾರ್ತಿ ಸಲಿಮಾ ಬಂಧನ

ತಾಲಿಬಾನ್ ಉಗ್ರರ ಉಪಟಳದಿಂದಾಗಿ ಅಫ್ಘಾನಿಸ್ತಾನ ಪರಿಸ್ಥಿತಿ ಶೋಚನೀಯವಾಗಿದೆ. ತಾಲಿಬಾನ್ ಉಗ್ರರ ಜತೆ ಹೋರಾಡಲಾಗದೆ ಅಫ್ಘಾನ್ ಪಡೆಗಳು ಬಂದೂಕು ಕೆಳಗಿರಿಸಿವೆ. ಅಧ್ಯಕ್ಷ ಅಶ್ರಫ್ ಘನಿ, ತಾಲಿಬಾನಿಗಳಿಗೆ ಬೆದರಿ ಅಧಿಕಾರ ...

Read moreDetails

ಯುದ್ಧಗ್ರಸ್ತ ಅಫ್ಘಾನಿಸ್ತಾನದ ಭೀಕರತೆಯನ್ನು ಸಾರುವ ಚಿತ್ರಗಳಿವು…!

ಎರಡು ದಶಕಗಳ ಬಳಿಕ ಅಫ್ಘನಿನಲ್ಲಿ ತಾಲಿಬಾನ್ ಮತ್ತೆ ಮೇಲುಗೈ ಸಾಧಿಸಿಕೊಂಡಿದೆ. ಅಮೆರಿಕಾ ತನ್ನ ಸೇನೆಯನ್ನು ಹಿಂಪಡೆಯುತ್ತಿದ್ದಂತೆಯೇ ಅಂತರ್ಯುದ್ಧದಲ್ಲಿ ತೊಡಗಿದ ತಾಲಿಬಾನ್‌, ಅಮೆರಿಕಾದ ಸೇನೆ ಸಂಪೂರ್ಣವಾಗಿ ಅಫ್ಘನ್‌ನನ್ನು ತೊರೆಯುವ ...

Read moreDetails

ಶ್ವೇತಭವನದ ಮುಂದೆ ಅಫ್ಘಾನಿಸ್ತಾನ ಪ್ರಜೆಗಳ ಪ್ರತಿಭಟನೆ; ತಾಲಿಬಾನ್ ದಾಳಿಗೆ ಜೋ ಬೈಡೆನ್ ಕಾರಣ ಎಂದು ಆಕ್ರೋಶ

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನ ಸರ್ಕಾರವೂ ಅಧಿಕೃತವಾಗಿ ತಾಲಿಬಾನಿಗಳಿಗೆ ಶರಣಾಗಿದೆ. ಹೀಗಿರುವಾಗಲೇ ತಾಲಿಬಾನ್ ಸಹ ಸಂಸ್ಥಾಪಕ ಮತ್ತು ರಾಜಕೀಯ ವಿಭಾಗದ ಮುಖ್ಯಸ್ಥ ಮುಲ್ಲಾ ಅಬ್ದುಲ್ ...

Read moreDetails

ಅಧಿಕಾರಕ್ಕಾಗಿ ಮುಂದುವರಿದ ಅಫ್ಘಾನ್ & ತಾಲಿಬಾನ್ ಉಗ್ರರ ಸಂಘರ್ಷ; ಸಾವು ಬದುಕಿನ ಮಧ್ಯೆ ಸಾಮಾನ್ಯಜನ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆ ತನ್ನ ಆಕ್ರಮಣಕಾರಿ ನೀತಿಯನ್ನು ಮುಂದುವರಿಸಿದೆ. ಇದುವರೆಗೂ 400 ಜಿಲ್ಲೆಗಳ ಪೈಕಿ 230 ಜಿಲ್ಲೆಗಳು ವಶಕ್ಕೆ ಪಡೆದಿರುವ ತಾಲಿಬಾನ್ ಅಪ್ಘಾನಿಸ್ತಾನದಲ್ಲಿ ಮಧ್ಯಂತರ ಸರ್ಕಾರ ...

Read moreDetails
Page 1 of 2 1 2

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!